X
ಹೋಮ್ ಚಲನಚಿತ್ರಗಳ ಒಳನೋಟ

ಅಪ್ಪ-ಅಮ್ಮನ ಮೇಲಿರುವ ಪ್ರೀತಿ ಡೋಂಗಿ ಅಂದವ್ರನ್ನ ಯಾಕೆ ಬಿಟ್ಟೆ: ಪ್ರತಾಪ್‌ಗೆ ವರ್ತೂರು ಸಂತೋಷ್ ಬುದ್ದಿವಾದ

Author Sowmya Bairappa | Published: Thursday, January 11, 2024, 12:41 PM [IST]

ದೊಡ್ಮನೆಯಲ್ಲಿ ನಮ್ರತಾಗೂ ವರ್ತೂರು ಸಂತೋಷ್ ಅವರಿಗೂ ಆಗಿ ಬರೋದಿಲ್ಲ. ಪ್ರತಾಪ್ ಮತ್ತು ನಮ್ರತಾ ನಡುವೆ ಮನಸ್ತಾಪ್ ಬಂದಿತ್ತು, ಅದು ಸರಿ ಹೋಹಿದೆ.ಆದರೆ, ನಮ್ರತಾಳಿಂದ ಇನ್‌ಫ್ಲುಯೆನ್ಸ್ ಆಗಬೇಡ ಅಂತ ಸಂತೋಷ್ ಅವರು ಪ್ರತಾಪ್‌ಗೆ ಬುದ್ದಿವಾದ ಹೇಳಿದ್ದಾರೆ.


cover image
ನಾನು ನಿನ್ನ ಪರ ಬಿಡಲಿಲ್ಲ

ಬೆಡ್‌ರೂಮ್‌ ಏರಿಯಾದಲ್ಲಿ ಮಾತನಾಡಿದ ಅವರು, ಕೆಲವೊಂದು ವಿಚಾರಗಳಲ್ಲಿ ನಮ್ರತಾ ಹೇಳಿದ ಮಾತನ್ನು ಯಾರೂ ಹೇಳಿಲ್ಲ. ಒಂದು ವೇದಿಕೆಯಲ್ಲಿ ನಮ್ರತಾ ನಿನ್ನ ತಂದೆ-ತಾಯಿ ಬಗ್ಗೆ ಕೇಳಿದ್ದಾಳೆ. ನಾವು ಈ ರೀತಿ ಮಾತನಾಡಿಲ್ಲ. ನಾವು ಈ ರರೀತಿ ಮಾತನಾಡಿಲ್ಲ. ಒಂದು ವೇದಿಕೆಯಲ್ಲಿ ಈ ರೀತಿ ಹೇಳಿದಾಗ ಅದು ಇಡೀ ಕರ್ನಾಟಕಕ್ಕೆ ಗೊತ್ತು. ವೇದಿಕೆ ಸೃಷ್ಟಿ ಮಾಡಿ ಅವಳು ಕೇಳಿದ್ದಾಳೆ. ಒಂದು ಪದ ಅಂತ ಬಂದಾಗ ಹೊರಗಡೆ ವಿಚಾರವನ್ನು ನಾವು ಮಾತನಾಡಿಲ್ಲ. ನೀನು ಈ ಹಿಂದೆ ಏನಾಗಿದ್ಯೋ ಏನೋ ಗೊತ್ತಿಲ್ಲ. ಇಲ್ಲಿ ನೀನು ಪಡುತ್ತಿರುವ ಕಷ್ಟಕ್ಕೆ ಪ್ರತಿಫಲ ಸಿಗಬೇಕು. ನಾನು ನಿನ್ನ ಜೊತೆ ಜೋರಾಗಿ ಮಾತನಾಡೋದು ತಪ್ಪಾಗ ಕಾಣಿಸಬಹುದು. ಇಂದು ನೀನು ನಮ್ರತಾ ಪಕ್ಕದಲ್ಲಿ ಹೋಗಿ ಕೂತ್ಕೂಂಡು ಮಾತನಾಡ್ತೀಯಾ. ಆದ್ರೆ, ನಾನು ಮಾತನಾಡೋಕೆ ಬರಲ್ಲ. ಹೊರಗಡೆಯೂ ಮೀಟ್ ಮಾಡೋದಿಲ್ಲ. ಎಲ್ಲರೂ ನೀನು ಮಾಡಿದ್ದು ತಪ್ಪು ಅಂದ್ರೂ ನಾನು ನಿನ್ನ ಪರ ಬಿಡಲಿಲ್ಲ. 

'ಅಪ್ಪ-ಅಮ್ಮನ ಮೇಲೆ ತೋರಿಸುವ ಪ್ರೀತಿ ಡೋಂಗಿ ಅಂದಿದ್ದಾರೆ'

ಬೇರೆಯವರ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದೀಯಾ. ಅಪ್ಪ-ಅಮ್ಮನ ಮೇಲೆ ತೋರಿಸುವ ಪ್ರೀತಿ ಡೋಂಗಿ ಅಂತ ಹೇಳಿದ್ದು ದೊಡ್ಡದಾಗಲಿಲ್ಲ. ಆದರೆ, ನಮ್ಮ ಮಾತು ನಿನಗೆ ಬೇಸರವಾಗಿ ಅದನ್ನೇ ಎಳೆದುಕೊಂಡು ಬರುತ್ತೀಯಾ. ನಿನಗೆ ಈ ಗೆಲುವು ತುಂಬಾ ಮುಖ್ಯ. ಅವರ ಬಳಿ ಇನ್‌ಫ್ಲುಯೆನ್ಸ್ ಆಗಬೇಡ. ಏನು ಮಾಡಿದ್ದಾರೆಂದು ಹಿಂದಿರುಗಿ ನೋಡು. ತುಕಾಲಿ ನನ್ನ ಫ್ರೆಂಡ್ ಎನ್ನೋದಿಲ್ಲ, ತನಿಷಾ ಕೂಡ ಅಷ್ಟೇ. ಕ್ಷಮೆ ಕೇಳಿದ್ದಕ್ಕೆ ಎಲ್ಲ ಸರಿಯಾಗುತ್ತೆ ಅಂದ್ರೆ ಕೋಟ್‌ ಯಾಕೆ ಬೇಕು? ಜೈಲು ಯಾಕೆ ಬೇಕು? ಎಂದರು. 

 

'ನಿನ್ನ ಮೇಲೆ ತುಂಬಾ ಸಲ ಪದಗಳ ಬಳಕೆಯಾಗಿದೆ'

ನನಗೆ ನಮ್ರತಾಗೆ ಒಮ್ಮೆ ಮನಸ್ತಾಪವಾಯ್ತು. ಅದು ಇವತ್ತಿನವರೆಗೂ ಮುಂದುವರೆದಿದೆ. ನನಗೆ ನೂರು ಸಲ ನಾಮಿನೇಟ್ ಮಾಡಲಿ, ಟಾಂಟ್ ಮಾಡಲಿ. ಆದರೆ, ನನಗೆ ಸಿಗುತ್ತಿರುವ ಮತಗಳ ಬಗ್ಗೆ ಇವರು ಯಾಕೆ ಮಾತನಾಡಿದ್ದಾರೆ? ಪದಗಳು ಬಳಕೆ ಮಾಡುವಾಗ ಯೋಚಿಸಬೇಕು. ಅದೇ ರೀತಿ ನಿನ್ನ ಮೇಲೆ ತುಂಬಾ ಸಲ ಪದಗಳ ಬಳಕೆಯಾಗಿದೆ ಎಂದರು. 

 

ಹೋದವರೆಲ್ಲಾ ನಮ್ಮ ಫ್ರೆಂಡ್ಸೇ

ಮನೆಯಲ್ಲಿ ಈಗ ನಾಲ್ಕು ತಂಡಗಳಿವೆ. ಸಂತು-ಪಂತು, ಸಂಗೀತಾ-ಪ್ರತಾಪ್, ತನಿಷಾ-ಕಾರ್ತಿಕ್, ನಾನು-ನೀವು. ಎಲ್ಲರೂ ಅವರವರ ಜೊತೆ ಚಿಲ್ ಮಾಡ್ತೀದ್ದೀವಿ ಅಂತ ನಮ್ರತಾ ಹೇಳಿದರು. ಆಗ ವಿನಯ್, ಎಲ್ಲಾ ನಮ್ ಫ್ರೆಂಡ್ಸೇ ಹೋಗಿರೋದು. ವಾಸ್ ಇಟ್ ಎ ಮಿಸ್ಟೇಕ್? ಅಂತ ಪ್ರಶ್ನಿಸಿದರು. ಅದಕ್ಕೆ ನಮ್ರತಾ, ನೋ...ಇಟ್ ಈಸ್ ನಾಟ್. ಎಲ್ಲಾ ಅವರವರ ಗೇಮ್ ಆಡಿದ್ದಾರೆ ಅನ್ಸತ್ತೆ. ಕಾರಣ ಏನು ಅಂತ ಗೊತ್ತಿಲ್ಲ ಎಂದರು. ಆಗ ವಿನಯ್, ಕೆಲವು ಬಾರಿ ಅವನು (ಡ್ರೋನ್ ಪ್ರತಾಪ್) ಹೇಳಿದ್ದು ನಿಜನಾ ಅಂತ ಅನಿಸಿಬಿಡುತ್ತೆ ಎಂದಿದ್ದಾರೆ.

 

ಪ್ರತಾಪ್ ಹೇಳಿದ್ದೇನು?

ವಾರಾಂತ್ಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿದ್ದರು. ಇಲ್ಲಿವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿದ್ದರೋ... ಎಲ್ಲಾ ಫ್ರೆಂಡ್ಸ್, ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಕೊಟ್ಟಿಲ್ಲ. ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ಇವರ ಬೆಡ್ ಸೇರಿಕೊಳ್ತು ಎಂದಿದ್ದರು. ಇದೀಗ ವಿನಯ್‌ಗೆ ಪ್ರತಾಪ್ ಹೇಳಿದ್ದು ಸತ್ಯ ಅಂತ ಅನಿಸೋಕೆ ಶುರುವಾಗಿದೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+