X
ಹೋಮ್ ಚಲನಚಿತ್ರಗಳ ಒಳನೋಟ

Upendra's UI Warner:ಜಾತಿ, ಧರ್ಮ, ಹಸಿವು, ಮೊಬೈಲ್ ಸೇರಿದಂತೆ ವಾರ್ನರ್ ವಿಡಿಯೋದಲ್ಲಿ ಉಪ್ಪಿ ತೆರೆದಿಟ್ಟ ಪ್ರಮುಖ ಅಂಶಗಳಿವು!

Author Sowmya Bairappa | Updated: Tuesday, December 3, 2024, 10:18 AM [IST]

ನಟ ಉಪೇಂದ್ರಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿದ್ದೇ ಅವರ ರಿಯಾಲಿಸ್ಟಿಕ್ ಸಿನಿಮಾಗಳಿಂದ. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರೋ ಉಪ್ಪಿ, ಡಿಫರೆಂಟ್ ಅಂದರೆ ಏನು ಅಂತ ತೋರಿಸಿಕೊಟ್ಟವರು. ಉಪ್ಪಿ 2 ಚಿತ್ರದ ನಂತರ ಅವರು ಯಾವ ಸಿನಿಮಾಗೂ ಆಕ್ಷನ್ ಕಟ್ ಹೇಳಿರಲಿಲ್ಲ. ಇದೀಗ ಯು & ಐ ಸಿನಿಮಾ ನಿರ್ದೇಶಿಸಿ ನಟಿಸಿದ್ದು, ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಡಿಸೆಂಬರ್ ೨೦ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಸದ್ಯ ಯುಐ ಸಿನಿಮಾದ ವಾರ್ನರ್ ವಿಡಿಯೋ ರಿಲೀಸ್ ಆಗಿದ್ದು, ಇದರಲ್ಲಿ ಸಿನಿಮಾ ಹೇಗಿರಲಿದೆ ಎಂಬ ಝುಲಕ್ ತೋರಿಸಲಾಗಿದೆ. ಇಲ್ಲಿ ವಾರ್ನರ್ ವಿಡಿಯೋದಲ್ಲಿ ತೋರಿಸಿರುವ ಪ್ರಮುಖ ಆಂಶಗಳನ್ನು ನೀಡಲಾಗಿದೆ.


cover image
2040ರಲ್ಲಿ ಆರಂಭವಾಗುವ ಕಥೆ

ಬಹಳ ವರ್ಷಗಳ ಬಳಿಕ ಆಕ್ಷನ್ ಕಟ್ ಹೇಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಯು & ಐ ಸಿನಿಮಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಏನೆಲ್ಲಾ ಅನರ್ಥಗಳಾಗುತ್ತಿವೆ  ಎಂಬುದನ್ನು ತಿಳಿಸಲು ಹೊರಟಿದ್ದಾರೆ. 2040ರ ವರ್ಷದಲ್ಲಿ ನಮ್ಮ ದೇಶ ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಂಡು ಯುಐ ಚಿತ್ರದ ಕಥೆ ಬರೆದಿದ್ದಾರೆ. ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ.  ಈ ಸಮಸ್ಯೆಗಳ ಪೈಕಿ ಜಾಗತಿಕ ತಾಪಮಾನ ಏರಿಕೆ, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಿದ್ದಾರೆ.

'ಜಾತಿ ಮುದ್ರೆ ಕಡ್ಡಾಯ'

ನಾವಿನ್ನು ಜಾತಿ,  ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೀವಿ. ಇದರಿಂದ ಮುಂದೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ನು 15 ವ‍ರ್ಷಗಳಲ್ಲಿ ಯುದ್ಧ ಸೇರಿದಂತೆ ವಿವಿಧ ವಿಪತ್ತುಗಳಿಂದ ಪ್ರಪಂಚ ಹೇಗೆ ವಿನಾಶದತ್ತ ದಾಪುಗಾಲಿಡುತ್ತದೆ ಎಂಬುದನ್ನು ಉಪ್ಪಿ ಯುಐ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಳಿದುಳಿದ ಪ್ರಪಂಚದಲ್ಲಿ ಉಳಿದ ಅಲ್ಪಸ್ವಲ್ಪ ಜನರು ಹಸಿವಿನಿಂದ 'ಒಂದು ಬಾಳೆಹಣ್ಣಿಗಾಗಿ ಕಿತ್ತಾಡುತ್ತಾರೆ'. ಜಗತ್ತು ನಾಶವಾಗುವ ಹಂತಕ್ಕೆ ಬಂದರೂ, ಆಂತಹ ಪರಿಸ್ಥಿತಿಯಲ್ಲೂ ಕೂಡ ಜಾತಿ ಹೆಸರಿನಲ್ಲಿ ಕಿತ್ತಾಡುತ್ತಾರೆ. ಇತ್ತ ವಾರ್ತೆಯಲ್ಲಿ ಸಾರ್ವಜನಿಕ ಸರ್ಕಾರಿ ಮೂಲಭೂತ ಅವಶ್ಯಕತೆಗಳಾದ ಟ್ರೈಪಾಡ್, ಮೊಬೈಲ್‌ಗಳನ್ನು ಉಚಿತವಾಗಿ ಹಂಚಲಾಗುವುದು ಎಂಬ ಪ್ರಕಟಣೆ ಬರುತ್ತದೆ. ಜನರು ಹಸಿವಿನಿಂದ ಬಳಲುತ್ತಿದ್ದರೂ ಕೂಡ ಉಚಿತವಾಗಿ ಹಂಚುತ್ತಿರುವ ಮೊಬೈಲ್‌ಗಳಿಗಾಗಿ ಕಿತ್ತಾಡುತ್ತಿರುತ್ತಾರೆ. ಜೊತೆಗೆ ಎಲ್ಲರೂ ಅವರವರ ಮಕ್ಕಳಿಗೆ ಕಡ್ಡಾಯವಾಗಿ 'ಜಾತಿ ಮುದ್ರೆ' ಒತ್ತಿಸಿಕೊಳ್ಳಬೇಕು ಸೂಚನೆ ಕೂಡ ಬರುತ್ತದೆ.

ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ

ಹೀಗಿರುವಾಗ, ದೊಡ್ಡದಾದ ಕಾರಿನಲ್ಲಿ ಉಪೇಂದ್ರ ಎಂಟ್ರಿಯಾಗುತ್ತದೆ. ಈ ಸಂದರ್ಭ ಉಪ್ಪಿ ವಿರುದ್ಧ ಅನೇಕರು ಘೋಷಣೆ ಕೂಗುತ್ತಿರುತ್ತಾರೆ. ಅವರ ಮೇಲೆ ಗುಂಡಿನ ದಾಳಿ ನಡೆಸುವ ಉಪೇಂದ್ರ ಇಲ್ಲಿ 'ದಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಅಂತ ಡೈಲಾಗ್ ಹೊಡೆಯುತ್ತಾರೆ.  ಈ ಮೂಲಕ ನಾವು ಬದಲಾಗದಿದ್ದರೆ ಅಧಿಕಾರದಲ್ಲಿರುವವರು ಅಸಹಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇರುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?

ಯುಐ ವಾರ್ನಿಂಗ್ ವಿಡಿಯೋದಲ್ಲಿ ನಿರ್ದೇಶಕ ಗುರು ಪ್ರಸಾದ್ ಹೈಲೈಟ್ ಆಗಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ,  ಸಾಧು ಕೋಕಿಲ, ಆರ್ಮುಗಂ ರವಿಶಂಕರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ 'UI' ಚಿತ್ರಕ್ಕಿದ್ದು, ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ವೈರಲ್ ಆಗಿದ್ದ ಟ್ರೋಲ್ ಸಾಂಗ್

ಮಾರ್ಚ್ ತಿಂಗಳಲ್ಲಿ ಯುಐ ಸಿನಿಮಾದ 'ಟ್ರೋಲ್ ಸಾಂಗ್' ಬಿಡುಗಡೆಯಾಗಿತ್ತು. ಈ ಹಾಡಿನಲ್ಲೂ ಕೂಡ ಉಪ್ಪಿ ಹಲವು ನೈಜ ಸಂಗತಿಗಳನ್ನ ತೆರೆದಿಟ್ಟಿದ್ದರು. ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆ, ಟ್ರಾಫಿಕ್, ಜಗಳ ಇದೆಲ್ಲಾವನ್ನು ಬಿಟ್ಟು ಜನ ಮೊಬೈಲ್‌ನಲ್ಲಿ ಮುಳುಗಿರುವುದನ್ನು ತೋರಿಸಲಾಗಿತ್ತು. ಯಾರಾದರೂ ಗುಂಡಿಗೆ ಬಿದ್ದರೂ ಜನ ಕಾಪಾಡದೇ, ಅದನ್ನು ವಿಡಿಯೋ ಮಾಡುವುದು ಜನರ ಬೇಜವಾಬ್ದಾರಿಯನ್ನು ಉಪ್ಪಿ ಪರೋಕ್ಷವಾಗಿ ಖಂಡಿಸಿದ್ದರು. ಆಗಲೇ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+