X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡದ ಈ ಐದು ನಿರ್ದೇಶಕರಿಗೆ ಲೈಫ್ ಕೊಟ್ಟ ಸಿನಿಮಾಗಳಿವು!

Author Sowmya Bairappa | Updated: Monday, November 25, 2024, 09:42 AM [IST]

ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿರುವ ಅನೇಕ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಆದರೆ, ನಿರ್ದೇಶಕರು ಮೊದಲ ಪ್ರಯತ್ನದಲ್ಲಿ ಸೋತು ಎರಡು ಅಥವಾ ಮೂರನೇ ಸಿನಿಮಾದಲ್ಲಿ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ಅಂತಹ ಪಟ್ಟಿಯಲ್ಲಿ ಯೋಗರಾಜ್ ಭಟ್, ರಿಷಬ್ ಶೆಟ್ಟಿ, ಶಶಾಂಕ್, ಪವನ್ ಒಡೆಯರ್, ಪವನ್ ಕುಮಾರ್ ಕೂಡ ಇದ್ದಾರೆ. ಈ ಐದು ನಿರ್ದೇಶಕರ ಸಿನಿಜರ್ನಿ ನೋಡಿದರೆ ಅವರಿಗೆ ಮೊದಲು ಸಿಕ್ಕಿದ್ದು ಸೋಲು. ಇವರು ಗೆಲುವು ಕಂಡಿದ್ದು, ಎರಡನೇ ಅಥವಾ ಮೂರನೇ ಸಿನಿಮಾದಲ್ಲಿ. ಮರಳಿ ಯತ್ನ ಮಾಡಿದ ಈ ನಿರ್ದೇಶಕರಿಗೆ ಲೈಫ್ ಕೊಟ್ಟ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಕಾಂತಾರ

ರಿಷಭ್ ಶೆಟ್ಟಿ ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ನಟನಾಗಬೇಕು ಎಂದು ಚಿತ್ರರಂಗಕ್ಕೆ ಬಂದ ರಿಷಬ್, ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಇವರ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿ. ಈ ಸಿನಿಮಾ ಬಾಕ್ಸಾಫೀಸ್‌ಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಬಳಿಕ ಕಿರಿಕ್ ಪಾರ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ಇದು ಅವರ ಸಿನಿಬದುಕಿಗೆ ದೊಡ್ಡ ಬ್ರೇಕ್ ನೀಡಿತು. 2024ರಲ್ಲಿ ರಿಷಬ್ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬರೀ ಕನ್ನಡಿಗರಿಗಷ್ಟೇ ಅಲ್ಲ, ಪರ ಭಾಷಿಗರಿಗರು ಇಷ್ಟವಾಗಿತ್ತು. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಅವರು ಸಿನಿಮಾ ಮೂಲಕ ಭಾಷೆಯ ಎಲ್ಲೆಯನ್ನು ಮೀರಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಮುಂಗಾರು ಮಳೆ

ಅನೇಕರು ಕನ್ನಡ ಚಿತ್ರರಂಗದ ವಿಕಟಕವಿ ಯೋಗರಾಜ್ ಭಟ್ ಅವರ ಮೊದಲ ಸಿನಿಮಾ ಮುಂಗಾರು ಮಳೆ ಅಂದುಕೊಂಡಿದ್ದಾರೆ. ಆದರೆ, ಅವರ ನಿರ್ದೇಶನದ ಮೊದಲ ಸಿನಿಮಾ ಮಣಿ.  ಈ ಚಿತ್ರ ಉತ್ತಮ ವಿಮರ್ಶೆ ಪಡೆದು, ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ಆದರೆ, ಬಾಕ್ಷಾಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ನಂತರ ರಂಗ SSLC ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ಕೂಡ ಫೇಲ್ ಆಯಿತು. ಮೂರನೇ ಪ್ರಯತ್ನವಾಗಿ 'ಮುಂಗಾರು ಮಳೆ' ಸಿನಿಮಾವನ್ನು ನಿರ್ದೇಶಿಸಿದರು.  ಈ ಚಿತ್ರ ಒಂದು ವರ್ಷ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ಬರೆಯಿತು. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 75 ಕೋಟಿ ಬಾಚಿಕೊಂಡಿತ್ತು.

ಮೊಗ್ಗಿನ ಮನಸು

ನಿರ್ದೇಶಕ ಶಶಾಂಕ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ 'ಸಿಕ್ಸರ್'. ಈ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಪಡೆದರು. ಆದರೆ, ಈ ಸಿನಿಮಾ ಯಶಸ್ವಿಯಾಗಲಿಲ್ಲ. ಬಳಿಕ ಮೊಗ್ಗಿನ ಮನಸ್ಸು ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಅವರಿಎ ಒಳ್ಳೆಯ ಹೆಸರು ತಂದುಕೊಟ್ಟಿತು.  

ಲೂಸಿಯಾ

ಯೋಗರಾಜ್ ಭಟ್ ಟೀಮ್‌ನಲ್ಲೇ ಗುರುತಿಸಿಕೊಂಡಿದ್ದ ಪವನ್ ಕುಮಾರ್ 'ಲೈಫು ಇಷ್ಟೇನೆ' ಚಿತ್ರದ ಮೂಲಕ ನಿರ್ದೇಶಕರಾದರು. ದಿಗಂತ್ ಮಂಚಾಲೆ ನಾಯಕನಾಗಿ ನಟಿಸಿದ್ದ ಈ ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಾಣಲಿಲ್ಲ. ನಂತರ 'ಲೂಸಿಯಾ' ಸಿನಿಮಾ ನಿರ್ದೇಶಿಸಿದ ಪವನ್ ಕುಮಾರ್, ಈ ಸಿನಿಮಾದ ಬಳಿಕ ಡಿಫರೆಂಟ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. 

ಗೂಗ್ಲಿ

ಪವನ್ ಒಡೆಯರ್ ನಿರ್ದೇಶನದ ಮೊದಲ ಸಿನಿಮಾ ಗೋವಿಂದಾಯ ನಮಃ. ಆದರೆ, ಈ ಸಿನಿಮಾ ಅಷ್ಟೇನೂ ಹಿಟ್ ಆಗಲಿಲ್ಲ. ಅವರ ಸಿನಿಬದುಕಿನಲ್ಲಿ ದೊಡ್ಡ ಗೆಲುವು ನೀಡಿದ ಸಿನಿಮಾ ಗೂಗ್ಲಿ. ಈ ಚಿತ್ರ ಹಿಟ್ ಆಗುವುದರ ಜೊತೆಗೆ ಪವನ್ ಒಡೆಯರ್ ಸಾವಿರಾರು ಅಭಿಮಾನಿಗಳನ್ನು ಪಡೆದರು. ರಾಕಿಂಗ್ ಸ್ಟಾರ್ ಯಶ್‌ಗೂ ಈ ಸಿನಿಮಾ ಒಳ್ಳೆಯ ಹೆಸರು ನೀಡಿತ್ತು. 'ಗೂಗ್ಲಿ' ಪವನ್ ಒಡೆಯರ್ ಬದುಕು ಬದಲಿಸಿದ ಸಿನಿಮಾ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+