ಸದ್ಯ ಕನ್ನಡ ಚಿತ್ರರಂಗ ಪ್ರಪಂಚದಾದ್ಯಂತ ಗುರುತಿಸಿಕೊಳ್ಳುತ್ತಿದೆ. ಜೊತೆಗೆ ಚಂದನವನದಲ್ಲಿ ಒಳ್ಳೊಳ್ಳೆಯ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಸಿನಿಮಾ ಬಳಿಕ ಒಳ್ಳೆಯ ಆಫರ್ ಪಡೆಯಬೇಕೆಂದರೆ ಆ ನಟ ಉತ್ತಮವಾಗಿ ನಟಿಸುತ್ತಾನೆ ಎಂಬ ನಂಬಿಕೆ ನಿರ್ದೇಶಕರಲ್ಲಿ ಇರಬೇಕು. ಆಗ ಮಾತ್ರ ಮುಂದುವರೆಯಲು ಸಾಧ್ಯ. ಒಂದು ಸಿನಿಮಾಗೆ ಕಥೆ ಬಹಳ ಮುಖ್ಯವಾಗಿರುತ್ತದೆ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಹೀಗಾಗಿ, ಕಥೆ ಆಯ್ದುಕೊಳ್ಳುವಾಗ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅವಕಾಶ ಗಿಟ್ಟಿಸಿಕೊಂಡ ಅನೇಕ ನಟ-ನಟಿಯರು ನಂತರದ ದಿನಗಳಲ್ಲಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿ ಸೋತಿದ್ದಾರೆ. ಒಂದು ಕಾಲದಲ್ಲಿ ಯುವತಿಯರ ಫೆವರಿಟ್ ಆಗಿದ್ದ ಕೆಲ ನಟರು ಉತ್ತಮ ಕಥೆ ಆಯ್ದುಕೊಳ್ಳದೆ ಚಿತ್ರರಂಗದಿಂದ ಮರೆಯಾಗಿದ್ದಾರೆ. ಅಂತಹ ನಟರ ಪಟ್ಟಿ ಇಲ್ಲಿದೆ.