X
ಹೋಮ್ ಚಲನಚಿತ್ರಗಳ ಒಳನೋಟ

ತಮಿಳು, ತೆಲುಗು ಚಿತ್ರರಂಗದವರನ್ನು ಮದುವೆಯಾಗಿರುವ ಕನ್ನಡ ಸೀರಿಯಲ್ ನಟಿಯರಿವರು!

Author Sowmya Bairappa | Updated: Thursday, August 24, 2023, 04:13 PM [IST]

ಕನ್ನಡ ಹಲವು ಕಿರುತೆರೆ ನಟ-ನಟಿಯರು ಬೇರೆ ಭಾಷೆಯ ಧಾರವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ. ಜೊತೆಗೆ ಅಲ್ಲಿ ಸಾಕಷ್ಟು ಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ನಡುವೆ ಹಲವು ನಟಿಯರು ಅಲ್ಲಿನ ಸಹನಟ, ಸಿನಿಮಾಟೋಗ್ರಾಫರ್ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದಾರೆ. ಇಲ್ಲಿ ಕನ್ನಡದ ಹಿಟ್ ಸೀರಿಯಲ್‌ಗಳಲ್ಲಿ ಮಿಂಚಿ ಬೇರೆ ಭಾಷೆಯವರನ್ನು ಮದುವೆಯಾಗಿರುವ ಜನಪ್ರಿಯ ಸೀರಿಯಲ್ ನಟಿಯರ ಪಟ್ಟಿಯನ್ನು ನೀಡಲಾಗಿದೆ.


cover image
ರಚಿತಾ ಮಹಾಲಕ್ಷ್ಮಿ

ನಟಿ ರಚಿತಾ ಮಹಾಲಕ್ಷ್ಮೀ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದೆ ಭಾಷೆಗಳ ಧಾರವಾಹಿಯಲ್ಲಿ ನಟಿಸಿದ್ದಾರೆ. ಇವರು ತಮಿಳು ಧಾರವಾಹಿಯಲ್ಲಿ ನಟಿಸುವಾಗ ಸಹನಟ ದಿನೇಶ್ ಮೇತೆ ಪ್ರೀತಿಯಾಗಿತ್ತು. ನಂತರ ಇಬ್ಬರು ತುಂಬಾ ಇಷ್ಟುಪಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕವೂ ಇವರಿಬ್ಬರು ನಚಿಯಾರಪುರಂ ಎಂಬ ಧಾರವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಸದ್ಯ ಈ ಜೋಡಿ ಮನಸ್ತಾಪದಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡಿದೆ.  ಕೆಲ ತಿಂಗಳ ಹಿಂದೆ ನಟಿ ರಚಿತಾ, ಪತಿ ದಿನೇಶ್ ತಮಗೆ ಹಿಂಸೆ ನೀಡುತ್ತಿರುವುದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ನಟಿ ಸದ್ಯ ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.  

ಚೈತ್ರಾ ರೆಡ್ಡಿ

ಅವನು ಮತ್ತು ಶ್ರಾವಣಿ ಸೀರಿಯಲ್ ಖ್ಯಾತಿಯ ನಟಿ ಚೈತ್ರಾ ರೆಡ್ಡಿ ಕೂಡ 2020ರಲ್ಲಿ ಪರಭಾಷೆಯ ಸಿನಿಮಾಟೋಗ್ರಾಫರ್ ರಾಕೇಶ್ ಅವರನ್ನು ಹಿಡಿದಿದ್ದಾರೆ. ಈ ಜೋಡಿಯದ್ದು ಕೂಡ ಪ್ರೇಮಾ ವಿವಾಹ. ಸದ್ಯ ಚೈತ್ರಾ ರೆಡ್ಡಿ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು, ತಮಿಳಿನಲ್ಲಿ ಕಲ್ಯಾಣಂ ಮುಧಾಲ್ ಕಾಧಲ್ ವರೈ, ಯಾರದಿ ಮೋಹಿನಿ ಸೀರಿಯಲ್‌ನಲ್ಲಿ ನಟಿಸಿದ್ದರು. ಜೊತೆಗೆ ವಿನೋದ್ ಪ್ರಭಾಕರ್ ಅವರ 'ರಗಡ್' ಸಿನಿಮಾದಲ್ಲಿ ಚೈತ್ರಾ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಛಾಯಾ ಸಿಂಗ್

ನಟಿ ಛಾಯಾ ಸಿಂಗ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರ ನಟನೆಯ ಮೊದಲ ಕನ್ನಡ ಸಿನಿಮಾ ಮುನ್ನುಡಿ. ಬಳಿಕ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ ಇವರು, ನಂತರ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಒಳ್ಳೆ ಹೆಸರು ಗಳಿಸಿದರು. ಇವರು ೨೦೧೨ರಲ್ಲಿ ತಮಿಳು ನಟ ಕೃಷ್ಣ ಎಂಬುವವರನ್ನು ವಿವಾಹವಾಗಿದ್ದಾರೆ. ಇವರಿಬ್ಬರದ್ದು ಕೂಡ ಲವ್ ಮ್ಯಾರೇಜ್. ಛಾಯಾ 2010ರಲ್ಲಿ ಆನಂದಪುರತು ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಅವರ ಪತಿ ಕೃಷ್ಣ ವಿಲನ್ ಪಾತ್ರ ಮಾಡಿದ್ದರು. ಬಳಿಕ ಇವರಿಬ್ಬರ ನಡುವೆ ಸ್ನೇಹ ಶುರುವಾಗಿ ಅದು ಪ್ರೀತಿಗೆ ತಿರುಗಿತ್ತು.  

ದಿವ್ಯ ಶ್ರೀಧರ್

ಆಕಾಶ ದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಈ ಹಿಂದೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ನಂತರದಲ್ಲಿ ದಿನಗಳಲ್ಲಿ ಇವರಿಬ್ಬರು ಡಿವೋರ್ಸ್ ಪಡೆದರು. ನಂತರ ಪರಭಾಷಾ ಧಾರವಾಹಿಗಳಲ್ಲಿ ಸಕ್ರಿಯರಾದ ದಿವ್ಯಾ, ಸಹನಟ ಆರ್ನವ್ ಅಲಿಯಾಸ್ ಅಮ್ಝಾದ್ ಖಾನ್ ಜೊತೆ ಕೆಲ ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬಳಿಕ ಈ ಜೋಡಿ ಮದುವೆ ಕೂಡ ಆಗಿತ್ತು. ಆದರೆ, ದಿವ್ಯಾ ಗರ್ಭಿಣಿಯಾಗುತ್ತಿದ್ದಂತೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು.  ದಿವ್ಯಾ ಆರ್ನವ್ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 

ಅನುಷಾ ಹೆಗಡೆ

ಕನ್ನಡದ ರಾಧಾ ರಮಣ ಧಾರವಾಹಿ ನಟಿ ಅನುಷಾ ಹೆಗಡೆ ತೆಲುಗಿನ ನಿನ್ನೆ ಪೆಲ್ಲಾಡ್ತ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದರು. ಪ್ರತಾಪ್ ಸಿಂಗ್ ಈ ಸೀರಿಯಲ್‌ ನಾಯಕನಾಗಿ ನಟಿಸಿದ್ದರು. ಈ ಸಮಯದಲ್ಲಿ ಪ್ರತಾಪ್ ಮನೆಯವರು ಅವರಿಗೆ ಹುಡುಗಿ ಹುಡುಕುತ್ತಿದ್ದರಂತೆ. ಹೀಗಾಗಿ ಪ್ರತಾಪ್ ಅವರು ಅನುಷಾ ಅವರ ಹತ್ತಿರ ನನ್ನನ್ನು ಮದುವೆ ಆಗ್ತೀಯಾ? ಅಂತ ಕೇಳಿದ್ದರಂತೆ. ಬಳಿಕ ಅನುಷಾ ಕುಟುಂಬಸ್ಥರ ಸಮ್ಮತಿ ಪಡೆದು 2019ರಲ್ಲಿ ಪ್ರತಾಪ್ ಅವರನ್ನು ಮದುವೆಯಾಗಿದ್ದರು. ಪ್ರತಾಪ್ ಹೈದರಾಬಾದ್‌ನವರಾಗಿದ್ದು, ಅನುಷಾ ಮಂಗಳೂರಿನವರು.

ಜ್ಯೋತಿ ರೈ

ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಗೆ ಓರ್ವ ಪುತ್ರನಿದ್ದಾನೆ. ಸದ್ಯ ತಮಿಳು, ತೆಲುಗು ಭಾಷೆಯ ಸಿನಿಮಾ, ವೆಬ್‌ ಸೀರಿಸ್‌ಗಳಲ್ಲಿ ಬ್ಯುಸಿಯಾಗಿರುವ ಈ ನಟಿ, ಪರಭಾಷಾ ನಿರ್ದೇಶಕ ಸುಕುಮಾರ್ ಜೊತೆಗಿನ ಫೋಟೋಗಳನ್ನು ಆಗಾಗ ಸೋಸಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ಅವರ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ಸುಳಿವನ್ನು ನೀಡುತ್ತಿರುತ್ತಾರೆ. ಅವರು ಅಧಿಕೃತವಾಗಿ ಈ ಬಗ್ಗೆ ಹೇಳಿಲ್ಲವಾದರೂ ಟ್ವಿಟರ್‌ನಲ್ಲಿ ಜ್ಯೋತಿ ಪೂರ್ವಜ ಎಂದು ಹೆಸರು ಬದಲಿಸಿಕೊಂಡಿದ್ದಾರೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+