X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ ಸ್ಟಾರ್ ನಟರು ರಿಜೆಕ್ಟ್ ಮಾಡಿದ ಬ್ಲಾಕ್‌ಬಸ್ಟರ್ ಸಿನಿಮಾಗಳಿವು!

Author Sowmya Bairappa | Updated: Tuesday, July 23, 2024, 10:09 AM [IST]

ಚಿತ್ರರಂಗದ ಹಲವರು ನಿರ್ದೇಶಕರು ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಇನ್ನೂ ಕೆಲವರು ಎರಡನೇ ಬಾರಿಗೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಹೊಸ ನಿರ್ದೇಶಕರ ಸಿನಿಮಾ ಒಪ್ಪಿಕೊಳ್ಳುವಾಗ ಸ್ಟಾರ್ ನಟರು ಹಲವಾರು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಯಾಕೆಂದರೆ, ಸ್ಟಾರ್ ನಟರ ಅವರದ್ದೇಯಾದ ಗಡಿಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಇದು ಉದ್ದೇಶಪೂರ್ವಕವಲ್ಲ. ಕೆಲವೊಮ್ಮೆ ಕಾರಣಾಂತರಗಳಿಂದ ಸ್ಟಾರ್ ನಟರು ಹೊಸ ನಿರ್ದೇಶಕರ ಸಿನಿಮಾ ಮಾಡಲಾಗುವುದಿಲ್ಲ. ಆದರೆ, ಅದು ಉದ್ದೇಶಪೂರ್ವಕವಾಗಿರುವುದಿಲ್ಲ. ಸ್ಟಾರ್ ನಟರು ತಿರಸ್ಕರಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿರುವುದನ್ನು ನಾವು ಎಲ್ಲಾ ಚಿತ್ರರಂಗದಲ್ಲೂ ನೋಡಬಹುದು. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ. ಇಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ರಿಜೆಕ್ಟ್ ಮಾಡಿದ ಬ್ಲಾಕ್‌ಬಸ್ಟರ್ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಪುನೀತ್ ರಾಜ್ ಕುಮಾರ್
1

ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ಸಿನಿಮಾಗಾಗಿ ಮೊದಲ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕೇಳಲಾಗಿತ್ತು. ಆದರೆ, ಕಾರಾಣಾಂತರಗಳಿಂದ ಪುನೀತ್ ಈ ಸಿನಿಮಾ ಮಾಡಲು ಒಪ್ಪಿಕೊಂಡಿರಲಿಲ್ಲ. ಬಳಿಕ 2006ರ ಡಿಸೆಂಬರ್ 29ರಂದು ಬಿಡುಗಡೆಯಾದ ಈ ಸಿನಿಮಾ  ಒಂದು ವರ್ಷ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ಬರೆಯಿತು. ಯೋಗರಾಜ್ ಭಟ್ ಅವರಿಗೆ 'ಮುಂಗಾರು ಮಳೆ' ದೊಡ್ಡ ಯಶಸ್ಸು ನೀಡಿತ್ತು.  ಕೇವಲ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 75 ಕೋಟಿ ಬಾಚಿಕೊಂಡಿತ್ತು. ಯೋಗರಾಜ್ ಭಟ್ ಈ ಸಿನಿಮಾಗೂ ಮೊದಲು ಮಣಿ ಮತ್ತು ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾ ಮಾಡಿದ್ದರು. ಆದರೆ, ಈ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಆದರೆ, ಅವರ ಮೂರನೇ ಸಿನಿಮಾ ದಾಖಲೆಗಳ ದಾಖಲೆ ಬರೆಯಿತು. ಈ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ನಂತರದಲ್ಲಿ ದಿನಗಳಲ್ಲಿ ಪರಮಾತ್ಮ ಸಿನಿಮಾ ಮೂಲಕ ಯೋಗರಾಜ್ ಭಟ್ ಮತ್ತು ಪುನೀತ್ ಒಂದಾದರು. 

ಕುಮಾರ್ ಗೋವಿಂದ್
2

ಕನ್ನಡ ಚಿತ್ರರಂಗದ ಪಾಲಿಗೆ ಎಂಟನೇ ಅದ್ಭುತ ಎಂದು ಬಣ್ಣಿಸಬಹುದಾದ ಚಿತ್ರ ಓಂ. ರಿಯಲ್ ಸ್ಟಾರ್ ಉಪೇಂದ್ರ ಅವರು ಮೊದಲು ಈ ಸಿನಿಮಾಗೆ ಕುಮಾರ್ ಗೋವಿಂದ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರು. ಯಾಕೆಂದರೆ, ಅವರ ಹಿಂದಿನ ಸಿನಿಮಾ 'ಶ್‌'ನಲ್ಲಿ ಕುಮಾರ್ ಗೋವಿಂದ್ ನಾಯಕನಾಗಿ ನಟಿಸಿದ್ದು, ಚಿತ್ರ ಹಿಟ್ ಕೂಡ ಆಗಿತ್ತು.  ಬಳಿಕ ಕಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದ ಉಪೇಂದ್ರ, ಶಿವರಾಜ್‌ಕುಮಾರ್ ಅವರನ್ನು ಈ ಸಿನಿಮಾದ ನಾಯಕನನ್ನಾಗಿ ಮಾಡಲು ನಿರ್ಧರಿಸಿದರು. 'ಓಂ' ಸಿನಿಮಾ 1995ರಲ್ಲಿ ತೆರಕಂಡು ಬ್ಲಾಕ್‌ಬಸ್ಟರ್ ಆಗಿತ್ತು. ಶಿವಣ್ಣ 'ಸತ್ಯ' ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಚಿತ್ರದಲ್ಲಿ ಉಪೇಂದ್ರ ಬೆಂಗಳೂರು ಭೂಗತ ಲೋಕದ ವಾಸ್ತವ ವ್ಯಕ್ತಿಗಳ ದರ್ಶನ ಮಾಡಿಸಿದ್ದು, ಈ ಸಿನಿಮಾ ಕನ್ನಡ ಚಿತ್ರರಂಗದ ಚಹರೆಯನ್ನೇ ಬದಲಾಯಿಸಿತ್ತು. ಗ್ಯಾಂಗ್ ಸ್ಟರ್ ಸಿನಿಮಾಗಳ ಎರಾ ಶುರುವಾಗಿದ್ದೇ ಈ ಚಿತ್ರದಿಂದ.  ನಿಜ ಜೀವನದಲ್ಲಿ ಭೂಗತ ಜಗತ್ತಿನಲ್ಲಿದ್ದವರೇ 'ಓಂ' ಚಿತ್ರದಲ್ಲಿ ರೌಡಿಯಾಗಿ ನಟಿಸಿದ್ದು ಇದೇ ಮೊದಲಾಗಿತ್ತು. ಈ ಸಿನಿಮಾ 550ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ, ಅತಿಹೆಚ್ಚು ಬಾರಿ ಮರು ಬಿಡುಗಡೆಯಾದ ಭಾರತೀಯ ಚಿತ್ರ ಎಂಬ ದಾಖಲೆ ಬರೆದಿದೆ.

ಸುದೀಪ್
3

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಅಮೆರಿಕಾ ಅಮೆರಿಕಾ'. ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಮತ್ತು ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ,  ಅಕ್ಷಯ್ ಆನಂದ್ ನಿರ್ವಹಿಸಿದ್ದ ಶಶಾಂಕ್ ಪಾತ್ರಕ್ಕೆ ಮೊದಲು ಕಿಚ್ಚ ಸುದೀಪ್ ಅವರನ್ನು ಕೇಳಲಾಗಿತ್ತು. ಆದರೆ, ಸುದೀಪ್ ಈ ಸಿನಿಮಾ ಮಾಡಲಿಲ್ಲ. ಆದರೆ, ೧೯೯೫ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು. 

 

ಡಾ.ರಾಜಕುಮಾರ್
4

ಕಸ್ತೂರಿ ನಿವಾಸ ಸಿನಿಮಾದ ಕಥೆಯನ್ನು ಮೊದಲು ತಮಿಳಿನಲ್ಲಿ ಬರೆಯಲಾಗಿತ್ತು ಎಂಬ ಸತ್ಯ ಹಲವರಿಗೆ ತಿಳಿದಿಲ್ಲ. ಹೌದು, ಈ ಸಿನಿಮಾವನ್ನು ತಮಿಳಿನಲ್ಲಿ ಶಿವಾಜಿ ಗಣೇಶನ್‌ಗಾಗಿ ಬರೆಯಲಾಗಿತ್ತು. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ನಾಯಕನ ವಿನಾಶಕಾರಿ ಅಂತ್ಯವಿದೆ ಎಂಬ ಕಾರಣಕ್ಕೆ ಶಿವಾಜಿ ಗಣೇಶನ್ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ನಂತರ ದೊರೈ-ಭಗವಾನ್ ಈ ಚಿತ್ರಕಥೆಯನ್ನು ಖರೀದಿಸಿ, ಕನ್ನಡದಲ್ಲಿ  'ಕಸ್ತೂರಿ ನಿವಾಸ' ವನ್ನಾಗಿ ಮಾಡಿದರು. ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಕೊಡುಗೈ ದಾನಿ ರವಿವರ್ಮನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರ ದಾಖಲೆ ಕಂಡು ರಾಜ್ ಸಿನಿಜೀವನದ ಮೈಲುಗಲ್ಲು ಚಿತ್ರವಾಯಿತು. ತನ್ನ ಸ್ಥಿತಿ ಏನೇ ಇರಲಿ ತನ್ನಲ್ಲಿ ಸಹಾಯ ಬೇಡಿ ಬಂದವರನ್ನು ಎಂದು ಬರಿಗೈಲಿ ಕಳಿಸದ ರಾಜ್ ಪಾತ್ರ ಸಿನಿ ಪ್ರೇಮಿಗಳ ಮನಸ್ಸನ್ನು ತಪ್ತವಾಗಿಸಿತು. ಬಳಿಕ ಈ ಸಿನಿಮಾ ಮತ್ತೆ ತಮಿಳಿಗೆ ರಿಮೇಕ್ ಆಯಿತು. 

 

ದರ್ಶನ್
5

ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾಗಾಗಿ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಂಪರ್ಕಿಸಲಾಗಿತ್ತು. ಸೂರಿ ಅವರು ಈ ಸಿನಿಮಾಗೂ ಮೊದಲು ಮೆಗಾ ಹಿಟ್ ಸಿನಿಮಾಗಳನ್ನು ನೀಡಿದ್ದರೂ ದರ್ಶನ್ ಅವರ ಡೇಟ್ ಸಿಗಲಿಲ್ಲ. ನಂತರ ಈ ಚಿತ್ರದ ಸ್ಕ್ರಿಪ್ಟ್‌ನಲ್ಲಿ ಹಲವು ಬದಲಾವಣೆ ಮಾಡಿ, ಹೊಸ ನಟ ವಿಕ್ಕಿ ಅವರನ್ನು ನಾಯಕನನ್ನಾಗಿ ಮಾಡಲಾಯಿತು. ಪೊಲೀಸರು ಡ್ರಗ್ಸ್ನಿಂದ ಹೇಗೆ ಹಣ ಗಳಿಸುತ್ತಾರೆ. ಅದನ್ನು ಮುಚ್ಚಿಡುವುದು ಹೇಗೆ? ಡ್ರಗ್ಸ್ ಪ್ರಕರಣಗಳಲ್ಲಿ ಅಮಾಯಕರು ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎನ್ನುವ ಕಥೆಯನ್ನೊಳಗೊಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. 

ರಕ್ಷಿತ್ ಶೆಟ್ಟಿ
6

2015ರಲ್ಲಿ ಬಿಡುಗಡೆಯಾದ ಹಾರರ್ ಕಂಟೆಂಟ್ ಇರುವಂತಹ ಸಿನಿಮಾ ರಂಗಿತರಂಗ. ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ಮೊದಲು ಸಿಂಪಲ್ ಸ್ಟಾರ್ ರಕ್ಷಿತ್ ನಟಿಸಬೇಕಿತ್ತು.  ಅನುಪ್ ಭಂಡಾರಿ ಈ ಚಿತ್ರಕ್ಕಾಗಿ ಮೊದಲು ರಕ್ಷಿತ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ರಕ್ಷಿತ್ ಅವರಿಗೂ ಈ ಕಥೆ ಬಹಳ ಇಷ್ಟವಾಗಿತ್ತು. ಆದರೆ, ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಸಿನಿಮಾ ಮಾಡಲಾಗಲಿಲ್ಲ. ಬಳಿಕ ನಿರುಪ್ ಭಂಡಾರಿ ನಾಯಕನಾಗಿ ನಟಿಸಿದರು. ವಿಭಿನ್ನ ಕಥಾಹಂದರ ಹೊಂದಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು.  

 

ದಿಗಂತ್
7

ಲೂಸಿಯಾ ಸಿನಿಮಾಗಾಗಿ ನಿರ್ದೇಶಕ ಪವನ್ ಕುಮಾರ್ ಅವರು ಮೊದಲು ದೂದ್ ಪೇಡ ದಿಗಂತ್ ಅವರನ್ನು ಸಂಪರ್ಕಿಸಿದ್ದರು. ಇವರಿಬ್ಬರು ಮೊದಲು 'ಲೈಫು ಇಷ್ಟೇನೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ, ಸಮಯದ ಕೊರತೆಯಿಂದಾಗಿ ದಿಗಂತ್ ಈ ಸಿನಿಮಾ ಮಾಡಲಾಗಲಿಲ್ಲ. ಬಳಿಕ  ಸತೀಶ್ ನೀನಾಸಂ ನಾಯಕನಾಗಿ ಅಭಿನಯಿಸಿದರು. ತನ್ನ ವಿಭಿನ್ನ ಹಾಡುಗಳು ಹಾಗೂ ಮೇಕಿಂಗ್ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರೋದ್ಯಮದಲ್ಲೂ ಸಾಕಷ್ಟು ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಹುಟ್ಟುಹಾಕಿದ ಚಿತ್ರ ಇದು.

ದರ್ಶನ್
8

ಓಂ ಬಳಿಕ ಪ್ರೇಮ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಬ್ಲಾಕ್ ಬಸ್ಟರ್ ಸಿನಿಮಾ ಜೋಗಿ. ಈ ಸಿನಿಮಾದಲ್ಲಿ ದರ್ಶನ್ ಅಭಿನಯಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ದರ್ಶನ್ ಈ ಸಿನಿಮಾ ಮಾಡಲಿಲ್ಲ. ಬಳಿಕ ಶಿವಣ್ಣ ನಾಯಕನಾಗಿ ನಟಿಸುವುದರ ಜೊತೆಗೆ ಚಿತ್ರದ ನಟನೆಗಾಗಿ ಶಿವಣ್ಣ ರಾಜ್ಯ ಪ್ರಶಸ್ತಿ ಪಡೆದಿದ್ದರು. ಭೂಗತ ಲೋಕದ ಛಾಯೆಯೊಂದಿಗೆ ಮಾತೃವಾತ್ಸಲ್ಯವನ್ನು ಈ ಸಿನಿಮಾ ಹೊಂದಿತ್ತು. ಇದು ಕರ್ನಾಟಕದ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100ಕ್ಕೂ ಹೆಚ್ಚು ದಿನ ಪ್ರದರ್ಶನ ಕಾಣುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಈ ಸಿನಿಮಾದ ಬಳಿಕ ಪ್ರೇಮ್ ಜೋಗಿ ಪ್ರೇಮ್ ಎಂದೇ ಖ್ಯಾತಿ ಗಳಿಸಿದರು. 

ಯೋಗೇಶ್
9

'ಡ್ರಾಮಾ' ಸಿನಿಮಾಗಾಗಿ ಯೋಗರಾಜ್ ಭಟ್ ಮೊದಲು ಲೂಸ್‌ಮಾದ ಯೋಗೇಶ್ ಅವರನ್ನು ಸಂಪರ್ಕಿಸಿದ್ದರು. ಡ್ರಾಮಾ ಸಿನಿಮಾದಲ್ಲಿ ನೀನಾಸಂ ಸತೀಶ್ ನಿರ್ವಹಿಸಿದ್ದ ಪಾತ್ರಕ್ಕಾಗಿ ಅವರನ್ನು ಕೇಳಲಾಗಿತ್ತು. ಆದರೆ, ದಿನಾಂಕದ ಸಮಸ್ಯೆಯಿಂದಾಗಿ ಯೋಗಿ ಈ ಅವಕಾಶವನ್ನು ಕಳೆದುಕೊಂಡರು. ರಾಕಿಂಗ್ ಸ್ಟಾರ್ ಯಶ್, ರಾಧಿಕಾ, ನೀನಾಸಂ ಸತೀಶ್, ಸಿಂಧು ಲೋಕನಾಥ್ ಅಭಿನಯದ ಈ ಸಿನಿಮಾ ಹಿಟ್ ಆಗಿತ್ತು. 

ಪುನೀತ್ ರಾಜ್ ಕುಮಾರ್
10

ಸಲ್ಮಾನ್‌ ಖಾನ್ ನಟನೆಯ ಹಿಂದಿಯ ಭಜರಂಗಿ ಭಾಯಿಜಾನ್ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ವಿಷಯ ಹಲವರಿಗೆ ತಿಳಿದಿಲ್ಲ. ಈ ಸಿನಿಮಾದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಕ್‌ಲೈನ್ ವೆಂಕಟೇಶ್, ಆರಂಭದಲ್ಲಿ ಸಲ್ಮಾನ್ ಖಾನ್‌ ಪಾತ್ರವನ್ನು ನಿರ್ವಹಿಸಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಅವರು ಸಿನಿಮಾ ಮಾಡಲಾಗಲಿಲ್ಲ ಎಂದಿದ್ದರು. 

ರಜನಿಕಾಂತ್
11

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ 'ನಾಗರಹಾವು; ಸಿನಿಮಾದಲ್ಲಿ ಅಂಬರೀಶ್ ನಿರ್ವಹಿಸಿದ್ದ ಜಲೀಲ ಪಾತ್ರಕ್ಕಾಗಿ ಮೊದಲು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ,  ರಜನಿಕಾಂತ್ ಈ ಪಾತ್ರ ನಿರ್ವಹಿಸಲಿಲ್ಲ. ಬಳಿಕ ಅಂಬರೀಶ್ ನಾಯಕಿಯನ್ನ ಚುಡಾಯಿಸುವ 'ಜಲೀಲ' ಎಂಬ ಯುವಕನ ಪಾತ್ರದಲ್ಲಿ ಮಿಂಚಿದ್ದರು. ಇದು ಅವರ ಮೊದಲ ಸಿನಿಮಾ.  'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ....' ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ. 

 

ರಜನಿಕಾಂತ್
12

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ 'ನಾಗರಹಾವು; ಸಿನಿಮಾದಲ್ಲಿ ಅಂಬರೀಶ್ ನಿರ್ವಹಿಸಿದ್ದ ಜಲೀಲ ಪಾತ್ರಕ್ಕಾಗಿ ಮೊದಲು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ,  ರಜನಿಕಾಂತ್ ಈ ಪಾತ್ರ ನಿರ್ವಹಿಸಲಿಲ್ಲ. ಬಳಿಕ ಅಂಬರೀಶ್ ನಾಯಕಿಯನ್ನ ಚುಡಾಯಿಸುವ 'ಜಲೀಲ' ಎಂಬ ಯುವಕನ ಪಾತ್ರದಲ್ಲಿ ಮಿಂಚಿದ್ದರು. ಇದು ಅವರ ಮೊದಲ ಸಿನಿಮಾ.  'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ....' ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ. 

 

ಅನಂತ್ ನಾಗ್
13

'ಹಾಲು ಜೇನು' ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಬದಲಿಗೆ ಅನಂತ್ ನಾಗ್ ನಟಿಸಬೇಕಿತ್ತು. ಅನಂತ್ ನಾಗ್ ಅವರನ್ನು ಗಮದಲ್ಲಿಟ್ಟುಕೊಂಡೇ ಈ ಸಿನಿಮಾದ ಕಥೆ ಬರೆಯಲಾಗಿತ್ತು. ನಂತರ ಸಮಯದ ಕೊರತೆಯಿಂದಾಗಿ  ಅನಂತ್ ನಾಗ್ ಬದಲಾಗಿ ರಾಜ್‌ಕುಮಾರ್  ಈ ಸಿನಿಮಾವನ್ನು ಮಾಡಿದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+