X
ಹೋಮ್ ಚಲನಚಿತ್ರಗಳ ಒಳನೋಟ

ವೀಕೆಂಡ್ ವಿತ್ ರಮೇಶ್: ಡಾ.ಸಿ.ಎನ್.ಮಂಜುನಾಥ್ ಅವರ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

Author Sowmya Bairappa | Published: Monday, April 10, 2023, 02:52 PM [IST]

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೂರನೇ ಅತಿಥಿಯಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಆಗಮಿಸಿದ್ದರು. ಸಾವಿರಾರು ರೋಗಿಗಳ ಪಾಲಿಗೆ ಡಾ.ಸಿ.ಎನ್.ಮಂಜುನಾಥ್ ಅವರು ಸಾಕ್ಷಾತ್ ಮಂಜುನಾಥನಾಗಿದ್ದಾರೆ ಎಂದರೆ ತಪ್ಪಾಗಲ್ಲ. ಉಚಿತವಾಗಿ ಚಿಕಿತ್ಸೆ ನೀಡಿ, ಅದೆಷ್ಟೋ ಜನರ ಪ್ರಾಣವನ್ನು ಉಳಿಸಿದ್ದಾರೆ. ಇವರಿಂದ ಜೀವದಾನ ಪಡೆದವರು ಯಾರು ಸಹ ಇವರನ್ನು ಮರೆತಿಲ್ಲ. ಪ್ರತಿನಿತ್ಯವೂ ಜಯದೇವ ಆಸ್ಪತ್ರೆಯಲ್ಲಿ ಅದೆಷ್ಟೋ ಬಡ ರೋಗಿಗಳಿಗೆ ಸದ್ದಿಲ್ಲದೇ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಸಿ.ಎನ್.ಮಂಜುನಾಥ್ ಕುರಿತ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.


cover image
ಮಂಜುನಾಥನ ಹರಕೆಯ ಫಲವಾಗಿ ಜನನ
1

ಡಾ.ಸಿ.ಎನ್.ಮಂಜುನಾಥ್ ಸರಳತೆಯ ಸಾಕಾರ ಮೂರ್ತಿ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಸ್ನೇಹಜೀವಿಯಾಗಿರುವ ಇವರು, ಧರ್ಮಸ್ಥಳದ ಶ್ರೀ ಮಂಜುನಾಥನ ಹರಕೆಯ ಫಲವಾಗಿ ಜನಿಸಿದರು. ಹೀಗಾಗಿ ಅವರಿಗೆ ಮಂಜುನಾಥ್ ಎಂದು ಹೆಸರಿಟ್ಟಿರುವುದಾಗಿ ಅವರ ಕುಟುಂಬಸ್ಥರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ಜೊತೆಗೆ ಮಗನನ್ನು ಡಾಕ್ಟರ್ ಆಗಿ ನೋಡಬೇಕೆಂಬುದು ಡಾ.ಸಿ.ಎನ್.ಮಂಜುನಾಥ್ ಪೋಷಕರ ಕನಸಾಗಿತ್ತು. ಇಂದು ಅವರ ತಾಯಿಯ ಆಸೆಯಂತೆ ಸಿ.ಎನ್.ಮಂಜುನಾಥ್ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದನೆ ಮಾಡಿದ್ದಾರೆ.  

50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ
2

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಎನ್ .ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯಿಂದ 50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೂ 6 ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. 54 ಸಾವಿರ ವೈಯಕ್ತಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆ. ಇದೆಲ್ಲದರ ಕ್ರೆಡಿಟ್ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸಲ್ಲಬೇಕು.

ದೇವೇಗೌಡರ ಅಳಿಯ
3

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಡಾ.ಸಿ.ಎನ್.ಮಂಜುನಾಥ್ ಅವರ ಊರುಗಳು ಹತ್ತಿರವಿತ್ತು. ದೇವೇಗೌಡರ ಕುಟುಂಬದ ಮೇಲೆ ಸಿ.ಎನ್.ಮಂಜುನಾಥ್ ಅವರ ಕುಟುಂಬಕ್ಕೆ ಅಪಾರ ಗೌರವ. ಸಿ.ಎನ್.ಮಂಜುನಾಥ್ ಅವರು ಮೈಸೂರಿನಲ್ಲಿ ಎಂಎಸ್ ಮಾಡುವಾಗ ದೇವೇಗೌಡರ ಪುತ್ರಿ ಅನುಸೂಯ ಜೊತೆ ಮದುವೆ ಮಾಡುವ ಬಗ್ಗೆಡ ಚರ್ಚೆಯಾಗುತ್ತದೆ. ಈ ಬಗ್ಗೆ ಸ್ವತಃ ಮಂಜುನಾಥ್ ಅವರೇ ದೇವೇಗೌಡರ ಬಳಿ ತೆರಳಿ ಮಾತನಾಡಿದ್ದರು. ಈ ವೇಳೆ ಹೆಚ್‌ಡಿಡಿ ಅವರು ಮಂಜುನಾಥ್ ಅವರನ್ನು ಕಬ್ಬನ್‌ ಪಾರ್ಕ್‌ಗೆ ಕರೆದೊಯ್ದು ಒಂದು ಗಂಟೆ ಮಾತನಾಡಿದ್ದರಂತೆ.ಆದರೆ, ಮಂಜುನಾಥ್ ಅವರು ಪಟ್ಟುಬಿಡದೇ ಅನುಸೂಯ ಅವರನ್ನೇ ಮದುವೆಯಾಗುವುದಾಗಿ ಹೇಳಿ,ದೇವೇಗೌಡರನ್ನು ಒಪ್ಪಿಸಿದ್ದರಂತೆ. ಬಳಿಕ ಇವರಿಬ್ಬರ ಮದುವೆ ನೆರವೇರಿದ್ದು, ಮಂಜುನಾಥ್ ಅವರು ಧೇವೇಗೌಡರ ಬಳಿ ಯಾವುದೇ ಉಡುಗೊರೆಯನ್ನು ಪಡೆದಿರಲಿಲ್ಲವಂತೆ.   

ಪತಿಗಾಗಿ ಸರ್ಕಾರಿ ಕೆಲಸ ಬಿಟ್ಟ ಪತ್ನಿ
4

ಮದುವೆಯಾದ ಹೊಸದರಲ್ಲಿ ಡಾ.ಸಿ.ಎನ್ ಮಂಜುನಾಥ್ ಅವರ ಪತ್ನಿ ಅನುಸೂಯಗೆ ಸರ್ಕಾರಿ ನೌಕರಿ ಸಿಕ್ಕಿತ್ತು. ಆದರೆ, ಅನುಸೂಯ ಅವರು ಸರ್ಕಾರಿ ನೌಕರಿಯನ್ನು ಬಿಟ್ಟು ಗಂಡನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಡಾ.ಸಿ.ಎನ್ ಮಂಜುನಾಥ್ ಮತ್ತು ಅನುಸೂಯ ಆದರ್ಶ ದಂಪತಿಯಾಗಿ ಬಾಳ್ಮೆ ನಡೆಸುತ್ತಿದ್ದಾರೆ. ಪತ್ನಿ ಬಗ್ಗೆ ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ನಾನು ಏನೇ ಆಗಿದ್ದರೂ ಸಹ ಇದರಲ್ಲಿ ನನ್ನ ಹೆಂಡತಿಗೆ ಅರ್ಧ ಕ್ರೆಡಿಕ್ ಸಲ್ಲಬೇಕು. ನನ್ನ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನನ್ನ ಹೆಂಡತಿ ಕಲಿಸಿಕೊಟ್ಟಿದ್ದಾಳೆ ಎಂದರು. 

ಪ್ರಶಸ್ತಿಗಳು
5

ಡಾ.ಸಿ.ಎನ್.ಮಂಜುನಾಥ್ ಅವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹೃದಯ ವಿಜ್ಞಾನ ಕೊಡುಗೆಗಾಗಿ ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಫಿಜಿಷಿಯೆನ್ಸ್‌ನ ಫೆಲೋಶಿಪ್‌ಗೆ ಇವರು ಭಾಜನರಾಗಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. ಡಾ.ಸಿ.ಎನ್.ಮಂಜುನಾಥ್ ಅವರ ಅಪ್ರತಿಮ ಸೇವೆಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಏಷಿಯಾ ಫೆಸಿಫಿಕ್ ವ್ಯಾಸ್ಕ್ಯೂಲರ್ ಸಮಾವೇಶದಲ್ಲಿ ದ್ರೋಣಾಚರ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.  

ವೀಕ್ಷಕರಿಂದ ಮೆಚ್ಚುಗೆ
6

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೂರನೇ ಅತಿಥಿಯಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಬಂದಿರುವುದಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಹಲವರು ಈಗ ಈ ಕಾರ್ಯಕ್ರಮಕ್ಕೆ ಕಳೆಬಂತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಆಯ್ಕೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+