X
ಹೋಮ್ ಚಲನಚಿತ್ರಗಳ ಒಳನೋಟ

ನನಗೆ ಪ್ರತಾಪ್ ತುಂಬಾ ಇಷ್ಟ, ಅವರ ಮನೆಯಿಂದ ಯಾರಾದ್ರೂ ಬಂದ್ರೆ ಖುಷಿಯಾಗುತ್ತೆ: ಮನಸಾರೆ ಹೊಗಳಿದ ಸಂಗೀತಾ

Author Sowmya Bairappa | Published: Tuesday, December 12, 2023, 11:16 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಇದೀಗ 10ನೇ ವಾರಕ್ಕೆ ಕಾಲಿಟ್ಟಿದ್ದು, ದಿನೇ ದಿನೇ ಪೈಪೋಟಿ ಹೆಚ್ಚಾಗುತ್ತಿದೆ. ಕಳೆದ ವಾರ ರಣರಂಗವಾಗಿದ್ದ ಬಿಗ್‌ಬಾಸ್‌ ಮನೆ ಇದೀಗ ಸ್ವಲ್ಪಮಟ್ಟಿಗೆ ಕೂಲ್ ಆಗಿದೆ. ಕಳೆದ ಸಂಚಿಕೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಮನದ ಮಾತುಗಳನ್ನು 'ಬಿಗ್‌ಬಾಸ್‌' ಬಳಿ ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಮನೆಯಲ್ಲಿರುವ 12 ಸ್ಪರ್ಧಿಗಳು ಕನ್ಫೆಷನ್ ರೂಮಿಗೆ ಹೋಗಿ ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಈ ವಾರ ಭಿನ್ನವಾಗಿ ನಾಮಿನೇಷ್‌ನ ಪ್ರಕ್ರಿಯೆ ಕೂಡ ನಡೆದಿದೆ.


cover image
'ನನ್ನಿಂದಲೇ ಪ್ರತಾಪ್ ಕಣ್ಣಿಗೆ ಪೆಟ್ಟು'

ಪ್ರತಾಪ್ ಆಸ್ಪತ್ರೆಯಿಂದ ಬಿಗ್‌ಬಾಸ್ ಮನೆಗೆ ಬಂದಾಗಿನಿಂದಲೂ ವರ್ತೂರು ಸಂತೋಷ್ ಬೇಸರದಲ್ಲಿದ್ದಾರೆ. ನನ್ನಿಂದಲೇ ಪ್ರತಾಪ್‌ಗೆ ಈ ರೀತಿ ಆಯಿತು ಎಂಬ ಗಿಲ್ಟ್ ಆವರನ್ನು ಕಾಡ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಬಳಿ ಕೂಡ ಚರ್ಚಿಸಿದ್ದರು.  ನನ್ನಿಂದಲೇ ಪ್ರತಾಪ್ ಕಣ್ಣು ಈ ರೀತಿ ಆಗಿದೆ, ಆದಷ್ಟು ಬೇಗ ಪ್ರತಾಪ್ ಗುಣಮುಖವಾದ್ರೆ ಸಾಕು ಎಂದಿದ್ದರು. ಈಗ ಮತ್ತೊಮ್ಮೆ ಬಿಗ್ ಬಾಸ್ ಬಳಿ ಪ್ರತಾಪ್ ಕನ್ನಡಕ ಹಾಕಿಕೊಂಡು ಇರುವುದನ್ನು ನೋಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

 

 

ಸಂಗೀತಾ ಕಣ್ಣೀರು

ಸಂಗೀತಾ ಕಳೆದ ಬಿಗ್‌ಬಾಸ್‌ ಮನೆಯಲ್ಲಿ ತಮಗಾದ ಘಟನೆಯಿಂದ ಕುಗ್ಗಿ ಹೋದಂತೆ ಕಾಣ್ತಿದೆ. ಕನ್ಫೆಷನ್ ರೂಮ್‌ಗೆ ತೆರಳಿದ ಸಂಗೀತಾ, ಇದೇ ವಿಚಾರವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಜೊತೆಗೆ ನಾನು ಸ್ಕೂಲ್‌ನಲ್ಲಿ ಹಾಗೂ ಕಾಲೇಜಿನಲ್ಲಿ ಇರುವಾಗ ನನ್ನನ್ನು ಎಲ್ಲರೂ ಬಿಗ್‌ಬಾಸ್ ಮನೆಯಲ್ಲಿ ಟ್ರೀಟ್ ಮಾಡಿದ ರೀತಿಯೇ ಟಾರ್ಗೆಟ್ ಮಾಡ್ತಿದ್ರು. ಅದೇ ಸನ್ನಿವೇಶವನ್ನು ಇಲ್ಲೂ ಎದುರಿಸುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ. 

ನನಗೆ ಪ್ರತಾಪ್ ಇಷ್ಟ

ಬಿಗ್‌ಬಾಸ್‌ ಆರಂಭದಿಂದಲೂ ಪ್ರತಾಪ್ ಮತ್ತು ಸಂಗೀತಾ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಎಲ್ಲರೂ ಅವರನ್ನು ಅಕ್ಕ-ತಮ್ಮ ಅಂತ ಕರೆಯುತ್ತಿದ್ದರು. ಆದರೆ, ಮಧ್ಯದಲ್ಲಿ ಇವರಿಬ್ಬರ ನಡುವೆ ಬಿರುಕು ಮೂಡಿತ್ತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾಗೆ ಇಷ್ಟವಾಗಿದೆ. ಹೀಗಾಗಿ ಅವರು ಪ್ರತಾಪ್‌ನನ್ನು ಮನಸಾರೆ ಹೊಗಳಿದ್ದಾರೆ. ನನಗೆ ಪ್ರತಾಪ್ ತುಂಬ ಇಷ್ಟ. ಒಂದಷ್ಟು ದಿನಗಳ ಕಳೆದ ಬಳಿಕ ಸ್ಪರ್ಧಿಗಳ ಕುಟುಂಬಸ್ಥರನ್ನು ಬಿಗ್‌ಬಾಸ್‌ಗೆ ಕರೆಸಲಾಗುತ್ತೆ. ನಮ್ಮ ಮನೆಯಿಂದ ಯಾರೂ ಬರುವುದು ಬೇಡ. ಆದರೆ, ಡ್ರೋನ್ ಪ್ರತಾಪ್ ಅವರ ಮನೆಯಿಂದ ಯಾರಾದ್ರೂ ಬಂದ್ರೆ ಖುಷಿಯಾಗುತ್ತೆ ಅಂತ ಸಂಗೀತಾ ಹೇಳಿದ್ದಾರೆ. ಜೊತೆಗೆ ಪ್ರತಾಪ್ ಅವರನ್ನು ಪ್ರೀತಿಯಿಂದ ಪ್ರತು ಎಂದಿದ್ದಾರೆ. 

 

ತನಿಷಾಗೆ ಕಾಡುತ್ತಿರುವ ಒಂಟಿತನ

ತನಿಷಾಗೆ ಬಿಗ್‌ಬಾಸ್‌ ಮನೆಯಲ್ಲಿ ಒಂಟಿತನ ಕಾಡುತ್ತಿದೆಯಂತೆ. ಅದನ್ನೇ ಬಿಗ್‌ಬಾಸ್ ಬಳಿ ಹೇಳಿಕೊಂಡಿದ್ದಾರೆ. ನನಗೆ ಇಲ್ಲಿ ಒಂಟಿತನ ಕಾಡುತ್ತಿದೆ. ನಾನು ಏನೇ ಮಾತನಾಡಿದರೂ ತಪ್ಪು. ನಾನು ಮಾತನಾಡಿದರೆ ಇಲ್ಲಿ ಯಾರಿಗೂ ಇಷ್ಟವಾಗುವುದಿಲ್ಲ ಅಂತ ಭಾವುಕರಾಗಿದ್ದಾರೆ. ಆರಂಭದಲ್ಲಿ ದೊಡ್ಮನೆಯಲ್ಲಿ ವರ್ತೂರು ಹಾಗೂ ತನಿಷಾ ನಡುವೆ ಒಳ್ಳೆ ಬಾಂಧವ್ಯ ಶುರುವಾಗಿತ್ತು. ಇದೀಗ ಇಬ್ಬರು ಮಾತುಕತೆ ನಿಲ್ಲಿಸಿಬಿಟ್ಟಿದ್ದಾರೆ. ಇದರಿಂದ ತನಿಷಾಗೆ ಒಂಟಿತನ ಕಾಡುತ್ತಿರಬಹುದು. 

 

ನಾಮಿನೇಷನ್ ಪಟ್ಟಿ

ದೊಡ್ಮನೆಯಲ್ಲಿ ದಿನ ಕಳೆದಂತೆ ಕಾಂಪಿಟೇಷನ್ ಟಫ್ ಆಗ್ತಿದೆ. ಪ್ರತಿ ಸಲದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಿನ್ನತೆವಾಗಿರುತ್ತೆ. ಹತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಫೋಟೋ ಅಂಟಿಸಿ, ಕಾರಣ ಹೇಳುವಂತೆ ಬಿಗ್‌ಬಾಸ್‌ ಸೂಚಿಸಿದ್ದರು. ಅದರಂತೆ ಈ ವಾರ ಮನೆಯಿಂದ ಹೊರಹೋಗಲು ಪವಿ, ಸಿರಿ, ವಿನಯ್, ಮೈಕಲ್, ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್ ನಾಮಿನೇಷನ್ ಆಗಿದ್ದಾರೆ. ನಿಮ್ಮ ಪ್ರಕಾರ ಈ ಬಾರ ಎಲಿಮಿನೇಟ್ ಆಗುವವರು ಯಾರೆಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+