X
ಹೋಮ್ ಚಲನಚಿತ್ರಗಳ ಒಳನೋಟ

ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ 'ಅಣ್ಣಯ್ಯ' ಸೀರಿಯಲ್ ಕಲಾವಿದರ ಹೆಸರು, ಕಥೆ ಹಾಗೂ ಇತರ ಮಾಹಿತಿ ಇಲ್ಲಿದೆ.

Author Sowmya Bairappa | Published: Monday, August 5, 2024, 03:18 PM [IST]

ಜೀ ಕನ್ನಡ ವಾಹಿನಿ ವಿಭಿನ್ನ ಕಥೆಯುಳ್ಳ ಸೀರಿಯಲ್‌ಗಳ ಪ್ರಸ್ತುತಪಡಿಸುವ ಮೂಲಕ ಕನ್ನಡಿಗರ ಮನಗೆದ್ದಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳು ಟಿಆರ್‌ಪಿ ರೇಸಿಂಗ್‌ನಲ್ಲೂ ಮುಂದಿವೆ. ಮೊನೆಯಷ್ಟೇ ಬ್ರಹ್ಮಗಂಟು ಎಂಬ ಧಾರಾವಾಹಿ ಲಾಂಚ್ ಆಗಿತ್ತು. ಈ ಬೆನ್ನಲ್ಲೇ ಆಗಸ್ಟ್ ೧೨ರಿಂದ ಅಣ್ಣಯ್ಯ ಎಂಬ ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದ್ದು, ಈಗಾಗಲೇ ಪ್ರೋಮೋಗಳ ಮೂಲಕ ಗಮನ ಸೆಳೆಯುತ್ತಿದೆ. ಹೀಗಾಗಿ, ಈಗಾಗಲೇ ಪ್ರಸಾರವಾಗುತ್ತಿರುವ ಯಾವುದಾದರೊಂದು ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಇಲ್ಲಿ ಅಣ್ಣಯ್ಯ ಧಾರಾವಾಹಿಯ ಕಥೆ ಏನು, ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ನಾಯಕ & ನಾಯಕಿ ಯಾರು?

'ಅಣ್ಣಯ್ಯ' ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂಲತಃ ಕೊಡಗಿನವರಾದ ಈ ನಟ, ಈಗಾಗಲೇ ಮೇರಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಹಲವು ಶಾರ್ಟ್‌ ಫಿಲ್ಮಗಳಲ್ಲೂ ಬಣ್ಣಹಚ್ಚಿದ್ದಾರೆ. ಇದೀಗ ಮೊದಲ ಬಾರಿಗೆ ನಾಯಕನಾಗಿ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಗಟ್ಟಿಮೇಳ ಸೀರಿಯಲ್‌ನಲ್ಲಿ ರೌಡಿ ಬೇಬಿ (ಅಮೂಲ್ಯ) ಅಂತಲೇ  ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದ ನಿಶಾ ರವಿಕೃಷ್ಣನ್  ಈ ಧಾರಾವಾಹಿ ಹೀರೋಯಿನ್. ಕಿರುತೆರೆಯಲ್ಲಿ ತಮ್ಮದೇಯಾದ ಅಪಾರ ಅಭಿಮಾನಿ ಬಳಗ ಹೊಂದಿರುವ ನಿಶಾ, ಈ ಸೀರಿಯಲ್‌ನಲ್ಲಿ 'ಪಾರ್ವತಿ' ಎಂಬ ವೈದ್ಯೆಯ ಪಾತ್ರದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈಗಾಗಲೇ ಇವರಿಬ್ಬರ ಪ್ರೊಮೋ ಹೊರಬಿದ್ದಿದೆ.

ನಾಯಕನ ತಂಗಿಯರು

ಉಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕಾಟೇರದಲ್ಲಿ ಆರಾಧಾನಾ ರಾಮ್ ಅವರ ಬಾಲ್ಯದ ವರ್ಷನ್‌ನಲ್ಲಿ ಕಾಣಿಕೊಂಡಿದ್ದ ಅಂಕಿತಾ ಗೌಡ, ವೈಶಂಪಾಯನ ತೀರ ಮತ್ತು ಜಲಪಾತ ಸಿನಿಮಾಗಳಲ್ಲಿ ಅಭಿನಯಿಸಿರುವ ನಾಗಶ್ರೀ ಬೇಗಾರ್,  ಪ್ರತೀಕ್ಷಾ ಶ್ರೀನಾಥ್ ಹಾಗೂ ಪ್ರಾಯಶಃ ಚಿತ್ರದಲ್ಲಿ ಅಭಿನಯಿಸಿರುವ ರಾಘವಿ ನಾಯಕನ ಮುದ್ದಿನ ತಂಗಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಣ್ಣಯ್ಯ ಕಥೆ ಏನು?

ಬಹುತಾರಾಗಣವಿರುವ ಈ ಸೀರಿಯಲ್‌ನಲ್ಲಿ ಅಣ್ಣತಂಗಿಯರ ಬಾಂಧವ್ಯದ ಕಥೆ ಇರಲಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣ ಶಿವ. ತಂಗಿಯರ ಪಾಲಿಗೆ ಇವನೇ ಶ್ರೀರಕ್ಷೆ. ತನ್ನ ಪ್ರೀತಿಯ ತಂಗಿಯರ ಮೇಲೆ ಯಾರ ಕೆಟ್ಟ ಕಣ್ಣು ಬೀಳದಂತೆ ಜೋಪಾನ ಮಾಡುವ ಶಿವನ ಕಥೆ. ಈ ಶಿವನಿಗೆ ಪಾರ್ವತಿಯೂ ಇರಲೇಬೇಕು. ತಂಗಿಯರಿಗಿಂತ ಮೊದಲು ಮದುವೆ ಆಗಲ್ಲ ಅಂತಿರೋ ಶಿವನ ಹೃದಯಕ್ಕೆ ಪಾರ್ವತಿಯಾಗಿ ನಿಶಾ ಲಗ್ಗೆ ಇಡಲಿದ್ದಾರೆ.  

ಪ್ರಸಾರ ಸಮಯ?

ಅಣ್ಣಯ್ಯ ಧಾರಾವಾಹಿ ಆಗಸ್ಟ್ 12 ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಸದ್ಯ ಈ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಸಾರವಾಗುತ್ತಿದ್ದು, ಈ ಧಾರಾವಾಹಿಗೆ ಯಾವ ಸ್ಲಾಟ್ ಸಿಗಲಿದೆ ಎಂಬುದನ್ನು ಕಾದುನೋಡಬೇಕು. ಕರಣ್ ಅನಂತ್ ನಿರ್ದೇಶನಲ್ಲಿ ಮೂಡಿಬರುತ್ತಿರುವ ಅಣ್ಣಯ್ಯ ಸೀರಿಯಲ್ ಅನ್ನು ನಟ ಪ್ರಮೋದ್ ಶೆಟ್ಟಿ ನಿರ್ಮಾಣ ಮಾಡ್ತಿದ್ದಾರೆ.

ಯಾವ ಧಾರಾವಾಹಿ ಮುಕ್ತಾಯಗೊಳ್ಳಲಿದೆ?

ಹೊಸ ಧಾರಾವಾಹಿಯೊಂದು ಆರಂಭವಾಗಲಿದೆ ಅಂದರೆ ಹಳೆಯ ಸೀರಿಯಲ್‌ವೊಂದು ಮುಕ್ತಾಯಗೊಳ್ಳುವುದು ವಾಡಿಕೆ. ಇದೀಗ ಅಣ್ಣಯ್ಯ ಆರಂಭವಾಗುತ್ತಿರುವುದರಿಂದ ಭೂಮಿಗೆ ಬಂದ ಭಗವಂತ, ಶ್ರೀರಸ್ತು ಶುಭಮಸ್ತು ಹಾಗೂ ಸತ್ಯ ಧಾರಾವಾಹಿಗಳಲ್ಲಿ ಯಾವುದಾದರೊಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+