X
ಹೋಮ್ ಚಲನಚಿತ್ರಗಳ ಒಳನೋಟ

ಕುಟುಂಬದಿಂದ ದೂರವಿದ್ದು ಧೂಪವಾಗ್ತಿಯೋ, ಹತ್ತಿರವಿದ್ದು ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು: ಗುರೂಜಿ ಭವಿಷ್ಯ ಕಣ್ಣೀರಿಟ್ಟ ಡ್ರೋನ್ ಪ್ರತಾಪ್

Author Sowmya Bairappa | Published: Tuesday, January 2, 2024, 11:55 AM [IST]

ಈ ಹಿಂದೆ ಬಿಗ್‌ಬಾಸ್‌ ಮನೆಗೆ ಸ್ವಾಮೀಜಿಗಳು ಆಗಮಿಸಿರುವ ಉದಾಹರಣೆಗಳುಂಟು. ಅದರಂತೆ ಇಂದಿನ ಸಂಚಿಕೆಯಲ್ಲಿ ದೊಡ್ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿ, ಸ್ಪರ್ಧಿಗಳ ಎದುರು ಕೂತು ಅವರ ಭವಿಷ್ಯ ಹೇಳಿದ್ದಾರೆ. ಮೊನ್ನೆಯಷ್ಟೇ ಹೆತ್ತವರನ್ನು ಕಂಡು ಖುಷಿಯಲ್ಲಿದ್ದ ಡ್ರೋನ್ ಪ್ರತಾಪ್, ಸ್ವಾಮೀಜಿ ನೋಡಿದ ಭವಿಷ್ಯ ಕೇಳಿ ಕಣ್ಣೀರು ಹಾಕಿದ್ದಾರೆ.


cover image
ಪ್ರತಾಪ್ ಬಗ್ಗೆ ಸ್ವಾಮೀಜಿ ಹೇಳಿದ್ದೇನು?

ಶ್ರೀ ವಿದ್ಯಾಶಂಕರ ಗುರೂಜಿ ಅವರು ಡ್ರೋನ್ ಪ್ರತಾಪ್ ಅವರನ್ನು ಕೂರಿಸಿಕೊಂಡು 'ಈ ವಿಚಾರ ಹೇಳಲು ನನಗೆ ಸಂಕಟವಾಗುತ್ತದೆ. ಕುಟುಂಬ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ಧೂಪವಾಗ್ತಿಯೋ, ಹತ್ತಿರವಿದ್ದು ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಅಂತ ಭವಿಷ್ಯ ನುಡಿದಿದ್ದಾರೆ. ಇದನ್ನು ಕೇಳಿ ಪ್ರತಾಪ್ ಕುಗ್ಗಿ, ಕಣ್ಣೀರು ಹಾಕಿದ್ದಾರೆ.  'ಡ್ರೋನ್' ವಿಚಾರವಾಗಿ ಸಾಕಷ್ಟು ಟ್ರೋಲ್, ಟೀಕೆಗಳನ್ನು ಎದುರಿಸಿದ್ದ ಪ್ರತಾಪ್, ತಾವು ಮಾಡಿದ ತಪ್ಪಿನಿಂದ ಸಾಕಷ್ಟು ಕುಗ್ಗಿ ಹೋಗಿದ್ದರು. ಜೊತೆಗೆ ಕಳೆದ ಮೂರು ವರ್ಷಗಳಿಂದ ಹೆತ್ತವರಿಂದಲೂ ದೂರವಾಗಿಬಿಟ್ಟಿದ್ದರು. ಆದರೆ,  ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಮೇಲೆ ಕನ್ನಡಿಗರು ಪ್ರತಾಪ್ ತಪ್ಪನ್ನು ಕ್ಷಮಿಸಿ, ಪ್ರೀತಿಯಿಂದ ಅಪ್ಪಿಕೊಂಡಿದ್ದರು. ಜೊತೆಗೆ ಕಳೆ ವಾರ ಬಿಗ್‌ಬಾಸ್‌ ಮನೆಯಲ್ಲಿ ಅಪ್ಪ-ಅಮ್ಮನನ್ನು ಭೇಟಿಯಾಗಿ ಖುಷಿಯಿಂದ ಇದ್ದರು. ಇದೀಗ ಮತ್ತೆ ಕುಗ್ಗಿದ್ದಾರೆ.   

ಟ್ಯಾಟೂನಿಂದ ನೆಮ್ಮದಿ ಹೋಯ್ತು

ಇನ್ನು ವರ್ತೂರು ಸಂತೋಷ್ ಅವರ ಬಳಿ ಮಾತನಾಡಿದ ಸ್ವಾಮೀಜಿ, ನೀವು ಕಾಲಿನ ಮೇಲೆ ಹಾಕಿಸಿಕೊಳ್ಳಬಾರದ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ್ರಿ, ಹಾಕಿಸಿಕೊಂಡು ಬಂದ ದಿನದಿಂದಲೇ ನಿಮ್ಮ ನಿಮ್ಮದಿ ಹೋಯ್ತು ಅಂತ ಹೇಳಿದ್ದಾರೆ. ಇದನ್ನು ಕೇಳಿದ ಸಂತೋಷ್ ಸ್ವಾಮೀಜಿಯ ಮಾತು ಸತ್ಯ ಅಂತ ಹೇಳಿದ್ದಾರೆ.

 

ನಮ್ರತಾ ಜೀವನದಲ್ಲಿ ಹೊಸ ವ್ಯಕ್ತಿ

ಇನ್ನು ನಮ್ರತಾ ಗೌಡ ಅವರೊಂದಿಗೆ ಮಾತನಾಡಿದ ಶ್ರೀ ವಿದ್ಯಾಶಂಕರ ಗುರೂಜಿ, ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ, ಹೊಸ ಬೆಳಕಿನ ಆಗಮನವಾಗುತ್ತ ಅಂತ ಭವಿಷ್ಯ ನುಡಿದಿದ್ದಾರೆ. ಇದನ್ನು ಕೇಳಿದ ಹಲವರು ಮದುವೆಯಾಗುವ ಹುಡುಗನೇ ಇರಬೇಕು ಎಂದಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಏನು ಭವಿಷ್ಯ ನುಡಿದಿದ್ದಾರೆ ಅಂತ ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

 

ಗ್ರ್ಯಾಂಡ್ ಫಿನಾಲೆ ಯಾವಾಗ?

ಬಿಗ್‌ಬಾಸ್‌ ಕನ್ನಡ ಸೀಸನ್ 10  ಗ್ರ್ಯಾಂಡ್ ಫಿನಾಲೆಗೆ ಇನ್ನೂ ನಾಲ್ಕು ವಾರಗಳು ಮಾತ್ರ ಳಿದಿವೆ. ಜನವರಿ ಅಂತ್ಯಕ್ಕೆ ಅಂದರೆ 27 ಅಥವಾ 28ಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ವಾಹಿನಿಯವರು ಯಾವುದೇ ಸ್ಪಷ್ಟನೆ ನೀಡಿಲ್ಲ. 

ಮೂರು ವಾರಗಳಲ್ಲಿ ನಾಲ್ಕು ಎಲಿಮಿನೇಷನ್

ಸದ್ಯ ದೊಡ್ಮನೆಯಲ್ಲಿ ಒಂಬತ್ತು ಸ್ಪರ್ಧಿಗಳಿದ್ದಾರೆ. ಸಂಗೀತಾ, ತನಿಷಾ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ತುಕಾಲಿ ಸಂತು, ವರ್ತೂರು ಸಂತೋಷ್, ನಮ್ರತಾ ಹಾಗೂ ಮೈಕಲ್ ಸದ್ಯ ಬಿಗ್‌ಬಾಸ್‌ ಮನೆಯಲ್ಲಿದ್ದಾರೆ. ಈ ಪೈಕಿ ಫೈನಲ್‌ಗೆ ಹೋಗುವವರು ಐದು ಮಂದಿ ಮಾತ್ರ. ಹೀಗಾಗಿ ಮೂರು ವಾರಗಳಲ್ಲಿ ನಾಲ್ಕು ಎಲಿಮಿನೇಷನ್ ಆಗಬೇಕಿದ್ದು, ಒಂದು ವಾರ ಡಬಲ್ ಎಲಿಮಿನೇಷನ್ ಇರುವ ಸಾಧ್ಯತೆಯಿದೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+