X
ಹೋಮ್ ಚಲನಚಿತ್ರಗಳ ಒಳನೋಟ

Kanrna Serial: ಕರ್ಣ ಸೀರಿಯಲ್ ಕಥೆ ಹಾಗೂ ಕಲಾವಿದರ ಲಿಸ್ಟ್ ಇಲ್ಲಿದೆ.

Author Sowmya Bairappa | Updated: Friday, April 18, 2025, 10:28 AM [IST]

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಅನೇಕ ಹೊಸ ಧಾರಾವಾಹಿಗಳು ಆರಂಭವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಇದೀಗ ಕೆಲವೇ ದಿನಗಳಲ್ಲಿ 'ಕರ್ಣ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದ್ದು, ಪ್ರೋಮೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿವೆ. ಇಲ್ಲಿ ಕರ್ಣ ಸೀರಿಯಲ್‌ನ ಕಥೆ ಹಾಗೂ ಕಲಾವಿದರ ಲಿಸ್ಟ್ ನೀಡಲಾಗಿದೆ.


cover image
ಕರ್ಣನಾಗಿ ಕಿರಣ್ ರಾಜ್
1

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳ ಪೈಕಿ 'ಕನ್ನಡತಿ' ಕೂಡ ಒಂದು. ಈ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದವರು ಹ್ಯಾಂಡ್‌ಸಮ್ ಹೀರೋ ಕಿರಣ್ ರಾಜ್. ಕನ್ನಡತಿ ಮುಕ್ತಾಯಗೊಂಡ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಕಿರಣ್ ರಾಜ್, ಇದೀಗ 'ಕರ್ಣ' ಧಾರಾವಾಹಿವಾಗಿ ನಾಯಕನಾಗಿ ಜೀ ವಾಹಿನಿಗೆ ಎಂಟ್ರಿಕೊಟ್ಟಿದ್ದಾರೆ. ಇದರಲ್ಲಿ ಮೊದಲ ಬಾರಿ ಡಾಕ್ಟರ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಮೊದಲ ನಾಯಕಿ ಭವ್ಯಾ ಗೌಡ
2

ಕರ್ಣ ಸೀರಿಯಲ್‌ನಲ್ಲಿ ಇಬ್ಬಿಬ್ಬರು ನಾಯಕಿಯರು. ಒಬ್ಬರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ. ಗೀತಾ ಸೀರಿಯಲ್‌ ಮೂಲಕ ಕರ್ನಾಟಕದ ಮನೆಮಾತಾಗಿದ್ದ ಭವ್ಯಾ, ಬಿಗ್‌ಬಾಸ್‌ನಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಇದೀಗ ಕರ್ಣ ಧಾರಾವಾಹಿಗೆ ಎಂಟ್ರಿಕೊಟ್ಟಿರುವ ಭವ್ಯಾ, ಡಾಕ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟ್ರಡಕ್ಷನ್ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಕರ್ಣ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಭವ್ಯಾ ಕೂಡ ಅದೇ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾಳೆ. ಮಳೆಯಲ್ಲಿ ಡ್ಯಾನ್ಸ್ ಮಾಡುತ್ತಾ ಏಂಜಾಯ್ ಮಾಡ್ತಿರೋ ನಾಯಕಿ ಮೇಲೆ ಕರ್ಣನಿಗೆ ಲವ್ ಆಟ್ ಫಸ್ಟ್ ಸೈಟ್ ಆಗುತ್ತೆ. ಇಲ್ಲಿಂದ ಕಥೆ ಆರಂಭವಾಗುತ್ತೆ.

ಮತ್ತೋರ್ವ ನಾಯಕಿಯಾಗಿ ನಮ್ರತಾ
3

ನಾಗಿಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಮ್ರತಾ ಗೌಡ, ನಂತರ ಬಿಗ್‌ಬಾಸ್‌ ಸೀಸನ್‌ 10ರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಇದಾದ ಬಳಿಕ ನಮ್ರತಾ ಸಿನಿಮಾಗೆ ಎಂಟ್ರಿಕೊಡಲಿದ್ದಾರಾ? ಅಥವಾ ಸೀರಿಯಲ್‌ಗೆ ಬರ್ತಾರಾ? ಎಂಬ ಕುತೂಹಲವಿತ್ತು. ಇದೀಗ ನಮ್ರತಾ ಗೌಡ 'ಕರ್ಣ' ಸೀರಿಯಲ್‌ಗೆ ಎಂಟ್ರಿಕೊಟ್ಟಿದ್ದಾರೆ. ಇವರ ಪಾತ್ರವೇನು ಎಂಬುದು ಇನ್ನು ತಿಳಿದುಬಂದಿಲ್ಲ.

ಉಳಿದ ಕಲಾವಿದರು
4

ಕರ್ಣದಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮೂವರು ಸ್ಟಾರ್ ಕಲಾವಿದರ ಜೊತೆಗೆ ಟಿ.ಎಸ್ ನಾಗಾಭರಣ, ಆಶಾಲತಾ, ಸುಂದರ್ ವೀಣಾ, ಒಲವಿನ ನಿಲ್ದಾಣ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್, ಶ್ಯಾಮ್ ಸಿಮ್ರಾನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಶೃತಿ ನಾಯ್ಡು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕಥೆ ಏನು?
5

ತನ್ನವರ ಮಧ್ಯಾನೇ ಅನಾಥವಾಗಿರೋ ಮನೆ ಮಗನ ಕಥೆ ಎಂಬ ಅಡಿಬರಹದೊಂದಿಗೆ 'ಕಣ' ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ಕರ್ಣ ವೈದ್ಯನಾಗಿದ್ದು, ಮನೆಯವರಿಗೆ ಆಳಿಗಿಂತಲೂ ಕಡೆಯವನಾಗಿರುತ್ತಾನೆ. ನೂರಾರು ರೋಗಿಗಳಿಗೆ ಚಿಕಿತ್ಸೆ ಕೊಟ್ಟು ಜೀವ ಉಳಿಸಿದ ಕರ್ಣನಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ. ಆದರೆಮ ಮನೆಯಲ್ಲಿ ಅವನಿಗೆ ಎಳ್ಳಷ್ಟೂ ಪ್ರೀತಿ ಇರಲ್ಲ. ಅದಕ್ಕೆ ಕಾರಣ ಏನು? ಎಂಬುದು ಮುಂದೆ ತಿಳಿಯಲಿದೆ.





Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+