X
ಹೋಮ್ ಚಲನಚಿತ್ರಗಳ ಒಳನೋಟ

ಕ್ಯಾಚಿ ಡೈಲಾಗ್‌ಗಳ ಮೂಲಕವೇ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ಸಿನಿಮಾಗಳಿವು!

Author Sowmya Bairappa | Updated: Monday, November 25, 2024, 09:42 AM [IST]

ಸಿನಿಮಾಗಳ ಯಶಸ್ಸಿಗೆ ಪ್ರಮುಖ ಕಾರಣಗಳಲ್ಲಿ ಡೈಲಾಗ್‌ ಕೂಡ ಒಂದು. ಥಿಯೇಟರ್‌ನಲ್ಲಿ ತಮ್ಮ ನೆಚ್ಚಿನ ನಟರು ಹೊಡೆಯುವ ಡೈಲಾಗ್‌ಗಳಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುತ್ತಾರೆ. ಕೆಲ ಡೈಲಾಗ್‌ಗಳಂತೂ ಸಿನಿಮಾ ಬಂದು ವರ್ಷಗಳೇ ಆಗಿದ್ದರೂ ಎವರ್‌ಗ್ರೀನ್ ಆಗಿ ಉಳಿದುಬಿಡುತ್ತವೆ. ಹೀಗಾಗಿಯೇ ಎಲ್ಲಾ ಸಿನಿಮಾಗಳಲ್ಲೂ ಡೈಲಾಗ್‌ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅದರಲ್ಲೂ ಸ್ಟಾರ್ ನಟರು ತಮ್ಮ ಮಾಸ್ ಸಿನಿಮಾಗಳಲ್ಲಿ ಹೊಡೆಯುವ ಸಂಭಾಷಣೆಗಳು ಅಭಿಮಾನಿಗಳ ಮನದಲ್ಲಿ ಹಾಗೇಯೇ ಉಳಿದು ಬಿಡುತ್ತವೆ. ಇಲ್ಲಿ ಅತಿಹೆಚ್ಚು ಡೈಲಾಗ್‌ಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಮುಂಗಾರು ಮಳೆ

2006ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ಸಿನಿಮಾದ ರೀ ಮನುಷ್ಯಂಗೆ ಕೆಟ್ಟ ಸಮಯ ಶುರು ಆದರೆ, ತಲೆ ಕೆರೆದುಕೊಂಡು, ತಲೆಲಿ ಗಾಯ ಆಗಿ, ಅದು ಕ್ಯಾನ್ಸರ್ ಆಗಿ, ಡಾಕ್ಟರ್ ತಲೆ ತೆಗಿಬೇಕು ಅಂತಾರೆ. ಅಂತಹದರಲ್ಲಿ ನಾನು ಈ ದಿಲ್, ಹೃದಯ... ಅದೇ ಹಾರ್ಟ್ ಅಂತರಲ್ಲ ಅದಕ್ಕೆ ಕೈ ಹಾಕಿ 'ಪರ ಪರ ' ಅಂತ ಕೆರಕ್ಕೋಬಿಟ್ಟಿದ್ದೀನಿ ಕಣ್ರೀ. ಗಣೇಶ್ ಮಳೆಯಲ್ಲಿ ನೆನೆಯುತ್ತಾ ಹೇಳುವ ಈ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್.  ಗೋಲ್ಡನ್ ಸ್ಟಾರ್ ಗಣೇಶ್ ಸಿನಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದ ಈ ಸಿನಿಮಾದಲ್ಲಿ ಸಾಕಷ್ಟು ಡೈಲಾಗ್ ಇದ್ದು, ಇಂದಿಗೂ ಕೂಡ ಅಷ್ಟೇ ಜನಪ್ರಿಯತೆ ಹೊಂದಿವೆ.

ರಕ್ತ ಕಣ್ಣೀರು

ಸ್ಯಾಂಡಲ್‌ವುಡ್ ಕಾಮಿಡಿ ಕಿಂಗ್ ಸಾಧು ಕೋಕಿಲ ನಿರ್ದೇಶನದ ಮೊದಲ ಚಿತ್ರ ತಮಿಳಿನ ರಿಮೇಕ್ ಆದ ರಕ್ತ ಕಣ್ಣೀರು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದರು. ಈ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಂಡು 2003ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಉಪೇಂದ್ರ ಹೇಳುವ  ಕೆಲ ಡೈಲಾಗ್‌ಗಳು ಸಿಕ್ಕಾಪಟ್ಟೆ ಹಿಟ್ ಆಗಿದ್ದವು.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಮೊದಲು ಬ್ರೇಕ್ ನೀಡಿದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'. ಸರಳ ಪ್ರೇಮಕಥೆಗೆ ವಿನೂತನ ನಿರೂಪಣೆ ಹೊಂದಿದ್ದ ಈ ಚಿತ್ರದಲ್ಲಿ ಕುಶಾಲ್ ಆಗಿ ರಕ್ಷಿತ್ ಹಾಗೂ ಖುಷಿಯಾಗಿ ಶ್ವೇತಾ ಶ್ರೀವಾತ್ಸವ್ ನಡುವಿನ ಕೆಲ ಸಂಭಾಷಣೆಗಳು ಸಿಕ್ಕಾಪಟ್ಟೆ ಹಾಸ್ಯಮಯವಾಗಿದ್ದವು. ಸಂಭಾಷಣೆಗಳಿಂದಲೇ ಈ ಸಿನಿಮಾ ಹೆಚ್ಚು ಗುರುತಿಸಿಕೊಂಡಿತ್ತು. ರಕ್ಷಿತ್ ವಿಭಿನ್ನ ಶೇಡ್‌ಗಳಲ್ಲಿ ನಟಸಿದ್ದ ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು. 2013ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಗಾಳಿಪಟ

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಕಾಮಿಡಿ ಪಾತ್ರ ನೀರು ಕುಡಿದಷ್ಟೇ ಸುಲಭ ಅಂದ್ರೆ ತಪ್ಪಾಗಲ್ಲ.  2008ರಲ್ಲಿ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಮೂವರ ಸಂಗಮದಲ್ಲಿ ಬಂದಿದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಗಾಳಿಪಟ'.  ಈ ಸಿನಿಮಾದಲ್ಲೂ ಮೂವರು ನಾಯಕರ ಪ್ರೇಮಕಥೆ ಜೊತೆಗೆ ಸಿಕ್ಕಾಪಟ್ಟೆ ಹಾಸ್ಯ ಸನ್ನಿವೇಶಗಳಿವೆ. ಈ ಚಿತ್ರದಲ್ಲಿ ಗಣೇಶ್ ಹೊಡೆಯೋ ಡೈಲಾಗ್ ಇಂದಿಂಗೂ ಟ್ರೆಂಡಿಂಗ್‌ನಲ್ಲಿವೆ. ಈ ಪೈಕಿ ಹಾರಾಡೋ ಗಾಳಿಪಟ ನೋಡ್ತಿದ್ರೆ, ನಾನು ಚಿಕ್ಕೋನು, ತುಂಬಾ ಒಳ್ಳೆಯವನು ಅನ್ಸುತ್ತೆ. ನಾನ್ ಪ್ರಕಾರ ಮನುಷ್ಯರು ಯಾವಾಗ್ಲೂ ಚಿಕ್ಕ ಮಕ್ಕಳು ತರಹ ಇರಬೇಕು. ನಾವ್ ದೊಡ್ಡಾರಾಗ್ತಾ ಆಗ್ತಾ ಕಳ್ಳನಾನ್ಮಕ್ಕಳು ಆಗಿಬಿಡ್ತೀವಿ ತಪ್ಪಲ್ವಾ..? ಅದಕಕ್ಕೆ ನಾನ್ ಯಾವಾಗ್ಲೂ ಗಾಳಿಪಟ ಹಾರುಸ್ತಾ ಚಿಕ್ಕೋನು ಆಗೋಕೆ ಟ್ರೈ ಮಾಡ್ತೀನಿ ಎಂಬ ಡೈಲಾಗ್ ಅಂತೂ ಯುವಕರ ಫೆವರಿಟ್ ಅಂದರೆ ತಪ್ಪಾಗಲ್ಲ.

ಪರಮಾತ್ಮ

ಯೋಗರಾಜ್ ಭಟ್ ಅವರ ನಿರ್ದೇಶನದ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ 'ಪರಮಾತ್ಮ' ಸಿನಿಮಾ ಇಂದಿಗೂ ಅನೇಕರ ಫೇವರಿಟ್ ಸಿನಿಮಾ ಅಂದರೆ ತಪ್ಪಾಗಲ್ಲ. ಪರಮಾತ್ಮ ಇದು ಕೇವಲ ಒಂದು ಚಿತ್ರವಲ್ಲ ಎಮೋಷನ್ ಎಂದು ಹೇಳುವವರೇ ಹೆಚ್ಚಿದ್ದಾರೆ. ಈ ಸಿನಿಮಾದ ಒಂದೊಂದು ಹಾಡುಗಳು, ಡೈಲಾಗ್‌ಗಳು, ಅನಿರೀಕ್ಷಿತ ಕ್ಲೈಮ್ಯಾಕ್ಸ್ ಎಲ್ಲವೂ ಸಖತ್ ಆಗಿದ್ದವು. ಕನ್ನಡದ  'ಮೋಸ್ಟ್ ಅಂಡರ್‌ರೇಟೆಡ್' ಸಿನಿಮಾಗಳಲ್ಲಿ ಇದು ಕೂಡ ಒಂದು.

ಉಗ್ರಂ

2014ರಲ್ಲಿ ಬಂದ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬಿಗ್ ಬ್ರೇಕ್ ನೀಡಿತ್ತು. ಇದು ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಿಮಾ. ಲವ್, ಸೆಂಟಿಮೆಂಟ್, ಸಾಹಸ ಎಲ್ಲಾ ದೃಶ್ಯಗಳನ್ನು ಬೆರೆಸಿ ಸುಂದರವಾಗಿ ತೆರೆಮೇಲೆ ಬಂದಿದ್ದ ಈ ಸಿನಿಮಾ ಅದ್ಭುತ ಯಶಸ್ಸು ಕಂಡಿತ್ತು. ಈ ಸಿನಿಮಾ ಕೂಡ ಕೆಲ ಡೈಲಾಗ್‌ಗಳಿಂದ ಸದ್ದು ಮಾಡಿತ್ತು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+