X
ಹೋಮ್ ಚಲನಚಿತ್ರಗಳ ಒಳನೋಟ

ಫಿನಾಲೆ ತಲುಪಿರುವ 6 ಬಿಗ್‌ಬಾಸ್‌ ಸ್ಪರ್ಧಿಗಳ ಪ್ಲಸ್ & ಮೈನಸ್ ಏನು? ಇಲ್ಲಿದೆ ವಿವರ.

Author Sowmya Bairappa | Published: Saturday, January 27, 2024, 08:54 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಮೂರೇ ದಿನಗಳು ಬಾಕಿ ಉಳಿದಿವೆ. ಇಂದು ಮತ್ತು ನಾಳೆ ರಾತ್ರಿ 7.30ಕ್ಕೆ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಪ್ರಸಾರವಾಗಲಿದೆ. ಸದ್ಯ ಫಿನಾಲೆ ವೀಕ್‌ನಲ್ಲಿ ಆರು ಮಂದಿಯಿದ್ದಾರೆ. ಇಲ್ಲಿ ಪೈನಲಿಸ್ಟ್ ಸ್ಫರ್ದಿಗಳ ಪ್ಲಸ್ ಮತ್ತು ಮೈನಸ್ ಏನು ಎಂಬುದನ್ನು ನೀಡಲಾಗಿದೆ.


cover image
ವಿನಯ್ ಗೌಡ

ಬಿಗ್‌ಬಾಸ್‌ ಆರಂಭದಿಂದಲೂ ವಿನಯ್ ಗೌಡ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಶುರುವಿನಿಂದಲೂ ಸಾಕಷ್ಟು ಅಗ್ರೆಸ್ಸಿವ್ ಆಗಿದ್ದ ವಿನಯ್, ಎಲ್ಲಾ ಟಾಸ್ಕ್‌ಗಳಲ್ಲೂ ಬಹಳ ಉತ್ತಮವಾಗಿ ಆಟ ಆಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕೆ ಅನೇಕರಿಗೆ ಅವರು ಇಷ್ಟವಾಗಿದ್ದಾರೆ. ಆದರೆ, ಕೆಲವು ವಿವಾದಾತ್ಮಕ ಮಾತುಗಳಿಂದ ಅವರ ಮೈಲೇಜ್ ಕಡಿಮೆಯಾಗಿದೆ. ಇದು ಅವರ ಮೈನಸ್ ಅಂತಲೇ ಹೇಳಬಹುದು.  

 

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಕೂಡ ಬಿಗ್‌ಬಾಸ್‌ ಆರಂಭದಿಂದಲೂ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಟಾಸ್ಕ್, ಅಡುಗೆ, ಮನೋರಂಜನೆ ಎಲ್ಲದರಲ್ಲೂ ಕಾರ್ತಿಕ್ ಮುಂದಿದ್ದು, ಅವರ ಅಭಿಮಾನಿ ಬಳಗವೂ ಹೆಚ್ಚಾಗಿದೆ. ಆದರೆ, ಇತ್ತೀಚಿನ ಕೆಲ ವಾರಗಳಿಂದ ಡಲ್ ಆಗಿದ್ದಾರೆ. ಕಾರ್ತಿಕ್ ಮೊದಲು ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ, ಕೆಲ ಮೈಮನಸ್ಸುಗಳಿಂದ ಇವರಿಬ್ಬರು ದೂರವಾದರು. ಆಪ್ತರೆನಿಸಿಕೊಂಡಿದ್ದ ತನಿಷಾ ಕೂಡ ಎಲಿಮಿನೇಟ್ ಆಗಿದ್ದಾರೆ. ಇತ್ತ ನಮ್ರತಾ ಜೊತೆ ಕೂಡ ಜಗಳವಾಗಿತ್ತು. ಇದು ಅವರಿಗೆ ಹಿನ್ನೆಡೆಯುಂಟು ಮಾಡಿತ್ತು. 

 

ಡ್ರೋನ್ ಪ್ರತಾಪ್

ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುನ್ನ ಡ್ರೋನ್ ವಿಚಾರವಾಗಿ ಪ್ರತಾಪ್ ಸಾಕಷ್ಟು ಟೀಕೆ ಹಾಗೂ ಟ್ರೋಲ್‌ಗೆ ಒಳಗಾಗಿದ್ದರು. ಆದರೆ, ದೊಡ್ಮನೆಗೆ ಎಂಟ್ರಿಕೊಟ್ಟ ಬಳಿಕ ಜನರು ಅವರನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಎಲ್ಲರೂ ಅವರನ್ನು ಇಷ್ಟಪಡಲು ಆರಂಭಿಸಿದರು. ಕಿಚ್ಚ ಸುದೀಪ್ ಕೂಡ ಅವರನ್ನು ಹುರಿದುಂಬಿಸಿದರು. ಇದರಿಂದ ಅವರ ಆಟದ ಶೈಲಿ ಬದಲಾಯಿಸಿಕೊಂಡರು. ಫಿನಾಲೆ ಹಂತಕ್ಕೆ ಬರುತ್ತಿದ್ದಂತೆ ಅವರು ಮತ್ತಷ್ಟು ಚುರುಕಾಗಿದ್ದಾರೆ. ಆದರೆ, ಅವರ ಒಮ್ಮೊಮ್ಮೆ ಸಿಕ್ಕಾಪಟ್ಟೆ ಡಲ್ ಆಗುತ್ತಾರೆ. ಅದು ಅವರ ಮೈನಸ್ ಪಾಯಿಂಟ್. 

 

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿಯವರು ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲಬಹುದು ಎಂಬುದು ಅನೇಕರ ಅಭಿಪ್ರಾಯ. ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಾಗಿನಿಂದಲೂ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸಂಗೀತಾ ತಮ್ಮ ನಿರ್ಧಾರಗಳನ್ನು ಮುಲಾಜಿಲ್ಲದೇ ನೇರವಾಗಿ ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಟಾಸ್ಕ್‌ಗಳನ್ನು ಕೂಡ ಹಿಂಜರಿಯದೇ ಮುನ್ನುಗ್ಗುತ್ತಾರೆ. ಇತ್ತೀಚೆಗೆ 'ವಿಜಯೀಭವ ಸಂಗೀತಾ ಶೃಂಗೇರಿ' ಹೆಸರಲ್ಲಿ ಏಳು ಲಕ್ಷ ಟ್ವೀಟ್ ಆಗಿದೆ. 

 

ತುಕಾಲಿ ಸಂತೋಷ್

ಬಿಗ್‌ಬಾಸ್‌ ಆರಂಭದಲ್ಲಿ ತುಕಾಲಿ ಸಂತೋಷ್ ಅವರ ಕಾಮಿಡಿ  ಎಲ್ಲರಿಗೂ ನೋವು ತರಿಸಿತ್ತು. ವೀಕ್ಷಕರಿಗೆ ಅವರ ಕಾಮಿಡಿ ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಮನದಟ್ಟು ಮಾಡಿಸಿದ್ದರು. ನಂತರದಲ್ಲಿ ತುಕಾಲಿ ಸಂತು ತಮ್ಮ ಆಟದ ವೈಖರಿ ಬದಲಾಯಿಸಿಕೊಂಡರು. ಸದ್ಯ ಫಿನಾಲೆ ಹಂತ ತಲುಪಿರುವ ತುಕಾಲಿ ಸಂತೋಷ್, ಹಿಂದೆಯಿಂದ ಎಲ್ಲರ ಬಗ್ಗೆ ಕಾಮೆಂಟ್ ಮಾಡುತ್ತಾರೆಂಬುದು ಹಲವರ ಆರೋಪ. ಅದನ್ನು ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ಕೂಡ. 

ವರ್ತೂರ್ ಸಂತೋಷ್

ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್, ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಆರಂಭದಲ್ಲಿ ಸಿಕ್ಕಾಪಟ್ಟೆ ಡಲ್ ಆಗಿದ್ದರು. ನಂತರ ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆದರು. ನಂತರ ದೊಡ್ಮನೆಯೊಳಗೆ ಕಾಲಿಟ್ಟ ಅವರು ಸಿಕ್ಕಾಪಟ್ಟೆ ಕುಗ್ಗಿದ್ದರು. ಜೊತೆಗೆ ಮನೆಯಿಂದ ಹೊರಹೋಗುವ ನಿರ್ಧಾರ ಕೂಡ ಮಾಡಿದ್ದರು. ಈ ಸಂದರ್ಭ ಅವರ ತಾಯಿ ಬಿಗ್‌ಬಾಸ್‌ ಮನೆಗೆ ಬಂದು ಅವರಿಗೆ ಧೈರ್ಯ ತುಂಬಿದ್ದರು. ನಂತರದಲ್ಲಿ ವರ್ತೂರು ಸಂತೋಷ್ ಆಕ್ಟಿವ್ ಆದರು. ಹೀಗಿದ್ದರೂ ಅವರು ಟಾಸ್ಕ್ ವಿಚಾರ ಬಂದಾಗ ಹಿಂದೇಟು ಹಾಕುತ್ತರೆಂಬುದು ಹಲವರ ಅಭಿಪ್ರಾಯ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+