ಬಿಗ್ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಸೃಷ್ಟಿಸಿದ ಹಂಗಾಮಕ್ಕೆ ಹಲವರು ಕಣ್ಣೀರು ಹಾಕಿದ್ದರು. ಮೊದಲು ನರಕವಾಸಿಗಳಿಗೆ ಬಿಸಿನೀರು, ಮೊಟ್ಟೆ ಸಪ್ಲೈ ಮಾಡಿ ಅವರ ವಿಶ್ವಾಸ ಗಳಿಸಿದ್ದ ಜಗದೀಶ್, ದೊಡ್ಮನೆ ನಿಯಮಗಳನ್ನು ಗಾಳಿಗೆ ತೂರಿದ್ದರು. ಆನಂತರ ನರಕವಾಸಿಗಳ ಜೊತೆಗೆ ಕಿತ್ತಾಡಿಕೊಂಡಿದ್ದರು. ನಿಮಗೆಲ್ಲಾ ನಿಯತ್ತಿಲ್ಲ ಅಂತ ಗುಡುಗಿದ್ದರು. ಜೊತೆಗೆ ನಾನು ಬಿಗ್ಬಾಸ್ನ ಎಕ್ಸ್ಪೋಸ್ ಮಾಡ್ತೀನಿ, ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟದಲ್ಲಿ ಬಿಗ್ಬಾಸ್ ಓಡುಸ್ತೀರಾ ಎಂದು ಸವಾಲು ಹಾಕಿದ್ದರು. ಆದರೆ, ಕಳೆದ ಸಂಚಿಕೆಯಲ್ಲಿ ಉಲ್ಟಾ ಹೊಡೆದಿದ್ದಾರೆ. ಇಲ್ಲಿ ಗುರುವಾರದ ಸಂಚಿಕೆಯಲ್ಲಿ ಏನೇನ್ ಆಯ್ತು ಎಂಬ ಮಾಹಿತಿ ನೀಡಲಾಗಿದೆ.