X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಕಿರುತೆರೆಯಲ್ಲಿ ಆರಂಭವಾಗ್ತಿವೆ 4 ಹೊಸ ಧಾರಾವಾಹಿಗಳು: ನಾಯಕಿಯರು ಇವರೇ!

Author Sowmya Bairappa | Updated: Sunday, February 23, 2025, 10:13 AM [IST]

ಕನ್ನಡ ಕಿರುತೆರೆಯಲ್ಲಿ2025ರಲ್ಲಿ ಸಾಕಷ್ಟು ಭಿನ್ನ-ವಿಭಿನ್ನ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಪ್ರಸಾರವಾಗ್ತಿವೆ. ಇತ್ತೀಚೆಗಷ್ಟೇ ಆರಂಭವಾದ ಈ ಸೀರಿಯಲ್‌ಗಳು ಟಿಆರ್‌ಪಿ ರೇಸಿಂಗ್‌ನಲ್ಲೂ ಮುಂದಿವೆ. ಕೌಟುಂಬಿಕ ಕಥಾಹಂದರದ ಸೀರಿಯಲ್‌ಗಳ ಜೊತೆಗೆ ಹಾರರ್, ಹಳ್ಳಿ ಹಿನ್ನಲೆಯುಳ್ಳ ಕಥೆಗಳು, ಪ್ರೀತಿ ಕಥೆಗಳು ಪ್ರೇಕ್ಷಕರ ಮನಗೆದ್ದಿವೆ. ಇದೀಗ ಮತ್ತೆ ನಾಲ್ಕು ಸೀರಿಯಲ್‌ಗಳು ಶುರುವಾತ್ತಿದ್ದು, ಈ ಧಾರಾವಾಹಿಗಳ ನಾಯಕಿಯರು ಯಾರು ಎಂಬ ಮಾಹಿತಿ ಇಲ್ಲಿದೆ.


cover image
ಸಿಂಧು ಭೈರವಿ
1

ಉದಯ ವಾಹಿನಿಯಲ್ಲಿ 'ಸಿಂಧು ಭೈರವಿ' ಎಂಬ ಹೊಸ ಧಾರಾವಾಹಿ ಪ್ರಸಾರಕ್ಕೆ ಸಜ್ಜಾಗಿದೆ. ಈ ಸೀರಿಯಲ್‌ನಲ್ಲಿ ಇಂಚರಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನ್ಯಾಯಕ್ಕಾಗಿ ಸಿಂಧು, ಭೈರವಿಯಾಗುವ ಅಪರೂಪದ ಕಥೆ ಹೊಂದಿರುವ ಈ ಸೀರಿಯಲ್‌ನಲ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಶ್ರೀಮಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಸಿರಿ ಪಾತ್ರ ಮಾಡುತ್ತಿರುವ ಚಂದನಾ ರಾಘವೇಂದ್ರ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಟ ಬಾಲರಾಜ್ ಫೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಾರದೆ
2

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಶಾರದೆ' ಎಂಬ ಹೊಸ ಸೀರಿಯಲ್ ಆರಂಭವಾಗ್ತಿದ್ದು, ಚೈತ್ರಾ ಸಕ್ಕರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಯನತಾರ ಧಾರಾವಾಹಿಯಲ್ಲಿ ನಟಿಸಿದ್ದ ಇವರು, ಬಳಿಕ ತೆಲುಗು, ತಮಿಳು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಶಾರದೆಯಾಗಿ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಕಲರ್ಸ್‌ನಲ್ಲಿ ಪ್ರಸಾರವಾಗಿದ್ದ 'ಚುಕ್ಕಿತಾರೆ'ಯಲ್ಲಿ ಇಬ್ಬನಿಯಾಗಿ ಮೋಡಿ ಮಾಡಿದ್ದ ಬಾಲನಟಿ ಸ್ಫೂರ್ತಿ, ಈ ಸೀರಿಯಲ್‌ನಲ್ಲಿ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯ ಗಂಡನಾಗಿ ರಾಜೇಶ್ ಧ್ರುವ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮುದ್ದು ಸೊಸೆ
3

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮುದ್ದು ಸೊಸೆ' ಎಂಬ ಧಾರಾವಾಹಿ ಆರಂಭವಾಗುತ್ತಿದೆ. ಇದರಲ್ಲಿ ಅಂತರಪಟ ಹಾಗೂ ದೊರೆಸಾನಿ ಸೀರಿಯಲ್‌ಗಳಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದ್ದ ಪ್ರತಿಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತರಪಟದಲ್ಲಿ ನಟಿಸುವಾಗಲೇ ತೆಲುಗಿನ 'ಸಿವಂಗಿ' ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ಪ್ರತಿಮಾ, ಆನಂದಿಯಾಗಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಮುದ್ದು ಸೊಸೆಯಾಗಿ ಕನ್ನಡಕ್ಕೆ ಮರಳಿದ್ದಾರೆ.

ಭಾರ್ಗವಿ ಎಲ್‌ಎಲ್‌ಬಿ
4

ಕಲರ್ಸ್‌ನಲ್ಲಿ 'ಭಾರ್ಗವಿ ಎಲ್‌ಎಲ್‌ಬಿ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ಈಗಾಗಲೇ ಇದರ ಪ್ರೋಮೋ ಬಿಡುಗಡೆಯಾಗಿದ್ದು, ರಿಮೇಕ್ ಅಂತ ಹೇಳಲಾಗುತ್ತದೆ. ಈ ಧಾರಾವಾಹಿ ಮೂಲತಃ ಮರಾಠಿಯಲ್ಲಿ ಪ್ರಸಾರವಾಗಿದ್ದು, ತೆಲುಗಿನಲ್ಲಿ ಗೀತಾ LLB ಅಂತ ಪ್ರಸಾರವಾಗುತ್ತಿದೆ. ಈಗ ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ ಎನ್ನಲಾಗಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದ ಮೂಲಕ ಗಮನ ಸೆಳೆದಿದ್ದ ರಾಧಾ ಭಗವತಿ, ಭಾರ್ಗವಿ LLB ಧಾರಾವಾಹಿಯ ನಾಯಕಿ. ಅಮೃತಧಾರೆಯಲ್ಲಿ ಮುಗ್ಧ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದ ರಾಧಾ, ಹೊಸ ಸೀರಿಯಲ್‌ನಲ್ಲಿ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ರಾಧಾ ಅವರು ಈ ಹಿಂದೆ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕನ ತಂಗಿ ಶೃತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ನಾಯಕಿಯ ತಾಯಿಯಾಗಿ ಹಿರಿಯ ನಟಿ ಅರುಣ ಬಾಲರಾಜ್ ಹಾಗೂ ತಂದೆಯಾಗಿ ಹನುಮಂತೇ ಗೌಡ ಕಾಣಿಸಿಕೊಂಡಿದ್ದಾರೆ. ಲಕ್ಷಣ ಸೀರಿಯಲ್‌ನಲ್ಲಿ ಚಂದ್ರಶೇಖರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕೀರ್ತಿ ಭಾನು ಇದರಲ್ಲಿ ಹಿರಿಯ ವಕೀಲರಾಗಿ ಕಾಣಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+