X
ಹೋಮ್ ಚಲನಚಿತ್ರಗಳ ಒಳನೋಟ

ನಾನು ಸಿಎಂ ಕ್ಯಾಂಡಿಡೇಟ್, ನನಗೆ ಬಿಗ್‌ಬಾಸ್ ಪರ್ಚೇಸ್ ಮಾಡುವ ಕೆಪಾಸಿಟಿಯಿದೆ: ಲಾಯರ್ ಜಗದೀಶ್

Author Sowmya Bairappa | Published: Friday, October 4, 2024, 11:10 AM [IST]

ಬಿಗ್‌ಬಾಸ್‌ ಮನೆಯಲ್ಲಿ ಲಾಯರ್ ಜಗದೀಶ್ ಸೃಷ್ಟಿಸಿದ ಹಂಗಾಮಕ್ಕೆ ಹಲವರು ಕಣ್ಣೀರು ಹಾಕಿದ್ದರು. ಮೊದಲು ನರಕವಾಸಿಗಳಿಗೆ ಬಿಸಿನೀರು, ಮೊಟ್ಟೆ ಸಪ್ಲೈ ಮಾಡಿ ಅವರ ವಿಶ್ವಾಸ ಗಳಿಸಿದ್ದ ಜಗದೀಶ್, ದೊಡ್ಮನೆ ನಿಯಮಗಳನ್ನು ಗಾಳಿಗೆ ತೂರಿದ್ದರು. ಆನಂತರ ನರಕವಾಸಿಗಳ ಜೊತೆಗೆ ಕಿತ್ತಾಡಿಕೊಂಡಿದ್ದರು. ನಿಮಗೆಲ್ಲಾ ನಿಯತ್ತಿಲ್ಲ ಅಂತ ಗುಡುಗಿದ್ದರು. ಜೊತೆಗೆ ನಾನು ಬಿಗ್‌ಬಾಸ್‌ನ ಎಕ್ಸ್‌ಪೋಸ್ ಮಾಡ್ತೀನಿ, ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟದಲ್ಲಿ ಬಿಗ್‌ಬಾಸ್ ಓಡುಸ್ತೀರಾ ಎಂದು ಸವಾಲು ಹಾಕಿದ್ದರು. ಆದರೆ, ಕಳೆದ ಸಂಚಿಕೆಯಲ್ಲಿ ಉಲ್ಟಾ ಹೊಡೆದಿದ್ದಾರೆ. ಇಲ್ಲಿ ಗುರುವಾರದ ಸಂಚಿಕೆಯಲ್ಲಿ ಏನೇನ್ ಆಯ್ತು ಎಂಬ ಮಾಹಿತಿ ನೀಡಲಾಗಿದೆ.


cover image
ನಾನು ತೋಳ ಅಲ್ಲ, ಕಾಡಿನ ರಾಜ

ಮೊನ್ನೆ ಬಿಗ್‌ಬಾಸ್‌ ಮನೆಯಿಂದ ಹೊರಹೋಗ್ತೀನಿ ಎಂದಿದ್ದ ಜಗದೀಶ್, ನಿನ್ನೆ ಬಿಗ್‌ಬಾಸ್ ಹೋಗಿ ಅಂತ ಹೇಳುವವರೆಗೂ ಇಲ್ಲೇ ಇರ್ತೀನಿ. ಇವರುಗಳ ನಿಜವಾದ ಮುಖ ನಾನೇ ತೋರಿಸ್ತೀನಿ. ಸಾವಿರಾರು ಕೋಟಿ ನೋಡಿದ್ದೇನೆ ನಾನು. ನನ್ನ ಕೂದಲು ಎಷ್ಟಿದ್ದಿಯೋ ಅಷ್ಟು ಬಿಲಿಯನ್ಸ್ ನೋಡಿಬಿಟ್ಟಿದ್ದೀನಿ. ಐ ಆಮ್ ನಾಟ್ ಎ ಬ್ಲೂ ಬಾಯ್. ಕಂಡವರ ಹೆಣ್ಮಕ್ಕಳನ್ನ, ಕಂಡವರ ಮಂಚವನ್ನ, ಕಂಡವರ ದುಡ್ಡನ್ನ, ಕಂಡವರ ಅಧಿಕಾರವನ್ನ, ಆಸ್ತಿಯನ್ನು ಯಾವತ್ತೂ ಮುಟ್ಟಲ್ಲ. ಮುಟ್ಟಿದವರನ್ನು ಬಿಟ್ಟಿಲ್ಲ. ಮೀಸೆ ತಿರುವಿದವನು ಯಾವನೇ ಆಗಿರಬಹುದು. ಇದುವರೆಗೂ ಬಿಟ್ಟಿಲ್ಲ, ಬಿಡೋದು ಇಲ್ಲ. ಸಿಂಹ ಯಾವತ್ತಿದ್ದರೂ ಒಂದೇ. ತೋಳ ಯಾವತ್ತೂ ಗುಂಪಲ್ಲಿರೋದು. ನಾನು ತೋಳ ಅಲ್ಲ, ಕಾಡಿನ ರಾಜ ಎಂದರು.

ಇವತ್ತಲ್ಲಾ ನಾಳೆ ನಾನು ಸಿಎಂ ಕ್ಯಾಂಡಿಡೇಟ್

ನಮ್ಮನೆಯ ನಾಯಿಗೆ ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡ್ತೀನಿ. ಆದರೆ, ನಾನ್ಯಾವತ್ತೂ ಹೇಳಿಲ್ಲ. ನನ್ನ ಶ್ರೀಮಂತಿಕೆಯನ್ನು ತೋರಿಸಿಕೊಂಡಿಲ್ಲ. ನನ್ನ ಇಂಪೋರ್ಟೆಡ್ ಕಾರು ತೋರಿಸಿಲ್ಲ. ಎಲ್ಲರಲ್ಲಿ ಒಬ್ಬನಾಗಲು ಪ್ರಯತ್ನಿಸಿದೆ. ಆದರೆ, ಅವರು ಕೊಟ್ಟ ಬಹುಮಾನವೇನು 'ಹೋಗೋಲೇ'... ಇವತ್ತಲ್ಲಾ ನಾಳೆ ನಾನು ಸಿಎಂ ಕ್ಯಾಂಡಿಡೇಟ್. ನಮ್ಮನ್ನ ಆಗೋಗೆ ಯಾರು ತಡೆಯೋಕಾಗುತ್ತೆ? ಆಗೇ ಆಗ್ತೀವಿ. ನಾನು ಬಿಗ್‌ಬಾಸ್ ಪರ್ಚೇಸ್ ಮಾಡಬಹುದು. ಎಷ್ಟು 100 ಕೋಟಿನಾ? ಕೊಟ್ಟುಬಿಟ್ಟು ಕೊಂಡುಕೊಳ್ಳಬಹುದು. ನನಗೆ ಆ ಕೆಪಾಸಿಟಿ ಇದೆ. ನಾನು ಒಬ್ಬರಿಗೆ ಕಾಲ್ ಮಾಡಿದ್ರೆ ಬಿಗ್‌ಬಾಸ್‌ಗೆ 200 ಕೋಟಿ ತಂದುಕೊಡ್ತಾರೆ ಅಂತೆಲ್ಲಾ ಡೈಲಾಗ್ ಹೊಡೆದರು.

ಧನರಾಜ್‌ಗೆ ಕ್ಷಮೆ

ಬುಧವಾರ ಹೈಡ್ರಾಮಾ ಮಾಡಿದ್ದ ಲಾಯರ್ ಜಗದೀಶ್ ಬೆಳಗ್ಗೆ ಏಳುತ್ತಿದ್ದಂತೆಯೇ ಧನರಾಜ್‌ಗೆ ಸಾರಿ ಕೇಳಿದ್ದಾರೆ. ಅದು ಆಟದ ಭಾಗವಾಗಿತ್ತು. ಅಲ್ಲಿ ಮಾಡಿದ್ದು ಬರೀ ಆಟ ಅಷ್ಟೇ. ನೀನು ಫಿಸಿಕಲಿ ಚಿಕ್ಕದಾಗಿದ್ದರೂ, ಮೆಂಟಲಿ ಸ್ಟ್ರಾಂಗ್ ಅಂತ ತೋರಿಸಿದ್ದೀನಿ. ನೀನು ಯಾರನ್ನ ಬೇಕಾದ್ರೂ ಎದುರಿಸಬಹುದು ಅಂತ ತೋರಿಸಿಕೊಟ್ಟಿದ್ದೇನೆ ಅಂತ ಕ್ಷಮೆ ಕೇಳಿದರು. ಜೊತೆಗೆ ಎಲ್ಲರ ಮುಂದೆ ಸಾರಿ ಬಿಗ್‌ಬಾಸ್‌. ಎಲ್ಲರಿಗೂ ಸಾರಿ ಅಂತ ಕೈಮುಗಿದು ಕೇಳಿದರು.

ಅವರನ್ನ ಯಾವತ್ತು ನಂಬಬೇಡಿ ಎಂದ ಚೈತ್ರಾ

ಧನರಾಜ್ ಬಳಿ ಜಗದೀಶ್ ಕ್ಷಮೆ ಕೇಳ್ತಿದ್ದಂತೆ 'ಮಲಗಿ ಎದ್ದಮೇಲೆ ಪಿತ್ತ ಎಲ್ಲಾ ಇಳಿತೇನೋ... ಇವತ್ತು ಎಲ್ಲರೂ ಒಳ್ಳೆಯರಾಗೋದ್ರಾ? ಬಿಗ್‌ಬಾಸ್‌ನವರು, ಡೈರೆಕ್ಟರ್, ಎಲ್ಲಾ ಒಳ್ಳೆಯವರಾದರಾ? ಎಂದು ಮಾನಸ ಗುಟುರು ಹಾಕಿದರು. ಆಗ ಚೈತ್ರಾ 'ಜಗದೀಶ್ ಅವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಹೊಡೆಯುವ ಹಾಗೆ ಪ್ರೊವೋಕ್ ಮಾಡ್ತಾರೆ ಎಂದರು.

ಗಾಯಗೊಂಡ ಸ್ಪರ್ಧಿಗಳು

ದೊಡ್ಮೆನೆಯಲ್ಲಿ ಕೊಡುವ ಕೆಲ ಫಿಸಿಕಲ್ ಟಾಸ್ಕ್‌ಗಳನ್ನು ಮಾಡುವಾಗ ಸ್ಪರ್ಧಿಗಳು ಗಾಯಗೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ಗುರುವಾರದ ಸಂಚಿಕೆಯಲ್ಲಿ ಬ್ಯಾಸ್ಕೆಟ್ ಬಾಲ್ ಚೆಂಡುಗಳು ಸಂಗ್ರಹಿಸಿ ಸ್ಪರ್ಧಿಗಳು ತಮ್ಮ ಗೋಲ್‌ನಲ್ಲಿ ಇಡುವ ಟಾಸ್ಕ್ ನೀಡಲಾಗಿತ್ತು. ಈ ವೇಲೆ ಚೆಂಡಿಗಾಗಿ ಎರಡು ತಂಡಗಳ ನಡುವೆ ತೀವ್ರ ಪೈಫೋಟಿ ನಡೆದಿದ್ದು, ತ್ರಿವಿಕ್ರಮ್ ಹಾಗೂ ಗೋಲ್ಡ್ ಸುರೇಶ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+