X
ಹೋಮ್ ಚಲನಚಿತ್ರಗಳ ಒಳನೋಟ

ವೀಕೆಂಡ್ ವಿತ್ ರಮೇಶ್‌ನಲ್ಲಿ ರಮ್ಯಾ ಮನದಾಳದ ಮಾತು: ಇಲ್ಲಿವೆ ಶೋನ ಪ್ರಮಖ ಹೈಲೈಟ್‌ಗಳು ಇಲ್ಲಿವೆ!

Author Sowmya Bairappa | Published: Monday, March 27, 2023, 03:04 PM [IST]

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ ಮಾರ್ಚ್ ೨೫ರಂದು ಆರಂಭಗೊಂಡಿದೆ. ಸೀಸನ್ 5ರ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿದ್ದರು. ರಮ್ಯಾ ಅವರನ್ನು ಸಾಧಕರ ಕುಚಿಯಲ್ಲಿ ನೋಡಬೇಕು ಎಂಬುದು ಹಲವು ಮಂದಿಯ ಆಸೆಯಾಗಿತ್ತು. ಅದರಂತೆ ವೀಕೆಂಡ್ ವಿತ್ ರಮೇಶ್ 5ಗೆ ಮೊದಲ ಅತಿಥಿಯಾಗಿ ರಮ್ಯಾ ಬಂದಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ರಮ್ಯಾ ಎಪಿಸೋಡ್ ನ ಪ್ರಮುಖ ಹೈಲೈಟ್‌ಗಳು ಇಲ್ಲಿವೆ.


cover image
ಜಿಲೇಬಿ ಮತ್ತು ಚಿತ್ರಾನ್ನ ರಮ್ಯಾಗೆ ಬಲು ಇಷ್ಟ
1

ನಟಿ ರಮ್ಯಾಗೆ ಜಿಲೇಬಿ ಮತ್ತು ಚಿತ್ರಾನ್ನ ಬಹಳ ಇಷ್ಟವಾದ ತಿನಿಸು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಗೊತ್ತಾಗಿದೆ.  ರಮ್ಯಾ ಅವರು ಚಿತ್ರಾನ್ನ ತಿನ್ನಲು ಸ್ಪೂನ್ ಬಳಸದೆ ಚಿಪ್ಸ್ ನಲ್ಲೆ ತಿನ್ನುತ್ತಾರೆ ಎಂಬುದು ಅವರ ಸಹೋದರಿಯಿಂದ ತಿಳಿದು ಬಂತು. ಜೊತೆಗೆ ರಮ್ಯಾ ಅಭಿಮಾನಿಯೊಬ್ಬರು 'ರಮ್ಯಾ' ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದು, ಕೇವಲ 10 ರೂಪಾಯಿಗೆ ಊಟ ನೀಡುತ್ತಿರುವುದಾಗಿ ಹೇಳಿಕೊಂಡರು. 

 

ಬಾಲ್ಯದ ದಿನಗಳ ಮೆಲುಕು
2

ವೀಕೆಂಡ್ ವಿತ್ ರಮೇಶ್  ಕಾರ್ಯಕ್ರಮದಲ್ಲಿ ನಟಿ ರಮ್ಯಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ಊಟಿಯಲ್ಲಿ ಓಧಿದ ಬೋರ್ಡಿಂಗ್ ಶಾಲೆ, ಅಲ್ಲಿನ ಕಠಿಣ ನಿಯಮಗಳು, ಅಲ್ಲಿನ ಶಿಕ್ಷಕರು, ಅಲ್ಲಿನ ಗೆಳೆಯರನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಈ ಕಾರ್ಯಕಮಕ್ಕೆ ರಮ್ಯಾರ ಬಾಲ್ಯದ ಗೆಳತಿಯರು  ಆಗಮಿಸಿದ್ದು, ರಮ್ಯಾ ಹೇಗೆ ರಾತ್ರಿ ವೇಳೆ ದೆವ್ವದ ಕಥೆಗಳನ್ನು ಹೇಳಿ ಎಲ್ಲಾರನ್ನು ಹೆದರಿಸುತ್ತಿದ್ದರು. ಹೇಗೆ ತಮಗೆ ಇಷ್ಟವಾದಾಗ ರಾಗಿ ಗಂಜಿ ಮತ್ತು ಹಾಲನ್ನು ಮಾಯಾ ಮಾಡುತ್ತಿದ್ದರು ಎಂಬುದನ್ನು ರಟ್ಟು ಮಾಡಿದರು. ರಮ್ಯಾ ಅವರ ಗಣಿತ ಶಿಕ್ಷಕಿ ಕೂಡ ಈ ಶೋಗೆ ಆಗಮಿಸಿದ್ದರು. 

ಅಪ್ಪು ನೆನೆದು ರಮ್ಯಾ ಭಾವುಕ
3

2003ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಚಿತ್ರದ ಮೂಲಕ ನಟಿ ರಮ್ಯಾ ಅವರನ್ನು ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ವೀಕೆಂಡ್ ವಿತ್ ರಮೇಶ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ತಮಗೆ ರಮ್ಯಾ ಎಂದು ಹೆಸರಿಟ್ಟಿರುವುದರ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಅಪ್ಪು ಅವರನ್ನು ನೆನೆದ ಮೋಹಕತಾರೆ, ಪುನೀತ್ ಜೊತೆ ನಟಿಸಿದ ಪ್ರತಿಯೊಂದು ಕ್ಷಣವನ್ನು ಮೆಲುಕು ಹಾಕಿದ್ದಾರೆ. 'ಅಭಿ' ಶೂಟಿಂಗ್ ವೇಳೆ ಹಾಡೊಂದಕ್ಕೆ ನನಗೆ ಸ್ಟೆಪ್ ಹಾಕಲು ಬರುತ್ತಿರಲಿಲ್ಲ. ಆಗ ಅಪ್ಪು ಅವರೇ ನನಗೆ ಹುರಿದುಂಬಿಸಿ ಡ್ಯಾನ್ಸ್ ಮಾಡಿಸಿದರು. ಕಾಸ್ಟ್ಯೂಮ್ ಚೇಂಜ್ ಮಾಡಲು ಒಂದೇ ಕ್ಯಾರವಾನ್ ಇತ್ತು. ಅದನ್ನು ಅಪ್ಪುಗಾಗಿ ಮಾತ್ರ ಮೀಸಲಿಡಲಾಗಿತ್ತು. ಆದರೆ, ಅಪ್ಪು ಇದು ನಿಮ್ಮದೇ ಕ್ಯಾರವಾನ್ ಬನ್ನಿ ಎಂದು ಹೇಳುವ ಮೂಲಕ ಸರಳತೆಯ ಸಾಮ್ರಾಟ ಎನಿಸಿಕೊಂಡಿದ್ದರು ಎಂದು ಪುನೀತ್ ಅವರನ್ನು ನೆನಸಿಕೊಂಡು ಭಾವುಕರಾಗಿದ್ದರು.  

ರಮ್ಯಾ ಸಹಾಯ ಸ್ಮರಿಸಿದ ನಾಗಶೇಖರ್
4

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಟನೆಯ ಸಂಜು ವೆಡ್ಸ್ ಗೀತಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾವನ್ನು ನಿರ್ದೇಶಿಸಿದ್ದು, ನಾಗಶೇಖರ್. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸಂಜು ವೆಡ್ಸ್ ಗೀತಾ ನಿರ್ದೇಶಕ ನಾಗಶೇಖರ್ ವಿಡಿಯೋ ಪ್ರಸಾರ ಮಾಡಲಾಗಿತ್ತು. ಅದು ಮುಗಿಯುತ್ತಿದಂತೆ ನಾಗಶೇಖರ್ ಹಾಗೂ ಶ್ರೀನಗರ ಕಿಟ್ಟಿ ವೇದಿಕೆಗೆ ಎಂಟ್ರಿಕೊಟ್ಟಿದ್ದರು. ಈ ಮಾತನಾಡಿದ ನಾಗಶೇಖರ್, ಹಣ ಖಾಲಿಯಾಗಿ ಈ ಸಿನಿಮಾ ಎರಡೂವರೆ ವರ್ಷ ನಿಂತು ಹೋಗಿತ್ತು.  ಆಗ ರಮ್ಯಾ ಹಣ ನೀಡಿ, ಸಿನಿಮಾ ಶೂಟಿಂಗ್ ಮಗಿಯುವಂತೆ ಮಾಡಿದರು. ಜೊತೆಗೆ ಸಿನಿಮಾ ಹಿಟ್ ಆಗಿ ನನಗೆ ಒಂದು ನೆಲೆ ಕೊಟ್ಟಿತು ಎಂದು ರಮ್ಯಾ ಸಹಾಯ ಸ್ಮರಿಸಿದರು. 

ಮೊದಲ ಚೆಕ್ ಕೊಟ್ಟಿದ್ದು ಅಪ್ಪು
5

ಅಪ್ಪು ಮರಣದ ಸುದ್ದಿ ಬಂದಾಗ ನಾನು ಗೋವಾದಲ್ಲಿದ್ದೆ. ಮೊದಲು ನನ್ನ ಸ್ನೇಹಿತರೊಬ್ಬರು ಕರೆ ಮಾಡಿ ಹೇಳಿದಾಗ ಮೊದಲು ನಂಬಲಿಲ್ಲ. ಆಮೇಲೆ ಸತ್ಯ ತಿಳಿದಮೇಲೆ ಆಘಾತವಾಯಿತು. ನನ್ನ ಮೊದಲ ಸಿನಿಮಾ ಅಭಿ. ಅದರ ಚೆಕ್ ಕೊಟ್ಟಿದ್ದು ಅಪ್ಪು. ಅವರಿಂದಲೇ ನಾನು ಚೆಕ್ ತೆಗೆದುಕೊಳ್ಳಬೇಕು ಎಂದು ಬಯಸಿ ತೆಗೆಯುಕೊಂಡಿದ್ದೆ.  ನನಗೆ ಅವರು ಹೈಯೆಸ್ಟ್ ಪೇಮೆಂಟ್ ಕೊಟ್ಟಿದ್ದರು. ಅವರಿಲ್ಲ ಅಂತ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  

ಮಿಸ್ ವರ್ಲ್ಡ್ ಆಗುವ ಆಸೆ
6

ಮೋಹಕತಾರೆಗೆ ಸಮಾಜ ವಿಜ್ಞಾನ, ಇಂಗ್ಲಿಷ್ ಅಂದರೆ ತುಂಬಾ ಇಷ್ಟವಂತೆ. ಆದರೆ, ಗಣಿತದಲ್ಲಿ ಸಖತ್ ವೀಕ್ ಇದ್ದರಂತೆ. ರಮ್ಯಾ ಅವರನ್ನು ಅವರ ಗೆಳತಿಯರು ಸ್ಪೆಗೆಟಿ ಅಂತ ಕರೆಯುತ್ತಿದ್ದರಂತೆ. ರಮ್ಯಾಗೆ ಬಾಲ್ಯದಲ್ಲಿ ದೊಡ್ಡ ಮಾಡೆಲ್ ಆಗಬೇಕು, ಮಿಸ್ ವರ್ಲ್ಡ್ ಆಗಬೇಕು ಎಂಬ ಬಹುದೊಡ್ಡ ಆಸೆಯಿತ್ತಂತೆ. 

 

ರಾಹುಲ್ ಗಾಂಧಿ ಸಹಾಯ ನೆನೆದ ರಮ್ಯಾ
7

ವೀಕೆಂಡ್ ವಿತ್ ರಮೇಶ್ ನಲ್ಲಿ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ರಮ್ಯಾ, ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಈ ಸಮಯದಲ್ಲೇ ನನ್ನ ತಂದೆ ತೀರಿಕೊಂಡರು. ಅದು ನನ್ನನ್ನು ಸಾಕಷ್ಟು ಕಾಡಿತು.  ಅದಾದ ಬಳಿಕ ನಾನು ಚುನಾವಣೆಯಲ್ಲಿ ಸೋತೆ. ಅದು ನನ್ನ ಪಾಲಿಗೆ ಸಾಕಷ್ಟು ಕಷ್ಟದ ಸಮಯ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೀ ಬಹಳ ಸಹಾಯ ಮಾಡಿದರು. ನನ್ನಲ್ಲಿ ಹೊಸ ಚೈತನ್ಯ ತುಂಬಿಸುವ ಪ್ರಯತ್ನ ಮಾಡಿದರು. ನನ್ನ ಜೀವನದ ಉದ್ದೇಶದ ಬಗ್ಗೆ ತಿಳಿಸಿದರು. ನನ್ನ ಜೀವನದಲ್ಲಿ ತಾಯಿ, ತಂದೆಯ ಬಳಿಕ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ರಾಹುಲ್ ಗಾಂಧಿ ಎಂದರು.  

ಮಂಡ್ಯ ಜನತೆಗೆ ಚಿರಋಣಿ
8

ಚುನಾವಣೆಯಲ್ಲಿ ಮಂಡ್ಯ ಜನತೆಯ ಬೆಂಬಲವನ್ನು ನೆನಪಿಸಿಕೊಂಡ ರಮ್ಯಾ, ರಾಜಕಾರಣ ನನಗೆ ಹೊಸತು, ಎಲ್ಲವನ್ನು ನಿಧಾನಕ್ಕೆ ಕಲಿತೆ. ಮಂಡ್ಯ ಜನರು ನೀಡಿದ ಬೆಂಬಲದಿಂದಲೇ ಅದು ಸಾಧ್ಯವಾಗಿದ್ದು. ನಾನು ಅವರಿಗೆ ಸದಾ ಚಿರಋಣಿ ಎಂದರು. ಇದೇ ವೇಳೆ ಅಂಬರೀಷ್ ತಮಗೆ ಬ್ರಾಂಡಿ ಹೆಸರಿನ ನಾಯಿಯನ್ನು ಗಿಫ್ಟ್ ನೀಡಿದ್ದನ್ನು ನೆನಪಿಸಿಕೊಂಡರು. ಆ ನಾಯಿ ತಮ್ಮ ಜೀವನದ ಭಾಗವಾಗಿತ್ತು. ಕಳೆದ ವರ್ಷ ಇದೆ ತಿಂಗಳು ಅದು ಮರಣ ಹೊಂದಿತು ಎಂದರು.  

 

ಮೋಹಕತಾರೆ ಸಖತ್ ಟ್ರೊಲ್
9

ಅಭಿಮಾನಿಗಳು ಸೇರಿದಂತೆ ಅನೇಕರು ರಮ್ಯಾ ಬದುಕಿನ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಆದರೆ, ಕಾರ್ಯಕ್ರಮದಲ್ಲಿ ರಮ್ಯಾ  ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಬಳಸಿರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ.  ಇದು ಕನ್ನಡ ಕಾರ್ಯಕ್ರಮದಂತೆ ಇರಲಿಲ್ಲ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು ಎಂದು ನೆಟ್ಟಿಗರು ಟ್ರೊಲ್ ಮಾಡುತ್ತಿದ್ದಾರೆ. ಜೊತೆಗೆ ಇದರ ಜೊತೆ ನ್ಯಾಷನಲ್ ಕ್ರಶ್ ರಶ್ಮಿಕಾರನ್ನು ಎಳೆದು ತಂದಿದ್ದಾರೆ. ಟ್ರಾಲಿಗರೊಬ್ಬರು 'ರಮ್ಯಾ ತತ್ಸಮ, ರಶ್ಮಿಕಾ ತದ್ಭವ. ಹೆಚ್ಚಿನ ಮಾಹಿತಿಗಾಗಿ ವೀಕೆಂಡ್ ವಿತ್ ಇಂಗ್ಲಿಷ್ ನೋಡಿ ಎಂದು ಟ್ರೋಲ್ ಮಾಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+