X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಸೀರಿಯಲ್‌ಗಳಲ್ಲಿ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟರಿವರು!

Author Sowmya Bairappa | Published: Friday, May 17, 2024, 11:23 AM [IST]

ಕನ್ನಡ ಸೇರಿದಂತೆ ಬಹುತೇಕ ಎಲ್ಲಾ ಭಾಷೆಯ ಸೀರಿಯಲ್‌ಗಳಲ್ಲಿ ಮಹಿಳೆಯರೇ ಹೆಚ್ಚು ವಿಲನ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಧಾರಾವಾಹಿಗಳಲ್ಲೂ ಆಗಾಗ ಸಿನಿಮೀಯ ಮಾದರಿಯ ಪ್ರಯೋಗಗಳು ನಡೆಯುತ್ತಿರುತ್ತವೆ. ಸದ್ಯ ಈಗ ಕನ್ನಡ ಕಿರುತೆರೆಯಲ್ಲಿ ಪುರುಷ ವಿಲನ್‌ಗಳ ಹವಾ ಸೃಷ್ಟಿಯಾಗಿದೆ. ಸದ್ಯ ಹೊಸ ಕನ್ನಡ ಧಾರಾವಾಹಿಗಳಲ್ಲಿ ಪುರುಷರು ಖಳನಾಯಕರಾಗಿ ಮೋಡಿ ಮಾಡುತ್ತಿದ್ದಾರೆ. ಈ ಮೂಲಕ ಮಹಿಳೆಯರೇ ನೆಗೆಟಿವ್ ಪಾತ್ರದಲ್ಲಿ ಕಾಯಂ ಎಂಬ ಸಿದ್ಧಸೂತ್ರಕ್ಕೆ ಬ್ರೇಕ್ ಬಿದ್ದಿದೆ. ಇಲ್ಲಿ ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಸುದರ್ಶನ್ ರಂಗಪ್ರಸಾದ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನಟ ಸುದರ್ಶನ್ ರಂಗಪ್ರಸಾದ್ 'ತಾಂಡವ್' ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ನಾಯಕನಾಗಿ ನಟಿಸುತ್ತಿರುವ ಸುದರ್ಶನ್ ರಂಗಪ್ರಸಾದ್, ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ತನ್ನ ಹೆಂಡತಿಗೆ ಏನೂ ಗೊತ್ತಿಲ್ಲ, ಹಳ್ಳಿ ಗಮಾರಿ, ಶಿಕ್ಷಣವಿಲ್ಲ, ಡ್ರೆಸ್ಸಿಂಗ್ ಸೆನ್ಸ್ ಇಲ್ಲ ಹೀಗೆ ಎಲ್ಲಾ ವಿಷಯದಲ್ಲೂ ಹೆಂಡತಿ ಮೇಲೆ ಅಸಮಾಧಾನ ಹೊಂದಿರುವ ತಾಂಡವ್, ತನಗೋಸ್ಕರ ಪತ್ನಿ ಏನೇ ಮಾಡಿದ್ರೂ ಖುಷಿಪಡುವುದಿಲ್ಲ. ಆತ ಆಫೀಸ್‌ನಲ್ಲಿ ಕೆಲಸ ಮಾಡುವ ಶ್ರೇಷ್ಠಾಳನ್ನು ಪ್ರೀತಿಸುತ್ತಿದ್ದಾನೆ. ಸದ್ಯ ಈ ಧಾರಾವಾಹಿಯಲ್ಲಿ ನಾಯಕಿಗೆ ಇವರೇ ವಿಲನ್  ಆಗಿದ್ದಾರೆ. 

ದೀಪಕ್  ಸುಬ್ರಮಣ್ಯ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ 'ಜಯಂತ್' ಪಾತ್ರ ಕನ್ನಡ ಕಿರುತೆರೆ ವೀಕ್ಷಕರಿಗೆ ಕ್ರೇಜ್ ಹುಟ್ಟಿಸಿದೆ. ಈ ಪಾತ್ರ ಮಾಡುತ್ತಿರುವವರು ದೀಪಕ್ ಸುಬ್ರಮಣ್ಯ. ಎಲ್ಲರ ಮುಂದೆ ನಿಯತ್ತಿನ, ಪ್ರಾಮಾಣಿಕ ಜೊತೆಗೆ ತುಂಬಾ ವಿನಯತೆಯಿಂದ ಇರುವ ಜಯಂತ್, ನಿಜವಾಗಿಯೂ ಸೈಕೋ. ತಾನು ಇಷ್ಟಪಟ್ಟ ಹುಡುಗಿಯನ್ನು ತಾನಲ್ಲದೇ ಬೇರೆ ಯಾರೂ ಮುಟ್ಟಬಾರದು ಎನ್ನುವ ಪಾಗಲ್ ಪ್ರೇಮಿ. ಒಳ್ಳೆತನದ ಮುಖವಾಡ ಹಾಕಿಕೊಂಡಿರುವ ಜಯಂತ್, ಪತ್ನಿ ವಿಷಯದಲ್ಲಿ ತುಂಬಾ ಪೊಸೆಸಿವ್. ಜಯಂತ್ ಅಸಲಿ ಮುಖ ಇನ್ನೂ ಜಾನುಗೆ ಇನ್ನೂ ತಿಳಿದಿಲ್ಲ. ಜಯಂತ್ ಪಾತ್ರದ ಭೀಕರತೆ ಏನು ಅನ್ನೋದರ ಪರಿಚಯ ಈಗಾಗಲೇ ವೀಕ್ಷಕರಿಗೆ ಸಿಕ್ಕಿದ್ದು, ಈ ಪಾತ್ರದ ಮೂಲಕ ದೀಪಕ್ ಸುಬ್ರಮಣ್ಯ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದಾರೆ. 


ರಾಜೇಶ್ ಧ್ರುವ

ಈ ಹಿಂದೆ ಕನ್ನಡದ ಸೂಪರ್ ಹಿಟ್ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಾಯಕನ ಸಹೋದರ 'ಅಖಿಲ್' ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದ ರಾಜೇಶ್ ಧ್ರುವ ಸದ್ಯ ಶ್ರೀಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಅವರದ್ದು 'ಶರಣ' ಎಂಬ ನೆಗೆಟಿವ್ ರೋಲ್. ಈ ಮೂಲಕ ಮೊದಲ ಬಾರಿಗೆ ಖಳನಾಯಕನಾಗಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 

ಮಂಜು ಪಾವಗಡ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ಮೂಲಕ ಪ್ರಸಿದ್ಧರಾದ ಮಂಜು ಪಾವಗಡ, ಬಿಗ್ ಬಾಸ್ ಕನ್ನಡ ಸೀಸನ್ 8ರ ವಿಜೇತರಾಗಿದ್ದರು. ಸದ್ಯ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಸೀರಿಯಲ್‌ನಲ್ಲಿ ನಾಯಕಿಯ ತಾಯಿಯ ಎರಡನೇ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವರು 'ಮಹೇಶ' ಎಂಬ ನೆಗೆಟಿವ್ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸದಾ ಕಾಮಿಡಿ ಪಾತ್ರ ಮಾಡ್ತಿದ್ದ ಅವರು ಮೊದಲ ಬಾರಿಗೆ ಖಳನಾಯಕನಾಗಿ ಬಣ್ಣಹಚ್ಚಿದ್ದಾರೆ. 


ರಿತ್ವಿಕ್ ಕೃಪಾಕರ್

ಇನ್ನೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ರಿತ್ವಿಕ್ ಕೃಪಾಕರ್ ಡಬಲ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಅವರು ರಾಮಾಚಾರಿ ಹಾಗೂ ಕಿಟ್ಟಿ ಅಲಿಯಾಸ್ ಕೃಷ್ಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಕಿಟ್ಟಿ ರೋಲ್ ನೆಗೆಟಿವ್ ಆಗಿತ್ತು. ಆದ್ರೀಗ ಕಿಟ್ಟಿ ಒಳ್ಳೆಯವನಾಗಿ ಬದಲಾಗಿದ್ದಾನೆ. ಅದೇ ರೀತಿ ಅಮೃಧಾರೆ ಧಾರಾವಾಹಿಯ  ಜೈದೇವ್ ಪಾತ್ರ ಕೂಡ ನೆಗೆಟಿವ್ ಆಗಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+