X
ಹೋಮ್ ಚಲನಚಿತ್ರಗಳ ಒಳನೋಟ

'ಶ್ರೀಗೌರಿ' ಸೀರಿಯಲ್‌ ಹೀರೋ ಕಾರ್ತಿಕ್ ಅತ್ತಾವರ್ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

Author Sowmya Bairappa | Published: Tuesday, February 13, 2024, 10:55 AM [IST]

ಕಲರ್ಸ್ ಕನ್ನಡದಲ್ಲಿ ಶ್ರೀಗೌರಿ ಎಂಬ ಹೊಸ ಧಾರಾವಾಹಿ ಆರಂಭವಾಗಿದ್ದು, ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಸೀರಿಯಲ್‌ನ ಕಥೆ ಹಾಗೂ ನಿರೂಪಣೆ ಎರಡೂ ವಿಭಿನ್ನವಾಗಿದ್ದು, ಕರ್ನಾಟಕ ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆದಿದೆ. ಈ ಧಾರಾವಾಹಿಯಲ್ಲಿ ಕಾರ್ತಿಕ್ ಅತ್ತಾವರ್ ನಾಯಕ 'ಅಪ್ಪು' ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಲ್ಲಿ ಕಾರ್ತಿಕ್ ಅತ್ತಾವರ ಕುರಿತ ಕುತೂಹಲಕಾರಿ ವಿಷಯಗಳನ್ನು ನೀಡಲಾಗಿದೆ.


cover image
ಮೊದಲ ಸಿನಿಮಾ

ಮೂಲತಃ ಮಂಗಳೂರಿನವರಾದ ಕಾರ್ತಿಕ್‌ ಅತ್ತಾವರ್ ನಟನೆಗೆ ಕಾಲಿಡುವ ಮುನ್ನ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಬಣ್ಣದ ಲೋಕದ ಪಯಣ ಶುರುವಾಗಿದ್ದು 'ರಿಕ್ಷಾ ಡ್ರೈವರ್' ಎಂಬ ತುಳು ಸಿನಿಮಾದ ಮೂಲಕ. ಈ ಚಿತ್ರ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿತ್ತು. 

ಕಿರುತೆರೆ ಎಂಟ್ರಿ

'ರಿಕ್ಷಾ ಡ್ರೈವರ್' ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ನಿರ್ದೇಶಕ ವಿನೋದ್ ವಿ ದೋಂಡಾಳೆ ತಮ್ಮ 'ಯಸೋಧೆ' ಧಾರಾವಾಹಿಗೆ ನಾಯಕನ ಹುಡುಕಾಟದಲ್ಲಿದ್ದರು. ಈ ವೇಳೆ ರಿಕ್ಷಾ ಡ್ರೈವರ್ ಸಿನಿಮಾದಲ್ಲಿನ ನಟನೆ ನೋಡಿ, ಕಾರ್ತಿಕ್‌ಗೆ ಈಟಿವಿಯಲ್ಲಿ ಪ್ರಸಾರವಾಗಿದ್ದ 'ಯಶೋಧೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದರು. ಅದು ಕೂಡ ಮುಖ್ಯ ಪಾತ್ರವಾಗಿತ್ತು. ಈ ಸೀರಿಯಲ್‌ನಲ್ಲಿ ಕಾರ್ತಿಕ್ ಬ್ಯುಸಿನೆಸ್ ಮ್ಯಾನ್ ಆದಿತ್ಯನಾಗಿ ಪ್ರೇಕ್ಷಕರ ಮನಗೆದ್ದಿದ್ದರು. 

ರಿಯಾಲಿಟಿ ಶೋ

ತುಳು ಸಿನಿಮಾದ ಬಳಿಕ ಕಾರ್ತಿಕ್ ಅತ್ತಾವರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2'ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದರಲ್ಲಿ ತಮ್ಮ ನೃತ್ಯದ ಮೂಲಕ ತೀರ್ಪುಗಾರರ ಮೆಚ್ಚುಗೆಗೂ ಪಾತ್ರರಾಗಿದ್ದರು.

ಸ್ಯಾಂಡಲ್‌ವುಡ್‌ ಪ್ರವೇಶ

ನಂತರ  'ಅನುಕ್ತ' ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿದರು. ವಿಶೇಷವೆಂದರೆ, ಈ ಸಿನಿಮಾಗೆ ಸಂತೋಷ್ ಕುಮಾರ್ ಕೊಂಚಾಡಿಯರ ಜೊತೆ ಸೇರಿ ಕಥೆ ಸಹ ಬರೆದಿದ್ದರು. ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಹೇಳುವಂಥ ಯಶಸ್ಸು ಏನು ಗಿಟ್ಟಿಸಿಕೊಳ್ಳದಿದ್ದರೂ ಕಾರ್ತಿಕ್ ಅವರನ್ನು ಸಿನಿಪ್ರಿಯರು ಗುರುತಿಸಿದ್ದರು.   

ಸಿನಿಮಾ ನಿರ್ದೇಶನ

ಇದಾದ ಬಳಿಕ ಕಾರ್ತಿಕ್ `ಅನಮೋಲ್' ಎಂಬ ಹಿಂದಿ ಭಾಷೆಯ ಕಿರುಚಿತ್ರವನ್ನು ನಿರ್ದೇಶನ ಮಾಡಿದರು. ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿದ್ದ ಹದಿನೈದು ನಿಮಿಷಗಳ ಈ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. 

ಕಂಬ್ಯಾಕ್

ಕಳೆದ 9 ವರ್ಷಗಳಿಂದ ನಟನೆಯಿಂದ ದೂರವಿದ್ದ ಕಾರ್ತಿಕ್ ಅತ್ತಾವರ್ ಇದೀಗ 'ಶ್ರೀಗೌರಿ' ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಇದರಲ್ಲಿ ಊರಿಗೆ ಉಪಕಾರಿ, ಮನೆಗೆ ಮಾರಿಯಂತಿರವ ನಾಯಕ ಅಪ್ಪುಗೆ ತಾಯಿಯೇ ಎಲ್ಲಾ. ನಾಟಿ ವೈದ್ಯ ಕಲಿತಿರುವ ಅಪ್ಪು ತಾಯಿ ಮಂಗಳಮ್ಮಗೆ ಅವನ ಮದುವೆಯದ್ದೇ ಚಿಂತೆ. ಅಮ್ಮ ಪದೇ ಪದೇ ಮದುವೆಯಾಗು ಎಂದಾಗೆಲ್ಲಾ ಅಪ್ಪು ಸಾಯುವ ಮಾತನಾಡಿ ದಿನ ದೂಡುತ್ತಿದ್ದಾನೆ. ಹೀಗಿರುವಾಗ ಅಪ್ಪು-ಶ್ರೀಗೌರಿ ಭೇಟಿಯಾದ ಮೇಲೆ ಏನೆಲ್ಲಾ ನಡೆಯುತ್ತದೆ ಎಂಬುದೇ ಧಾರಾವಾಹಿ ಕಥೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+