X
ಹೋಮ್ ಚಲನಚಿತ್ರಗಳ ಒಳನೋಟ

ಕಾರ್ತಿಕ್‌ ಮೇಲೆ ಗಂಭೀರ ಆರೋಪ: ಸಂಗೀತಾ ದೀದಿಗೆ ಎಚ್ಚರಿಕೆ ನೀಡಿದ ಡ್ರೋನ್ ಪ್ರತಾಪ್

Author Sowmya Bairappa | Published: Monday, December 18, 2023, 01:23 PM [IST]

ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್‌ ಮತ್ತು ಸಂಗೀತಾ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತದೆ. ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮುಂದೆಯೇ ಕಾರ್ತಿಕ್‌ ಅವರು ವಿನಯ್‌ಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರು. ಇದು ಕಾರ್ತಿಕ್ ಕೋಪಕ್ಕೆ ಕಾರಣವಾಗಿತ್ತು. ಪ್ರತಾಪ್ ಮಾತ್ರ ಬಕೆಟ್ ಅಂತ ಹೇಳೋಕೆ ಆಗಲ್ಲ, ಅವರಿಬ್ಬರು ಚೆನ್ನಾಗಿರೋದು ಕಾಣ್ತಿದೆ ಎಂದಿದ್ದರು. ನಂತರ ಪ್ರತಾಪ್ ಹಾಗೂ ಸಂಗೀತಾ ಈ ವಿಚಾರ ಬಗ್ಗೆ ಮಾತನಾಡಿಕೊಂಡಿದ್ದು, ದೀದಿಗೆ ಪ್ರತಾಪ್ ಎಚ್ಚರಿಕೆ ನೀಡಿದ್ದಾರೆ.


cover image
ಪ್ರತಾಪ್ ಹೇಳಿದ್ದೇನು?

ಕಾರ್ತಿಕ್‌ ವಿರುದ್ಧಆರೋಪದ ಬಗ್ಗೆ ಸಂಗೀತಾ ಬಳಿ ಮಾತನಾಡಿದ ಪ್ರತಾಪ್, ನೀವು ಎರಡು ಹೇಳಿಕೆ ಕೊಟ್ಟು ಎಲ್ಲರೂ ನಿಮ್ಮ ವಿರುದ್ಧ ಮಾತನಾಡುವ ಹಾಗೆ ಮಾಡಿದ್ರಿ ಎಂದರು. ಆಗ ಸಂಗೀತಾ ಭಯ ಇಲ್ಲವೆಂದರು. ಮಾತು ಮುಂದುವರೆಸಿದ ಪ್ರತಾಪ್, ಭಯ ಅಂತಲ್ಲ. ಚಪ್ಪಾಳೆ ಬಂದ ಕೂಡಲೇ ಬೇರೆ ಥರ ಆಯ್ತು ಅಂದರು.
ಸಂಗೀತಾ: ಒಂದೇ ರೀತಿಯ ಬಟ್ಟೆ ಹಾಕಿಕೊಳ್ಳುತ್ತಿದ್ದಾರೆ. ಅದನ್ನು ನೋಡಿದಾಗಲೇ ಗೊತ್ತಾಗಲ್ವಾ? ಮುಖಕ್ಕೆ ಚಪಾತಿ ಹಿಟ್ಟು ಹಾಕಿದ್ದು ಯಾಕೆ? ಎಂದರು.
ಪ್ರತಾಪ್: ಅದು ಅವರ ಬಟ್ಟೆ. 

ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಕಳೆದುಕೊಳ್ಳುತ್ತಾರೆ

ಸಂಗೀತಾ: ನಾನು ಒಂಟಿಯಾಗಿ ಹೋರಾಟ ಮಾಡ್ತೀನಿ. ಎಲ್ಲರನ್ನು ಎದುರು ಹಾಖಿಕೊಳ್ಳುತ್ತೇನೆ. ಕಾರ್ತಿಕ್ ಅವರು ಆ ಕಡೆ ಹೋದರೆ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಕಳೆದುಕೊಳ್ಳುತ್ತಾರೆ. ಇಷ್ಟುದಿನ ಅವರು ಸೇನಾನಿ ಆಗಿದ್ದರು. ಈಗ ಅವರು ಆ ತಂಡಕ್ಕೆ ಹೋದ್ರೆ ಸ್ಪರ್ಧೆಯೇ ಇರೋದಿಲ್ಲ. ಇದನ್ನೇ ನಾನು ಹೇಳ್ಬೇಕು ಅಂತಿದ್ದೆ. ಇದನ್ನು ಹೇಳಿದ್ದಕ್ಕೆ ಕೆಟ್ಟವಳಾಗ್ತೀನಿ ಎಂದರು.
ಪ್ರತಾಪ್: ವಿನಯ್ ಅವರು ಆಟದ ವಿಷಯದಲ್ಲಿ ಯಾರ್ಯಾರು ಮುಂದೆ ಹೋಗ್ತಾರೆ ಅವರ ಜೊತೆ ಸರಿ ಆಗ್ತಾರೆ ಎಂದರು.

 

ಬೇಕು ಅಂತಾನೆ ತೋಡಿಕೊಳ್ತಿರೋದು ಇದು

ಕಾರ್ತಿಕ್, ತನಿಷಾ ಹಾಗೂ ವಿನಯ್ ಕೂಡ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆಗ ಕಾರ್ತಿಕ್, ಬೇಕು ಅಂತಾನೇ ತೋಡಿಕೊಳ್ಳುತ್ತಿರುವುದು ಇದು ಎಂದಿದ್ದಾರೆ. ನಮ್ರತಾ ಜೊತೆಗೆ ಚರ್ಚೆ ನಡೆಸಿರುವ ಕಾರ್ತಿಕ್, ನಾನು ಸಂಗೀತಾಳಿಂದ ದೂರ ಇದ್ದೇನೆ. ಇದನ್ನು ತನಿಷಾ ಸರಿಯಾಗಿ ಗಮನಿಸಿದ್ದಾಳೆ ಎಂದರು. ಅದಕ್ಕೆ ನಮ್ರತಾ, ಅದು ನನ್ನ ಗಮನಕ್ಕೆ ಬರಲಿಲ್ಲ ಎಂದರು. 

ಕಳೆದುಕೊಳ್ಳಲು ಹೆದರಲ್ಲ

ಸದ್ಯ ದೊಡ್ಮನೆಯಲ್ಲಿ ಸಂಗೀತಾ ಏಕಾಂಗಿಯಾಗಿರುವ ಸಂಗೀತಾ, ನನಗೆ ಯಾರನ್ನೂ ಕಳೆದುಕೊಳ್ಳುವುದರಲ್ಲಿ ಏನೂ ನಷ್ಟವಿಲ್ಲ. ಹೋಗೋರು ಹೋಗ್ತಾರೆ, ಇರೋರು ಇರ್ತಾರೆ. ನನ್ನ ಜೊತೆ ಗಲೀಜಾಗಿ, ಇಷ್ಟು ಅಸಹ್ಯವಾಗು ಮಾತನಾಡೋದು ಇಷ್ಟವಿಲ್ಲ. ನಾನು ಸುಮ್ನೆ ಏನೋ ಕಾಗಾಡ್ತಿದ್ದೆ, ಆದರೆ ಕಂಟ್ರೋಲ್ ಮಾಡಿಕೊಂಡೆ. ನಾವಿಬ್ಬರೂ ಗಲಾಟೆ ಮಾಡಿಕೊಂಡರೆ ಇಡೀ ಮನೆ ಖುಷಿಯಾಗುತ್ತೆ ಎಂದು ಬಾಲ್ಕನಿ ಸೋಪಾ ಮೇಲೆ ಕುಳಿತು ಒಂಟಿಯಾಗಿ ಮಾತನಾಡಿಕೊಂಡಿದ್ದಾರೆ. 

ಬಕೆಟ್ ಚರ್ಚೆ

ಕಳೆದ ವಾರ ಕಾರ್ತಿಕ್‌ ಅವರು ವಿನಯ್‌ಗೆ ಬಕೆಟ್ ಹಿಡಿಯುತ್ತಿದ್ದಾರೆ ಅಂತ ಸಂಗೀತಾ ಶೃಂಗೇರಿ ಆರೋಪ ಮಾಡಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬ್ರೇಕಿಂಗ್ ನ್ಯೂಸ್ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತು ಜಡ್ಜ್‌ಗಳಾಗಿದ್ದಾರೆ. ಈ ಚಟುವಟಿಕೆಯಲ್ಲೂ ಬಕೆಟ್ ವಿಚಾರ ಸದ್ದು ಮಾಡಿದೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+