ಸಂಚಾರಿ ವಿಜಯ್ ನಟಿಸಿರುವ `ಮೇಲೊಬ್ಬ ಮಾಯಾವಿ' ಚಿತ್ರವನ್ನು ಕರಾವಳಿ ಮೂಲದ ನವೀನಕೃಷ್ಣ ಬಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕರಾವಳಿಯ ರಂಗಪ್ರತಿಭೆ ಅನನ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ, ಚಿತ್ರಕ್ಕರ ಸಾಹಿತ್ಯ ಸಂಭಾಷಣೆ ಬರೆದಿರುವ ಚಂದ್ರಚೂಡ ಚಕ್ರವರ್ತಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರು ಕರಾವಳಿ ಭಾಗದ ಮಾಫಿಯಾ ಎಳೆಯೊಂದಿಗೆ ರೋಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಹೆಣೆದಿದ್ದಾರೆ.ಇದು ಎಲ್.ಎನ್.ಶಾಸ್ತ್ರೀ ಸಂಗೀತ ನಿರ್ದೇಶನದ ಕೊನೆಯ ಚಿತ್ರ.
ಚಿತ್ರದ ಕಥೆ ಕರಾವಳಿಯ ಸ್ವರ್ಗ ಎಂಬ ಊರಿನಲ್ಲಿ ತೆರೆದುಕೊಳ್ಳುತ್ತದೆ. ಕೆಲವರ ಸ್ವಾರ್ಥ ಮತ್ತು ರಾಜಕೀಯ ಅಟ್ಟಹಾಸಕ್ಕೆ ಸಿಲುಕಿ ಸ್ವರ್ಗ ಹೆಸರಿನ ಊರು ಅಲ್ಲಿಯ ಸಾಮಾನ್ಯ ಜನರಿಗೆ ನರಕಸದೃಶವಾಗಿರುತ್ತದೆ. ವಿದ್ಯುತ್ ಕಂಬವಿದ್ದರೂ ಕರೆಂಟ್ ಇಲ್ಲ, ಟ್ಯಾಂಕರ್ ಗಳು ಇದ್ದರೂ ನೀರಿಲ್ಲ, ಹೀಗೆ ಸ್ವರ್ಗ ಊರಿನ ಕಥೆ ತರೆದುಕೊಳ್ಳುತ್ತದೆ.