X
ಹೋಮ್ ಚಲನಚಿತ್ರಗಳ ಒಳನೋಟ

2024ರ ಫಸ್ಟ್ ಹಾಫ್ ರಿಪೋರ್ಟ್: ಸಿನಿರಸಿಕರಲ್ಲಿ ನಿರೀಕ್ಷೆ ಹುಟ್ಟಿಸಿ, ನಿರಾಸೆ ಮೂಡಿಸಿದ ಸಿನಿಮಾಗಳ ಪಟ್ಟಿ!

Author Sowmya Bairappa | Published: Monday, July 1, 2024, 05:21 PM [IST]

2024ರ ಆರಂಭದಲ್ಲಿ ಕನ್ನಡದಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಈ ಆರು ತಿಂಗಳಿನಲ್ಲಿ ಸಾಲು-ಸಾಲು ಚಿತ್ರಗಳು ತೆರೆಕಂಡರೂ ಯಾವ ಸಿನಿಮಾಗಳು ಕೂಡ ಯಶಸ್ಸು ಗಳಿಸಲಿಲ್ಲ. ಈ ಪೈಕಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕೆಲ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿವೆ. ಇಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿ, ನಿರಾಸೆ ಮೂಡಿಸಿದ ಕನ್ನಡ ಚಲನಚಿತ್ರಗಳ ಪಟ್ಟಿಯನ್ನು ನೀಡಲಾಗಿದೆ.


cover image
ರಂಗನಾಯಕ

ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್ ಸಿನಿಮಾ ಮೇಕಿಂಗ್ ಹಾದಿಯೇ ಡಿಫರೆಂಟ್. ಮಠ, ಎದ್ದೇಳು ಮಂಜುನಾಥದಂತಹ ಸಿನಿಮಾ ನೋಡಿದವರಿಗೆ ಗೊತ್ತಿರುತ್ತೆ. ಅದೇ ಕಾಂಬಿನೇಷನ್‌ನಲ್ಲಿ 'ರಂಗನಾಯಕ' ಎಂಬ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ರಚಿತಾ ಮಹಾಲಕ್ಷ್ಮೀ ನಾಯಕಿಯಾಗಿ ನಟಿಸಿದ್ದರು. ಆದರೆ, ಈ ಸಿನಿಮಾ ನಿರೀಕ್ಷೆ ಹುಟ್ಟಿಸಿ, ನಿರಾಸೆ ಮೂಡಿಸಿತ್ತು.

ಕರಟಕ ದಮನಕ

ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದ ಖ್ಯಾತಿ ಯೋಗರಾಜ್ ಭಟ್ ನಿರ್ದೇಶನದ  'ಕರಟಕ ದಮನಕ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಲಿದೆ ಎನ್ನಲಾಗಿತ್ತು. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಇಂಡಿಯನ್ ಮೈಕಲ್‌ ಜಾಕ್ಸನ್ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿರೀಕ್ಷೆ ಮತ್ತಷ್ಟು ಹೆಚ್ಚಿತ್ತು. ಎರಡು ಕುತಂತ್ರಿ ನರಿಗಳ ಸ್ವಭಾವವನ್ನು ಹೋಲುವ ಕಥೆಯನ್ನು 'ಕರಟಕ ದಮನಕ' ಸಿನಿಮಾದಲ್ಲಿ ಹೆಣೆಯಲಾಗಿತ್ತು. ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಅಗಿದ್ದು, ಸಿನಿಮಾ ಅಷ್ಟೊಂದು ಯಶಸ್ಸು ಗಳಿಸಲಿಲ್ಲ.

ಮ್ಯಾಟ್ನಿ

ಮನೋಹರ್ ಕಾಂಪಲ್ಲಿ ನಿರ್ದೇಶನದ 'ಮ್ಯಾಟ್ನಿ' ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕನಾಗಿ, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಉಳಿದಂತೆ ನಾಗಭೂಷಣ್ ಎನ್.ಎಸ್, ಶಿವರಾಜ್ ಕೆ. ಆರ್ ಪೇಟೆ, ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್ ಸೇರಿದಂತೆ  ತಾರಾಗಣದಲ್ಲಿದ್ದರು. ಆದರೆ, ಸಿನಿಮಾ ಮಾತ್ರ ಸಕ್ಸಸ್ ಆಗಲಿಲ್ಲ.

ರಾಮನ ಅವತಾರ

ವಿಕಾಸ್ ಪಂಪಾಪತಿ ನಿರ್ದೇಶನದ 'ರಾಮನ ಅವತಾರ' ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ರಿಷಿ ಹಾಗೂ ಪ್ರಣೀತಾ ಸುಭಾಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಉಳಿದಂತೆ ಶುಭ್ರ ಅಯ್ಯಪ್ಪ, ಅರುಣ್ ಸಾಗರ್, ಅನಿರುದ್ಧ್ ಆಚಾರ್ಯ ಮುಂತಾದವರು ತಾರಾಗಣದಲ್ಲಿದ್ದರು. ಯಾವಾಗಲೂ ಜಾಲಿಯಾಗಿರುವ ರಾಮ ಕೃಷ್ಣ ಎಂಬ ಯುವಕನಿಗೆ ರಾಜಕಾರಣಿ ಆಗಬೇಕೆಂಬ ಆಸೆಯಿರುತ್ತದೆ. ಆದರೆ, ಅವನ ಜೀವನದಲ್ಲಾದ ಕೆಲ ಅನಿರೀಕ್ಷಿತ ಘಟನೆಗಳಿಂದ ಆತ ಏನೆಲ್ಲಾ ಸಮಸ್ಯೆಗಳಿಗೆ ಸಿಲುಕುತ್ತಾನೆ? ಅದರಿಂದ ಹೊರ ಬರುವುದು ಹೇಗೆ? ಅವನು ಹೇಗೆ ಜೆಂಟಲ್ ಮ್ಯಾನ್ ಆಗ್ತಾನೆ? ಎಂಬುದು ಸಿನಿಮಾ ಕಥೆಯಾಗಿತ್ತು. ಈ ಚಿತ್ರ ಕೂಡ ಯಶಸ್ಸು ಕಾಣಲಿಲ್ಲ.

ಚೆಫ್ ಚಿದಂಬರ

ಆನಂದ್ ರಾಜ್‌ ನಿರ್ದೇಶನದ 'ಚೆಫ್ ಚಿದಂಬರ' ಸಿನಿಮಾದಲ್ಲಿ ಹಲವು ವರ್ಷಗಳ ಬಳಿಕ ಅನರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದರು. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಕಾಣಿಸಿಕೊಂಡಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್, ಶಿವಮಣಿ ಮುಂತಾದವರು ತಾರಾಗಣದಲ್ಲಿದ್ದಾರರು. ಚಿತ್ರದ ಕಥೆಯು ಅಪರಾಧ, ಕೊಲೆ ಮತ್ತು ನಿಗೂಢತೆಯ ಅಂಶಗಳನ್ನು ಒಳಗೊಂಡಿತ್ತು. ನಾಯಕನ ಆಂತರಿಕ ಸಂಘರ್ಷ, ಆತ ಅದರಲ್ಲಿ ಸಿಲುಕಿಕೊಳ್ಳುವುದು ಮತ್ತು ಆತ ಸಂಕಟದಿಂದ ಹೊರಬರಲು ಮಾಡುವ ತಂತ್ರಗಳ ಸುತ್ತ ಕಥೆ ಸುತ್ತುತ್ತದೆ.

ಬ್ಯಾಚುಲರ್ ಪಾರ್ಟಿ

ಅಭಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ದಿಗಂತ್ ಪಾತ್ರದಿಂದಲೇ 'ಬ್ಯಾಚುಲರ್ ಪಾರ್ಟಿ'ಗಳ ಕಥೆ ಆರಂಭ ಆಗುತ್ತೆ. ದಿಗಂತ್ ಅಲಿಯಾಸ್ ಸಂತೋಷ್ ಒಬ್ಬ ಸಾಪ್ಟ್‌ವೇರ್ ಇಂಜಿನಿಯರ್. ಜೀವನದಲ್ಲಿ ಜಿಗುಪ್ಸೆ ಬರುವ ಹಂತದಲ್ಲಿರೋ ವ್ಯಕ್ತಿ. ಇಎಂಐ, ಕಮಿಟ್‌ಮೆಂಟ್ ಅಂತ ಬೇಸತ್ತು ಹೋಗಿರುವ ಸಂತೋಷ್‌ಗೆ ಒಂದೊಳ್ಳೆ ಜೀವನ ಸಾಗಿಸಬೇಕು ಅನ್ನೋ ಆಸೆ. ಇತ್ತ ವೈವಾಹಿಕ ಬದುಕು ಕೂಡ ಚೆನ್ನಾಗಿಲ್ಲ. ಸಂತೋಷ್ ಪತ್ನಿಯ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ದಿಗಂತ್ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಹದಗೆಟ್ಟಿದೆ. ಹೀಗೊಮ್ಮೆ ಗೆಳೆಯ ಬ್ಯಾಚುಲರ್ ಪಾರ್ಟಿಗೆ ಹೋಗಿ ಅದು ಮುಗಿಯೋ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಇರುತ್ತಾರೆ. ಅಲ್ಲಿ ಏನೇನಾಗುತ್ತೆ? ಅನ್ನೋದೇ ಕಥೆ.   ಆದರೆ, ಈ ಚಿತ್ರ ಚಿತ್ರಮಂದಿರಗಳಲ್ಲಿ ಜಾದೂ ಮಾಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+