X
ಹೋಮ್ ಚಲನಚಿತ್ರಗಳ ಒಳನೋಟ

ಮನೆಮಂದಿಯೆಲ್ಲಾ ಕೂತು ನೋಡುವಂತಹ ವಿಷ್ಣು-ಅನಂತ್ ನಾಗ್ ನಟನೆಯ ಅದ್ಭುತ ಸಿನಿಮಾಗಳಿವು!

Author Sowmya Bairappa | Updated: Friday, August 16, 2024, 01:10 PM [IST]

ಹಿಂದಿನ ಕಾಲದಲ್ಲಿ ಮನೆಮಂದಿಯಲ್ಲಿ ಜೊತೆಯಲ್ಲಿ ಕುಳಿತು ನೋಡಬಹುದಾದಂತಹ ಕೌಟುಂಬಿಕ ಹಾಗೂ ಸಾಮಾಜಿಕ ಕಥಾಹಂದರವುಳ್ಳ ಸಿನಿಮಾಗಳು ತೆರೆಕಾಣುತ್ತಿದ್ದವು. ಈ ಚಿತ್ರಗಳಲ್ಲಿ ನಗು, ಹಾಸ್ಯ, ದುಃಖ ಸೇರಿದಂತೆ ಎಲ್ಲಾ ಎಲಿಮೇಟ್ಸ್‌ಗಳಿರುತ್ತಿದ್ದವು. ಇದೆಲ್ಲದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಸಹ ಸಾರುತ್ತಿದ್ದವು. ಇಂದಿನ ಸಿನಿಮಾಗಳಲ್ಲಿ ಸಾಮಾಜಿಕ ಸಂದೇಶ ಮರೀಚಿಕೆಯಾಗಿದ್ದು, ಹೊಡಿ-ಬಡಿ ಸಿನಿಮಾಗಳೇ ತೆರೆಕಾಣುತ್ತಿವೆ. ಇಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ನಟನೆಯ ಕೆಲ ಅಧ್ಭುತ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದ್ದು, ಸಮಯ ಸಿಕ್ಕಾಗ ಮಿಸ್ ಮಾಡದೇ ನೋಡಿ.


cover image
'ಮದುವೆ ಮಾಡು ತಮಾಷೆ ನೋಡು'

1984ರಲ್ಲಿ ಬಿಡುಗಡೆಯಾದ ಚಿ ಉದಯ್‌ ಶಂಕರ್ ಕಥೆಗೆ ಸತ್ಯ ನಿರ್ದೇಶನ ಮಾಡಿದ್ದ 'ಮದುವೆ ಮಾಡು ತಮಾಷೆ ನೋಡು' ಸಿನಿಮಾದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು. ಬಡ ಕುಟುಂಬದ ಓರ್ವ ಅಣ್ಣ ಹೇಗೆ ಕುಟುಂಬ ಮನೆ ನಡೆಸುತ್ತಾನೆ ಹಾಗೂ ಹೇಗೆ ತಂಗಿ ಮದುವೆ ಮಾಡ್ತಾನೆ ಎಂಬುದು ಸಿನಿಮಾದ ಒನ್‌ಲೈನ್ ಕಥೆ. ಇಡೀ ಮನೆಯ ಜವಾಬ್ದಾರಿ ಹೊತ್ತಿರುವ ಅಣ್ಣನ ಹೆಗಲಮೇಲೆ ತಮ್ಮಂದಿರ ಓದು, ತಂಗಿಯ ಮದುವೆಯ ಜವಾಬ್ದಾರಿ ಇರುತ್ತದೆ. ತಂಗಿ ಗೌರಿ ಮದುವೆ ಸುತ್ತ ಈ ಸಿನಿಮಾದ ಕಥೆ ಸಾಗುವ ಈ ಚಿತ್ರವನ್ನು ನೀವು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. 


'ನಾರದ ವಿಜಯ'

ಅನಂತ್‌ನಾಗ್ ಮತ್ತು ಪ್ರಿಯದರ್ಶಿನಿ ಲೀಡ್‌ ರೋಲ್‌ನಲ್ಲಿಸಿದ್ದ ಸಸ್ಪೆನ್ಸ್ ಜೊತೆಗೆ ಕಾಮಿಡಿ ಹೊಂದಿರುವ ಸಿನಿಮಾ 'ನಾರದ ವಿಜಯ'. ಚಿತ್ರದಲ್ಲಿ ಅನಂತ್ ನಾಗ್ ಅವರು ನಾರದ ಹಾಗೂ ವಿಜಯ್ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಭಕ್ತನ ಸಾವಿಗೆ ಮಿಡಿಯುವ ವಿಷ್ಣು ಆತನ ಸಾವಿನ ಕೇಸ್ ಪತ್ತೆ ಮಾಡಲು ನಾರದನನ್ನು ಭೂಲೋಕಕ್ಕೆ ಕಳುಹಿಸುತ್ತಾನೆ. ಭೂಮಿಗೆ ಬರುವ ನಾರದ ತನ್ನಂತಿರುವ ವಿಜಯನನ್ನು ನೋಡಿ ಶಾಕ್ ಆಗ್ತಾನೆ. ವಿಜಯ್ ಸಿಐಡಿ ಅಧಿಕಾರಿಯಾಗಿದ್ದು, ಈ ಕೇಸ್ ತನಿಖೆ ನಡೆಸುತ್ತಿರುತ್ತಾನೆ. ಕೊನೆಗೆ ಇವರಿಬ್ಬರು ಈ ಪ್ರಕರಣವನ್ನು ಹೇಗೆ ಭೇದಿಸುತ್ತಾರೆ ಎಂಬುದೇ ಸಿನಿಮಾ ಸ್ಟೋರಿ. ಈ ಸಿನಿಮಾದ ಕಾಮಿಡಿ ದೃಶ್ಯಗಳು ನಿಮ್ಮನ್ನು ನಕ್ಕು ನಗಿಸುತ್ತವೆ. 


ಯಾರಿಗೂ ಹೇಳ್ಬೇಡಿ

ಬಾಡಿಗೆ ಮನೆಯಲ್ಲಿರುವ ಮಧ್ಯಮ ವರ್ಗದವರಿಗೆ ಸ್ವಂತ ಸೂರು ಮಾಡಿಕೊಳ್ಳಬೇಕೆಂಬ ಕನಸಿರುತ್ತದೆ. ಇಂತಹ ಕನಸು ಕಂಡ ಮಹಿಳೆಯರಿಗೆ ಮೋಸ ಮಾಡಲು ಬರುವ ವ್ಯಕ್ತಿಯೇ ಗೋವಿಂದಣ್ಣ. ಮನೆಯ ಗಂಡಸರೆಲ್ಲಾ ಕೆಲಸಕ್ಕೆ ಹೋದಮೇಲೆ ವಠಾರಕ್ಕೆ ಎಂಟ್ರಿಕೊಡುವ ಗೋವಿಂದ, ನೂರಾರು ಸುಳ್ಳುಗಳನ್ನು ಹೇಳಿ ಯಾಮಾರಿಸಿ ದುಡ್ಡು ಕಿತ್ತುಕೊಳ್ಳುತ್ತಾನೆ. ಹೀಗೆ ಪಡೆದ ಹಣವನ್ನು ಏನು ಮಾಡುತ್ತಾನೆ? ಮಹಿಳೆಯರ ಸ್ವಂತ ಮನೆಯ ಕನಸು ನನಸಾಗುತ್ತಾ ಎಂಬುದು ಯಾರಿಗೂ ಹೇಳ್ಬೇಡಿ ಚಿತ್ರದ ಕಥೆ. ಸಿನಿಮಾದಲ್ಲಿ ಗೋವಿಂದಣ್ಣನ ಪಾತ್ರದಲ್ಲಿ ಅನಂತ್‌ನಾಗ್ ಹಾಗೂ ವಠಾರದ ಮಹಿಳೆಯರ ಪಾತ್ರದಲ್ಲಿ ವಿನಯ್ ಪ್ರಸಾದ್, ವೈಶಾಲಿ ಕಾಸರವಳ್ಳಿ, ತಾರಾ, ಗಿರಿಜಾ ಲೋಕೇಶ್ ಅಭಿನಯಿಸಿದ್ದರು. 

'ಉಂಡು ಹೋದ ಕೊಂಡು ಹೋದ'

ಅನಂತ್ ನಾಗ್ ಅವರ 'ಉಂಡು ಹೋದ ಕೊಂಡು ಹೋದ' ಸಿನಿಮಾವನ್ನು ಬಹುತೇಕರು ನೋಡಿಯೇ ಇರುತ್ತಾರೆ. ಊರಲ್ಲಿ ಬರಗಾಲ, ಮಕ್ಕಳಿಗೆ ಕುಡಿಯಲು ಹಾಲು ಇಲ್ಲ, ಅದೊಂದು ಮುಗ್ಧ ಜನರು ವಾಸಿಸುವ ಪುಟಾಣಿ ಕುಟುಂಬ. ಈ ಗ್ರಾಮಕ್ಕೆ ಸರ್ಕಾರಿ ಅಧಿಕಾರಿಯೆಂದು ಹೇಳಿಕೊಂಡು ಅನಂತ್‌ನಾಗ್ ಬರ್ತಾರೆ. ನಾನು ಕೌ ಇನ್ಸ್‌ಪೆಕ್ಟರ್ ನಿಮಗೆಲ್ಲರಿಗೂ ಸರ್ಕಾರದ ಹಣದಲ್ಲಿ ಉಚಿತ ಹಸು ಕೊಡಿಸುತ್ತಾನೆ ಅಂತ ಜನರ ವಿಶ್ವಾಸ ಗಳಿಸುತ್ತಾರೆ. ಆದರೆ, ಹಸುವಿನ ಬೆಲೆಯ ನಾಲ್ಕು ಭಾಗದಲ್ಲಿ ತನಗೆ ಒಂದು ಭಾಗ ಕೊಡ್ಬೇಕು ಅಂತ ಕಂಡೀಷನ್ ಹಾಕ್ತಾನೆ. ಗ್ರಾಮಸ್ಥರು ಕೌ ಇನ್ಸ್‌ಪೆಕ್ಟರ್‌ಗೆ ಕೊಡಲು ಹಣ ಹೊಂದಿಸುವ ದೃಶ್ಯ ಕರುಣೆ ಹುಟ್ಟಿಸುತ್ತದೆ. ಬಡ ಜನರಿಗೆ ಹಸು ಸಿಗುತ್ತಾ? ಅನಂತ್‌ನಾಗ್ ಹಣ ದೋಚಿಕೊಂಡು ಎಲ್ಲಿಗೆ ಹೋಗ್ತಾರೆ? ಮತ್ತೆ ವಾಪಾಸ್ ಬರ್ತಾರ ಎಂಬುದೇ ಸಿನಿಮಾ ಕಥೆ.

'ಗುರುಶಿಷ್ಯರು'

ಭಾರ್ಗವ ನಿರ್ದೇಶನದ 'ಗುರುಶಿಷ್ಯರು' ಕನ್ನಡದ ಅತ್ಯದ್ಭುತ ಹಾಸ್ಯ ಚಿತ್ರವಾಗಿ ಗುರುತಿಸಿಕೊಂಡಿದೆ. ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿ, ನಟಿಸಿದ್ದರು. ಉದಯ ಶಂಕರ್ ಚಿತ್ರದ ಸಂಭಾಷಣೆ ಜೊತೆ ಗೀತೆಗಳನ್ನು ಬರೆದಿದ್ದರು. ಗುರುಶಿಷ್ಯರು ಚಿತ್ರದ ಹಾಡುಗಳು, ಪ್ರಮುಖವಾಗಿ ದೊಡ್ಡವರೆಲ್ಲಾ ಜಾಣರಲ್ಲ ಇಂದಿಗೂ ಟ್ರೆಡಿಂಗ್‌ನಲ್ಲಿದೆ. ಚಿತ್ರದಲ್ಲಿ ವಿಷ್ಣುವರ್ಧನ್ ಒಂದು ಆಸ್ಥಾನದ ರಾಜನಾಗಿ ಮತ್ತು ಪರಮ ಶಿವಭಕ್ತನಾಗಿ ನಟಿಸಿದ್ದರು. ಒಬ್ಬ ಪ್ರಕಾಂಡ ಗುರು ಮತ್ತು ಬ್ರಹ್ಮಜ್ಞಾನಿಗಳಾದ ಅವನ 12 ಜನ ಶಿಷ್ಯರು ಶಪಿತರಾಗಿ ಭೂಲೋಕದಲ್ಲಿ ಮತಿಹೀನರಾಗಿ ಜನಿಸುತ್ತಾರೆ. ಈ ಶಾಪನಿಮಿತ್ತ ಭೂಲೋಕಕ್ಕೆ ಬಂದ ಇವರು ಮಾಡುವ ಅವಾಂತರಗಳು ಮತ್ತು ಕೊನೆಗೆ ಶಾಪ ನಿವಾರಣೆಯನ್ನು ಚಿತ್ರ ಚಿತ್ರಿಸುತ್ತದೆ.




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+