twitter
    X
    Home ಚಲನಚಿತ್ರಗಳ ಒಳನೋಟ

    ಆರಂಭದಲ್ಲಿ ಭರ್ಜರಿ ಯಶಸ್ಸು ಕಂಡು ನಂತರ ಮರೆಯಾದ 10 ಸ್ಯಾಂಡಲ್‌ವುಡ್‌ ನಟಿಯವರು!

    Author Sowmya Bairappa | Published: Friday, November 25, 2022, 06:07 PM [IST]

    ಸದ್ಯ ಕನ್ನಡದ ನಟಿಯರು ಬೇರೆ-ಬೇರೆ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಮೂಲದ ನಟಿಯರು ತೆಲುಗು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇನ್ನು ಕೆಲ ನಟಿಯರು ಆರಂಭದಲ್ಲಿ ಯಶಸ್ಸು ಸಾಧಿಸಿ, ನಂತರದ ದಿನಗಳಲ್ಲಿ ಮುಗ್ಗರಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಭರ್ಜರಿ ಆರಂಭ ಪಡೆದುಕೊಂಡು ಈಕೆ ಮುಂದೊಂದು ದಿನ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟಿಯರ ಪಟ್ಟಿ ಸೇರಬಹುದು ಎನ್ನುವಂತಹ ಅಭಿಪ್ರಾಯ ಮೂಡಿಸಿದ್ದ ಹಲವು ನಟಿಯರು ವಿವಿಧ ಕಾರಣಗಳಿಂದ ಆ ಘಟ್ಟ ತಲುಪುವಲ್ಲಿ ವಿಫಲರಾಗಿದ್ದಾರೆ. ಆರಂಭದಲ್ಲಿ ಯಶಸ್ಸು ಕಂಡು ನಂತರ ಮುಗ್ಗರಿಸಿದ ನಟಿಯರ ಪಟ್ಟಿ ಇಲ್ಲಿದೆ.

    cover image
    ದೀಪಾ ಸನ್ನಿಧಿ

    ದೀಪಾ ಸನ್ನಿಧಿ

    1

    ನಟಿ ದೀಪಾ ಸನ್ನಿಧಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಾರಥಿ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ನಂತರ ಅದೇ ವರ್ಷ ಪುನೀತ್ ರಾಜ್‌ಕುಮಾರ್ ಜೊತೆಗೆ ಪರಮಾತ್ಮ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಯಶ್, ಗಣೇಶ್ ರೀತಿಯ ಸ್ಟಾರ್ ನಟರ ಜೊತೆ ನಟಿಸಿದ ದೀಪಾ ಸನ್ನಿಧಿ ತಮಿಳಿನ ಎರಡು ಚಿತ್ರಗಳಲ್ಲಿಯೂ ಸಹ ನಟಿಸಿದರು. ನಂತರ ಚೌಕ ಹಾಗೂ ಚಕ್ರವರ್ತಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ ನಟಿ ದೀಪಾ ಸನ್ನಿಧಿ, ಸದ್ಯ ಯಾವುದೇ ಚಿತ್ರಕ್ಕಾಗಿಯೂ ಕೆಲಸ ನಿರ್ವಹಿಸುತ್ತಿಲ್ಲ. ಒಟ್ಟಿನಲ್ಲಿ ಸಾರಥಿ ಹಾಗೂ ಪರಮಾತ್ಮ ಸಮಯದಲ್ಲಿ ಈ ನಟಿ ಕುರಿತು ಹುಟ್ಟಿಕೊಂಡಿದ್ದ ನಿರೀಕ್ಷೆಗಳು ನಿಜವಾಗಲಿಲ್ಲ.

     

    ನಿಧಿ ಸುಬ್ಬಯ್ಯ

    ನಿಧಿ ಸುಬ್ಬಯ್ಯ

    2

    ನಟಿ ನಿಧಿ ಸುಬ್ಬಯ್ಯ ಕೂಡ ತಮ್ಮ ಆರಂಭದ ಚಿತ್ರಗಳಲ್ಲಿ ಉತ್ತಮ ನಟನೆಯ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದರು. ಜೊತೆಗೆ ಬೇಡಿಕೆ ಕೂಡ ಹೆಚ್ಚಿಸಿಕೊಂಡಿದ್ದರು. ಬಾಲಿವುಡ್ ಚಿತ್ರರಂಗದಲ್ಲೂ  ನಿಧಿ ಸುಬ್ಬಯ್ಯ ಕೆಲಸ ಮಾಡಿದ್ದರು. ಹೀಗೆ ಆರಂಭದ ದಿನಗಳಲ್ಲಿ ಒಂದೊಳ್ಳೆ ಯಶಸ್ಸನ್ನು ಸಾಧಿಸಿದ್ದ ನಟಿ ನಿಧಿ ಸುಬ್ಬಯ್ಯ ನಂತರ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದೇ ತೆರೆಮರೆಗೆ ಸರಿದರು.

     

    ಶರ್ಮಿಳಾ ಮಾಂಡ್ರೆ

    ಶರ್ಮಿಳಾ ಮಾಂಡ್ರೆ

    3

    ದೀಪಾ ಸನ್ನಿಧಿ ರೀತಿಯೇ ಕನ್ನಡದ ಸ್ಟಾರ್ ನಟಿಯರ ಪಟ್ಟಿ ಸೇರಲಿದ್ದಾರೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿ ವಿಫಲರಾದವರಲ್ಲಿ ಶರ್ಮಿಳಾ ಮಾಂಡ್ರೆ ಕೂಡ ಒಬ್ಬರು. ಆರಂಭದಲ್ಲಿ ಒಳ್ಳೆಯ ಹೈಪ್ ಪಡೆದುಕೊಂಡಿದ್ದ ಶರ್ಮಿಳಾ ಮಾಂಡ್ರೆ ನಂತರದಲ್ಲಿ ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಲಿಲ್ಲ. ತೆಲುಗು ಹಾಗೂ ತಮಿಳು ಚಿತ್ರರಂಕ್ಕೂ ಕಾಲಿಟ್ಟ ನಟಿ ಶರ್ಮಿಳಾ, ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಆಫರ್ ಪಡೆಯಲಿಲ್ಲ. ಆದರೆ,  2022ರಲ್ಲಿ ಗಾಳಿಪಟ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿರುವ ಅವರು, ಇನ್ನೆರಡು ಚಿತ್ರಳಿಗೆ ಸಹಿ ಹಾಕಿದ್ದಾರೆ.

    ಪಾರುಲ್ ಯಾದವ್

    ಪಾರುಲ್ ಯಾದವ್

    4

    ನಟಿ ಪಾರುಲ್ ಯಾದವ್ ಕನ್ನಡದ ಗೋವಿಂದಾಯ ನಮಃ ಚಿತ್ರದ ಮೂಲಕ ಬಿಗ್ ಬ್ರೇಕ್ ಪಡೆದರು.ನಂತರ ಸುದೀಪ್ ಅಭಿನಯದ ಬಚ್ಚನ್, ಉಪೇಂದ್ರ ಅಭಿನಯದ ಉಪ್ಪಿ 2 ಹಾಗೂ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರಗಳಲ್ಲಿ ನಟಿಸಿದರು. ನಂತರ ಪಾರುಲ್ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸದ್ಯ ಪಾರುಲ್ ಯಾವ ಚಿತ್ರವನ್ನು ಮಾಡುತ್ತಿಲ್ಲ. 

    ಡೈಸಿ ಬೋಪಣ್ಣ

    ಡೈಸಿ ಬೋಪಣ್ಣ

    5

    ನಟಿ ಡೈಸಿ ಬೋಪಣ್ಣ ರಾಮ ಶಾಮ ಭಾಮ ಹಾಗೂ ಗಾಳಿಪಟ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು. ನಂತರದ ದಿನಗಳಲ್ಲಿ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ತೀರಾ ಕಡಿಮೆ. ಹೀಗೆ ತೆರೆಮರೆಗೆ ಸರಿದ ಕೊಡಗಿನ ಚೆಲುವೆ ಕೈಯಲ್ಲಿ ಸದ್ಯ ಯಾವುದೇ ಚಿತ್ರಗಳಿಲ್ಲ.

    ಪೂಜಾ ಗಾಂಧಿ

    ಪೂಜಾ ಗಾಂಧಿ

    6

    ಮುಂಗಾರು ಮಳೆ ರೀತಿಯ ಇಂಡಸ್ಟ್ರಿ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಪೂಜಾ ಗಾಂಧಿ ನಂತರ ಮಿಲನ, ಕೃಷ್ಣ ಹಾಗೂ ತಾಜ್‌ ಮಹಲ್ ರೀತಿಯ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಆದರೆ, ಈ ಸ್ಟಾರ್‌ಡಂ ಹೆಚ್ಚು ದಿನ ಉಳಿಯಲಿಲ್ಲ. ಪೂಜಾ ಗಾಂಧಿ ನಟಿಸಿದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದವು. ಬಳಿಕ ನಿಜ ಜೀವನದ ಕತೆ ಆಧಾರಿತ ದಂಡುಪಾಳ್ಯ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಹಿಟ್ ಆಯಿತು. ದಂಡುಪಾಳ್ಯ ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಪೂಜಾಗಾಂಧಿ ಸದ್ಯ ಯಾವ ಚಿತ್ರಗಳಲ್ಲು ನಟಿಸುತ್ತಿಲ್ಲ. 

    ಶ್ರುತಿ ಹರಿಹರನ್

    ಶ್ರುತಿ ಹರಿಹರನ್

    7

    ನಟಿ ಶೃತಿ ಹರಿಹರನ್ ತಮ್ಮ ಲುಕ್ ಮಾತ್ರವಲ್ಲದೇ, ಅದ್ಭುತ ನಟನೆಯಿಂದ ಕನ್ನಡ ಸಿನಿರಸಿಕರ ಮನ ಗೆದ್ದಿದ್ದರು. ಬಹುಬೇಗನೆ ಫೇಮ್ ಪಡೆದುಕೊಂಡ ಈ ನಟಿ ಮೀಟು ವಿವಾದಗಳ ಕಾರಣದಿಂದಾಗಿ ಅಷ್ಟೇ ವೇಗವಾಗಿ ಫೇಮ್ ಕಳೆದುಕೊಂಡರು. ಇನ್ನು ಹೆಚ್ಚು ಆಫರ್ ಇಲ್ಲದ ಶೃತಿ ಹರಿಹರನ್ ಈಗ ಹೆಡ್ ಬುಷ್ ಮೂಲಕ ಮರಳಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಮೊದಲಿದ್ದ ಕ್ರೇಜ್ ಈಗಿಲ್ಲ.

    ಐಂದ್ರಿತಾ ರೇ

    ಐಂದ್ರಿತಾ ರೇ

    8

    2007ರಲ್ಲಿ ಮೆರವಣಿಗೆ ಸಿನಿಮಾದ ಮೂಲಕ ನಟಿ ಐಂದ್ರಿತಾ ರೇ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾ ಹಿಟ್ ಆಗಿದದ್ದು, ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡರು.  ನಂತರ ವೀರ ಪರಂಪರೆ, ಮನಸಾರೆ, ಪಾರಿಜಾತ, ಮನಸಾರೆ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದಾದ ಬಳಿಕ ಐಂದ್ರಿತಾ ರೇ ಅಭಿನಯದ ಕೆಲ ಸಿನಿಮಾಗಳು ಮುಗ್ಗರಿಸಿದವು. ಸದ್ಯ  ಐಂದ್ರಿತಾ ರೇ ಅಭಿನಯದ ಯಾವ ಸಿನಿಮಾಗಳು ತೆರೆಗೆ ಬಂದಿಲ್ಲ. 

    ರಾಗಿಣಿ ದ್ವಿವೇದಿ

    ರಾಗಿಣಿ ದ್ವಿವೇದಿ

    9

    ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಾಗಿಣಿ, ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಲು ಅವಕಾಶ ಪಡೆದರು. ವೀರ ಮದಕರಿ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ನಂತರ ಕೆಂಪೇಗೌಡ, ಕಳ್ಳ ಮಳ್ಳ ಸುಳ್ಳ ಸಿನಿಮಾಗಳಲ್ಲಿ ನಟಿಸಿದರು. ಇವರು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ 'ಮುಂದಿನ ಮಾಲಾಶ್ರೀ' ಎಂದು ಪರಿಗಣಿಸಲ್ಪಟ್ಟರು. ಆದರೆ, ನಂತರದ ದಿನಗಳಲ್ಲಿ ಬಂದ ರಾಗಿಣಿ ಸಿನಿಮಾಗಳು ಅಷ್ಟು ಸದ್ದು ಮಾಡಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ರಾಗಿಣಿ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸದ್ಯ ಪ್ರಕರಣದಿಂದ ಹೊರಬಂದಿರುವ ಅವರು, ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

    ಐಶಾನಿ ಶೆಟ್ಟಿ

    ಐಶಾನಿ ಶೆಟ್ಟಿ

    10

    ನಟಿ ಐಶಾನಿ ಶೆಟ್ಟಿ ಯೋಗರಾಜ್ ಭಟ್ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ವಾಸ್ತು ಪ್ರಕಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುಸಿಕೊಂಡರು. ಆದರೆ, ನಂತರದ ದಿನಗಳಲ್ಲಿ ಅವರು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X