ಕಳೆದ ಸಂಚಿಕೆಯಲ್ಲಿ ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾಗಿದ್ದರು. ಇದೀಗ ವರ್ತೂರು ಸಂತೋಷ್ ಟೀಂ ರಾಕ್ಷಸರಾಗಿದ್ದು, ಗಂಧರ್ವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಅನುಸಾರ ಬಿಗ್ಬಾಸ್ 'ಚೇರ್ ಆಫ್ ಥಾರ್ನ್ಸ್' ಎಂಬ ಚಟುವಟಿಕೆಯನ್ನು ಸ್ಪರ್ಧಿಗಳಿಗೆ ನೀಡಿದ್ದರು. ಈ ಸಂದರ್ಭ ಕಾರ್ತಿಕ್ರನ್ನು ವಿನಯ್ ಕೆಣಕಿದರು. ಪದೇ ಪದೇ ಟಾಂಟ್ ಕೊಡುತ್ತಲೇ ಇದ್ದ ವಿನಯ್, ಕಾರ್ತಿಕ್ಗೆ ತಗಡು ಅಂದರು. ಅದನ್ನು ಕೇಳಿಸಿಕೊಂಡ ಕಾರ್ತಿಕ್ ರೊಚ್ಚಿಗೆದ್ದಿದ್ದು, ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ.