ತನ್ನ ಹತ್ತಿರ ಕೆಲಸ ಮಾಡುವ ವೈದ್ಯಕೀಯ ವಿಧ್ಯಾರ್ಥಿಯೋರ್ವಳನ್ನು ಪ್ರೀತಿಸುವ ವೈದ್ಯ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹೊತ್ತಿಗೆ ಅವಳ ಮದುವೆ ನಿಶ್ಚಯವಾಗುತ್ತದೆ .ಅವಳ ಕೊರಗಿನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಹರೀಶ್ ಕೊನೆಗೆ ಅವಳ ಮಗುವನ್ನು ಈ ಭೂಮಿಗೆ ಬರಮಾಡಿ ಕೊನೆಯುಸಿರೆಳೆಯುತ್ತಾನೆ. ಕನ್ನಡದ ಹಾಗೂ ವಿಷ್ಣುವರ್ಧನ್ ಸಿನಿಜೀವನದ ಅತ್ತ್ಯುತ್ತಮ ಚಿತ್ರಗಳಲ್ಲಿ ಇದೊಂದು.