X
ಹೋಮ್ ಚಲನಚಿತ್ರಗಳ ಒಳನೋಟ

ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಕ್ಕೆ ಮುರಿದುಬಿದ್ದ ಗೆಳೆತನ: ಇತ್ತ ಸ್ನೇಹಿತನನ್ನೇ ನಾಮಿನೇಟ್ ಮಾಡಿದ ಹನುಮಂತು

Author Sowmya Bairappa | Published: Wednesday, November 6, 2024, 10:52 AM [IST]

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಇದರ ಪ್ರಕಾರ, ದೊಡ್ಮನೆ ಸದಸ್ಯರು ನಾಲ್ಕು ತಂಡಗಳಲ್ಲಿ ಆಟ ಆಡಬೇಕು. ಗೆದ್ದ ತಂಡಕ್ಕೆ ಸಿಕ್ಕಾಪಟ್ಟೆ ಸೌಕರ್ಯಗಳು ಸಿಗಲಿವೆ. ಹನುಮಂತ ಅವರಿಗೆ ವಿಶೇಷ ಅಧಿಕಾರ ಸಿಗಲಿದೆ. ಕೆಲವರಿಗೆ ಇಮ್ಯೂನಿಟಿ ಕಾರ್ಡ್ ಸಿಗಲಿದೆ. ಸೋತ ತಂಡದವರಿಂದ ಹಲವು ಸೌಕರ್ಯಗಳನ್ನು ಕಸಿದುಕೊಳ್ಳಲಾಗುವುದು. ಊಟಕ್ಕೂ ಹಿತಿಮಿತಿ ಹಾಕಲಾಗುವುದು ಅಂತ ಬಿಗ್‌ಬಾಸ್ ಘೋಷಿಸಿದ್ದಾರೆ. ಹೀಗಾಗಿ, ಎಲ್ಲಾ ಸ್ಪರ್ಧಿಗಳು ಈ ಟಾಸ್ಕ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂದರ್ಭ ಟಾಸ್ಕ್‌ನ ಕಾರಣಕ್ಕೆ ಕೆಲ ಗೆಳೆತನಗಳು ಮುರಿದುಬಿದ್ದಿವೆ.


cover image
ಮಂಜು-ಶಿಶಿರ್ ಮ್ಯಾಚ್ ಫಿಕ್ಸಿಂಗ್

ಕಳೆದ ಸಂಚಿಕೆಯಲ್ಲಿ ನಾಲ್ಕು ತಂಡದ ಸದಸ್ಯರಿಗೆ ಬಿಗ್‌ಬಾಸ್ ಹೊಸ ಟಾಸ್ಕ್ ನೀಡಿದ್ದರು. ಅದರ ಅನುಸಾರ, ಬೃಹತ್ ಚೆಂಡನ್ನು ಗೋಲ್ ಒಳಗೆ ಹಾಕಬೇಕಿತ್ತು.  ಗೆಲ್ಲುವ ತಂಡ ಒಂದು ತಂಡವನ್ನು ಆಟದಿಂದ ಹೊರಗೆ ಇಡಬೇಕು ಎಂಬ ನಿಯಮವಿತ್ತು. ಈ ವೇಳೆ ಹಳದಿ ಟೀಂನ ಶಿಶಿರ್ ಹಾಗೂ ಹಸಿರು ಬಣ್ಣದ ತಂಡದ ಉಗ್ರಂ ಮಂಜು ನಡುವೆ ಫಿಕ್ಸಿಂಗ್ ನಡೆಯಿತು. ಅಂತಿಮವಾಗಿ ಹಳದಿ ಬಣ್ಣದ ತಂಡ ಗೆದ್ದಿದೆ ಅಂತ ಕ್ಯಾಪ್ಟನ್ ಹನುಮಂತು ಘೋಷಿಸಿದರು. ಇದರಿಂದ ಕೋಪಗೊಂಡ ಚೈತ್ರಾ, ಸೂಪರ್ ಹನುಮಂತಣ್ಣ ನಿನ್ನ ಕ್ಯಾಪ್ಟನ್ಸಿಯಲ್ಲೇ ಈ ನಿಯತ್ತು ನೋಡಬೇಕಿತ್ತು. ವೋಟ್ ಹಾಕುವ ಜನರಿಗೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡ್ತೀರಾ? ನಾನು ನೋಡ್ತೀನಿ. ನಿಮ್ಮ ನಿಯತ್ತನ್ನ ಜನ ನೋಡ್ತಾರೆ ಅಂತ ಗುಡುಗಿದರು.

ಮುರಿದ ಗೆಳೆತನ

ಬಿಗ್‌ಬಾಸ್ ಮನೆಯಲ್ಲಿ ಗೌತಮಿ ಜಾದವ್, ಮೋಕ್ಷಿತಾ ಹಾಗೂ ಉಗ್ರಂ ಮಂಜು ಆತ್ಮೀಯ ಸ್ನೇಹಿತರಾಗಿದ್ದರು. ಯಾವಾಗಲೂ ಮೂವರೇ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಬೇರೆ ಯಾರ ಜೊತೆಯೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೆ, ಕಳೆದ ಸಂಚಿಕೆಯ ಟಾಸ್ಕ್‌ನಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆ ಕೈಜೋಡಿಸಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದು ಗೌತಮಿಗೆ ತೀವ್ರ ಸಿಟ್ಟು ತರಿಸಿದೆ. ಹೀಗಾಗಿ, ಅವರ ವಿರುದ್ಧ ಕಿಡಿಕಾರಿದ್ದಾರೆ. ಈ ಸಂದರ್ಭ ಮಂಜು ಅವರು ಅದು ಬುದ್ಧಿವಂತಿಕೆಯ ಆಟ ಅಂದಿದ್ದು, ಇದು ಗೌತಮಿ & ಮೋಕ್ಷಿತಾಗೆ ಇನ್ನಷ್ಟು ಕೋಪ ತರಿಸಿದೆ. ಒಟ್ಟಾರೆ ಟಾಸ್ಕ್‌ನಿಂದಾಗಿ ಮೂವರ ಗೆಳೆತನ ಮುರಿದು ಬಿದ್ದಿದೆ.  

ಗೆಳೆಯನನ್ನು ನಾಮಿನೇಟ್ ಮಾಡಿದ ಹನುಮಂತು

ನಂತರ ಬಿಗ್‌ಬಾಸ್ 'ತವರಿನ ಸಿರಿ' ಎಂಬ ಟಾಸ್ಕ್ ನೀಡಿದರು. ಇದರ ಅನುಸಾರ, ಮರದ ತುಂಡುಗಳನ್ನು ಜೋಡಿಸುವುದು ಮತ್ತು ಹಗ್ಗದುಂದ ಬ್ಯಾಲೆನ್ಸ್ ಮಾಡಬೇಕಿತ್ತು.  ಈ ಟಾಸ್ಕ್‌ನಲ್ಲಿ ಗೌತಮಿ ಟೀಂ ಗೆದ್ದು, ಇಮ್ಯೂನಿಟಿ ಕಾರ್ಡ್ ಬಳಸಿ ಅನುಷಾ ಅವರನ್ನು ಸೇವ್ ಮಾಡಿದರು. ಕ್ಯಾಪ್ಟನ್ ಹನುಮಂತುಗೆ ಸೋತ ತಂಡದಿಂದ ಮೂವರನ್ನು ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್‌ಬಾಸ್ ನೀಡಿದರು. ಗೌತಮಿ ಟೀಂ ಬಿಟ್ಟು ಮಿಕ್ಕ ಮೂರು ತಂಡದ ಒಬ್ಬೊಬ್ಬರಂತೆ ಮೋಕ್ಷಿತಾ, ಗೋಲ್ಡ್ ಸುರೇಶ್ ಮತ್ತು ಧನರಾಜ್ ಅವರನ್ನು ನಾಮಿನೇಟ್ ಮಾಡಿದರು. ಹನುಮಂತು ತನ್ನ ಆತ್ಮೀಯ ಗೆಳೆಯ ಧನರಾಜ್ ಅವರನ್ನು ನಾಮಿನೇಟ್ ಮಾಡಿದ್ದು ಎಲ್ಲರಿಗೂ ಆಶ್ಚರ್ಯವೆನಿಸಿತು. 

ಶುರುವಾಯ್ತು ಎಲಿಮಿನೇಟ್ ಆಗುವ ಭಯ

ಹನುಮಂತು ತಮ್ಮನ್ನು ನಾಮಿನೇಟ್ ಮಾಡಿದ್ದು ಧನರಾಜ್ ಅವರಿಗೆ ಶಾಕ್ ಉಂಟುಮಾಡಿತು. ಜೊತೆಗೆ ನಾನು ಹೊರಗೆ ಹೋದರೆ? ಅಂತ ಪ್ರಶ್ನೆ ಮಾಡಿದರು. ಆಗ ಹನುಮಂತು 'ನಾನು ನಾಮಿನೇಟ್ ಮಾಡಿದ ಬಳಿಕ ನೀನು ಹೊರಗೆ ಹೋಗ್ತೀಯಾ? ಹೊರಗೆ ಜನ ಇರ್ತಾರೆ ಅವರು ವೋಟ್ ಮಾಡ್ತಾರೆ ಅಂದರು. ಕಳೆದ ವಾರ ಮಾನಸ ನಾಮಿನೇಟ್ ಆದಾಗಲೂ ಹನುಮಂತು ಇದೇ ರೀತಿ ಹೇಳಿದ್ದರು. ನಾಮಿನೇಟ್ ಆದ ಮಾತ್ರಕ್ಕೆ ಹೊರಹೋಗಲ್ಲ. ನೀವು ಉಳಿದುಕೊಳ್ಳುತ್ತೀರಿ ಎಂದಿದ್ದರು. ಆದರೆ, ಮಾನಸ ಎಲಿಮಿನೇಟ್ ಆಗಿದ್ದರು. ಆದ್ರೀಗ ಧನರಾಜ್‌ಗೂ ಇದೇ ಮಾತು ಹೇಳಿದ್ದು, ಅವರಿಗೆ ಭಯ ಶುರುವಾಗಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+