X
ಹೋಮ್ ಚಲನಚಿತ್ರಗಳ ಒಳನೋಟ

ಸಿನಿಮಾ ಶೂಟಿಂಗ್ ವೇಳೆ ಗಂಭೀರ ಗಾಯಗೊಂಡು ಆಪರೇಷನ್‌ಗೆ ಒಳಗಾದ ಕನ್ನಡದ ನಟರಿವರು!

Author Sowmya Bairappa | Published: Tuesday, July 9, 2024, 03:23 PM [IST]

ಸಿನಿಮಾ ಕಲಾವಿದರು ಫಿಟ್ನೆಸ್‌ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ, ಕೆಲ ನಟರು ಶೂಟಿಂಗ್ ಸಂದರ್ಭದಲ್ಲಿ ಗಾಯಗೊಂಡು ಆಪರೇಷನ್‌ಗೆ ಒಳಗಾಗಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್‌ ಯಾವ ನಟ-ನಟಿಯರು ಮೇಜರ್ ಇಂಜುರಿಯಾಗಿ ಚಿಕಿತ್ಸೆಗೊಳಗಾಗಿದ್ದಾರೆ ಎಂಬುದನ್ನು ನೋಡೋಣ.


cover image
ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳಲ್ಲಿ ಅದ್ಧೂರಿತನಕ್ಕೇನು ಕೊರತೆ ಇರುವುದಿಲ್ಲ. ಅವರು ಒಂದೊಂದು ಸ್ಕ್ರೀನ್‌ಗಳನ್ನು ಪ್ಲ್ಯಾನ್ ಮಾಡಿ ಬ್ಯೂಟಿಫುಲ್‌ ಆಗಿ ಮಾಡ್ತಾರೆ. ಇದೇ ರೀತಿ 1991ರಲ್ಲಿ ಕಲಾವಿದ ಎಂಬ ಸಿನಿಮಾ ಮಾಡ್ತಾರೆ. ಈ ಸಿನಿಮಾದ ಫೈಟಿಂಗ್‌ ಸೀನ್‌ನಲ್ಲಿ ಕ್ರೇಜಿಸ್ಟಾರ್ ಕುದುರೆಯೇರಿ ಚೇಸ್‌ ಮಾಡುವ ದೃಶ್ಯವಿದ್ದು, ಇದನ್ನು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಶೂಟ್ ಮಾಡಲಾಗಿತ್ತು. ಚೇಸಿಂಗ್ ವೇಳೆ ರವಿಚಂದ್ರನ್ ಒಂದು ಫೋಲ್‌ಗೆ ತಾಗಿ ಕೆಳಗೆ ಬಿದ್ದಿದ್ದರು. ಇದರಿಂದ ಅವರ ಬೆನ್ನು ಮೂಳೆಯ ಭಾಗಕ್ಕೆ ಬಲವಾದ ಪೆದ್ದಿತ್ತು. ಈಗಲೂ ಕೂಡ ರವಿಚಂದ್ರನ್ ಅದರ ನೋವು ಅನುಭವಿಸುತ್ತಿದ್ದು, ಈ ಕಾರಣಕ್ಕೆ ಅವರು ತೂಕ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ.

ಶಿವ ರಾಜ್‌ಕುಮಾರ್

60ರ ಹರೆಯದಲ್ಲೂ ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಬಲ ಭುಜಕ್ಕೆ ಸಿನಿಮಾವೊಂದರ ಆಕ್ಷನ್ ಸೀನ್ ಮಾಡುವಾಗ ಬಲವಾದ ಪೆಟ್ಟು ಬಿದ್ದಿತ್ತು. ಇದರಿಂದ ತುಂಬ ಹಿಂಸೆ ಅನುಭವಿಸುತ್ತಿದ್ದ ಶಿವಣ್ಣ, 2019ರಲ್ಲಿ ಲಂಡನ್‌ಗೆ ತೆರಳಿ ಆಪರೇಷನ್ ಮಾಡಿಸಿಕೊಂಡಿದ್ದರು.

ಸಂಯುಕ್ತ ಹೆಗ್ಡೆ

ಕಿರಿಕ್ ಬೆಡಗಿ ಸಂಯುಕ್ತ ಹೆಗಡೆ ಅವರು ಮಹಿಳಾ ಆಧಾರಿತ 'ಕ್ರೀಂ' ಸಿನಿಮಾದ ಶೂಟಿಂಗದ ವೇಳೆ ಡ್ಯೂಕ್ ಬಳಸದೇ ಫೈಟ್ ಮಾಡಿದ್ದರಿಂದ ಕೈ-ಕಾಲಿಗೆ ಪೆಟ್ಟು ಮಾಡಿಕೊಂಡಿದ್ರು. ಚಿತ್ರತಂಡ ಫೈಟಿಂಗ್ ಸೀನ್‌ಗೆ ಡ್ಯೂಕ್ ಬಳಸಲು ಮೊದಲೇ ನಿರ್ಧರಿಸಿತ್ತು. ಆದರೆ, ಸಂಯುಕ್ತ ರಿಸ್ಕಿ ಸ್ಟಂಟ್‌ಗಳನ್ನು ತಾವೇ ಮಾಡಲು ಮುಂದಾಗಿದ್ದು, ಈ ವೇಳೆ ಮೊಣಕಾಲಿನ ಲಿಗಾಮೆಂಟ್ ಹರಿದು ಹೋಗಿದ್ದು, ಸರ್ಜರಿ ಮೂಲಕ ಸರಿಪಡಿಸಲಾಗಿದೆ.

ದಿಗಂತ್

ದೂದ್‌ಪೇಡ್ ದಿಗಂತ್ ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಬಾಲಿವುಡ್‌ನಲ್ಲೂ ಹೆಸರು ಮಾಡಿದ್ದಾರೆ. ದಿಗಂತ್ 2017ರಲ್ಲಿ 'ಟಿಕೆಟ್‌ ಟು ಬಾಲಿವುಡ್' ಎನ್ನುವ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ದೃಶ್ಯವೊಂದಕ್ಕಾಗಿ ನಾಯಕಿ ದಿಗಂತ್‌ಗೆ ಚಪ್ಪಲಿ ಎಸೆದಿದ್ದರು. ಅದು ಬಲಕಣ್ಣಿಗೆ ತಾಗಿ ಗಂಭೀರ ಗಾಯವೇ ಆಗಿತ್ತು. ದಿಗಂತ್ ಕಣ್ಣಿಗೆ ಏಟು ಬೀಳುತ್ತಿದ್ದಂತೆ ಮೂರು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಅದೆಷ್ಟೇ ಪ್ರಯತ್ನ ಪಟ್ಟರೂ ದಿಗಂತ್ ಕಣ್ಣು ಮೊದಲಿನಷ್ಟು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಆಪ್ತರು ಹೇಳುತ್ತಾರೆ. ಈ ಅಪಘಾತದ ಬಳಿಕ 2022ರಲ್ಲಿ ದಿಗಂತ್ ತಮ್ಮ ಪತ್ನಿ ಐಂದ್ರಿತಾ ರೇ ಹಾಗೂ ಆಪ್ತರೊಂದಿಗೆ ಗೋವಾ ಟ್ರಿಪ್‌ಗೆ ತೆರಳಿದ್ದರು. ಈ ವೇಳೆ ಸಮ್ಮರ್‌ಸಾಲ್ಟ್ ಎಂಬ ಸ್ಟಂಟ್ ಮಾಡಲು ಹೋಗಿ ದಿಗಂತ್‌ಗೆ ಬೆನ್ನುಮೂಳೆ, ಕತ್ತು ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.

ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾರಿನಲ್ಲಿದ್ದ ದರ್ಶನ್, ದೇವರಾಜ್‌, ಪ್ರಜ್ವಲ್ ದೇವರಾಜ್ ಅವರಿಗೂ ಪೆಟ್ಟಾಗಿತ್ತು. ಈ ಸಂದರ್ಭ ದರ್ಶನ್ ಅವರ ಬಲಗೈಗೆ ಬಲವಾದ ಪೆಟ್ಟು ಬಿದ್ದು, ಅವರ ಕೈ ಮೂಳೆ ಮುರಿದು ಹೋಗಿತ್ತು. ಆನಂತರ ಚಿಕಿತ್ಸೆಗೆ ಒಳಗಾಗಿದ್ದ ದರ್ಶನ್, ಈಗಲೂ ಕೂಡ ಅದರ ನೋವು ಅನುಭವಿಸುತ್ತಿದ್ದಾರೆ.

ಶ್ರೀಮುರುಳಿ

ನಟ ಶ್ರೀಮುರಳಿ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮದಗಜ ಆಕ್ಷನ್ ಸೀನ್ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟಾಗಿ ಕುಸಿದು ಬಿದ್ದಿದ್ರು. ಇದಾದ ಬಳಿಕ ೨೦೨೩ರಲ್ಲಿ 'ಬಘೀರ' ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ ವೇಳೆ ಬಿದ್ದು ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಶ್ರೀಮುರಳಿಯವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ವೈದ್ಯರು ಮೂರು ತಿಂಗಳು ವಿಶ್ರಾಂತಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+