X
ಹೋಮ್ ಚಲನಚಿತ್ರಗಳ ಒಳನೋಟ

ಎರಡೇ ವಾರಕ್ಕೆ ಸುಸ್ತಾದ ವೈಲ್ಡ್‌ಕಾರ್ಡ್ ಸ್ಫರ್ಧಿ ಶೋಭಾ ಶೆಟ್ಟಿ: ಬಿಗ್‌ಬಾಸ್‌ ಮನೆಯಿಂದ ಕ್ವಿಟ್!

Author Administrator | Updated: Monday, December 2, 2024, 03:53 PM [IST]

ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನು ನಾಲ್ಕು ವಾರಗಳು ಮಾತ್ರ ಬಾಕಿಯಿವೆ. ಈ ಬಾರಿ ಬಿಗ್‌ಬಾಸ್ ಟ್ರೋಫಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಸದ್ಯ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಜೋರಾಗಿದ್ದು, ಆರಂಭದಲ್ಲಿ ಯಾರು ಸೈಲೆಂಟ್ ಅಂದುಕೊಂಡಿದ್ದರೋ ಅವರೆಲ್ಲಾ ವೈಲೆಟ್ ಆಗ್ತಿದ್ದಾರೆ. ಕಳೆದ ವಾರ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇದೀಗ ಮತ್ತೊಬ್ಬರು ಶೋ ಕ್ವಿಟ್ ಮಾಡಿ ಹೊರಗೆ ಬಂದಿದ್ದಾರೆ. ಆ ಸ್ಪರ್ಧಿ ಯಾರು? ಯಾಕೆ ಹೊರಬಂದರು ಎಂಬ ಮಾಹಿತಿ ಇಲ್ಲಿದೆ.


cover image
ಯಾರೆಲ್ಲಾ ನಾಮಿನೇಟ್ ಅಗಿದ್ದರು?
1

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗಲು  7 ಮಂದಿ ನಾಮಿನೇಟ್ ಆಗಿದ್ದರು. ಗೋಲ್ಡ್ ಸುರೇಶ್, ಶಿಶಿರ್, ಭವ್ಯಾ, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ, ತ್ರಿವಿಕ್ರಮ್, ಐಶ್ವರ್ಯಾ ಲಿಸ್ಟ್‌ನಲ್ಲಿದ್ದರು. ಶನಿವಾರದ ಸಂಚಿಕೆಯಲ್ಲಿ ಗೋಲ್ಡ್ ಸುರೇಶ್ ಹಾಗೂ ತ್ರಿವಿಕ್ರಮ್ ಸೇಫ್ ಆಗಿದ್ದರು.

 ಶೋಭಾ ಶೆಟ್ಟಿ ಕ್ವಿಟ್
2

ಶೋಭಾ ಶೆಟ್ಟಿ ಎರಡು ವಾರಗಳ ಹಿಂದೆ ಬಿಗ್‌ಬಾಸ್ ಮನೆಗೆ ವೈಲ್ಟ್ ಕಾರ್ಡ್ ಎಂಟ್ರಿಕೊಟ್ಟಿದ್ದರು. ರಜತ್ ಜೊತೆ ದೊಡ್ಮನೆ ಸೇರಿದ್ದ ಶೋಭಾ, ಉಗ್ರಂ ಮಂಜು ಹಾಗೂ ಗೌತಮಿ ವಿರುದ್ಧ ಕೆಂಡಕಾರಿದ್ದರು. ಮುಖವಾಡ ಕಳುಚುತ್ತೀನಿ ಅಂತೆಲ್ಲಾ ಅಬ್ಬರಿಸಿದ್ದರು. ಒಂದು ವಾರದ ಬಳಿಕ ತಣ್ಣಗಾಗಿದ್ದ ಶೋಭಾ, ಅವರಿಬ್ಬರ ಜೊತೆ ರಾಜಿ ಮಾಡಿಕೊಂಡಿದ್ದರು. ಎರಡನೇ ವಾರ ಕಳಪೆ ಬೋರ್ಡ್ ಪಡೆದು ಜೈಲು ಸೇರಿದ್ದರು. ಆದ್ರೀಗ ಶೋಭಾ ಶೆಟ್ಟಿ ಬಿಗ್‌ಬಾಸ್ ಕ್ವಿಟ್ ಮಾಡಿದ್ದಾರೆ. ಆರಂಭದಲ್ಲಿ ಜೋಶ್‌ನಲ್ಲಿದ್ದ ಶೋಭಾ, ಎರಡೇ ವಾರಕ್ಕೆ ಸುಸ್ತಾಗಿದ್ದಾರೆ.

ಸೇವ್ ಆಗಿದ್ದರು
3

ಈ ವಾರ ಶೋಭಾ ಶೆಟ್ಟಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಆದರೆ, ಜನರು ವೋಟ್ ಮಾಡಿ ಅವರನ್ನು ಉಳಿಸಿದ್ದರು. ಆದರೆ, ಶೋಭಾ ಶೆಟ್ಟಿಗೆ ಮನೆಯಲ್ಲಿ ಉಳಿಕೊಳ್ಳಲು ಇಷ್ಟವಿಲ್ಲ. ಅದನ್ನು ಕಿಚ್ಚ ಸುದೀಪ್ ಮುಂದೆಯೇ ಹೇಳಿದ್ದಾರೆ. ಕಿಚ್ಚನ ಮುಂದೆ ಕೈಮುಗಿದು ತಾನು ಮನೆಯಿಂದ ಹೊರಗೆ ಹೋಗಬೇಕು ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಸುದೀಪ್, ನೀವು ಯಾವ ಉದ್ದೇಶ ಇಟ್ಟುಕೊಂಡು ಈ ಮನೆಗೆ ಬಂದ್ರಿ ಎಂಬುದನ್ನು ಒಮ್ಮೆ ಯೋಚನೆ ಮಾಡಿ ಎಂದರು. ಆ ಬಳಿಕ ನಿಮಗೆ ಮತ ಹಾಕಿ ಉಳಿಸಿಕೊಂಡ ಜನರಿಗೆ ಏನು ಹೇಳ್ತೀರಿ? ಅವರಿಗೆ ನೀವು ಅನ್ಯಾಯ ಮಾಡುತ್ತಿದ್ದೀರಿ ಅಂತ ಹೇಳಿದ್ರು. ಆದರೂ ಕೂಡ ಶೋಭಾ, ತಾವು ಮನೆಗೆ ಹೋಗಲೇಬೇಕು ಅಂತ ಹಠ ಹಿಡಿದಿದ್ದಾರೆ. ಇದರಿಂದ ರೋಸಿ ಹೋದ ಕಿಚ್ಚ, ಬಿಗ್‌ಬಾಸ್ ಮನೆ ಬಾಗಿಲು ತೆಗೆಸಿದ್ದಾರೆ. ಇಂದಿನ ಸಂಚಿಕೆಯಲ್ಲಿ ಇದು ಗೊತ್ತಾಗಲಿದೆ.

ಊರು ಮತ್ತು ಮೊದಲ ಸೀರಿಯಲ್
4

ಬಾಲ್ಯದಿಂದಲೇ ನಟನೆ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಶೋಭಾ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ಆದರೆ, ಇವರು ದಾವಣಗೆರೆಯ ಬಾಪೂಜಿ ಹೈಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬಳಿಕ ಬೆಂಗಳೂರು ವಿವಿಯಲ್ಲಿ ಸಸ್ಟೈನೇಬಲ್ ಡೆವಲಪ್‌ಮೆಂಟ್ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದರು. ಶೋಭಾಗೆ ನಟನಾ ಕ್ಷೇತ್ರದಲ್ಲಿ ಬೆಳೆಯಲು ಕುಟುಂಬದವರ ಬೆಂಬಲವಿತ್ತು. ಶೋಭಾ ಶೆಟ್ಟಿ 2013ರಲ್ಲಿ ಕನ್ನಡದ ಸೂಪರ್ ಹಿಟ್ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಾಯಕಿಯ ತಂಗಿ ತನು ಪಾತ್ರ ನಿರ್ವಹಿಸುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು. ಇದಾದ ಬಳಿಕ 2017ರಲ್ಲಿ ಕಾವೇರಿ, ನಮ್ಮ ರುಕ್ಕು ಎಂಬ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

ಸಿನಿಮಾ & ತೆಲುಗು ಬಿಗ್‌ಬಾಸ್
5

2017ರಲ್ಲಿ ತೆರೆಕಂಡ ಪವರ್ ಸ್ಡಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು. ಈ ಸಿನಿಮಾದಲ್ಲಿ ಅಪ್ಪು ಸಹೋದರಿಯಾಗಿ ನಟಿಸಿದ್ದ ಶೋಭಾ, ಇದಕ್ಕಾಗಿ ಅಗ್ನಿಸಾಕ್ಷಿ ಧಾರಾವಾಹಿ ಬಿಟ್ಟಿದ್ದರು. ಇದಾದ ಬಳಿಕ ತೆಲುಗಿನ 'ಅಸ್ತ ಚೆಮ್ಮಾ' ಎಂಬ ಧಾರಾವಾಹಿಯಲ್ಲಿ ನಟಿಸಿ, ಸ್ಟಾರ್ ಮಾ ಪರಿವಾರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ನಂತರ 'ಕಾರ್ತಿಕ ದೀಪಂ' ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ನಟಿಸಿದರು. ಇದು ಅವರಿಗೆ ಬಿಗ್‌ ಬ್ರೇಕ್ ನೀಡಿತು. ಇದರಲ್ಲಿ ಡಾ.ಮೋನಿತಾ ಆಗಿ ರಂಜಿಸಿದ್ದ ಇವರು ಅತ್ಯುತ್ತಮ ಖಳನಟಿ ಪ್ರಶಸ್ತಿಯನ್ನು ಪಡೆದರು. ಬಳಿಕ ಲಹಿರಿ ಲಹಿರಿ ಲಹಿರಿಲೋ, ಅಟ್ಟರಿಂಟಕಿ ದಾರೆದಿ, ಹಿಟ್ಲರ್ ಗರಿ ಪೆಲ್ಲಂ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಿಶ್ಚಿತಾರ್ಥ
6

ಶೋಭಾ ಶೆಟ್ಟಿ ತೆಲುಗು ಬಿಗ್‌ಬಾಸ್‌ನಲ್ಲಿ ತಮ್ಮ ಬಾಯ್‌ಫ್ರೆಂಡ್ ಯಶವಂತ್ ರೆಡ್ಡಿಯನ್ನು ಪರಿಚಯಿಸಿದ್ದರು. ಇವರಿಬ್ಬರು ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಜೊತೆಗೆ ಹಲವು ಶಾರ್ಟ್‌ ಫಿಲ್ಮಂಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಶೋಭಾ ಹಾಗೂ ಯಶವಂತ್ ಅದ್ಧೂರಿಯಾಗಿ ಏಂಗೇಜ್‌ಮೆಂಟ್ ಮಾಡಿಕೊಂಡಿದ್ದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+