X
ಹೋಮ್ ಚಲನಚಿತ್ರಗಳ ಒಳನೋಟ

ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ನೀಡಿದ್ದ ಈ ನಟರಿಗೆ ಒಳ್ಳೇ ಕಂಬ್ಯಾಕ್ ಬೇಕಿದೆ!

Author Sowmya Bairappa | Updated: Thursday, April 3, 2025, 09:57 AM [IST]

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಾದರೂ ಕೂಡ ಏರುಪೇರುಗಳನ್ನು ಎದುರಿಸಲೇಬೇಕಾಗುತ್ತದೆ. ಹಲವು ಬಾರಿ ಬ್ಯಾಕ್‌ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟರು ಕೂಡ ಸಾಲು-ಸಾಲು ಸೋಲು ಅನುಭವಿಸುವ ಸಂದರ್ಬ ಬಂದೊದಗುತ್ತದೆ. ಅವರ ಸಿನಿಮಾ ಸೋಲು ಅಥವಾ ಗೆಲುವು ಸಾಧಿಸಲು ಅವರೊಬ್ಬರೇ ಕಾರಣರಾಗಿರುವುದಿಲ್ಲ. ಬದಲಾಗಿ ಒಂದು ಸಿನಿಮಾಗೆ ಕಥೆ, ಪಾತ್ರ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಇಲ್ಲಿ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ನಂತರದಲ್ಲಿ ಸೋತ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಸತೀಶ್ ನೀನಾಸಂ
1

ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ, 2013ರಲ್ಲಿ ಲೂಸಿಯಾ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ತಮ್ಮ ಚೊಚ್ಚಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ಇವರು, ಬಳಿಕ ಬ್ಯೂಟಿಫುಲ್ ಮನಸುಗಳು, ಚಂಬಲ್, ಅಯೋಗ್ಯ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ನೀಡಿದರು. ನಂತರ ತೆರೆಕಂಡ ಚಿತ್ರಗಳಲ್ಲಿ ಸೋಲನುಭವಿಸಿದರು. ಸದ್ಯ ಅವರು ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದು, ದಿ ರೈಸ್ ಆಫ್ ಅಶೋಕ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಯೋಗೇಶ್
2

ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ನಾಯಕನಾದ ಲೂಸ್‌ ಮಾದ ಯೋಗಿ, ಚೊಚ್ಚಲ ಚಿತ್ರದಲ್ಲೇ ಯಶಸ್ಸು ಗಳಿಸಿದರು. ನಂತರ ಅಂಬಾರಿ, ಸಿದ್ಲಿಂಗು, ಹುಡುಗರು, ಯಾರೇ ಕೂಗಾಡಲಿ ಹೀಗೆ ಕೆಲ ಹಿಟ್ ಚಿತ್ರಗಳನ್ನು ನೀಡಿದರು. ಯಾರೇ ಕೂಗಾಡಲಿ ಸಿನಿಮಾ ಬಳಿಕ ತೆರೆಕಂಡ ಯೋಗೇಶ್ ಸಿನಿಮಾಗಳು ಅಷ್ಟೊಂದು ಸದ್ದು ಮಾಡಿಲ್ಲ. ಈ ವ‍ರ್ಷ ತೆರೆಗೆ ಬಂದ ಸಿದ್ಲಿಂಗು 2 ಸಿಕ್ಕಾಪಟ್ಟೆ ಭರವಸೆ ಮೂಡಿಸಿತ್ತು. ಈ ಸಿನಿಮಾ ಕೂಡ ಸಕ್ಸಸ್ ಆಗಲಿಲ್ಲ.

ದಿಗಂತ್
3

ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡ ಎಂದೇ ಖ್ಯಾತಿಗಳಿಸಿರುವ ದಿಗಂತ್, 2009ರಲ್ಲಿ ತೆರೆಕಂಡ ಮನಸಾರೆ ಸಿನಿಮಾ ಮೂಲಕ ಹೀರೋ ಆದರು. ಜೊತೆಗೆ ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ಬಳಿಕ  ಲೈಫು ಇಷ್ಟೇನೆ, ಪಾರಿಜಾತ, ಗಾಳಿಪಟ ಹೀಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದರು. ಆದರೆ, ಆನಂತರದಲ್ಲಿ ಬಂದ ದಿಗಂತ್ ಸಿನಿಮಾಗಳನ್ನು ಸಿನಿರಸಿಕರ ಮನಗೆಲ್ಲುವಲ್ಲಿ ಸೋತಿವೆ.

ಅಜಯ್ ರಾವ್
4

ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಅಂತಲೇ ಖ್ಯಾತಿ ಪಡೆದಿರುವ ಅಜಯ್ ರಾವ್, 2003ರಲ್ಲಿ ರಿಲೀಸ್ ಆದ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟರು. ಈ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಇವರಿಗೆ ಒಳ್ಳೇ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಯಿತು. ನಂತರ ಬಂದ 'ತಾಜ್ ಮಹಲ್' ಚಿತ್ರ ಮತ್ತಷ್ಟು ಯಶಸ್ಸು ಗಳಿಸಿತು. ಬಳಿಕ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ  ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರಿಗೆ ಒಳ್ಳೇ ಕಂಬ್ಯಾಕ್ ಬೇಕಿದೆ.

ಧರ್ಮ ಕೀರ್ತಿರಾಜ್
5

ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ಈ ಸಿನಿಮಾದ 'ಕಣ್ ಕಣ್ಣ ಸಲುಗೆ' ಹಾಡಿನ ಮೂಲಕ ಹುಡುಗಿಯ ಮನಗೆದ್ದಿದ್ದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+