X
ಹೋಮ್ ಚಲನಚಿತ್ರಗಳ ಒಳನೋಟ

ಇವರೆಲ್ಲಾ ಬಿಗ್‌ಬಾಸ್‌ ಕನ್ನಡಕ್ಕೆ ಬಂದ ಮೇಲೆ ಜನರ ಅಭಿಪ್ರಾಯವೇ ಚೇಂಜ್ ಆಯಿತು!

Author Sowmya Bairappa | Updated: Tuesday, December 26, 2023, 10:12 AM [IST]

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ. ದೊಡ್ಮನೆಗೆ ಎಂಟ್ರಿಕೊಟ್ಟ ಹಲವರು ನಟನೆ ಸೇರಿದಂತೆ ಸದ್ಯ ಬೇರೆ-ಬೇರೆ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಹಲವರು ಬಿಗ್‌ಬಾಸ್‌ನಲ್ಲಿ ಸಿಕ್ಕ ಫೇಮ್ ಅನ್ನು ಚೆನ್ನಾಗಿ ಎನ್‌ಕ್ಯಾಶ್‌ ಮಾಡಿಕೊಂಡು ಇಂದು ಹಲವು ಅವಕಾಶಗಳನ್ನು ಪಡೆದಿದ್ದಾರೆ. ಕೆಲವರಿಗೆ ಬಿಗ್‌ಬಾಸ್ ಪಾಸಿಟಿವ್ ಆದರೆ, ಇನ್ನೂ ಕೆಲವರಿಗೆ ನೆಗೆಟಿವ್ ಆಗಿದೆ.


cover image
ಆರ್‌ಜೆ ರಾಕೇಶ್

ಬಿಗ್‌ಬಾಸ್ ಸೀದನ್ 6ರ ಸ್ಪರ್ಧಿ ಆರ್‌ಜೆ ರಾಕೇಶ್ ಅವರು ಆಟ ಆಡಿದ್ದಕ್ಕಿಂತ ಜಾಸ್ತಿ ಸಹಸ್ಪರ್ಧಿಯ ಜೊತೆಗೆ ಕ್ಲೋಸ್ ಆಗುವ ಮೂಲಕ ಸದ್ದು ಮಾಡಿದ್ದರು. ಬಿಗ್‌ಬಾಸ್‌ ಶೋನಲ್ಲಿ ಇವರು ತೋರಿದ ವರ್ತನೆ ಅಷ್ಟು ಪಾಸಿಟಿವ್ ಆಗಿರಲಿಲ್ಲ ಎನ್ನಬಹುದು. 

ವಿನಯ್ ಗೌಡ (ನಟ)

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಪದೇ ಪದೇ ಬಳೆ ವಿಷಯ ಪ್ರಸ್ತಾಪಿಸುವ ಮೂಲಕ ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ವಿನಯ್‌ ಅವರು ಕಾರ್ತಿಕ್‌ಗೆ ಬಳೆಗಳ ರಾಜ ಎಂದಿದ್ದರು. ಜೊತೆಗೆ ಟಾಸ್ಕ್‌ ವೇಳೆ ಗಂಡಸು ಥರ ಆಡು, ಬಳೆಗಳನ್ನು ಹಾಕಿಕೊಂಡು ಹೆಂಗಸು ಥರ ಆಡೋದಲ್ಲ ಅಂತಲೂ ವಿನಯ್ ಹೇಳಿದ್ದರು. ವಿನಯ್ ಪದೇ ಪದೇ ಬಳೆ ಅಂತ ಉಲ್ಲೇಖ ಮಾಡುತ್ತಿರುವುದನ್ನು ವೀಕ್ಷಕರು ಖಂಡಿಸಿದ್ದರು.  ಬಳೆ ಅಂತ ವಿನಯ್ ಉಲ್ಲೇಖ ಮಾಡುತ್ತಿರುವುದರ ಅರ್ಥವೇನು? ವೀಕ್ ಇರುವವರು ಮಾತ್ರ ಬಳೆ ಹಾಕಿಕೊಳ್ಳುವುದಕ್ಕೆ ಲಾಯಕ್ಕಾ? ವಿನಯ್ ಕಾರ್ತಿಕ್‌ನ ಲೇವಡಿ ಮಾಡ್ತಿರೋದಾ ಅಥವಾ ಹೆಂಗಸರನ್ನು ಕೈಲಾಗದವರು ಅಂತ ಲೇವಡಿ ಮಾಡ್ತಿರೋದಾ ಅಂತ ಕಟುವಾಗಿ ಟೀಕಿಸಿದ್ದರು. ಇದು ಅವರಿಗೆ ನೆಗೆಟಿವ್ ಆಗಿ ಪರಿಣಮಿಸಿದೆ. 

 

ಸಂಯುಕ್ತ ಹೆಗ್ಡೆ

ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಬಿಗ್‌ ಬಾಸ್ ಕನ್ನಡ ಸೀಸನ್‌ 5ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಅವರು, ಆಟ ಆಡುವಾಗ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಅಂತ ಆರೋಪಿಸಿದ್ದರು. ಜೊತೆಗೆ ಹಲ್ಲೆ ಮಾಡಿದ್ದರು. ಇದಾದ ಬಳಿಕ ಸಮೀರ್, ನಾನು ತಪ್ಪು ಮಾಡಿದ್ದೇ ಆದರೆ ಈಗಲೇ ದೊಡ್ಮನೆ ಬಿಟ್ಟು ಹೊರಗಡೆ ಹೋಗುವೆ ಎಂದು ಸವಾಲು ಹಾಕಿದ್ದರು. ನಂತರ ಸಂಯುಕ್ತಾ ತಾವು ಸಮೀರ್ ವಿರುದ್ಧ ಆರೋಪ ಮಾಡಿದ್ದು ತಪ್ಪು ಅಂತ ಕ್ಷಮೆ ಕೇಳಿದ್ದರು. ಈ ಘಟನೆ ಬಳಿಕ ಬಿಗ್‌ಬಾಸ್ ಸಂಯುಕ್ತಾ ಅವರನ್ನು ಮನೆಯಿಂದ ಆಚೆ ಕಳುಹಿಸಿದ್ದರು.  ಇದು ಅವರಿಗೆ ನೆಗೆಟಿವ್ ಆಗಿತ್ತು. 

ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಈ ಹಿಂದೆ 'ಡ್ರೋನ್ ವಿಜ್ಞಾನಿ' ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತಾದ್ಯಂತ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು. ತಾವು 22ರ ವಯಸ್ಸಿನಲ್ಲಿಯೇ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಯಾರಿದ್ದೆ ಎಂದು ಹೇಳಿಕೊಂಡಿದ್ದರು. ಜೊತೆಗೆ 2017ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ತಾವೇ ತಯಾರಿಸಿರುವ ಡ್ರೋನ್ ಪ್ರದರ್ಶಿಸಿದ್ದೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ನನಗೆ ಗೋಲ್ಡ್ ಮೆಡಲ್ ದೊರಕಿತ್ತು ಎಂದು ಹೇಳಿದ್ದರು. ಬಳಿಕ ಅವರು ಸುಳ್ಳು ಹೇಳಿರುವುದು ಎಲ್ಲರಿಗೂ ತಿಳಿದಿತ್ತು. ಪ್ರತಾಪ್ ಹೇಳಿರುವುದು ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ ಸಾಕಷ್ಟು ಟೀಕೆ ಮತ್ತು ಟ್ರೋಲ್‌ಗಳು ಆಗಿದ್ದವು. ಸದ್ಯ ಬಿಗ್‌ಬಾಸ್‌ ಕನ್ನಡ ಸೀಸನ್ ೧೦ರ ಮನೆಯಲ್ಲಿ ಪ್ರತಾಪ್ ನಡವಳಿಕೆ ನೋಡಿ ಅನೇಕರು ಇಷ್ಟಪಡುತ್ತಿದ್ದಾರೆ. ಅವರಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಬಿಗ್‌ಬಾಸ್ ಪ್ರತಾಪ್ ಅವರಿಗೆ ಪಾಸಿಟಿವ್ ಆಗಿದೆ. 

ಚಕ್ರವರ್ತಿ ಚಂದ್ರಚೂಡ್

ಸಹ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗುವಾಗ ಚಕ್ರವರ್ತಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ದರು. ಇದರಿಂದ ಸಿಟ್ಟಾದ ಚಂದ್ರಚೂಡ್, ಅವರಿಗೆ ಮಧ್ಯದ ಬೆರಳು ತೋರಿಸಿದ್ದರು. ಇದು ಕೂಡ ಸಾಕಷ್ಟು ವಿವಾದ ಹುಟ್ಟುಹಾಕುವುದರ ಜೊತೆಗೆ ಚಕ್ರವರ್ತಿ ಚಂದ್ರಚೂಡ್ ಜನರಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆದರು. 

ನಮ್ರತಾ ಗೌಡ

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಕೂಡ ಜಗಳವಾಡುವಾಗ ಅಸಭ್ಯ ಪದ ಬಳಸಿ ಬೀಪ್ ಹಾಕಿಸಿಕೊಂಡಿದ್ದರು. ಹೆಣ್ಮಕ್ಕಳಿಗೆ ಗೌರವ ಕೊಡಬೇಕು ಎಂಬ ನಮ್ರತಾ, ಸಂಗೀತಾ ಮತ್ತು ತನಿಷಾ ಅವರಿಗೆ 'ಕಿತ್ತೋದವಳು' ಎನ್ನುವ ಪದ ಬಳಸಿದ್ದರು.  ಬೇರೆಯವರಿಂದ ಗೌರವವನ್ನ ಡಿಮ್ಯಾಂಡ್ ಮಾಡುವ ನಮ್ರತಾ, ತಾವೂ ಬೇರೆಯವರಿಗೆ ರೆಸ್ಪೆಕ್ಟ್ ಕೊಡಬೇಕಲ್ವಾ? ಅಂತ ವೀಕ್ಷಕರು ಖಂಡಿಸಿದ್ದರು. ಜೊತೆಗೆ ಅವರು ಯಾವಾಗಲೂ ವಿನಯ್ ಪರ ಸ್ಟ್ಯಾಂಡ್ ತೆಗೆದುಕೊಳ್ಳುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಇದು ಅವರಿಗೆ ನೆಗೆಟಿವ್ ಆಗಿದೆ. 

 

ಪೂಜಾ ಗಾಂಧಿ

ಮಳೆ ಹುಡುಗಿ ಪೂಜಾಗಾಂಧಿ ನಿಜಜೀವನದಲ್ಲಿ ಹೇಗಿರುತ್ತಾರೆ ಎಂದು ಸಿನಿಪ್ರಿಯರಿಗೆ ಅರ್ಥವಾಗಲು ಬಿಗ್‌ಬಾಸ್ ಒಂದು ವೇದಿಕೆಯಾಗಿತ್ತು. ಬಿಗ್‌ಬಾಸ್ ವೇದಿಕೆ ಅವರಿಗೆ ಪಾಸಿಟಿವ್ ಆಗಿತ್ತು. 

 

ಪ್ರಶಾಂತ್ ಸಂಬರಗಿ

ಬಿಗ್‌ ಬಾಸ್ ಕನ್ನಡ ಸೀಸನ್ 9ರಲ್ಲಿ ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ ಯಾವುದಾದರೂ ಒಂದು ವಿಷಯಕ್ಕೆ ಪದೇ ಪದೇ ಜಗಳವಾಡುತ್ತಿದ್ದರು. ಒಂದು ದಿನ ಟಾಸ್ಕ್ ಆಡುವಾ ಪ್ರಶಾಂತ್ ಸಂಬರಗಿ, ಕನ್ನಡಪರ ಹೋರಾಟಗಾರರು ರೋಲ್‌ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದಿದ್ದರು. ಇದರಿಂದ ಸಿಟ್ಟಾದ ಕನ್ನಡಪರ ಹೋರಾಟಗಾರರು, ದೊಡ್ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಶಾಂತ್ ಸಂಬರಗಿ ಕನ್ನಡಪರ ಹೋರಾಟಗಾರರ ಕ್ಷಮೆ ಕೇಳಿದ್ದರು. ಜೊತೆಗೆ ಎಲ್ಲಾ ಸ್ಪರ್ಧಿಗಳ ಮೇಲೆ ಒಂದಿಲ್ಲೊಂದು ಆರೋಪ ಮಾಡಿದ್ದು ಅವರಿಗೆ ನೆಗೆಟಿವ್ ಆಗಿ ಪರಿಣಮಿಸಿತ್ತು.  

 

ಉದಯ್ ಸೂರ್ಯ (ವಿವೇಕ್)

ಸಾನ್ಯಾ ಅಯ್ಯರ್, ಜಸ್ವಂತ್, ರೂಪೇಶ್ ಶೆಟ್ಟಿ ಕ್ಲೋಸ್ ಆಗಿ ಇರುವುದರ ಬಗ್ಗೆ ಉದಯ್ ಸೂರ್ಯ ಮಾತನಾಡಿದ್ದರು. ಕ್ಯಾಮರಾ ಇಲ್ಲದಿದ್ದರೆ ಬೇರೆಯ ನಡೆಯುತ್ತಿತ್ತು ಎಂದಿದ್ದರು. ಇದು ದೊಡ್ಡ ವಿವಾದವನ್ನು ಶುರು ಮಾಡಿತ್ತು. ನಂದಿನಿ ಇದ್ದಾಗ ಜಶ್ವಂತ್ ಒಂದು ತರ ಇರುತ್ತಾನೆ. ಅವಳು ಇಲ್ಲದಾಗ ಸಾನ್ಯಾ ಬಳಿ ಇನ್ನೊಂದು ತರ ಇರುತ್ತಾನೆ. ಕ್ಯಾಮರಾ ಇಲ್ಲದಿದ್ದರೆ ಬೇರೆ ತರ ಆಗ್ತಿತ್ತು ಎಂದಿದ್ದರು. ಇದಲ್ಲದೇ ಒಳುಡುಪಿನ ಬಗ್ಗೆಯೂ ಚೈತ್ರಾ ಹಳ್ಳಿಕೇರಿ ಅವರ ಬಳಿ ಮಾತನಾಡಿದ್ದರು. ಇದು ಚೈತ್ರಾಗೆ ಇಷ್ಟವಾಗಿರಲಿಲ್ಲ. ಇದು ಅವರಿಗೆ ನೆಗಿಟಿವ್ ಆಗಿತ್ತು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+