X
ಹೋಮ್ ಚಲನಚಿತ್ರಗಳ ಒಳನೋಟ

ಟಿ.ಎನ್ ಸೀತಾರಾಮ್ to ರಾಮ್‌ಜಿ: ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿಸಿದ ನಿರ್ದೇಶಕರಿವರು!

Author Sowmya Bairappa | Published: Saturday, April 27, 2024, 03:53 PM [IST]

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕರ ಹೆಸರು ಬಹುತೇಕ ಜನರಿಗೆ ಗೊತ್ತೇ ಇರುತ್ತದೆ. ಹಾಗೆಯೇ ಕಿರುತೆರೆಯಲ್ಲಿಯೂ ಕೆಲ ನಿರ್ದೇಶಕರಿದ್ದು, ತಮ್ಮ ನಿರ್ದೇಶನದ ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದಾರೆ. ನಿರ್ದೇಶಕರಂತೂ ಕನ್ನಡ ಕಿರುತೆರೆಯ ದಿಕ್ಕನ್ನೇ ಬದಲಿಸಿದ್ದರು. ಹಾಗಿದ್ರೆ, ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


cover image
ಎಸ್. ನಾರಾಯಣ್

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರಸಾಹಿತಿ ಎಸ್. ನಾರಾಯಣ್. ಸಿನಿಮಾವಾಗಲಿ, ಧಾರಾವಾಹಿಯೇ ಆಗಲಿ ಒಂದು ಬಲವಾದ ಕಥೆಯನ್ನು ಹೇಳುವ ಮೂಲಕ ವೀಕ್ಷಕರ ಗಮನವನ್ನು ಹೇಗೆ ಸೆಳೆಯಬಹುದೆಂದು ಎಸ್. ನಾರಾಯಣ್ ಅವರಿಗೆ ಚೆನ್ನಾಗಿ ಗೊತ್ತು. ಇವರು ಸುಮತಿ, ಭಾಗೀರಥಿ ಮತ್ತು ಅಂಬಿಕಾ ಮುಂತಾದ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಕಿರುತೆರೆಯ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಗೆದ್ದಂತೆ ಕಿರುತೆರೆಯಲ್ಲೂ ಜನ ಮನ್ನಣೆ ಗಳಿಸಿದ್ದಾರೆ. 

ರವಿಕಿರಣ್

ಕನ್ನಡ ಕಿರುತೆರೆಗೆ ನಟ, ನಿರ್ದೇಶಕ ರವಿಕಿರಣ್ ಕೊಡುಗೆ ಅಪಾರ. ರವಿಕಿರಣ್ ಒಂದು ಕಾಲದಲ್ಲಿ ಬದುಕು, ಶಕ್ತಿ ಮತ್ತು ಹಲವು ಕಾರ್ಯಕ್ರಮಗಳಿಂದ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದರು. ಅಂದಿನ ಕಾಲದಲ್ಲಿ ಬೇರೆ ಕಾರ್ಯಕ್ರಮಗಳ ಟಿಆರ್‌ಪಿ ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದ್ದರು. 

ಟಿ.ಎನ್. ಸೀತರಾಮ್

ಕನ್ನಡ ಕಿರುತೆರೆಯ ಸ್ಟಾರ್ ನಿರ್ದೇಶಕ ಟಿ.ಎನ್ ಸೀತಾರಾಮ್. ಇವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ, ಮನ್ವಂತರ ಮಗಳು ಜಾನಕಿ, ಮುಕ್ತ ಮುಕ್ತದಂತಹ ಧಾರಾವಾಹಿಗಳು ವೀಕ್ಷಕರ ಮನಗೆದ್ದಿವೆ. ಕನ್ನಡ ಕಿರುತೆರೆಯ ಸ್ಟಾರ್ ನಿರ್ದೇಶಕ ಮತ್ತೊಂದು ವಿಶೇಷತೆ ಎಂದರೆ, ಮಧ್ಯಮ ವರ್ಗದ ಜೀವನವನ್ನು ಹೆಚ್ಚಾಗಿ ಪ್ರತಿಬಿಂಬಿಸುವ ಈ ಕಥೆಗಳು ಭಾವಪೂರ್ಣ ಶೀರ್ಷಿಕೆ ಗೀತೆಗಳನ್ನೂ ಹೊಂದಿರುವುದು. ಅಲ್ಲದೆ ಸಾಂಪ್ರದಾಯಿಕ ನ್ಯಾಯಾಲಯದ ದೃಶ್ಯಗಳು ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ವಿಶೇಷತೆ. 

ಸಿಹಿ ಕಹಿ ಚಂದ್ರು

ಒಂದು ಕಾಲದಲ್ಲಿ ಪಾಪ ಪಾಂಡು ಮತ್ತು ಸಿಲ್ಲಿ ಲಲ್ಲಿ ಸೀರಿಯಲ್‌ಗಳು ಕಿರುತೆರೆ ಪ್ರೇಕ್ಷಕರ ನೆಚ್ಚಿನವಾಗಿದ್ದವು. ಸತತ ಯಶಸ್ಸಿನಿಂದಾಗಿ ಈ ಧಾರಾವಾಹಿಗಳು ಸೀಸನ್ 2ನೊಂದಿಗೆ ಪ್ರಸಾರ ಕಂಡಿದ್ದವು. ಸಿಹಿ ಕಹಿ ಚಂದ್ರು ನಿರ್ದೇಶನದಲ್ಲಿ ಈ ಎರಡು ಕಾಮಿಡಿ ಧಾರಾವಾಹಿಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದರು.


ವೈಶಾಲಿ ಕಾಸರವಳ್ಳಿ

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕರ ಪೈಕಿ ವೈಶಾಲಿ ಕಾಸರವಳ್ಳಿ ಕೂಡ ಒಬ್ಬರು. ಇವರು ಮುತ್ತಿನ ತೋರಣ ಮತ್ತು ಮೂಡಲ ಮನೆಯಂತಹ ಅಪರೂಪದ ಧಾರಾವಾಹಿಗಳನ್ನು ವೈಶಾಲಿ ಕಾಸರವಳ್ಳಿ ನೀಡಿದ್ದರು. ಸಾಂಪ್ರದಾಯಿಕ ವೇಷಭೂಷಣ, ಪ್ರಾಚೀನ ಸ್ಥಳಗಳನ್ನು ಹೆಚ್ಚಾಗಿ ಒಳಗೊಂಡಿರುವುದು ಇವರ ನಿರ್ದೇಶನದ ಧಾರಾವಾಹಿಯ ಸುಂದರತೆಯನ್ನು ದುಪ್ಪಟ್ಟುಗೊಳಿಸಿದೆ. ಹಾಗೆಯೇ ಪಾತ್ರಗಳಲ್ಲಿ ಕಂಡುಬರುವ ಉತ್ತರ ಕರ್ನಾಟಕದ ಅಧಿಕೃತ ಉಚ್ಚಾರಣೆಯಿಂದಾಗಿ ವೀಕ್ಷಕರ ಗಮನವನ್ನು ಮತ್ತಷ್ಟು ಸೆಳೆದಿದ್ದರು.

ವೈಶಾಲಿ ಕಾಸರವಳ್ಳಿ

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕರ ಪೈಕಿ ವೈಶಾಲಿ ಕಾಸರವಳ್ಳಿ ಕೂಡ ಒಬ್ಬರು. ಇವರು ಮುತ್ತಿನ ತೋರಣ ಮತ್ತು ಮೂಡಲ ಮನೆಯಂತಹ ಅಪರೂಪದ ಧಾರಾವಾಹಿಗಳನ್ನು ವೈಶಾಲಿ ಕಾಸರವಳ್ಳಿ ನೀಡಿದ್ದರು. ಸಾಂಪ್ರದಾಯಿಕ ವೇಷಭೂಷಣ, ಪ್ರಾಚೀನ ಸ್ಥಳಗಳನ್ನು ಹೆಚ್ಚಾಗಿ ಒಳಗೊಂಡಿರುವುದು ಇವರ ನಿರ್ದೇಶನದ ಧಾರಾವಾಹಿಯ ಸುಂದರತೆಯನ್ನು ದುಪ್ಪಟ್ಟುಗೊಳಿಸಿದೆ. ಹಾಗೆಯೇ ಪಾತ್ರಗಳಲ್ಲಿ ಕಂಡುಬರುವ ಉತ್ತರ ಕರ್ನಾಟಕದ ಅಧಿಕೃತ ಉಚ್ಚಾರಣೆಯಿಂದಾಗಿ ವೀಕ್ಷಕರ ಗಮನವನ್ನು ಮತ್ತಷ್ಟು ಸೆಳೆದಿದ್ದರು.

 ರಾಮ್‌ಜಿ

ಕನ್ನಡ ಕಿರುತೆರೆಯ ಇತ್ತೀಚಿನ ಸ್ಟಾರ್ ನಿರ್ದೇಶಕರಲ್ಲಿ ರಾಮ್‌ಜಿ ಕೂಡ ಒಬ್ಬರು. ಅವರು ತಮ್ಮ ಮೆಗಾ ಧಾರಾವಾಹಿ ಪುಟ್ಟಗೌರಿ ಮದುವೆ ಮೂಲಕ ಖ್ಯಾತಿ ಗಳಿಸಿದರು. ನಂತರ ಅದೇ ಧಾರಾವಾಹಿಯನ್ನು 'ಮಂಗಳಗೌರಿ ಮದುವೆ' ಎಂದು ಮರುನಾಮಕರಣಗೊಂಡು ಪ್ರಸಾರವಾಯಿತು. ಇದರೊಂದಿಗೆ ರಂಗನಾಯಕಿ, ನಾಗಿಣಿ 2, ಗೀತಾ, ರಾಣಿ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳ ನಿರ್ದೇಶಕರಾಗಿದ್ದಾರೆ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+