X
ಹೋಮ್ ಚಲನಚಿತ್ರಗಳ ಒಳನೋಟ

ಚಾಲೆಂಜಿಂಗ್ ಸ್ಟಾರ್‌ ಅಭಿನಯದ 'ಕಾಟೇರ' ಸಿನಿಮಾದ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

Author Sowmya Bairappa | Published: Saturday, December 30, 2023, 12:21 PM [IST]

ಚಾಲೆಂಜಿಂಗ್ ಸ್ಟಾರ್‌ ದರ್ಶನ್ ತೂಗುದೀಪ್ ಅಭಿನಯದ 56ನೇ ಸಿನಿಮಾ ಕಾಟೇರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನೆಲ, ಜನ, ಭಾಷೆ, ರೈತರು, ಉಳುವವನೇ ಭೂಮಿಯ ಒಡೆಯ ಕಾಯ್ದೆಗಳನ್ನು ಆಧಾರವಾಗಿಟ್ಟುಕೊಂಡು, ನೈಜ್ಯ ಘಟನೆಗಳ ಸುತ್ತ ಹೆಣೆದಿರುವ ಚಿತ್ರಕ್ಕೆ ಸಿನಿರಸಿಕರು ಫಿದಾ ಆಗಿದ್ದು, ಶಿಳ್ಳೆ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಇಲ್ಲಿ ಕಾಟೇರ ಸಿನಿಮಾ ಮೊದಲ ದಿನ ಗಳಿಸಿದ ಹಣವೆಷ್ಟು ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಮೊದಲ ದಿನದ ಕಲೆಕ್ಷನ್

ಕಾಟೇರ ಸಿನಿಮಾವನ್ನು ಕನ್ನಡಿಗರ ಟಪ್ಪಿಕೊಂಡಿದ್ದು, ಮೊದಲ ದಿನ ಬಹತೇಕ ಶೋಗಳು ಆಗಿದ್ದವು. ಹೀಗಾಗಿ, ದರ್ಶನ್ ಸಿನಿಮಾ ಮೊದಲ ದಿನ ಗಲ್ಲಾಪೆಟ್ಟಿಯಲ್ಲಿ ಉತ್ತಮ ಗಳಿಕೆ ಕಂಡಿದೆ. ಬಾಕ್ಸಾಫೀಸ್ ಪಂಡಿತರ ಪ್ರಕಾರ, ಕಾಟೇರ ಸಿನಿಮಾ ಮೊದಲ ದಿನ  ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದ್ದು, ಈ ಮೂಲಕ ಹಲವು ದಾಖಲೆಗಳನ್ನು ಬದಿಗೊತ್ತಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. 

 

ಭರ್ಜರಿ ರೇಟಿಂಗ್ಸ್ ಪಡೆದ ಕಾಟೇರ

ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್‌ನ ಕಾಟೇರ ಸಿನಿಮಾ ಟಿಕಿಟ್ ಬುಕ್ಕಿಂಗ್ ಆಪ್ ಬುಕ್‌ ಮೈ ಶೋನಲ್ಲಿ 9.5 ಪಡೆದುಕೊಂಡಿದೆ. ಐಎಂಡಿಬಿಯಲ್ಲಿ  8.2 ಪಡೆದುಕೊಂಡಿದೆ. ಕಾಟೇರ ಸಿನಿಮಾ ಅಡ್ವಾನ್ಸ್ ಟಿಕೆಟ್‌ ಬುಕ್ಕಿಂಗ್‌ನಲ್ಲಿಯೇ ಕೋಟಿ ರೂಪಾಯಿ ಗಳಿಸಿತ್ತು. ಒಂದೊಮ್ಮ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದರೆ ಇನ್ನೂ ಹೆಚ್ಚಿನ ಹೆಚ್ಚಿನ ಗಳಿಕೆ ಕಾಣುತ್ತಿತ್ತು. 

 

ಸಿನಿಮಾ ಕಥೆ

1989ರ ಸಮಯದಲ್ಲಿ ಭೀಮನಹಳ್ಳಿ ಹಾಗೂ ಮಲ್ಲನಹಳ್ಳಿ ಜನರು ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ಜೊತೆಗೆ ತಮ್ಮ ಊರಿಗಾಗಿ ಹೋರಾಡಿ ಜೈಲು ಸೇರಿದ 'ಕಾಟೇರ'ನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರಬರುವ ಕಾಟೇರ, ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದೆಡೆ, ನಾಲೆ ಅಗೆಯುವ ವೇಳೆ ಒಂದೇ ಜಾಗದಲ್ಲಿ 107ರ ಜನರ ಅಸ್ಥಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನರು ಸತ್ತು ಮಣ್ಣಾಗಿದ್ದೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? 'ಕಾಟೇರ' ಜೈಲು ಸೇರಿದ್ಯಾಕೆ? ಎಂಬುದೇ ಸಿನಿಮಾದ ಒನ್‌ಲೈನ್ ಕಥೆ. 

ಎರಡು ಕಾಲಘಟ್ಟದಲ್ಲಿ ಸಾಗುವ ಸಿನಿಮಾ

ಕಾಟೇರ ಸಿನಿಮಾ ಕಥೆ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ನಿರ್ದೇಶಕ ತರುಣ್ ಸುಧೀರ್ ಫ್ಯಾಶ್‌ಬ್ಯಾಕ್ ತಂತ್ರ ಬಳಸಿ ಕಥೆ ಹೇಳುತ್ತಾ ಸಾಗುತ್ತಾರೆ. ದೇವರಾಯ ಮತ್ತು ಕಾಳೇಗೌಡ ಜೊತೆ ಸೇರಿ ಇನ್ನು ಕೆಲ ಜಮೀನ್ದಾರರು ಭೂಮಿಯನ್ನು ರೈತರಿಗೆ ಗೇಣಿಗೆ ನೀಡಿ, ಹೆಚ್ಚಿನ ಪಾಲನ್ನು ಪಡೆಯುತ್ತಿರುತ್ತಾರೆ. ಧಣಿಗಳು ಹೇಳಿದನ್ನು ಕೇಳಬೇಕು, ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲವೆಂದು ಇಡೀ ಊರಿನ ಜನ ಬದುಕುತ್ತಿರುತ್ತಾರೆ. 'ಕಾಟೇರ' ಕೂಡ ಈ ಗುಂಪಿನವನೇ. ಆದರೆ, ಆತ ತನ್ನವರಿಗೆ ನೋವಾದರೆ ಮಾತ್ರ ಸಹಿಸುವುದಿಲ್ಲ. 'ಕಾಟೇರ' ತನ್ನವರಿಗೆ ಹುಲಿ ಆಗೋಕು ಸಿದ್ಧ, ಬಲಿ ಆಗೋಕು ಸಿದ್ಧ ಎಂಬ ಜಾಯಮಾನದವನು. ಶಾನುಭೋಗರ ಮಗಳು ಪ್ರಭಾವತಿ (ಆರಾಧನಾ) ಕೂಡ ಆತನ ಬೆನ್ನಿಗೆ ನಿಲ್ಲುತ್ತಾಳೆ. ಚಿತ್ರದ ಟ್ರೈಲರ್‌ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್‌ನಲ್ಲಿ ತೆರೆಮೇಲೆ ಎಂಟ್ರಿ ಕೊಡುತ್ತಾರೆ. 

 

ಕಲಾವಿದರ ಅಭಿನಯ

ಈ ಸಿನಿಮಾದಲ್ಲಿ ದರ್ಶನ್ 'ಕಾಟೇರ'ನಾಗಿ ಎರಡು ಶೇಡ್‌ಗಳಲ್ಲಿ ಅಬ್ಬರಿಸಿದ್ದಾರೆ. ಒನ್‌ಮ್ಯಾನ್ ಶೋನಂತೆ ದರ್ಶನ್ ಮಿಂಚಿದ್ದಾರೆ. ಆಕ್ಷನ್ ಜೊತೆಗೂ ಭಾವನಾತ್ಮಕ ಸನ್ನಿವೇಶಗಳಲ್ಲೂ ಸಖತ್ ಇಷ್ಟಾಗುತ್ತಾರೆ. ನಾಯಕಿ ಪ್ರಭಾವತಿಯಾಗಿ ಆರಾಧಾ ರಾಮ್ ಕೂಡ ತಮ್ಮ ಚಿಕ್ಕ ಅವಕಾಶವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ದುಷ್ಟ ದೇವರಾಯನಾಗಿ ಜಗಪತಿ ಬಾಬು, ಕಟುಕ ಕಾಳೇಗೌಡನಾಗಿ ವಿನೋದ್ ಆಳ್ವ, ಕಾಟೇರನ ಅಕ್ಕನಾಗಿ ಶೃತಿ ಹಾಗೂ ಭಾವನಾಗಿ ಕುಮಾರ್ ಗೋವಿಂದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಪೊಲೀಸ್ ದಪೇದಾರ್ ಆಗಿ ಅಚ್ಯುತ್ ಕುಮಾರ್, ಶಾನುಭೋಗರಾಗಿ ಅವಿನಾಶ್ ಗಮನ ಸೆಳೆದಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+