X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್: ಸ್ವರ್ಗ-ನರಕ ಸೇರಿದವರ್ಯಾರು ಗೊತ್ತಾ?

Author Sowmya Bairappa | Updated: Monday, September 30, 2024, 10:46 AM [IST]

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ಶನಿವಾರ ನಡೆದ ರಾಜಾ-ರಾಣಿ ರೀಲೋಡೆಡ್ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ವರು ಸ್ಫರ್ಧಿಗಳನ್ನು ರಿವೀಲ್ ಮಾಡಲಾಗಿತ್ತು. ಇನ್ನುಳಿದವರ ಹೆಸರನ್ನು ಇಂದಿನ ಸಂಚಿಕೆಯಲ್ಲಿ ರಿವೀಲ್ ಮಾಡಲಾಗಿದ್ದು, ಬಿಗ್‌ಬಾಸ್‌ ಮನೆಯನ್ನು ಸ್ವರ್ಗ-ನರಕ ಅಂತ ಎರಡು ಮನೆಗಳನ್ನು ಮಾಡಲಾಗಿದೆ. ಹೀಗಾಗಿ ಸೀಸನ್ 11ರ ಮೇಲಿನ ಕುತೂಹಲಗಳು ಹೆಚ್ಚಾಗಿವೆ. ಇಲ್ಲಿ ದೊಡ್ಮನೆಗೆ ಎಂಟ್ರಿಕೊಟ್ಟ ಎಲ್ಲಾ ಸ್ಪರ್ಧಿಗಳ ವಿವರ ಇಲ್ಲಿದೆ.


cover image
ಭವ್ಯಾ ಗೌಡ

ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ಸ್ವರ್ಗಕ್ಕೆ ಎಂಟ್ರಿಕೊಟ್ಟಿದ್ದಾರೆ. 2020ರಲ್ಲಿ ಗೀತಾ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟ ಈ ನಟಿ, ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟಿದ್ದರು.

ಯಮುನಾ ಶ್ರೀನಿಧಿ

ಎರಡನೇ ಸ್ಪರ್ಧಿಯಾಗಿ ನಟಿ ಯಮುನಾ ಶ್ರೀನಿಧಿ ಬಿಗ್‌ಬಾಸ್‌ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದು, ಇವರನ್ನು ಕೂಡ ಸ್ವರ್ಗಕ್ಕೆ ಕಳುಹಿಸಲಾಗಿದೆ. 2013ರಲ್ಲಿ ಪ್ರಸಾರವಾದ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಯುಮನಾ ಶ್ರೀನಿಧಿ ನಟನಾ ವೃತ್ತಿಗೆ ಕಾಲಿಟ್ಟರು. ಮುಂದೆ ಅಮೃತವರ್ಷಿಣಿ, ಕಮಲಿ, ಕನ್ಯಾಕುಮಾರಿ, ಮನಸಾರೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.  ಧಾರಾವಾಹಿ ಮಾತ್ರವಲ್ಲದೇ ಶಿವಲಿಂಗ, ಜಾಗ್ವಾರ್, ಯುವರತ್ನ, ರಾಧಾ ರಮಣ, ಲವ್ 360, ವೆಡ್ಡಿಂಗ್ ಗಿಫ್ಟ್ ಸೇರಿದಂತೆ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಧನರಾಜ್ ಆಚಾರ್

ತಮ್ಮ ಕಾಮಿಡಿ ವಿಡಿಯೋಗಳಿಂದ ಕರ್ನಾಟಕದ ಮನೆ ಮಾತಾಗಿರುವ ಧನರಾಜ್ ಆಚಾರ್ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಕೂಡ ಸ್ವರ್ಗಕ್ಕೆ ಕಳುಹಿಸಲಾಗಿದೆ. ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರತಿಭಾವಂತರಾಗಿದ್ದ ಧನರಾಜ್ ಅವರ ಅಭಿನಯ ಮಾಡಬೇಕು ಎನ್ನುವ ಹುಚ್ಚು ಬಯಕೆಗೆ ಉತ್ತಮ ಸಾಧನವಾಗಿದ್ದು ಟಿಕ್‌ಟಾಕ್. ಹೀಗೆ ವೀಡಿಯೋಗಳನ್ನು ಮಾಡುತ್ತಾ ಜನರ ಮನ ಗೆದ್ದ ಇವರು, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆ ಪ್ರವೇಶಿಸಿದರು ಆನಂತರ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಗೌತಮಿ ಜಾದವ್

ನಾಲ್ಕನೇ ಸ್ಪರ್ಧಿಯಾಗಿ ಗೌತಮಿ ಜಾದವ್ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.15 ನಿಮಿಷಗಳ ಕಾಲಾವಕಾಶದಲ್ಲಿ ವೀಕ್ಷಕರಿಂದ 1 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದ ಗೌತಮಿ ಸೀದಾ ಸ್ವರ್ಗಕ್ಕೆ ತೆರೆಳಿದ್ದಾರೆ. ಗೌತಮಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ 'ಸತ್ಯ' ಸೀರಿಯಲ್‌ನಲ್ಲಿ  ಟಾಮ್ ಬಾಯ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದರು. ಇದೀಗ ಬಿಗ್‌ಬಾಸ್‌ ಮನೆಯಲ್ಲಿಯೂ ಆ ಖದರ್ ಮತ್ತು ಪವರ್ ಪ್ರದರ್ಶನವನ್ನು ಮಾಡ್ತಾರಾ, ಟಾಸ್ಕ್‌ಗಳಲ್ಲಿ ಎದುರಾಳಿಗಳಿಗೆ ಸವಾಲು ಎಸೆಯುತ್ತಾರಾ ಅನ್ನುವ ಪ್ರಶ್ನೆ ಕೂಡ ಈಗ ಬಿಗ್ ಬಾಸ್ ಪ್ರೇಮಿಗಳನ್ನು ಕಾಡುತ್ತಿದೆ.


ಅನುಷಾ ರೈ

ಐದನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಪ್ರವೇಶ ಮಾಡಿದ ಸ್ಯಾಂಡಲ್‌ವುಡ್ ನಟಿ ಅನುಷಾ ರೈ ನರಕಕ್ಕೆ ತೆರಳಿದ್ದಾರೆ. ಅನುಷಾ ಅವರು ಕಿಚ್ಚನ ಮುಂದೆ ಸ್ವರ್ಗಕ್ಕೆ ಹೋಗುವ ಆಸೆಯಿದೆ ಎಂದಿಕದ್ದರು. ಆದರೆ, ಯುಮನಾ ಶ್ರೀನಿಧಿ ಮತ್ತು ಭವ್ಯಾ ಗೌಡ ಅವರನ್ನು ನರಕಕ್ಕೆ ಕಳುಹಿಸಿದ್ದಾರೆ. 2017ರಲ್ಲಿ ತೆರೆಕಂಡ `ಮಹಾನುಭಾವರು' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ,  ಅಬ್ಬಬ್ಬ  ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಧರ್ಮ ಕೀರ್ತಿರಾಜ್

6ನೇ ಸ್ಪರ್ಧಿಯಾಗಿ ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್  ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಯುಮನಾ ಶ್ರೀನಿಧಿ ಮತ್ತು ಭವ್ಯಾ ಗೌಡ ಇವರನ್ನು ಸ್ವರ್ಗಕ್ಕೆ ಕಳುಹಿಸಿದರು. ನವಗ್ರಹ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ ಇವರು, ನಂತರ 2009 ತೆರೆಕಂಡ `ಒಲವೇ ವಿಸ್ಮಯ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾದರು. ಬಳಿಕ ಹಣೆಬರಹ, ಮುಮ್ತಾಜ್, ಬಿಂದಾಸ್ ಗೂಗ್ಲಿ, ಓ ಮನಸೇ, ಖಡಕ್, ರೋನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ವಕೀಲ ಜಗದೀಶ್

ಇತ್ತೀಚೆಗೆ ವಿವಾದಾತ್ಮಕ ಆರೋಪಗಳಿಂದ ಭಾರೀ ಸದ್ದು ಮಾಡಿದ್ದ ವಕೀಲ ಜಗದೀಶ್ ದೊಡ್ಮನೆಯ  7ನೇ ಸ್ಪರ್ಧಿ. 15 ನಿಮಿಷಗಳ ಕಾಲ ನಡೆದ ವೋಟಿಂಗ್‌ನಲ್ಲಿ ವೀಕ್ಷಕರಿಂದ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದು ಸ್ವರ್ಗಕ್ಕೆ ತೆರಳಿದ್ದಾರೆ. ಜಗದೀಶ್‌ಗೆ ನರಕಕ್ಕೆ ಹೋಗಬೇಕೆಂಬ ಆಸೆಯಿತ್ತು. ಅಂದ್ಹಾಗೆ ಜಗದೀಶ್ ಇತ್ತೀಚೆಗೆ ನಟ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿ ಮಾಡಿದ್ದರು. ಶಾಸಕರಾದ ಮುನಿರತ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು.

ಶಶಿರ್ ಶಾಸ್ತ್ರಿ

ಕಳೆದ  13 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಶಶಿರ್ ಶಾಸ್ತ್ರಿ ದೊಡ್ಮನೆಗೆ ೮ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಯುಮನಾ ಶ್ರೀನಿಧಿ ಮತ್ತು ಭವ್ಯಾ ಗೌಡ ನರಕ್ಕೆ ಕಳುಹಿಸಿದರು. 2012ರಲ್ಲಿ ಸೊಸೆ ತಂಡ ಸೌಭಾಗ್ಯ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು, ನಂತರ ಪುಟ್ಟಗೌರಿ ಮದುವೆ, ಭಾರತಿ ಮತ್ತು ಕುಲವಧು ಧಾರಾವಾಹಿಗಳಲ್ಲಿ ನಟಿಸಿದರು. ಕುಲವಧು ಧಾರಾವಾಹಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಶಿಶಿರ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 

ತ್ರಿವಿಕ್ರಮ್

ಕಳೆದ ಆರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ತ್ರಿವಿಕ್ರಮ್ 9ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದು, ಇವರು ಸ್ವರ್ಗಕ್ಕೆ ತೆರೆಳಿದ್ದಾರೆ. ಮೊದಲು ಕ್ರಿಕೆಟ್ ಆಟಗಾರರಾಗಿದ್ದ ತ್ರಿವಿಕ್ರಮ್ , ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಇಲ್ಲಿ ಕೆಲ ನಿರ್ದೇಶಕರ ಪರಿಚಯವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಮೊದಲು ಒಂದೆರಡು ಸಿನಿಮಗಳಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದ ಇವರು, ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು.

ಹಂಸ ಪ್ರತಾಪ್

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ 'ರಾಜಿ' ಪಾತ್ರದ ಜನಪ್ರಿಯತೆ ಗಳಿಸಿರುವ ಹಂಸ ಪ್ರತಾಪ್ 10ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಲಾಯರ್ ಜಗದೀಶ್ ಮತ್ತು ಗೌತಮಿ ಸ್ವರ್ಗಕ್ಕೆ ಕಳುಹಿಸಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ಫೋಷಕ ಪಾತ್ರದಲ್ಲಿ ಮಿಂಚಿರುವ ಇವರು, ಧ್ರುವ, ಅಮ್ಮ, ರಾಜಾಹುಲಿ, ಭಾನು ವೆಡ್ಸ್ ಭೂಮಿ, ಜೇಮ್ಸ್, ಸೈಕಿಕ್, ಸಖತ್, ಉಂಡೆನಾಮ ಮುಂತಾದ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ತುಕಾಲಿ ಮಾನಸ

ಗಿಚ್ಚಿ ಗಿಲಿಗಿಲಿ ಸೀಸನ್ 3 ರನ್ನರ್ ಅಪ್ ಹಾಗೂ ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಪತ್ನಿ ತುಕಾಲಿ ಮಾನಸ 11ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ನರಕಕ್ಕೆ ಕಳುಹಿಸಲಾಗಿದೆ. ಮಾನಸ ಬಿಗ್‌ಬಾಸ್‌ ಸೀಸನ್ 10ರ ಫ್ಯಾಮಿಲಿ ರೌಂಡ್‌ನಲ್ಲಿ ಕಾಣಿಸಿಕೊಂಡಿದ್ದ ಮಾನಸ, ಎಲ್ಲರ ಮನಗೆದ್ದಿದ್ದರು. ಇದಾದ ಬಳಿಕಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಭಾಗವಹಿಸಿ ರನ್ನರ್ ಆಗಿದ್ದರು. 

ರಂಜಿತ್ ಕುಮಾರ್

17ನೇ ಸ್ಪರ್ಧಿಯಾಗಿ ಶನಿ ಧಾರಾವಾಹಿಯಲ್ಲಿ ಸೂರ್ಯದೇವ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ರಂಜಿತ್ ಕುಮಾರ್ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ನರಕಕ್ಕೆ ಕಳುಹಿಸಲಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ಆಪ್ತತೆ ಹೊಂದಿರುವ ಇವರು, ಕೆಸಿಸಿಯಲ್ಲಿ ಸುದೀಪ್ ತಂಡದ ಜೊತೆಯೇ ಇದ್ದರು. ಜೊತೆಗೆ ಭರಾಟೆ, ಸಿಂಗಂ, ರಾಮಧೂತ, ಜೇಮ್ಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಗೋಲ್ಡ್ ಸುರೇಶ್

12ನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಗೋಲ್ಡ್ ಸುರೇಶ್ ಅವರನ್ನು ನರಕಕ್ಕೆ ಕಳುಹಿಸಲಾಗಿದೆ. ಬೆಳಗಾವಿಯ ಅಥಣಿ ತಾಲೂಕಿನವರಾದ ಸುರೇಶ್‌ಗೆ ಕುತ್ತಿಗೆಯಲ್ಲಿ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಉಂಗುರಗಳು ಹೀಗೆ ಚಿನ್ನ ಅಂದ್ರೆ ಬಹಳ ಅಚ್ಚುಮೆಚ್ಚು. ಸದಾ ಮೈಮೇಲೆ ಚಿನ್ನ ಹಾಕಿಕೊಂಡು ಓಡಾಡುತ್ತಾರೆ. ಅದೇ ಕಾರಣಕ್ಕೆ ಜನರು ಅವರನ್ನು ಗೋಲ್ಡ್ ಸುರೇಶ್ ಎಂದೇ ಕೆಲವರು ಕರೆಯುತ್ತಾರೆ. ಅದೇ ಹೆಸರಿನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಐಶ್ವರ್ಯ ಸಿಂಧೋಗಿ

13ನೇ ಸ್ಪರ್ಧಿಯಾಗಿ ನಟಿ ಐಶ್ವರ್ಯ ಸಿಂಧೋಗಿಗೆ ಕೂಡ ದೊಡ್ಮನೆಗೆ ಎಂಟ್ರಿಕೊಟ್ಟಿದ್ದು, ಸ್ವರ್ಗಕ್ಕೆ ತೆರಳಿದ್ದಾರೆ. ಇವರು ಕಿರುತೆರೆಯಲ್ಲಿ ನಾಗಿಣಿ-2, ತನಿಷಾ, ಮಂಗಳ ಗೌರಿ ಮದುವೆ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ಐಶ್ವರ್ಯ ಸಿಂಧೋಗಿ ಅವರು ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

ಮೋಕ್ಷಿತಾ ಪೈ

16ನೇ ಸ್ಪರ್ಧಿಯಾಗಿ ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ ದೊಡ್ಮನೆ ಪ್ರವೇಶಿಸಿದ್ದು, ಅವರನ್ನು ಸ್ವರ್ಗಕ್ಕೆ ಕಳುಹಿಸಲಾಗಿದೆ. ನಟನೆಗೆ ಪಾದರ್ಪಣೆ ಮಾಡುವ ಮುನ್ನ ಮೋಕ್ಷಿತಾ ಪೈ ಒಂದನೆ ತರಗತಿಯಿಂದ ಪಿಯುಸಿವರೆಗಿನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಮೋಕ್ಷಿತಾ ಪೈ ಧಾರಾವಾಹಿ ಆಯ್ಕೆಯಾಗಿದ್ದು ಫೇಸ್‌ಬುಕ್ ಮೂಲಕ. ಇವೆರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸೀರಿಯಲ್‌ಗಳನ್ನು ನಟಿಸಿದ್ದಾರೆ.

 ಚೈತ್ರಾ ಕುಂದಾಪುರ

14ನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಚೈತ್ರಾ ಕುಂದಾಪುರ ಕೂಡ ಎಂಟ್ರಿಕೊಟ್ಟಿದ್ದಾರೆ. 15 ನಿಮಿಷಗಳ ಕಾಲಾವಕಾಶದಲ್ಲಿ ವೀಕ್ಷಕರಿಂದ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದ ಇವರು, ನರಕಕ್ಕೆ ತೆರಳಿದ್ದಾರೆ. ರಾಜಾ-ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಆದ ನಾಲ್ಕು ಸ್ಪರ್ಧಿಗಳ ಪೈಕಿ ಅತಿಹೆಚ್ಚು ವೋಟ್ಸ್ ಪಡೆದವರು ಚೈತ್ರಾ. ಫೈರ್ ಬ್ರ್ಯಾಂಡ್ ಭಾಷಣಗಾರ್ತಿಯಾಗಿರುವ ಇವರು, ಕಾಲೇಜು ದಿನಗಳಿಂದ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಕೂಡ. ಉಡುಪಿಯ ಅಜ್ಜರ ಕಾಡಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಗಮನ ಸೆಳೆದಿರುವ ಇವರಿಗೆ, ಯುವ ಮಾಧ್ಯಮ ರತ್ನ ಪ್ರಶಸ್ತಿ ಸಿಕ್ಕಿದೆ. ಇವರು ಲೇಖಕಿ ಕೂಡ ಆಗಿದ್ದು, ಪ್ರೇಮ ಪಾಶ ಎಂಬ ಪುಸ್ತಕ ಬರೆದಿದ್ದಾರೆ.


ಉಗ್ರಂ ಮಂಜು

15ನೇ ಸ್ಪರ್ಧಿಯಾಗಿ  ಉಗ್ರಂ ಮಂಜು ಕೂಡ ದೊಡ್ಮನೆಗೆ ಎಂಟ್ರಿಕೊಟ್ಟಿದ್ದು, ಸ್ವರ್ಗಕ್ಕೆ ತೆರಳಿದ್ದಾರೆ. ತಮ್ಮ ಖಡಕ್ ನೋಟ ಮತ್ತು ಮಾತಿನಿಂದಲೇ ಗಮನ ಸೆಳೆಯುವ ಇವರು, 2014ರಲ್ಲಿ ತೆರೆಕಂಡ ಶ್ರೀಮುರಳಿ ನಟನೆಯ `ಉಗ್ರಂ' ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದರು. ಆನಂತರ ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ದೂರದರ್ಶನ, ಬುದ್ಧಿವಂತ 2, ರಾನಿ, ಮ್ಯಾಕ್ಸ್ ಸೇರಿದಂತೆ ಸಾಕಷ್ಟು  ಸಿನಿಮಾಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+