X
ಹೋಮ್ ಚಲನಚಿತ್ರಗಳ ಒಳನೋಟ

ವಿಜಿ, ಗಣಿ ಗೆದ್ದಾಯ್ತು: ಸತತ ಸೋಲುಗಳಿಂದ ಕಂಗೆಟ್ಟಿರುವ ಈ 5 ನಟರು ಈ ಸಿನಿಮಾಗಳಿಂದ ಗೆಲ್ತಾರಾ?

Author Sowmya Bairappa | Published: Friday, August 23, 2024, 11:20 AM [IST]

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಾದರೂ ಕೂಡ ಏರುಪೇರುಗಳನ್ನು ಎದುರಿಸಲೇಬೇಕಾಗುತ್ತದೆ. ಹಲವು ಬಾರಿ ಬ್ಯಾಕ್‌ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟರು ಕೂಡ ಸಾಲು-ಸಾಲು ಸೋಲು ಅನುಭವಿಸುವ ಸಂದರ್ಬ ಬಂದೊದಗುತ್ತದೆ. ಅವರ ಸಿನಿಮಾ ಸೋಲು ಅಥವಾ ಗೆಲವು ಸಾಧಿಸಲು ಅವರೊಬ್ಬರೇ ಕಾರಣರಾಗಿರುವುದಿಲ್ಲ. ಬದಲಾಗಿ ಒಂದು ಸಿನಿಮಾಗೆ ಕಥೆ ಬಹಳ ಮುಖ್ಯವಾಗಿರುತ್ತದೆ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಕೆಲವೊಮ್ಮೆ ನಟರು ಉತ್ತಮ ಕಥೆ ಆಯ್ದುಕೊಳ್ಳುವಲ್ಲಿ ಎಡವಿ ಸೋಲನ್ನು ಅನುಭವಿಸುತ್ತಾರೆ. ಸದ್ಯ ಗಣೇಶ್ ಹಾಗೂ ದುನಿಯಾ ವಿಜಯ್ ಸಿನಿಮಾಗಳ ಮೂಲಕ ಚಂದನವನಕ್ಕೆ ಹೊಸ ಹುರುಪು ಸಿಕ್ಕಿದೆ. ಇನ್ನು ಕೆಲ ನಟರು ಕಂಬ್ಯಾಕ್‌ಗಾಗಿ ಕಾಯ್ತಿದ್ದಾರೆ.


cover image
ಶ್ರೀಮುರುಳಿ

ಸತತ ಸೋಲುಗಳಿಂದ ಕಂಗೆಟ್ಟಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿಯವರು 2014ರಲ್ಲಿ ಬಂದ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ಸಿಕ್ಕಪಟ್ಟೆ ಯಶಸ್ಸು ಗಳಿಸಿದ್ದರು. `ಉಗ್ರಂ' ಮುರಳಿ ಸಿನಿಜೀವನದ ಕಳಸಪ್ರಾಯ ಚಿತ್ರ.  ಇದಾದ ಬಳಿಕ ಬಂದ ರಥಾವರ, ಮಫ್ತಿ ಸಿನಿಮಾಗಳು ಹಿಟ್ ಆದವು. ಆದರೆ, ನಂತರದಲ್ಲಿ ಬಂದ ಭರಾಟೆ, ಮದಗಜ ಸಿನಿಮಾಗಳು ಉಗ್ರಂ ಮತ್ತು ಮಫ್ತಿ ರೇಂಜ್‌ನಲ್ಲಿ ಹಿಟ್ ಆಗಲಿಲ್ಲ. ಸದ್ಯ ಅವರು ಬಘೀರ ಚಿತ್ರದಲ್ಲಿ ನಟಿಸುತ್ತಿದ್ದು, ಡಾ. ಸೂರಿ ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಮುರಳಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಘೀರ ಮೂಲಕ ಶ್ರೀಮುಳಿ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

ವಿನಯ್ ರಾಜ್ ಕುಮಾರ್

ಡಾ.ರಾಜ್‌ಕುಮಾರ್ ಅಭಿನಯದ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದ ವಿನಯ್ ರಾಜ್‌ಕುಮಾರ್, ೨೦೧೫ರಲ್ಲಿ ಸಿದ್ಧಾರ್ಥ ಚಿತ್ರದ ಮೂಲಕ ಮೊದಲ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಕೂಡ ಯಾವ ಸಿನಿಮಾವೂ ನಿರೀಕ್ಷಿಸಿದಷ್ಟು ಯಶಸ್ಸು ನೀಡಲಿಲ್ಲ. ಸದ್ಯ ಅವರು ಗ್ರಾಮಾಯಣ, ಪೆಪೆ, ಅಂದೊಂದಿತ್ತು ಕಾಲ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಪೆಪೆ ಸಿನಿಮಾ ಆಗಸ್ಟ್ ೩೦ರಂದು ಬಿಡುಗಡೆಗೆ ಸಜ್ಜಾಗಿದ್ದು, ಟ್ರೇಲರ್‌ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮಲೆನಾಡ ಭಾಗದ ಹಳ್ಳಿಯೊಂದರಲ್ಲಿ ಪೆಪೆ ಸಿನಿಮಾದ ಕಥೆ ಸಾಗಲಿದ್ದು, ಜಾತಿ, ರಾಜಕೀಯ, ಸೇಡಿನ ಕಥೆಯನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ದಿಗಂತ್

ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡ ಎಂದೇ ಖ್ಯಾತಿಗಳಿಸಿರುವ ದಿಗಂತ್,  2009ರಲ್ಲಿ ಮನಸಾರೆ ಸಿನಿಮಾ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಅವರು, ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ಬಳಿಕ  ಲೈಫು ಇಷ್ಟೇನೆ, ಪಾರಿಜಾತ, ಗಾಳಿಪಟ ಹೀಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದರು. ಆದರೆ, ಆನಂತರದಲ್ಲಿ ಬಂದ ದಿಗಂತ್ ಸಿನಿಮಾಗಳನ್ನು ಸಿನಿರಸಿಕರ ಮನಗೆಲ್ಲುವಲ್ಲಿ ಸೋತಿವೆ. ಈ ವರ್ಷ ತೆರೆಕಂಡ ಯದಾ ಯದಾ , ಬ್ಯಾಚುಲರ್ ಪಾರ್ಟಿ, ದಿ ಜಡ್ಜ್‌ಮೆಂಟ್ ಚಿತ್ರಗಳು ಕೂಡ ಹಿಟ್ ಆಗಲಿಲ್ಲ. ಆಗಸ್ಟ್‌ ೨೩ರಂದು ಅವರ ಪೌಡರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಶ್ರೀನಗರ ಕಿಟ್ಟಿ

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಗರ ಕಿಟ್ಟಿ, 2003ರಲ್ಲಿ ತೆರೆಕಂಡ ಚಂದ್ರ ಚಕೋರಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಆರಂಭಿಸಿದರು. ನಂತರ ಮತ್ತೆರೆಡು ವರ್ಷ ಗೌಡ್ರು, ಲವ್ ಸ್ಟೋರಿ, ಆದಿ, ಅಯ್ಯ ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. 2005ರಲ್ಲಿ ತೆರೆಕಂಡ ಗಿರಿ ಚಿತ್ರದಿಂದ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಕಿಟ್ಟಿ, ಆನಂತರ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಾವ ಚಿತ್ರವೂ ಯಶಸ್ವಿಯಾಗಲಿಲ್ಲ. ನಾಯಕನಾಗಿ ಇವರಿಗೆ ಕೀರ್ತಿ ತಂದು ಕೊಟ್ಟ ಚಿತ್ರ ದುನಿಯಾ ಸೂರಿ ನಿರ್ದೇಶನದ `ಇಂತಿ ನಿನ್ನ ಪ್ರೀತಿಯ'.  ಬಳಿಕ ಕೆಲ ಹುಡುಗರು, ಸಂಜು ವೆಡ್ಸ್ ಗೀತಾ ಸೇರಿದಂತೆ ಕೆಲ ಹಿಟ್ ಸಿನಿಮಾ ನೀಡಿದ್ದರು.  ಇದಾದ ಬಳಿಕ ಯಾವುದೇ ಹಿಟ್ ಸಿನಿಮಾ ನೀಡಲಿಲ್ಲ. ಸತತ ಸೋಲಿನ ಬಳಿಕ ಶ್ರೀನಗರ ಕಿಟ್ಟಿ ಸಂಜು ವೆಡ್ಸ್ ಗೀತಾ ೨ ಮೂಲಕ ಕಂಬ್ಯಾಕ್ ಮಾಡಲಿದ್ದಾರಾ? ಎಂಬುದನ್ನು ಕಾದು ನೋಡ್ಬೇಕು.

ಸತೀಶ್ ನೀನಾಸಂ

ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ, ೨೦೧೩ರಲ್ಲಿ ಲೂಸಿಯಾ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡರು. ಬಳಿಕ ಬ್ಯೂಟಿಫುಲ್ ಮನಸುಗಳು, ಚಂಬಲ್, ಅಯೋಗ್ಯ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ನೀಡಿದರು. ನಂತರ ಬಂದ ತೆರೆಕಂಡ ಚಿತ್ರಗಳಲ್ಲಿ ಸತತ ಸೋಲನುಭವಿಸಿದರು. ಸದ್ಯ ಅವರು ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದು, ಅಶೋಕ ಬ್ಲೇಡ್, ದಸರಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಅಶೋಕ ಬ್ಲೇಡ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+