X
ಹೋಮ್ ಚಲನಚಿತ್ರಗಳ ಒಳನೋಟ

ಅರ್ಧದಲ್ಲೇ ಜನಪ್ರಿಯ ಧಾರಾವಾಹಿಗಳಿಂದ ಹೊರಬಂದ ನಟ-ನಟಿಯರ ಪಟ್ಟಿ ಇಲ್ಲಿದೆ.

Author Sowmya Bairappa | Published: Monday, October 16, 2023, 03:15 PM [IST]

ಕಿರುತೆರೆ ಲೋಕದ ಟಾಪ್ ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಿರುವ ಕೆಲ ನಟ-ನಟಿಯರು ಕಾರಣಾಂತರಗಳಿಂದ ಅರ್ಧದಲ್ಲೇ ಹೊರಬರುತ್ತಾರೆ. ಕೆಲವರು ಅಕ್ಕೆ ಕಾರಣ ಏನೆಂಬುದನ್ನು ಬಹಿರಂಗಪಡಿಸುತ್ತಾರೆ. ಮತ್ತೆ ಕೆಲವರು ಏನು ಹೇಳದೇ ಆನ್‌ಸ್ಕ್ರೀನ್ ಪಾತ್ರಗಳಿಂದ ಮರೆಯಾಗುತ್ತಾರೆ. ಕೆಲ ನಟ-ನಟಿಯರು ತಾವು ಅಭಿನಯಿಸುತ್ತಿರುವ ಧಾರಾವಾಹಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಕಾರಣಕ್ಕೆ ಮಧ್ಯದಲ್ಲೇ ಕಣ್ಮರೆಯಾಗುತ್ತಾರೆ. ಇಲ್ಲಿ ಅರ್ಧದಲ್ಲೇ ಕನ್ನಡದ ಜನಪ್ರಿಯ ಧಾರಾವಾಹಿಗಳನ್ನು ತೊರೆದ ನಟ-ನಟಿಯರ ವಿವರವನ್ನು ನೀಡಲಾಗಿದೆ.


cover image
ಸಾರಾ ಅಣ್ಣಯ್ಯ

ನಟಿ ಸಾರಾ ಅಣ್ಣಯ್ಯ 'ಕನ್ನಡತಿ' ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಧಾರಾವಾಹಿ ಮುಕ್ತಾಯವಾಗುತ್ತಿದ್ದಂರೆ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮ ಲಚ್ಚಿ' ಸೀರಿಯಲ್‌ನಲ್ಲಿ ದೀಪಿಕಾ ಪಾತ್ರದಲ್ಲಿ ಅಭಿನಯಿಸಿದ್ದರು.  ಆದರೆ, ನಮ್ಮ ಲಚ್ಚಿ ನೂರು ಸಂಚಿಕೆ ಮುಗಿಸುವಷ್ಟರಲ್ಲೇ ಅದರಿಂದ ಹೊರಬಂದಿದ್ದರು. ಇದು ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡಿತ್ತು. ಸಾರಾ ತಮ್ಮ ನಿರ್ಧಾರದ ಬಗ್ಗೆ ಮೌನ ಮುರಿಸಿದ್ದರು. ಸದ್ಯ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

 

ಗೌತಮಿ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ'ಯಲ್ಲಿ ಶ್ರೇಷ್ಠ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಗೌತಮಿ ಗೌಡ, ಅರ್ಧದಲ್ಲೆ ಹೊರಬಂದಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದ ಅವರು, ನಮಸ್ತೆ ನಾನು ವೈಯಕ್ತಿಕ ಕಾರಣಗಳಿಂದ ಸೀರಿಯಲ್‌ನಿಂದ ಹೊರಬಂದೆ. ಇಷ್ಟುದಿನ ನೆಗೆಟಿವ್ ಪಾತ್ರದಲ್ಲಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಇದು ಬಹಳ ಕಠಿಣ ನಿರ್ಧಾರ. ಅನಿವಾರ್ಯ ಕಾರಣದಿಂದ ಮುಗುಳ್ನಗುತ್ತಾ ಧಾರಾವಾಹಿಯಿಂದ ಹೊರಬಂದೆ ಎಂದಿದ್ದರು. ಗೌತಮಿ ಅವರು ಸದ್ಯ ತುಂಬು ಗರ್ಭಿಣಿ. ಆದ್ದರಿಂದ 'ಭಾಗ್ಯಲಕ್ಷ್ಮಿ' ಧಾರಾವಾಯಿಂದ ಹೊರಬಂದಿದ್ದರು. 

ಕಾರ್ತಿಕ್ ಮಹೇಶ್

'ರಾಜಿ' ಸೀರಿಯಲ್‌ನಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ ನಂತರ ನಟ ಕಾರ್ತಿಕ್ ಮಹೇಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಲಾಯರ್ ಚಂದ್ರು ಪಾತ್ರದಿಂದ ಹೊರನಡೆದರು. ವರದಿಗಳ ಪ್ರಕಾರ, ಎರಡು ಧಾರಾವಾಹಿಗಳ ಶೆಡ್ಯೂಲ್ ಮ್ಯಾನೇಜ್‌ ಮಾಡಲಾಗದ ಕಾರಣ ಇವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರಬ ಬಂದರು. ನಂತರ ಅಂತರಪಟ ಧಾರಾವಾಹಿಯಲ್ಲಿ ರವಿ ಎಂಬ ಚಿಕ್ಕ ಪಾತ್ರ ನಿರ್ವಹಸಿದ್ದರು. ಇದೀಗ ಕಾರ್ತಿಕ್ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ. 

ದೀಪಕ್ ಗೌಡ (ನಮ್ಮನೆ ಯುವರಾಣಿ)

ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ದೀಪಕ್ ಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ, ಕೆಲ ಎಪಿಸೋಡ್‌ಗಳ ನಂತರ ಇದ್ದಕ್ಕಿದ್ದಂತೆ ಸೀರಿಯಲ್‌ನಿಂದ ಹೊರಬಂದರು. ಇವರು ಯಾವ ಕಾರಣಕ್ಕೆ ಧಾರಾವಾಹಿಯಿಂದ ಹೊರಬಂದರು ಎಂದು ಕಾರಣ ತಿಳಿಸಿಲ್ಲ.

ಅರ್ಚನಾ

ಕನ್ನಡ ಕಿರುತೆರೆಯ ಖ್ಯಾತ ಫೋಷಕ ನಟಿ ಅರ್ಚನಾ, ಎರಡನೇ ಬಾರಿಗೆ 'ಗಟ್ಟಿಮೇಳ' ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇವರು ಆ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ವರದಿಗಳ ಪ್ರಕಾರ, ನಟಿ ಅರ್ಚನಾ ಮೇಕರ್ಸ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಸೀರಿಯಲ್ ಬಿಟ್ಟಿದ್ದರು ಎನ್ನಲಾಗಿದೆ. 

 

ಗಗನ ಕುಂಚಿ

ಜೀ ಕನ್ನಡದ 'ಗಟ್ಟಿಮೇಳ' ಸೀರಿಯಲ್‌ನಲ್ಲಿ 'ಆರತಿ' ಪಾತ್ರ ನಿರ್ವಹಿಸಿದ್ದ ನಟಿ ಗಗನ ಕುಂಚಿ ಅರ್ಧದಲ್ಲೇ ಹೊರಬಂದರು. ವೈಯಕ್ತಿಕ ಕಾರಣಗಳಿಂದಾಗಿ ಈ ನಟಿ ಧಾರಾವಾಹಿಯನ್ನು ತೊರೆದರು. ನಂತರ ಇವರ ಜಾಗವನ್ನು ಅಶ್ವಿನಿ ತುಂಬಿದ್ದರು.

 

ನಿತ್ಯಾ ಗೌಡ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೌಟುಂಬಿಕ ಧಾರಾವಾಹಿ 'ಜೇನುಗೂಡು'ವಿನಲ್ಲಿ ದಿಯಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದ ನಟಿ ನಿತ್ಯಾ ಗೌಡ ಅರ್ಧದಲ್ಲೇ ತೊರೆದರು. ಮೂಲಗಳ ಪ್ರಕಾರ, ನಿತ್ಯಾ ತಮ್ಮ ವೈಯಕ್ತಿಕ ಕೆಲಸಗಳಿಂದಾಗಿ ಸೀರಿಯಲ್‌ ತೊರೆದರು. ಸದ್ಯ ಅಮೃತಾ ರಾಮಮೂರ್ತಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. 

ನಿತ್ಯಾ ಗೌಡ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೌಟುಂಬಿಕ ಧಾರಾವಾಹಿ 'ಜೇನುಗೂಡು'ವಿನಲ್ಲಿ ದಿಯಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದ ನಟಿ ನಿತ್ಯಾ ಗೌಡ ಅರ್ಧದಲ್ಲೇ ತೊರೆದರು. ಮೂಲಗಳ ಪ್ರಕಾರ, ನಿತ್ಯಾ ತಮ್ಮ ವೈಯಕ್ತಿಕ ಕೆಲಸಗಳಿಂದಾಗಿ ಸೀರಿಯಲ್‌ ತೊರೆದರು. ಸದ್ಯ ಅಮೃತಾ ರಾಮಮೂರ್ತಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. 

ಚಂದ್ರಕಲಾ ಮೋಹನ್

ನಟಿ ಚಂದ್ರಕಲಾ ಮೋಹನ್ ಪುಣ್ಯವತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಸಿಕ್ಕ ಹಿನ್ನೆಲೆಯಲ್ಲಿ 'ದಾಸ ಪುರಂದರ' ಸೀರಿಯಲ್‌ ತೊರೆದಿದ್ದರು. ಇದೇ ವೇಳೆ 'ಸೂಪರ್ ಕ್ವೀನ್' ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಸದ್ಯ ಪುಣ್ಯವತಿ ಧಾರಾವಾಹಿಯೂ ಮುಕ್ತಾಯಗೊಂಡಿದೆ.  

ಸೂರಜ್ ಹೂಗಾರ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಯುವರಾಜ್ ಬಹುದ್ದೂರ್ ಎಂಬ ಮುಖ್ಯಪಾತ್ರದಲ್ಲಿ ಗಮನ ಸೆಳೆದಿದ್ದ ಸೂರಜ್ ಹೂಗಾರ್ ನಂತರದ ದಿನಗಳಲ್ಲಿ ಅರ್ಧದಲ್ಲೇ ಧಾರಾವಾಹಿ ತೊರೆದರು. ಆದರೆ, ಅವರು ಸೀರಿಯಲ್ ಬಿಡಲು ಕಾರಣ ಏನೆಂಬುದನ್ನು ರಿವೀಲ್ ಮಾಡಿಲ್ಲ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+