X
ಹೋಮ್ ಚಲನಚಿತ್ರಗಳ ಒಳನೋಟ

ಶರ್ಮಿತಾ ಗೌಡ ಟು ಜ್ಯೋತಿ ರೈ: ಮದುವೆ ನಂತರ ನಟನೆ ಆರಂಭಿಸಿದ ಕಿರುತೆರೆ ನಟಿಯರಿವರು!

Author Sowmya Bairappa | Published: Tuesday, August 29, 2023, 12:08 PM [IST]

ಹಲವು ನಟಿಯರು ಮದುವೆ ಬಳಿಕ ನಟನೆಗೆ ಗುಡ್‌ಬೈ ಹೇಳಿದ್ದಾರೆ. ಇನ್ನೂ ಕೆಲವರು ನಟನೆ ಮತ್ತು ಕುಟುಂಬ ಎರಡನ್ನೂ ಸರಿದೂಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಎಲ್ಲವೂ ಬದಲಾಗುತ್ತದೆ. ಯಾಕೆಂದರೆ, ವಿವಾಹದ ಬಳಿಕ ಗಂಡ-ಮಕ್ಕಳು ಅಂತ ಹಲವು ಜವಾಬ್ದಾರಿಗಳಿರುತ್ತವೆ. ಅದೆಷ್ಟೊ ನಟಿಯರು ನಟಿಸುವ ಆಸೆಯಿದ್ದರೂ ಕುಟುಂಬಕ್ಕಾಗಿ ಸಿನಿಜೀವನವನ್ನು ತ್ಯಾಗ ಮಾಡಿದ್ದಾರೆ. ಇನ್ನೂ ಕೆಲವರು ಕುಟುಂಬದ ಸಹಕಾರದಿಂದ ಮದುವೆ ಬಳಿಕವಷ್ಟೇ ನಟನೆಗೆ ಎಂಟ್ರಿಕೊಟ್ಟು ಯಶಸ್ಸು ಗಳಿಸಿದ್ದಾರೆ. ಆ ನಟಿಯರು ಯಾರು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


cover image
ಶರ್ಮಿತಾ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್‌ನಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಶರ್ಮಿತಾ ಗೌಡ ಮದುವೆ ಬಳಿಕವೇ ನಟನೆ ಆರಂಭಿಸಿದರು. ಕಿರುತೆರೆಗೆ ಬರುವ ಮುನ್ನ ಅವರು ನ್ಯೂಟ್ರಿಯನಿಷ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮೂಲತಃ ಕಾಫಿನಾಡು ಚಿಕ್ಕಮಗಳೂರಿನವರಾದ ಇವರಿಗೆ ಈಗ 32 ವರ್ಷ. ರಸಾಯನ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿರುವ ಇವರಿಗೆ ಒಂದು ಮಗು ಕೂಡ ಇದೆ. ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಇವರು 2016ರಲ್ಲಿ ಮಿಸ್ ಚಿಕ್ಕಮಗಳೂರು ಆಗಿ ಹೊರಹೊಮ್ಮಿದ್ದರು. 2017ಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಸ್ಟೈಲಿಶ್ ವಿಲನ್ ಎಂಬ ಖ್ಯಾತಿ ಪಡೆದಿರುವ ಇವರು ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.

ದಿವ್ಯ ಶ್ರೀಧರ್

ದಿವ್ಯಾ ಶ್ರೀಧರ್  ನಟನೆಗೆ ಬರುವ ಮುನ್ನ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ನಂತರದಲ್ಲಿ ದಿನಗಳಲ್ಲಿ ಇವರಿಬ್ಬರು ಡಿವೋರ್ಸ್ ಪಡೆದರು. ಬಳಿಕ ಕಿರುತೆರೆಗೆ ಎಂಟ್ರಿಕೊಟ್ಟ ದಿವ್ಯಾ, ಆಕಾಶ ದೀಪ ಸೀರಿಯಲ್ ಮೂಲಕ ಖ್ಯಾತಿ ಪಡೆದರು. ಜೊತೆಗೆ ಸನಿಹ ಎಂಬ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದರು. ನಂತರ ಪರಭಾಷಾ ಧಾರವಾಹಿಗಳಲ್ಲಿ ಸಕ್ರಿಯರಾದ ದಿವ್ಯಾ, ಸಹನಟ ಆರ್ನವ್ ಅಲಿಯಾಸ್ ಅಮ್ಝಾದ್ ಖಾನ್ ಜೊತೆ ಕೆಲ ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬಳಿಕ ಈ ಜೋಡಿ ಮದುವೆ ಕೂಡ ಆಗಿತ್ತು. ಆದರೆ, ದಿವ್ಯಾ ಗರ್ಭಿಣಿಯಾಗುತ್ತಿದ್ದಂತೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು.  ದಿವ್ಯಾ ಆರ್ನವ್ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಈ ನಟಿಗೆ ಮತ್ತೆ ಹೆಣ್ಣು ಮಗು ಜನಿಸಿದ್ದು, ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗು ನೋಡಿಕೊಳ್ಳುತ್ತಿದ್ದಾರೆ.  

 

ಜ್ಯೋತಿ ರೈ

ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ ಕೂಡ ಮದುವೆ ಬಳಿಕವೇ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸದ್ಯ ಈ ನಟಿ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದ್ದು, ಇವರಿಗೆ ಓರ್ವ ಪುತ್ರನಿದ್ದಾನೆ. ಸದ್ಯ ತಮಿಳು, ತೆಲುಗು ಭಾಷೆಯ ಸಿನಿಮಾ, ವೆಬ್‌ ಸೀರಿಸ್‌ಗಳಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ, ಪರಭಾಷಾ ನಿರ್ದೇಶಕ ಸುಕುಮಾರ್ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ಅವರ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ಸುಳಿವನ್ನು ನೀಡುತ್ತಿರುತ್ತಾರೆ. 

 

ವಿನುತಾ

ಮಿಲನಾ ಧಾರವಾಹಿಯಲ್ಲಿ ಪ್ರಾರ್ಥನಾ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾಗಿದ್ದ ನಟಿ ವಿನುತಾ ಕೂಡ ಮದುವೆ ಬಳಿಕವೇ ನಟನೆಗೆ ಎಂಟ್ರಿ ಕೊಟ್ಟರು. ಸದ್ಯ ನಟನೆಯಿಂದ ದೂರ ಉಳಿದಿರುವ ಈ ನಟಿ, ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.  ಬೆಂಗಳೂರಿನಲ್ಲಿ ಮೇಕಪ್ ಸ್ಟುಡಿಯೋ ಆರಂಭಿಸಿದ್ದು, ಅದನ್ನು ನೋಡಿಕೊಳ್ಳುತ್ತಿದ್ದಾರೆ.  

 

ಶ್ವೇತಾ ಪ್ರಸಾದ್

ನಟಿ ಶ್ವೇತಾ ಆರ್ ಪ್ರಸಾದ್ 'ಶ್ರೀರಸ್ತು ಶುಭಮಸ್ತು' ಸೀರಿಯಲ್‌ನ ಜಾಹ್ನವಿಯಾಗಿ ಹಾಗೂ 'ರಾಧಾ ರಮಣ' ಧಾರವಾಹಿಯ ರಾಧಾ ಮಿಸ್ ಆಗಿ ಕನ್ನಡಿಗರ ಮನೆಗೆದ್ದಿದ್ದಾರೆ. ಶಿವಮೊಗ್ಗದ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದ ಇವರು, ನಂತರ ಕನ್ನಡದ ಪ್ರಮುಖ ರೇಡಿಯೋ ಜಾಕಿ ಆರ್.ಜೆ ಪ್ರದೀಪ್‌ರನ್ನು ಮದುವೆಯಾದರು. ಒಂದು ದಿನ ಫೇಸ್‌ಬುಕ್‌ನಲ್ಲಿ ಶ್ವೇತಾರ ಪೋಟೋ ನೋಡಿದ ನಿರ್ಮಾಪಕಿ ಶ್ರುತಿ ನಾಯ್ಡು, ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಮೊದಮೊದಲು ನಟಿಸಲು ನಿರಾಕರಿಸಿದ ಈ ನಟಿ ನಂತರ ಪತಿಯ ಸಹಕಾರದಿಂದ ನಟನೆಗೆ ಎಂಟ್ರಿಕೊಟ್ಟರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+