X
ಹೋಮ್ ಚಲನಚಿತ್ರಗಳ ಒಳನೋಟ

Namratha Gowda: ಬಿಗ್‌ಬಾಸ್‌ ಮನೆಯಿಂದ ನಮ್ರತಾ ಗೌಡ ಎಲಿಮಿನೇಟ್

Author Sowmya Bairappa | Published: Saturday, January 20, 2024, 09:54 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಮನೆಯೊಳಗಿರುವ ಸದಸ್ಯರ ಸಂಖ್ಯೆ ಕಡಿಮೆಯಿದೆ. ಈ ವಾರ ಬಿಗ್‌ಬಾಸ್‌ ಮನೆಯಿಂದ ಯಾರ ಹೊರಹೋಗಲಿದ್ದಾರೆಂಬ ಕುತೂಹಲ ಹಲವರಲ್ಲಿತ್ತು. ಇದೀಗ ಅದಕ್ಕೆ ತೆರೆಬಿದ್ದಿದೆ.


cover image
ನಮ್ರತಾ ಗೌಡ ಔಟ್

ನಮ್ರತಾ ಗೌಡ ಈ ವಾರ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್‌ಬಾಸ್‌ ಪ್ರಾರಂಭವಾದಾಗ ನಮ್ರತಾ ಗೌಡ ಟಾಸ್ಕ್‌ಗಳಲ್ಲಿ ಅಷ್ಟು ಚೆನ್ನಾಗಿ ಆಡುತ್ತಿರಲಿಲ್ಲ. ಆದರೆ, ಕಳೆದ ಕೆಲ ವಾರಗಳಿಂದ ಎಲ್ಲಾ ಟಾಸ್ಕ್‌ಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ಉತ್ತಮವಾಗಿ ಆಡುತ್ತಿದ್ದರು. ಆದ್ರೀಗ ಹೊರಬಂದಿದ್ದಾರೆ. 

 

ಕಿಚ್ಚನ ಚಪ್ಪಾಳೆ

ಕಿಚ್ಚ ಸುದೀಪ್ ಪ್ರತಿವಾರ ಬಿಗ್‌ಬಾಸ್‌ ಮನೆಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ ಓರ್ವ ಸ್ಪರ್ಧಿಗೆ 'ಕಿಚ್ಚನ ಚಪ್ಪಾಳೆ' ನೀಡುತ್ತಾರೆ. ಈ ಚಪ್ಪಾಳೆ ಸ್ಪರ್ಧಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ. ಕೊನೆಯ ವಾರ ಕಿಚ್ಚನ ಚಪ್ಪಾಳೆ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಅವರಿಗೆ ಸಿಕ್ಕಿದೆ. 

ಫಿನಾಲೆ ಯಾವಾಗ?

ಜನವರಿ 27 ಹಾಗೂ 28ರಂದು ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಅಂತ ಹೇಳಲಾಗಿದೆ. ಹೀಗಾಗಿ ಈಗಾಗಲೇ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಡ್ಯಾನ್ಸ್ ತಯಾರಿ ಕೂಡ ಮಾಡುತ್ತಿದ್ದಾರಂತೆ. ಈ ತಿಂಗಳಾಂತ್ಯದಲ್ಲಿ ಫಿನಾಲೆ ನಡೆಯಲಿದೆ.

 

ಫೈನಲ್ ತಲುಪಿದ 6 ಸ್ಪರ್ಧಿಗಳು

ಸಂಗೀತಾ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದುಕಳದೆ ವಾರವೇ ಫಿನಾಲೆ ಹಂತ ತಲುಪಿದ್ದರು. ಇವರೊಂದಿಗೆ ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್ ಹಾಗೂ ವತೂರು ಸಂತೋಷ್ ಫೈನಲ್ ಹಂತ ತಲುಪಿದ್ದು, ಯಾರು ಟ್ರೋಫಿ ಗೆಲ್ಲಲಿದ್ದಾರೆಂದು ಕಾದುನೋಡಬೇಕು. 

 

ರಕ್ಷಕ್ ಮೇಲೆ ನಟ ಸುದೀಪ್ ಗರಂ

ಈ ಹಿಂದೆ ಒಮ್ಮೆ ಡ್ರೋನ್ ಪ್ರತಾಪ್ ಎಲಿಮಿನೇಟ್​ಆದವರ ಬೆಡ್‌ ಶೀಟ್‌ಗಳು ವಿನಯ್​ಅವರ ಬೆಡ್​ಸೇರುತ್ತಿವೆ ಎಂದಿದ್ದರು. ಈ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಕ್​ ಮತ್ತೆ ಮನೆಯೊಳಗೆ ಹೋದಾಗ ಕಿರಿಕ್ ಮಾಡಿದ್ದರು. ಇದು ಹಲವರ ಬೇಸರಕ್ಕೆ ಕಾರಣವಾಗಿತ್ತು. ಇದರ ಜೊತೆ ಇಶಾ ನಿ ಕೂಡ ಡ್ರೋನ್​ ಪ್ರತಾಪ್‌ಗೆ ಕಾಗೆ ಎಂದು ಕರೆದಿದ್ದರು. ಇದು ವೀಕ್ಷಕರ ಆಕ್ರೋಶಕ್ಕೂ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಮಾತನಾಡಿದ ಸುದೀಪ್, ಯಾವ ಆ್ಯಂಗಲ್​ನಲ್ಲಿ ನೀವು ಸೋತು ಹೊರಗಡೆ ಹೋಗಿ, ಕಲಿತು ಒಳಗೆ ಬಂದ್ರಿ ಅಂತ ನಿಮಗೆ ಅನಿಸುತ್ತೆ ಹೇಳಿ ಎಂದು ಇಶಾನಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.  ಜೊತೆಗೆ ಇನ್ನೊಂದು ಬ್ಯಾಂಕೆಟ್ ಬರುತ್ತೆ. ರಕ್ಷಕ್ ಅವರದ್ದು. ರಕ್ಷಕ್ ಅಲ್ವಾ? ಆ ಕಂಟೆಸ್ಟೆಂಟ್ ಹೆಸರು? ಚೆನ್ನಾಗಿಟ್ಟಿರಲಿ ದೇವರು ನಿಮ್ಮನ್ನ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

 

ಕ್ಷಮೆ ಕೇಳಿದ್ದ ರಕ್ಷಕ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನನಗೆ ದೊಡ್ಡ ಡ್ರಾಮಾ ಅನಿಸಿದ್ದು ಏನು ಅಂದ್ರೆ, ಕಳಪೆ ಉತ್ತಮ ಅನ್ನೋದು ಕೊಡುತ್ತೇವೆ. ನನಗೆ ಇಷ್ಟ ಬಂದಂಗೆ ಕೊಟ್ಟಿದ್ದೇನೆ ಅನ್ನೋ ಲೆವೆಲ್‌ನಲ್ಲೇ ಇರುತ್ತಾರೆ. ಸುದೀಪಣ್ಣ ಬಂದ ಕೂಡಲೇ ಹೆಂಗೆ ಆಗ್ಬಿಡ್ತಾರೆ ಅಂದ್ರೆ, ಅವ್ರು ಹೆಂಗೆ ಹೇಳ್ತಾರೆ ಹಂಗೆ ಕೇಳ್ಬೇಕು. ಅವ್ರು ದೇವ್ರು, ನಾವು ಭಕ್ತಾಧಿಗಳು ಅಂತ ಅಂದ್ಕೊಳ್ತಾರೆ ಎಂದು ಸ್ಪರ್ಧಿಗಳು ನಿರ್ಧಾರ ಬದಲಿಸುವ ಬಗ್ಗೆ ರಕ್ಷಕ್ ಮಾತನಾಡಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ್ದರು. 

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+