ಕೆಜಿಎಫ್ ಸಿನಿಮಾದಲ್ಲಿ 'ನೀನು ಗೆದ್ದರೆ ಜನಗತ್ತಿಗೆ ನಿನ್ನ ಪರಿಚಯವಾಗುತ್ತೆ' ಎಂಬ ಡೈಲಾಗ್ ಇದೆ. ಅದರಂತೆಯೇ ತಮ್ಮ ಯಶಸ್ಸಿನ ಮೂಲಕವೇ ಜಗತ್ತಿಗೆ ಪರಿಚಯವಾದವರು ಪ್ರಶಾಂತ್ ನೀಲ್. ಕನ್ನಡ ಚಿತ್ರರಂಗ ಇಂತಹ ಓರ್ವ ನಿರ್ದೇಶಕನನ್ನು ಹೊಂದುತ್ತೆ, ಆತ ಪ್ಯಾನ್ ಇಂಡಿಯಾ ಚಿತ್ರ ಮಾಡಿ, ಎಲ್ಲೆಡೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಹಾಗೆ ಮಾಡ್ತಾರೆ ಅಂತ ಯಾರೂ ಸಹ ಊಹಿಸಿರಲಿಲ್ಲ. ಹತ್ತಾರು ವರ್ಷಗಳಿಂದ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ ಬಳಿಕ ನಿರ್ದೇಶಕರು ಪಡೆದುಕೊಳ್ಳುವ ಯಶಸ್ಸು ಹಾಗೂ ಬೇಡಿಕೆಯನ್ನು ಅತಿವೇಗವಾಗಿ ಎರಡು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪ್ರಶಾಂತ್ ನೀಲ್ ಅವರಿಗೆ ಇದೆ. ಕೆಜಿಎಫ್ ಮೂಲಕ ಹವಾ ಸೃಷ್ಟಿದಿರುವ ಪ್ರಶಾಲ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಲ್ಲಿ ಅವರ ಕುರಿತ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.