X
ಹೋಮ್ ಚಲನಚಿತ್ರಗಳ ಒಳನೋಟ

ಯುವ ರಾಜ್‌ಕುಮಾರ್ to ನವೀನ್ ಶಂಕರ್: ಚೆಂದನವನದ ಭವಿಷ್ಯದ 5 ಭರವಸೆಯ ನಾಯಕ ನಟರಿವರು!

Author Sowmya Bairappa | Updated: Monday, October 28, 2024, 09:53 AM [IST]

ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳಿಂದ ನಟನೆಗೆ ಇಳಿದ ಕನ್ನಡದ ಅನೇಕ ನಟರು, ಇಂದು ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ಸಿನಿಮಾದ ಮೇಲಿರುವ ಆಸಕ್ತಿ. ಪ್ರಸ್ತುತ ಚಂದನವನದಲ್ಲಿ ಒಳ್ಳೊಳ್ಳೆಯ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಭವಿಷ್ಯದ ಭರವಸೆಯ 5 ನಾಯಕ ನಟರ ಪಟ್ಟಿ ಇಲ್ಲಿದೆ..


cover image
ಯುವ ರಾಜ್‌ಕುಮಾರ್

ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಮೊಮ್ಮಗನಾದ ಯುವ ರಾಜ್‌ಕುಮಾರ್ ತಮ್ಮ ಚೊಚ್ಚಲ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಸಂತೋಷ್ ಆನಂದರಾಮ್ ನಿರ್ದೇಶನದ  'ಯುವ' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಚೆಂದನವನ ಪ್ರವೇಶಿಸಿದ ಇವರು, ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ಸದ್ಯ ಯುವ ಅವರು, ರೋಹಿತ್ ಪದಕಿ  ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋ, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಯುವ 02 ಸಿನಿಮಾದ ಟೈಟಲ್ & ಫಸ್ಟ್ ಲುಕ್ ನವೆಂಬರ್ 1ರಂದು ಬಿಡುಗಡೆ ಆಗಲಿದೆ. 

ಝೈದ್ ಖಾನ್

ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ 2022ರಲ್ಲಿ ಹೀರೊ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಜಯತೀರ್ಥ ನಿರ್ದೇಶನದ 'ಬನಾರಸ್' ಸಿನಿಮಾದ ಮೂಲಕ ಅವರು ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು. ಕಾಶಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿತ್ತು. ಝೈದ್ ಖಾನ್ ಮೊದಲ ಚಿತ್ರದಲ್ಲೇ ಅನುಭವಿ ನಟನ ರೀತಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಆದರೆ,  ಸಿನಿಮಾ ಮಾತ್ರ ಗೆಲ್ಲಲಿಲ್ಲ. ಸದ್ಯ 'ಕಲ್ಟ್' ಎಂಬ ಸಿನಿಮಾ ಮಾಡಸ್ತಿದ್ದು, ಈ ಚಿತ್ರ ಪೋಸ್ಟರ್‌ನಿಂದಲೇಕುತೂಹಲ ಮೂಡಿಸಿದೆ.


ನವೀನ ಶಂಕರ್

ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದರಾದ ನವೀನ್‌ ಶಂಕರ್ 'ಗುಳ್ಟೂ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಸಮಯಕ್ಕೆ ಸಿನಿ ಪ್ರೇಕ್ಷಕರಿಂದ 'ಕನ್ನಡದಲ್ಲಿ ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಬರಲ್ಲ ಅಂತೀರಲ್ಲ ಬಂದಿದೆ ನೋಡಿ' ಎಂಬ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಶತದಿನದ ಸಂಭ್ರಮ ಆಚರಿಸಿಕೊಂಡಿದ್ದ ಗುಳ್ಟೂ ಚಿತ್ರವನ್ನು ಇಂದಿಗೂ ಸಹ ಕನ್ನಡ ಸಿನಿರಸಿಕರು ಇತರೆ ಪ್ರೇಕ್ಷಕರಿಗೆ ನೋಡಿ ಎಂದು ಸಲಹೆ ನೀಡುವಂತಹ ಚಿತ್ರವಾಗಿ ಉಳಿದಿದೆ. ನಂತರ ಕೆಲ ಚಿತ್ರಗಳಲ್ಲಿ ನಟಿಸಿದ ನವೀನ್ ಶಂಕರ್,  ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ  ಕ್ಷೇತ್ರಪತಿ  ಸಿನಿಮಾ ಮೂಲಕ ಸದ್ದು ಮಾಡಿದ್ದ ನವೀನ್, ಸದ್ಯ ಶಿವಣ್ಣ 131, ನೋಡಿದವರು ಏನಂತಾರೆ, ಮೂಲತಃ ನಮ್ಮವರೇ, ಕಿರಿಕ್ Et 11 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ನವೀನ್ ಶಂಕರ್ ತಮ್ಮ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ನಟನಾಗುವ ಭರವಸೆಯಿದೆ.  


ಪೃಥ್ವಿ ಶಾಮನೂರು

ಪೃಥ್ವಿ ಶಾಮನೂರು  'ಪದವಿ ಪೂರ್ವ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. ಇವರು ತಮ್ಮ ಮೊದಲ ಸಿನಿಮಾದಲ್ಲೇ ವಿಮರ್ಶಕರು ಮತ್ತು ಪ್ರೇಕ್ಷಕರ ಮನಗೆದ್ದಿದ್ದು, ಪೃಥ್ವಿ ಅಭಿನಯಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು.  'ಪದವಿ ಪೂರ್ವ' ಚಿತ್ರವನ್ನು ಕನ್ನಡ ಚಿತ್ರರಂಗದ ವಿಕಟ ಕವಿ ಯೋಗರಾಜ್ ಭಟ್ ನಿರ್ಮಿಸಿದ್ದರು. ಇದೀಗ ಯೋಗರಾಜ್ ಭಟ್ ನಿರ್ಮಾಣದ ಮತ್ತೊಂದು ಸಿನಿಮಾ ಉಡಾಳದಲ್ಲಿ ನಟಿಸುತ್ತಿದ್ದಾರೆ. 

ದೀಕ್ಷಿತ್ ಶೆಟ್ಟಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ದೀಕ್ಷಿತ್ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾ 2020ರಲ್ಲಿ ತೆರೆಕಂಡ ದಿಯಾ. ಈ ಚಿತ್ರದ ಬಳಿಕ ಇವರಿಗೆ ಹಲವಾರು ಅವಕಾಶಗಳು ಅರಸಿ ಬಂದಿವೆ. ಸದ್ಯ ಇವರು ಕನ್ನಡದ ಕೆಟಿಎಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಸಿನಿಮಾದಲ್ಲಿ ನಟಿಸಿದ್ದಾರೆ. ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕ ನಟ ನಾನಿ ಗೆಳೆಯನಾಗಿ ಮಿಂಚಿದ್ದಾರೆ. 



 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+