X
ಹೋಮ್ ಚಲನಚಿತ್ರಗಳ ಒಳನೋಟ

ಪಾಪರೆಡ್ಡಿಪಾಳ್ಯ ಗ್ಯಾಂಗ್‌ನಲ್ಲಿ ಬಿರುಕು: ತುಕಾಲಿ ಸಂತು 'ಭಾರೀ ಒಳ್ಳೇ ಜನ ಕಣಣ್ಣ ಅವರು' ಅಂದಿದ್ದು ಯಾರಿಗೆ?

Author Sowmya Bairappa | Published: Thursday, November 9, 2023, 11:58 AM [IST]

ವಿನಯ್ ಗೌಡ ಕಳೆದವಾರ ಬಿಗ್‌ಬಾಸ್ ಮನೆಯಲ್ಲಿ ಗ್ರೂಪಿಸಂ ಮಾಡಿದ್ದರು. ಸ್ನೇಹಿತ್, ನಮ್ರತಾ ಗೌಡ, ಸೀರಿ, ನೀತು, ತುಕಾಲಿ ಸಂತೋಷ್ ಹಾಗೂ ರಕ್ಷಕ್ ಬುಲೆಟ್ ಅವರನ್ನು ಬಹಳ ಕ್ಲಿಯರ್ ಆಗಿ ಇನ್‌ಫ್ಲುಯೆನ್ಸ್ ಮಾಡಿದ್ದರು. ಈ ಗುಂಪಿಗೆ ವೀಕೆಂಡ್‌ನಲ್ಲಿ ಪಾಪರೆಡ್ಡಿಪಾಳ್ಯ ಗ್ಯಾಂಗ್ ಅಂತ ಹೆಸರನ್ನೂ ನೀಡಲಾಗಿತ್ತು. ಇದೀಗ ಆ ಗುಂಪಿನಲ್ಲಿ ಬಿರುಕು ಮೂಡಿದೆ.


cover image
ವರ್ತೂರು ಬಳಿ ತುಕಾಲಿ ಸಂತೋಷ್ ಮಾತು

ವಿನಯ್‌ಗೆ ದೇವ್ರಾಣೆ ಕನಿಕರ ಅನ್ನೋದೇ ಇಲ್ಲ. ತುಂಬಾ ಸರಿ ನೋಡಿದೆ.  ನಮಗೆ ಎಲ್ಲರಿಗಿಂತ ಆಡೋದು ಮುಖ್ಯ. ಡ್ರೋನ್ ಪ್ರತಾಪ್ ಮಾಡುತ್ತಿದ್ದನಲ್ಲಾ ಅದು ಸರಿ. ಅವನು ಮಾಡ್ಯಿರೋದು ನೂರಕ್ಕೆ ನೂರು ಸರಿ. ನೇರವಾಗಿ ಮಾತನಾಡುತ್ತಿರುವವರಲ್ಲಿ ವಿಷ ಇಲ್ಲ. ಇನ್ನು ಬಿಡಲ್ಲ. ಇಷ್ಟುದಿನ ಕಾಮಿಡಿಗೆ ಸಮಸ್ಯೆಯಾಗುತ್ತೆ. ಬೇರೆಯವರು ನೊಂದುಕೊಳ್ಳುತ್ತಾರೆ ಅಂದುಕೊಳ್ಳುತ್ತಿದ್ದೆ. ನಮಗೆ ಸಪೋರ್ಟ್ ಮಾಡಲ್ಲ ಅಂದುಕೊಂಡು ಬಂದೆ ಇನ್ಮೇಲಿಂದ ಕಾಮಿಡಿ ಜೊತೆಗೆವ ಆಟವನ್ನೂ ಆಡುತ್ತೇನೆ ಎಂದರು.

'ಭಾರೀ ಒಳ್ಳೇ ಜನ ಕಣಣ್ಣ ಅವರು'

ಈಗ ಇಶಾನಿಯನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ. ನಾನು ನಿಜವಾಗಿಯೂ ಸಂಗೀತಾ ಅವರನ್ನೆಲ್ಲಾ ಬೇರೆ ತರಹ ಅಂದುಕೊಂಡಿದ್ದೆ. ಅವರೇ ಒಳ್ಳೆಯವರು. ಭಾರೀ ಒಳ್ಳೇ ಜನ ಕಣಣ್ಣ ಅವರು ಎಂದರು. ಇದಕ್ಕೆ ಉತ್ತರಿಸಿದ ವರ್ತೂರು ಸಂತೋಷ್, ಅವರು ಮುಖ ಮೇಲೆ ಉಗಿದು ಸುಮ್ಮನಾಗುತ್ತಾರೆ. ನಿಮ್ಮವರು ಹೆಂಗೆ ಗೊತ್ತಾ? ಬಾ ಚಿನ್ನ ಅಂತ ಕರೆದು ಕೊನೆಗೆ ನಿನಗೆ ಇಡುತ್ತಾರೆ. ನಮ್ಮ ತಂಡದಲ್ಲಿ ಅಷ್ಟು ಮನಸ್ತಾವಿದ್ದರೂ ನಾವ್ಯಾಕೆ ಹೇಳು ಆಡೋದು? ಆಟ ಮುಗಿದ ಮೇಲೆ ಅವರು ಯಾರೂ ಕೂಡ ಏನನನ್ನೂ ಲೆಕ್ಕಕೆ ಇಟ್ಟುಕೊಳ್ಳುವುದಿಲ್ಲ. ಆದ್ರೆ, ನಿಮ್ಮಲ್ಲಿ ಹಾಗಿಲ್ಲ. ಟಾಸ್ಕ್ ಆದ್ಮೇಲೂ ಅವರ ಬಳಿ ಯಾಕೆ ಮಾತನಾಡಿದೆ? ಏನ್ ಹೇಳಿದೆ? ಅವರ ಬಳಿ ಏನಾದರೂ ಮಾಹಿತಿ ತಗೊಂಡು ಬಾ ಅಂತ ಕಳುಹಿಸುತ್ತಾರೆ ಎಂದರು.

ಟಾಸ್ಕ್ ಗೆದ್ದವರ್ಯಾರು?

ಬಿಗ್‌ಬಾಸ್ ಕಳೆದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಬೊಂಬೆ ಆಟವಯ್ಯಾ ಟಾಸ್ಕ್ ನೀಡಿದ್ದರು. ಈ ಆಟದ ನಿಯಮದ ಪ್ರಕಾರ, ಒಂದು ತಂಡದ ಸದಸ್ಯರು ನಿಗದಿತ ಸಮಯದೊಳಗೆ ಎದುರಾಳಿ ತಂಡದ ಸದಸ್ಯರನ್ನು ನಗಿಸುವಂತೆ, ಅಳಿಸುವಂತೆ ಹಾಗೂ ಕೋಪಗೊಳಿಸುವಂತೆ ಮಾಡಬೇಕಿತ್ತು. ಈ ಭಾವ ಉಕ್ಕಿಸುವ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಅವರ 'ಗಂಧದಗುಡಿ' ತಂಡ ಗೆಲುವು ಸಾಧಿಸಿದೆ. 

ಪರ್ಸ್‌ನಲ್ ವಿಷ್ಯ ಹಂಚ್ಕೋಬಾರ್ದು ಎಂದ ಕಾರ್ತಿಕ್

ನಿನ್ನೆಯ ಟಾಸ್ಕ್‌ ಸಂದರ್ಭದಲ್ಲಿ ಸ್ನೇಹಿತ್  ಅವರು ಕಾರ್ತಿಕ್ ಅವರ ಹೊರಗಿನ ವಿಚಾರವನ್ನು ಎಳೆದು ತಂದು ನಿಂದಿಸಿದ್ದರು. ಇದರಿಂದ ಬೇಸರಗೊಂಡ ಕಾರ್ತಿಕ್, ಆಟ ಮುಗಿದ ಮೇಲೆ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾಗ ತನಿ‍ಷಾ ಬಳಿ ಬೇಸರ ಹೊರಹಾಕಿದರು. ಇನ್ಮೇಲೆ ಯಾವ ಪರ್ಸ್‌ನಲ್ ವಿಷಯವನ್ನು ಯಾರ ಬಳಿಯೂ ಹೇಳಿಕೊಳ್ಳಬಾರದಪ್ಪ. ಎಲ್ಲಾ ಎರಡು ತಲೆ ಹಾವುಗಳು ಇಲ್ಲಿರೋದು ಎಂದು ನೋವು ತೋಡಿಕೊಂಡರು. ತನಿಷಾ ಕೂಡ ಅದೇ ಮಾತನ್ನು ಪುನರುಚ್ಚರಿಸಿದರು. 

ಸ್ನೇಹಿತ್ ಹೇಳಿದ್ದೇನು?

ನನ್ನ ಗಂಡಸುತನದ ಬಗ್ಗೆ ಮಾತನಾಡಿದೆ ಅಲ್ವಾ? ಗಂಡಸ್ತನದ ಬಗ್ಗೆ ಮಾತನಾಡುವ ಅರ್ಹತೆಯೂ ನಿನಗಿಲ್ಲ. ಈ ಮನೆಗೆ ಬಂದು ನೀನು ಏನು ಮಾಡಿದ್ದೀಯಾ. ಸಂಗೀತಾ ಕಡೆ ತೋರಿಸುತ್ತಾ ಅವಳ ಹಿಂದೆ ಓಡಾಡಿದ್ಯಾ ಅಷ್ಟೇ. ಅದು ಬಿಟ್ರೆ ನೀನೇನೂ ಇಲ್ಲಿ ಕಿತ್ತಾಕಿಲ್ಲ. ಲವ್ ಬಗ್ಗೆ ನೀನು ಪಾಠ ಮಾಡ್ತೀಯಾ? ಅದರ ಬಗ್ಗೆ ಒಂದು ಬುಕ್ ಬರಿ ಗುರು. ಹೊರಗಡೆ ಒಬ್ಬಳು ಹುಡುಗಿ ನಿನಗಾಗಿ ಹರಕೆ ಹೊತ್ತುಕೊಂಡು ನೀನು ಬಿಗ್‌ಬಾಸ್ ಮನೆಗೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದರೆ, ಅಂತಹ ಹುಡುಗಿ ಹಾರ್ಟ್ ಬ್ರೇಕ್ ಮಾಡಿ, ಇಲ್ಲಿ ಯಾವಳೋ ಕ್ರಶ್ ಅಂತೆ. ಕ್ರ್ಯಾಶ್ ಆದವಳನ್ನು ಇಟ್ಕೋಂಡು ಆಡ್ತಿಯಲ್ಲಾ ಎಂದು ಖಾರವಾಗಿ ನಿಂದಿಸಿದ್ದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+