ಚಲನಚಿತ್ರಗಳ ಒಳನೋಟ
ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ 2005ರಲ್ಲಿ ತೆರೆಕಂಡ 'ಮೆಂಟಲ್ ಮಂಜ' ಸಿನಿಮಾದಲ್ಲಿ ಮೊದಲ ಬಾರಿಗೆ ಸಹಾಯಪಾತ್ರದಲ್ಲಿ ಕಾಣಿಸಿಕೊಂಡರು. ಹುಚ್ಚ ವೆಂಕಟ್ ಮೊದಲ ಬಾರಿಗೆ ಯೋಗರಾಜ್ ಭಟ್ ನಿರ್ಮಾಣದ ಪರಪಂಚ ಚಿತ್ರದಲ್ಲಿನ 'ಹುಟ್ಟಿದ ಊರನು ಬಿಟ್ಟು ಬಂದ ಮೇಲೆ' ಎಂಬ ಗೀತೆಯನ್ನು ಹಾಡಿದ್ದರು. ಈ ಹಾಡು ದಾಖಲೆಯಾ ರೀತಿಯಲ್ಲಿ ಜನರ ಮನಸೆಳೆದಿತ್ತು. ಆನಂತರ ಹಲವು ಹಾಡುಗಳಿಗೆ ತಮ್ಮದೇಯಾದ ಧ್ವನಿ ನೀಡಿ ಸೈ ಎನಿಸಿಕೊಂಡರು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಗಾಯಕರಾಗಿಯೂ ಗುರುತಿಸಿಕೊಂಡರು. ಬಿಗ್ ಬಾಸ್ ಸೀಜನ್ 3 ಶೋನಲ್ಲೂ ಭಾಗವಹಿಸಿದ್ದರು. ಹುಚ್ಚ ವೆಂಕಟ್ ಧ್ವನಿಯಲ್ಲಿ ಮೂಡಿಬಂದ ಹಾಡುಗಳ ಪಟ್ಟಿ ಇಲ್ಲಿದೆ.