X
ಹೋಮ್ ಚಲನಚಿತ್ರಗಳ ಒಳನೋಟ

ನಮ್ರತಾ ಸೀರೆ ಮಡಚೋಕೆ ಅವನು ಬಿಗ್‌ಬಾಸ್‌ಗೆ ಬರಬೇಕಿತ್ತಾ?-ಸ್ನೇಹಿತ್ ಬಗ್ಗೆ ತುಕಾಲಿ ಸಂತು ಶಾಕಿಂಗ್ ಹೇಳಿಕೆ

Author Sowmya Bairappa | Published: Saturday, November 25, 2023, 11:27 AM [IST]

ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತ್ ಅವರು ನಮ್ರತಾ ಅವರ ಜೊತೆ ಆಪ್ತತೆ ಬೆಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಹಲವು ಬಾರಿ ನಮ್ರತಾಗೆ ಇರಿಟೇಷನ್ ಅನಿಸುತ್ತೆ. ಈ ಬಗ್ಗೆ ಅವರು ನೇರವಾಗಿ ಹೇಳಿದ್ದಿದೆ.. ಆದರೂ ಸ್ನೇಹಿತ್ ಅದನ್ನು ಮುಂದುವರೆಸುತ್ತಿದ್ದಾರೆ. ಇದೀಗ ಇವರಿಬ್ಬರ ಆತ್ಮೀಯತೆ ಬಗ್ಗೆ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಾತನಾಡಿದ್ದಾರೆ.


cover image
'ನಮ್ರತಾ ಸೀರೆ ಮಡಚೋಕೆ ಬಿಗ್‌ಬಾಸ್‌ಗೆ ಬರಬೇಕಿತ್ತಾ'

ಭಾಗ್ಯಶ್ರೀ ಅವರು ಸ್ನೇಹಿತ್ ಅವರನ್ನು ನಾಮಿನೇಟ್ ಮಾಡ್ತಾಗ ಕಣ್ಣೀರು ಹಾಕಿದ್ದ ತುಕಾಲಿ ಸಂತು, ಈಗ ಸ್ನೇಹಿತ್‌ಗೆ ಬೈಯ್ಕೋಳ್ಳುತ್ತಿದ್ದಾರೆ. ನಮ್ರತಾ ಹಿಂದೆ ಅಲೆಯೋದನ್ನು ಬಿಟ್ಟು ಬೇರೆ ಏನು ಮಾಡ್ತಿಲ್ಲ. ಅವನು ಇಲ್ಲಿ ಯಾಕೆ ಬಂದಿದ್ದಾನೆ? ನಮ್ರತಾ ಹಿಂದೆ ಹೋಗೋದು, ಅವಳ ಬಟ್ಟೆ ಹಿಡ್ಕೊಂಡು ಬರೋದು, ಸೀರೆ ಮಡಚೋದು ಇದೆ ಆಯ್ತು. ನಮ್ರತಾ ಸೀರೆ ಮಡಚೋಕೆ ಅವನು ಬಿಗ್‌ಬಾಸ್‌ಗೆ ಬರಬೇಕಿತ್ತಾ? 24 ಗಂಟೆಯೂ ಅವಳ ಹಿಂದಿರುತ್ತಾನೆ. ಇದನ್ನೆಲ್ಲಾ ನಾವು ನೋಡ್ಬೇಕಾ? ನಾಚಿಕೆ ಆಗ್ತಿಲ್ವಾ? ಅಂತ ಹೇಳಿದ್ದಾರೆ. 

ಚೆಂಬು ಹಿಡಿಯುತ್ತಾನೆ

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಅವರಿಗೆ ಸ್ನೇಹಿತ್ ವರ್ತನೆ ಇಷ್ಟವಾಗುತ್ತಿಲ್ಲ. ಸ್ನೇಹಿತ್ ಹಾಗೂ ನಮ್ರತಾ ಅವರು ಯಾವತ್ತೂ ಉದ್ಧಾರ ಆಗುವುದಿಲ್ಲ. ಸ್ನೇಹಿತ್ ಚಂಬು ಹಿಡಿದುಕೊಂಡು ನಿಲ್ಲುವವನ್ನು ಅಂತ ಮಾತನಾಡಿದ್ದಾರೆ. ವಿನಯ್‌ ಗೌಡ ಆನೆ ಎನ್ನುವುದನ್ನು ಸಹಿಸದ ತುಕಾಲಿ ಸಂತು, ವಿನಯ್ ಈ ವಾರ ಏನೂ ಮಾಡಿಲ್ಲ ಅಂತಲೂ ಚರ್ಚಿಸಿದ್ದಾರೆ. 

 

ಕಳಪೆ ಪಟ್ಟ ಪಡೆದ ವರ್ತೂರು ಸಂತೋಷ್

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್ ಕಳಪೆ ಹಾಗೂ ತುಕಾಲಿ ಸಂತು ಉತ್ತಮ ಪಡೆದಿದ್ದಾರೆ. ವಿನಯ್, ನಮ್ರತಾ, ಸಂಗೀತಾ ಹಾಗೂ ಸ್ನೇಹಿತ್ ಈ ವಾರ ಮನೆಯಲ್ಲಿ ಇನ್ವಾಲ್‌ಮೆಂಟ್ ಇರಲಿಲ್ಲ. ಟಾಸ್ಕ್ ಆಡೋಕೆ ಪ್ರಯತ್ನ ಮಾಡಲ್ಲ, ಮನೆಯಲ್ಲಿ ಅವರು ಹೆಚ್ಚು ಕಾಣಿಸಿಕೊಂಡಿಲ್ಲ ಎಂಬ ಕಾರಣ ನೀಡಿ ವರ್ತೂರು ಅವರಿಗೆ ಕಳಪೆ ನೀಡಿದ್ದಾರೆ. ಇದು ಹಳ್ಳಿಕಾರ್ ಸಂತೋಷ್‌ಗೆ ಬೇಸರ ತಂದಿದೆ.

 

ನಾನೇನು ಅಂತ ಗೊತ್ತು ಎಂದ ವರ್ತೂರು

ಇದಕ್ಕೆ ವರ್ತೂರು ಸಂತೋಷ್, ಉತ್ತಮ, ಕಳಪೆ, ವಿಷಕಾರಿ ಅಂತ ಕೊಟ್ಟರೂ ಕೂಡ ನಾನೇನು ಅಂತ ನನಗೆ ಗೊತ್ತು. ನಾನು ಜಗಳ ಆಡೋಕೆ ಇಲ್ಲಿ ಬಂದಿಲ್ಲ. ನೀನು ನೀನಾಗಿರು ಅಂತ ಜನ ಇಲ್ಲಿಗೆ ಕಳುಹಿಸಿದ್ದಾರೆ. ಯಾರನ್ನೋ ಮೆಚ್ಚಿಸೋಕೆ ಆಡೋದಲ್ಲ. ಜನರು ಎಲ್ಲಿಯವರೆಗೆ ಕರೆದುಕೊಂಡು ಹೋಗ್ತಾರೋ ಅಲ್ಲಿಯವರೆಗೆ ಹೋಗ್ತೀನಿ. ನನ್ನ ಆಟವನ್ನೇ ನಾನು ಆಡ್ತೀನಿ. ನರಿಗಳು ಬಂದು ಬುದ್ದಿ ಹೇಳಿದ್ರೆ, ಕೇಳೋಕೆ ನಾವು ಗುಗ್ಗುಗಳಾ? ಜಗಳ ಆಡೋದು ಆಟ ಅಲ್ಲ, ನಾವು ಕೂಡ ಹೀಗೆ ಜಗಳ ಆಡಬೇಕು ಅಂದ್ರೆ ಹೇಗೆ? ಬಿಗ್‌ಬಾಸ್‌ ಆಟ ಆಡಿಲ್ಲ ಅಂತ ಹೇಳಿದ್ರು. ಬಿಗ್‌ಬಾಸ್ ಆಟ ಯಾವುದು ಅಂತ ಎಲ್ಲಿಯೂ ಮೆನ್ಯನ್ ಮಾಡಿಲ್ಲ. ನಾನು ಸುದೀಪ್ ಸರ್ ಕೇಳಿದ್ರೂ ಇದೇ ಹೇಳ್ತೀನಿ. ಗೊತ್ತಿಲ್ಲದೇ ಪಿನ್ ಇಡೋದು, ಆಮೇಲೆ ಮುಂದೆ ಬಂದು ಭಾಷಣ ಬಿಗಿಯೋದು ಬಿಗ್‌ಬಾಸ್ ಆಟವೇ ಅಂತ ಹೇಳಿದ್ದಾರೆ.

ಮೊದಲೇ ಪ್ಲ್ಯಾನ್

ಪ್ರತಿ ವಾರ ನಡೆಯುವ ಕಳಪೆ ಹಾಗೂ ಉತ್ತಮ ಆಯ್ಕೆಯಲ್ಲಿ ಯಾರೂ ಚರ್ಚೆ ನಡೆಸುವಂತಿಲ್ಲ. ಆದರೆ, ಈ ಮೊದಲು ಸ್ನೇಹಿತ್ ತಮ್ಮ ತಂಡದಲ್ಲಿ ಚರ್ಚೆ ನಡೆಸಿದ್ದರು. ನಂತರ ಸುದೀಪ್ ಬುದ್ಧಿವಾದ ಹೇಳಿದ್ದರು. ಆದರೂ ಆವರು ಬದಲಾಗೇ ಇಲ್ಲ. ವಿನಯ್ ಹಾಗೂ ನಮ್ರತಾ ಜೊತೆ ಕೂತಿದ್ದಾಗ ಸ್ನೇಹಿತ್, ಉತ್ತಮ ಯಾರಿಗೆ ನೀಡಬೇಕೆಂಬ ಚರ್ಚೆ ನಡೆಸಿದ್ದಾರೆ. ಕಾರ್ತಿಕ್ ಒಳ್ಳೆಯ ಆಟ ಆಡಿದ್ದಾರೆ. ಅವರ ಬಗ್ಗೆ ಜನರಿಗೆ ಸಿಂಪತಿಯಿದೆ. ಆವರಿಗೆ ಈ ವಾರ ಕಳಪೆ ನೀಡೋದು ಬೇಡ. ನಾವು ಪ್ರತಾಪ್‌ ಹೀರೋ ಮಾಡಿದ್ದು ಹಾಗೆಯೇ. ಕಾರ್ತಿಕ್‌ಗೆ ಕಳಪೆ ನೀಡಿದರೆ ಅವರಿಗೇ ಹೆಚ್ಚು ಫೂಟೇಜ್ ಸಿಗುತ್ತೆ ಎಂದಿದ್ದಾರೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+