X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಸಿನಿಪ್ರೇಕ್ಷಕರು ಎಂದೂ ಮರೆಯದ ಅನಂತ್ ನಾಗ್ ಅವರ 5 ಪಾತ್ರಗಳಿವು!

Author Sowmya Bairappa | Published: Tuesday, September 17, 2024, 12:00 PM [IST]

ಅನಂತ್ ನಾಗ್ ಸಹಜ ನಟನೆಯ ಅದ್ಭುತ ಕಲಾವಿದದರು. ಮರಾಠಿ ಕುಟುಂಬಕ್ಕೆ ಸೇರಿದ ಅನಂತ್‌ ನಾಗ್ ಸಿನಿಮಾರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂಬೈನಲ್ಲಿ ನೆಲೆಸಿದ್ದ ಇವರು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ನಂತರ ಬೆಂಗಳೂರಿಗೆ ಶಿಫ್ಟ್ ಆದರು. ಸಂಕಲ್ಪ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಇವರು, ಆನಂತರ ಹಿಂತಿರುಗಿ ನೋಡೇ ಇಲ್ಲ. ಜೊತೆಗೆ ಮಾಡದ ಪಾತ್ರಗಳಿಲ್ಲ. ಯಾವುದೇ ಪಾತ್ರ ನೀಡಿದ್ರೂ ಅದ್ಭುತವಾಗ ನಟಿಸುವ ಇವರ ಕೆಲ ಸಿನಿಮಾಗಳ ಪಾತ್ರಗಳನ್ನು ಮರೆಯಲು ಸಾದ್ಯವೇ ಇಲ್ಲ. ಆ ಪಾತ್ರಗಳು ಯಾವವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


cover image
ಗಣೇಶನ ಮದುವೆ

1990ರಲ್ಲಿ ತೆರೆಕಂಡ ಫಣಿ ರಾಮಚಂದ್ರ ನಿರ್ದೇಶನದ 'ಗಣೇಶನ ಮದುವೆ' ಸಿನಿಮಾದಲ್ಲಿನ ಅನಂತ್ ನಾಗ್ ಪಾತ್ರವನ್ನು ಕನ್ನಡ ಸಿನಿಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ. ವಠಾರವೊಂದರಲ್ಲಿ ಸಾಗುವ ಈ ಸಿನಿಮಾದ ಕಥೆಯಲ್ಲಿ ಅನಂತ್‌ನಾಗ್ ವಾಚಾಳಿ ಯುವಕ ಗಣೇಶ್ ಆಗಿ ನಟಿಸಿದ್ದರೆ, ವಿನಯ ಪ್ರಸಾದ್ ಗಾಯಕಿಯಾಗಿ ನಟಿಸಿದ್ದರು. ವಠಾರದ ಮಾಲೀಕನಾಗಿ ಮುಖ್ಯಮಂತ್ರಿ ಚಂದ್ರು ಹಾಸ್ಯರಸ ಹರಿಸಿದ್ದರು. ಸಿನಿಮಾದಲ್ಲಿ ಗಣೇಶ್ ತಾನು ಮುಖವೂ ನೋಡಿರದ ಶೃತಿ (ವಿನಯ್ ಪ್ರಸಾದ್) ಎಂಬ ಗಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆನಂತರ ಅವನು ಪ್ರೀತಿಸುವ ಗಾಯಕಿ ತಾನು ದಿನ ಜಗಳ ಕಾಯುವ ವಠಾರದ ಮನೆ ಮಾಲೀಕನ ಮಗಳೆಂದು ಗೊತ್ತಾಗಿ ಮುಂದೇನು ಮಾಡುತ್ತೇನೆಂಬುದೇ ಸಿನಿಮಾ ಕಥೆ.   

ನಾ ನಿನ್ನ ಬಿಡಲಾರೆ

1979ರಲ್ಲಿ ಬಿಡುಗಡೆಯಾದ ಕನ್ನಡದ ಸಾರ್ವಕಾಲಿಕ ಅತ್ಯುತ್ತಮ ಹಾರರ್ ಸಿನಿಮಾ 'ನಾ ನಿನ್ನ ಬಿಡಲಾರೆ'. ಖ್ಯಾತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾದಲ್ಲಿ ಅನಂತ್ ನಾಗ್ ಅದ್ಭುತ ಅಭಿನಯ ನೀಡಿದ್ದರು. ಚಿತ್ರದಲ್ಲಿ ಲಕ್ಷ್ಮೀ ನಾಯಕಿಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಕೃಷ್ಣ ಎಂಬ ಪಾತ್ರದಲ್ಲಿ ಅನಂತ್ ನಾಗ್ ಅವರ ಭಯಾನಕ ಅಭಿನಯ, ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್ ಪ್ರೇಕ್ಷಕರನ್ನು ಕುಳಿತಲ್ಲೇ ನಡುಗುವಂತೆ ಮಾಡಿತ್ತು. ಚಿತ್ರದ ಪ್ರತಿಯೊಂದು ಸನ್ನಿವೇಶವೂ ಮೈಜುಮ್ಮೆನಿಸುವಂತಿತ್ತು.

ಕೆಜಿಎಫ್

ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್. ಈ ಚಿತ್ರದಲ್ಲಿ ಅನಂತ್ ನಾಗ್ 'ಆನಂದ್ ಇಂಗಳಗಿ' ಎಂಬ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾದಲ್ಲಿ  ರಾಕಿಭಾಯ್ ವೃತ್ತಾಂತ ಹೇಳುವುದೇ ಅನಂತ್. ಕೆಜಿಎಫ್ ಚಾಪ್ಟರ್ ೧ರಲ್ಲಿ ಅನಂತ್ ನಾಗ್ ಹಾಗೂ ಮಾಳವಿಕ ಅವಿನಾಶ್ ಮಾತುಕತೆಯ ದೃಶ್ಯಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದವು. ಅನಂತ್ ಈ ಸಿನಿಮಾದಲ್ಲಿ ಡೀಪ್ ವಾಯ್ಸ್‌ನಲ್ಲಿ ರಾಕಿಭಾಯ್ ಕಥೆ ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು

ರಿಷಭ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಚಿತ್ರಿಸಲಾಗಿತ್ತು. ಈ ಚಿತ್ರದಲ್ಲಿ ಅನಂತ್ ನಾಗ್ ಅವರು 'ಅನಂತ್ ಪಿ ಪದ್ಮನಾಭ' ಎಂಬ ಲಾಯರ್ ಪಾತ್ರವನ್ನು ಮಾಡಿದ್ದರು. ಚಿತ್ರದ ಕೋರ್ಟ್ ಸನ್ನಿವೇಶದಲ್ಲಿ ಅವರು ಕನ್ನಡ ಶಾಲೆಗಳ ಪರ ವಾದ ಮಾಡುವ ರೀತಿ ಎಲ್ಲರಿಗೂ ಸಖತ್ ಇಷ್ಟವಾಗಿತ್ತು. ೨೦೧೮ರಲ್ಲಿ ತೆರೆಕಂಡ ಈ ಚಿತ್ರ ಅತ್ತ್ಯುತ್ತಮ ಮಕ್ಕಳ ಚಿತ್ರವಾಗಿ 66ನೇ ರಾಷ್ಟ್ರ ಪ್ರಶಸ್ತಿ ಪಡೆದಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು

2016ರಲ್ಲಿ ತೆರೆಕಂಡ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ  ಮೈಕಟ್ಟು' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಮರುವಿನ ಕಾಯಿಲೆ ಇರುವ ಅಪ್ಪನಾಗಿ ಎಲ್ಲ ಮಕ್ಕಳಿಗೆ ಪಾಠ ಹೇಳಿದ್ದರು. ಚಿತ್ರದಲ್ಲಿ ಅದ್ಭುತ ಅಭಿನಯ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+