X
ಹೋಮ್ ಚಲನಚಿತ್ರಗಳ ಒಳನೋಟ

ಲಾಯರ್ ಜಗದೀಶ್ ಟು ಮೋಕ್ಷಿತಾ ಪೈ: ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಫರ್ಧಿಗಳು ಹೊರಗಡೆ ಮಾಡಿರುವ ಕಾಂಟ್ರವರ್ಸಿಗಳಿವು!

Author Administrator | Updated: Thursday, December 12, 2024, 09:58 AM [IST]

ಸಿನಿಮಾ ನಟ-ನಟಿಯರು ಅಂದಾಮೇಲೆ ವಿವಾದಗಳು ಸರ್ವೇಸಾಮಾನ್ಯ. ಬೇರೆ ಚಿತ್ರರಂಗಗಳಿಗೆ ಹೋಲಿಸಿದ್ರೆ ಸ್ಯಾಂಡಲ್‌ವುಡ್‌ನಲ್ಲಿ ವಿವಾದಗಳು ಕೊಂಚ ಕಡಿಮೆ ಎನ್ನಬಹುದು. ಕೆಲವೊಮ್ಮೆ ಚಿಕ್ಕ-ಪುಟ್ಟ ವಿಷಯಗಳಿಗೂ ವಿವಾದಗಳು ಏರ್ಪಡುತ್ತವೆ. ಇನ್ನೊಮ್ಮೆ ನಟ-ನಟಿಯರ ಕೊಡುವ ಹೇಳಿಕೆಗಳು ವಿವಾದಕ್ಕೆ ತಿರುಗುತ್ತವೆ. ಇಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿಗಳು ಹೊರಗಡೆ ಮಾಡಿರುವ ವಿವಾದಗಳ ಪಟ್ಟಿಯನ್ನು ನೀಡಲಾಗಿದೆ.


cover image
ಮೋಕ್ಷಿತಾ ಪೈ
1

ಸದ್ಯ ಬಿಗ್‌ಬಾಸ್‌ ಮನೆಯ ಹೊರಗೆ ಮೋಕ್ಷಿತಾ ಪೈ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಬಾಲಕಿ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಇದು ಮೋಕ್ಷಿತಾ ಅಭಿಮಾನಿಗಳ ನಿದ್ದೆಗೆಡಿಸಿದೆ. ಮೋಕ್ಷಿತಾ ಕಿರುತೆರೆಗೆ ಬರುವುದಕ್ಕೂ ಮುನ್ನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಬಿಕಾಂ ಪದವೀಧರೆಯಾಗಿರುವ ಮೋಕ್ಷಿತಾಗೆ ಎಂಬಿಎ ಪದವಿ ಮಾಡಿದ್ದ ನಾಗಭೂಷಣ್ ಎಂಬ ಬಾಯ್‌ಫ್ರೆಂಡ್ ಇದ್ದು, ಇಬ್ಬರೂ ಸೇರಿ ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದರೆಂಬ ಸುದ್ದಿಯಿದೆ. ಜೊತೆಗೆ ಮೋಕ್ಷಿತಾ ಅಸಲಿ ಹೆಸರು ಐಶ್ವರ್ಯಾ ಪೈ ಎನ್ನಲಾಗಿದೆ. ಆದರೆ, ಮೋಕ್ಷಿತಾ 10 ವರ್ಷಗಳ ಹಿಂದೆ ಅವರ ಬಂಧನವಾಗಿದ್ದು ನಿಜವೇ? ಅವರ ಅಸಲಿ ಹೆಸರು ಐಶ್ವರ್ಯಾನೇನಾ? ಈ ಪ್ರಕರಣವೇನು? ಎಂಬ ಪ್ರಶ್ನೆಗಳಿಗೆ ದೊಡ್ಮನೆಯಿಂದ ಹೊರಬಂದ ಮೇಲೆ ಮೋಕ್ಷಿತಾನೆ ಉತ್ತರಿಸಬೇಕಿದೆ.





ಲಾಯರ್ ಜಗದೀಶ್
2

ಬಿಗ್‌ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಲಾಯರ್ ಜಗದೀಶ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಆದರೆ, ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಮೂರನೇ ವಾರಕ್ಕೆ ಮನೆಯಿಂದ ಹೊರಬಂದಿದ್ದರು. ವಕೀಲರಾದ ಜಗದೀಶ್ ಕಾನೂನು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಮಾತನಾಡುತ್ತಿದ್ದರು. ಈ ಮೂಲಕ ರಾಜ್ಯದ ಜನರಿಗೆ ಪರಿಚಿತರಾಗಿದ್ದರು. ಎರಡು ವರ್ಷಗಳ ಹಿಂದೆ ವಕೀಲ ಜಗದೀಶ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಅವರು ಗೋವಾದಲ್ಲಿ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆಗಸ್ಟ್ 30ರಂದು ಕೊಡಿಗೇಹಳ್ಳಿ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆದಿದ್ದರು. ಬಳಿಕ ಜಗದೀಶ್ ಬಿಡುಗಡೆ ಆಗಿದ್ದರು.


shishir
3

 ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಶಿಶಿರ್ ಅವರಿಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದೆ ಎನ್ನಲಾಗಿದೆ. ಪ್ಯಾಟೆ ಹುಡ್ಗೀರು ಹಳ್ಳಿ ಲೈಫ್ ಖ್ಯಾತಿಯ ಕೋಳಿ ರಮ್ಯಾ ಜೊತೆ ಶಿಶಿರ್ ಮದುವೆಯಾಗಿತ್ತು. ಆನಂತರ ಇವರಿಬ್ಬರು ವಿಚ್ಛೇದನ ಪಡೆದಿದ್ದರು. ನನಗೆ ಸೀರಿಯಸ್ ಆಗಿ ಮೂರು ಲವ್ ಇತ್ತು ಅಂತ ಶಿಶಿರ್ ಅವರೇ ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. 

ಚೈತ್ರಾ ಕುಂದಾಪುರ
4

ಹಿಂದೂ ಸಂಘಟನೆಯ ಕಾರ್ಯಕರ್ತೆ, ಫೈರ್‌ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.  ಬಿಗ್‌ಬಾಸ್ ಮನೆಗೆ ಬರುವುದಕ್ಕೂ ಮುನ್ನ ಇವರ ಮೇಲೆ ವಂಚನೆ ಆರೋಪವಿತ್ತು. ಹೌದು..ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಉದ್ಯಮಿ ಗೋವಿಂದ್ ಬಾಬು ಪೂಜಾರಿ ಅವರನ್ನು ವಂಚಿಸಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿತ್ತು. 5 ಕೋಟಿ ರೂಪಾಯಿ ವಂಚನೆ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸದ್ಯ ಬಿಗ್‌ಬಾಸ್‌ ಮನೆಯಲ್ಲಿರುವ ಇವರು, ಮೊನ್ನೆಯಷ್ಟೇ ವಿಚಾರಣೆಗೆ ಹಾಜರಾಗಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+