X
ಹೋಮ್ ಚಲನಚಿತ್ರಗಳ ಒಳನೋಟ

2024ರಲ್ಲಿ ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ

Author Sowmya Bairappa | Updated: Thursday, December 5, 2024, 10:56 AM [IST]

ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಒಳ್ಳೆಯ ಕಥೆ, ಉತ್ತಮ ಸಂಭಾಷಣೆ, ಹಾಡು ಎಲ್ಲವೂ ಮುಖ್ಯವಾಗಿರುತ್ತದೆ. ಸಿನಿಮಾದಲ್ಲಿ ಉತ್ತಮ ಕಥೆಯಿದ್ದರೆ ಪ್ರೇಕ್ಷಕರೇ ಆ ಸಿನಿಮಾದ ಕೈಹಿಡಿಯುತ್ತಾರೆ. ಆದರೆ, ಕೆಲವೊಮ್ಮೆ ಸಿನಿಮಾದ ಕಥೆ ಉತ್ತಮವಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಥೀಯೇಟರ್ ಮತ್ತು ಪ್ರಮೋಷನ್ ಕೊರತೆ ಎನ್ನಬಹುದು. ಇಲ್ಲಿ 2024ರಲ್ಲಿ ಒಳ್ಳೆಯ ಕಥೆಯ ಮೂಲಕ ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಶಾಖಾಹಾರಿ

24ರ ಫೆಬ್ರವರಿ 16ರಂದು ಬಿಡುಗಡೆಯಾಗಿದ್ದ ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ 'ಶಾಖಾಹಾರಿ' ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಸಂದೀಪ್ ಸುಂಕದ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಥಿಯೇಟರ್‌ಗಿಂತ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈ ವರ್ಷದ ಒಟಿಟಿ ಹಿಟ್ ಕನ್ನಡ ಸಿನಿಮಾ ಶಾಖಾಹಾರಿ. ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಖಾಹಾರಿ ಹೋಟೆಲ್. ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಶಾಖಾಹಾರಿಯಾಗಿ ಬದಲಾಗುತ್ತದೆ. ಅದು ಹೇಗೆ? ಶುದ್ಧ ಸಸ್ಯಹಾರಿಯಾದ ಸುಬ್ಬಣ್ಣ ಕೊಲೆಗಾರನಾಗುವುದು ಯಾಕೆ? ಎಂಬುದೇ ಸಿನಿಮಾ ಕಥೆ.  ಶಾಖಾಹಾರಿಯಲ್ಲಿ  ರಂಗಾಯಣ ರಘು ಅವರ ಅಭಿನಯ ಕಂಡು ಚಿತ್ರತಂಡ ಅವರಿಗೆ 'ಅಭಿನಯಾಸುರ' ಅಂತ ಬಿರುದು ಕೊಟ್ಟಿತ್ತು.

ಬ್ಲಿಂಕ್

ಶ್ರೀನಿಧಿ ಬೆಂಗಳೂರು ನಿರ್ದೇಶನದ ವಿಭಿನ್ನ ಸಿನಿಮಾ 'ಬ್ಲಿಂಕ್'. 2024ರ ಮಾರ್ಚ್ 8ರಂದು ರಿಲೀಸ್ ಆಗಿದ್ದ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಮಂದಾರ ಬಟ್ಟಲಹಳ್ಳಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆಧುನಿಕ ದಿನದ ಬೆಂಗಳೂರಿನ ಹಿನ್ನೆಲೆಯ ವಿರುದ್ಧವಾಗಿ, ಬ್ಲಿಂಕ್ ನಮಗೆ 24 ವರ್ಷದ ರಂಗಭೂಮಿ ಕಲಾವಿದ ಅಪೂರ್ವ (ದೀಕ್ಷಿತ್ ಶೆಟ್ಟಿ) ಅವರನ್ನು ಪರಿಚಯಿಸುತ್ತದೆ. ಒಬ್ಬ ಸಾಮಾನ್ಯ ಹುಡುಗ, ಆತನಿಗೆ ಆತನದ್ದೇ ಒಂದು ಕನಸಿನ ಲೋಕ. ಆ ಲೋಕದಲ್ಲಿ ಆತ ಸುಖೀ..ಹೀಗಿರುವಾಗಲೇ ಟೈಮ್ ಟ್ರಾವೆಲಿಂಗ್ ಎಂಬ ವಿಚಿತ್ರ ಜಗತ್ತು ತೆರೆದುಕೊಳ್ಳುತ್ತದೆ. ಅಲ್ಲಿಂದ ಎಲ್ಲವೂ ಬದಲಾಗಿ ಹೋಗುತ್ತದೆ. ಈ ಸಿನಿಮಾ ಒಟಿಟಿಯಲ್ಲಿ ಕನ್ನಡ ಮಾತ್ರವಲ್ಲದೇ, ಪರಭಾಷಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ವಿದೇಶದಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು.

ಇಬ್ಬನಿ ತಬ್ಬಿದ ಇಳೆಯಲಿ

2024ರ ಸೆಪ್ಟಂಬರ್ 5ರಂದು ಬಿಡುಗಡೆಯಾಗಿದ್ದ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ 'ಇಬ್ಬನಿ ತಬ್ಬಿದ ಇಳೆಯಲಿ' ನವೀನರಾದ ಪ್ರೇಮಕಥೆ ಒಳಗೊಂಡಿತ್ತು. ಸಿನಿಮಾದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್, ವಿಹಾನ್ ಗೌಡ ಹಾಗೂ ಮಯೂರಿ ನಟರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಗಳಿಸಿರಲಿಲ್ಲ. ಆದರೆ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರದಲ್ಲಿ ಸಿದ್ಧಾರ್ಥ್ (ವಿಹಾನ್) ಕೊಟ್ಯಾಧಿಪತಿಯ ಮಗ. ಅನಾಹಿತಾ (ಅಂಕಿತಾ ಅಮರ್) ಬೆಂಗಾಲಿ ಹುಡುಗಿ. ಇವರಿಬ್ಬರ ಪ್ರೀತಿಯಲ್ಲಿ ಬರುವ ರಾಧೆ (ಮಯೂರಿ ನಟರಾಜ್). ಇಡೀ ಸಿನಿಮಾ ಈ ಮೂರು ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಮುಂದಕ್ಕೆ ಸಾಗುತ್ತೆ. 7 ವರ್ಷಗಳಿಂದ ಬೇರೆಯಾಗಿರುವ ಸಿದ್ಧಾರ್ಥ್ ಹಾಗೂ ಅಂಕಿತಾ ಅಮರ್ ಮಧ್ಯೆ ರಾಧೆ ಬಂದಿದ್ದಾಳೆ. ಸಿದ್ಧಾರ್ಥ್‌ಗೆ ಅನಾಹಿತ ಪ್ರೀತಿ ಸಿಗುತ್ತಾ? ರಾಧೆಗೆ ಸಿದ್ಧಾರ್ಥ್ ಸಿಗುತ್ತಾನಾ? ಅನ್ನೋದೇ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ ಒಂದೆಳೆ ಕಥೆ.

ಒಂದು ಸರಳ ಪ್ರೇಮಕಥೆ

2024ರ ಫೆಬ್ರವರಿ 8ರಂದು ಬಿಡುಗಡೆಯಾಗಿದ್ದ  ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮಕಥೆ' ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ, ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಠ ಕೃಷ್ಣನ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಥಿಯೇಟರ್‌ಗಿಂತ ಓಟಿಟಿಯಲ್ಲಿ ಹೆಚ್ಚು ಮೆಚ್ಚುಗೆ ಪಡೆದುಕೊಂಡಿತ್ತು. ಸಿನಿಮಾದ ನಾಯಕ ಅತಿಶಯ್ (ವಿನಯ್ ರಾಜ್‌ಕುಮಾರ್). ಜೀವನದಲ್ಲಿ ಒಂದೆರಡು ಕನಸು ಇಟ್ಟುಕೊಂಡಿರೋ ವ್ಯಕ್ತಿ. ಒಬ್ಬ ಒಳ್ಳೆಯ ಸಂಗೀತ ನಿರ್ದೇಶಕನಾಗಬೇಕು ಅನ್ನೋದು ಒಂದು ಕನಸಾದರೆ, ಇನ್ನೊಂದು ಮನಮೆಚ್ಚಿನ ಹುಡುಗಿಯನ್ನು ಮದುವೆ ಆಗೋದು. ನಾಯಕ ಈ ಎರಡೂ ಕನಸುಗಳು ಈಡೇರುತ್ತಾ? ಕನಸುಗಳು ಈಡೇರುವ ಹಾದಿಯಲ್ಲಿ ನಾಯಕನಿಗೆ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್ ಏನು? ಕನಸುಗಳು ಈಡೇರುತ್ತಾ? ಇಲ್ವಾ? ಅನ್ನೋದೇ 'ಒಂದು ಸರಳ ಪ್ರೇಮಕಥೆ'. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಗಳಿಸಲಿಲ್ಲ.    





Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+