X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕುರಿತ ಆಸಕ್ತಿಕರ ವಿಷಯಗಳಿವು!

Author Sowmya Bairappa | Updated: Thursday, August 10, 2023, 06:36 PM [IST]

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ 2023ರ ಆಗಸ್ಟ್ 7ರಂದು ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಅತಿಥಿ ಪಾತ್ರವನ್ನು ನಿರ್ವಹಿಸಿದ್ದ ಇವರು, 2023ರ ಆಗಸ್ಟ್ 6ರಂದು ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಲ್ಲಿ ಸ್ಪಂದನಾ ಅವರ ಕುರಿತ ಆಸಕ್ತಿಕರ ವಿಷಯಗಳನ್ನು ನೀಡಲಾಗಿದೆ.


cover image
ಮಂಗಳೂರಿನರು

ಸ್ಪಂದನಾ ವಿಜಯ್ ರಾಘವೇಂದ್ರ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿವರು. ಇವರ ತಂದೆ ಬಿ.ಕೆ.ಶಿವರಾಮ್ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು.ಬೆಂಗಳೂರಿನ ಸ್ಟೆಲಾ ಮೇರಿಸ್ ಎಕ್ಸ್ಟ್ರೀಮ್ ಸ್ಕೂಲ್‌ನಲ್ಲಿ ಶಾಲಾ ದಿನಗಳನ್ನು ಕಳೆದಿದ್ದ ಸ್ಪಂದನಾ ವಿಜಯ್ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಇವರು ತುಂಬಾ ಸಾಫ್ಟ್ ಸ್ವಭಾವದವರು. ಸಪ್ರೈಸ್ ಕೋಡೋದು ಅಂದ್ರೆ ಸ್ಪಂದನಾಅವರಿಗೆ ತುಂಬಾ ಇಷ್ಟವಂತೆ. ಜೊತೆಗೆಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಇದ್ದ ಸ್ಪಂದನಾ, ಆಗಾಗ ವಿಜಯ್ ರಾಘವೇಂದ್ರ ಅವರ ಗಾಯನದ ವಿಡಿಯೋ ಹಾಕುತ್ತಿದ್ದರು.   

ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಪ್ರೀತಿ

ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರದ್ದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್. ಮಂಗಳೂರಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದ ವಿಜಯ್, 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯೊಂದರಲ್ಲಿ ಸ್ಪಂದನಾ ಅರನ್ನು ನೋಡಿದ್ದರು. ಈ ವೇಳೆ ಸಂಗೀತದ ವಿಚಾರವಾಗಿ ಇವರಿಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ನಂತರ 2007ರಲ್ಲಿ ಶೇಷಾದ್ರಿಪುರಂ ಕಾಫಿ ಡೇಯಲ್ಲಿ 2ನೇ ಬಾರಿ ಭೇಟಿಯಾಗಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನನ್ನು ಮದುವೆಯಾಗ್ತಿಯಾ ಅಂತ ಕೇಳಿದ್ದರಂತೆ. ಸ್ಪಂದನಾ ಕೂಡ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ನಂತರ ತಂದೆ-ತಾಯಿಯ ಬಳಿ ಪ್ರೀತಿ ವಿಚಾರ ಹೇಳಿದ್ದರಂತೆ. 

ಮದುವೆ

ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2007ರ ಆಗಸ್ಟ್ 26ರಂದು ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಈ ಜೊಡಿ ಪ್ರೇಮಿಗಳಂತೆಯೇ ಇದ್ದರು. ಈ ದಂಪತಿಗೆ ಶೌರ್ಯ ಎಂಬ14 ವರ್ಷದ ಓರ್ವ ಮಗನಿದ್ದಾನೆ.

 

ನಿರ್ಮಾಣ ಹಾಗೂ ನಟನೆ

ಸ್ಪಂದನಾ ವಿಜಯ್ ರಾಘವೇಂದ್ರ ತಮ್ಮ ಪತಿ ನಟಿಸಿರುವ `ಕಿಸ್ಮತ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ 2016ರಲ್ಲಿ ತೆರೆಕಂಡ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. 

ನಿಧನ

ಸ್ಪಂದನಾ ಮೂರು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದರು. ಈ ವೇಳೆ ಲೋ ಬಿಪಿಯಾಗಿದ್ದು, ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳಷ್ಟೇ ಬಾಕಿಯಿರುವಾಗಲೇ ಈ ದುರಂತ ನಡೆದಿದೆ. ಆಘಾತಕಾರಿ ಸುದ್ದಿ ಬೆನ್ನಲ್ಲೇ  ವಿಜಯ ರಾಘವೇಂದ್ರ, ಶ್ರೀಮುರುಳಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ,  ಸ್ಪಂದನಾ ಅವರ ಸಹೋದರ ಬ್ಯಾಂಕಾಕ್‌ಗೆ ತೆರಳಿದ್ದಾರೆ.  

ಸಹೋದರನ ಪರ ಪ್ರಚಾರ

ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಮ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಸ್ಪಂದನಾ ಸಹದರನ ಪರವಾಗಿ ಪ್ರಚಾರ ಮಾಡಿದ್ದರು. ಕೆಲದಿನಗಳ ಹಿಂದಷ್ಟೇ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು.  

 

ಸಹೋದರನ ಪರ ಪ್ರಚಾರ

ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಮ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಸ್ಪಂದನಾ ಸಹದರನ ಪರವಾಗಿ ಪ್ರಚಾರ ಮಾಡಿದ್ದರು. ಕೆಲದಿನಗಳ ಹಿಂದಷ್ಟೇ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+