X
ಹೋಮ್ ಚಲನಚಿತ್ರಗಳ ಒಳನೋಟ

ಕರಟಕ ದಮನಕ ಸಿನಿಮಾ ಕಥೆ, ಕಲಾವಿದರ ಅಭಿನಯ, ರೇಟಿಂಗ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Author Sowmya Bairappa | Published: Friday, March 8, 2024, 04:08 PM [IST]

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ 'ಕರಟಕ ದಮನಕ' ಬಿಡುಗಡೆಯಾಗಿದೆ. ಯೋಗರಾಜ್‌ ಭಟ್ ನಿರ್ದೇಶನ ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಪ್ರಿಯಾ ಆನಂದ್ ನಾಯಕಿರಾಗಿ ಅಭಿನಯಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶಿವಣ್ಣನಿಗೆ ಯೋಗರಾಜ್‌ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ. ಹಾಗೇ ಶಿವಣ್ಣ ಹಾಗೂ ಪ್ರಭದೇವ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ. ಇಲ್ಲಿ ಕರಟಕ ದಮನಕ ಸಿನಿಮಾ ಕಥೆ, ಕಲಾವಿದರ ಅಭಿನಯ ಹಾಗೂ ರೇಟಿಂಗ್ಸ್ ಮಾಹಿತಿಯನ್ನು ನೀಡಲಾಗಿದೆ.


cover image

ಎರಡು ಕುತಂತ್ರಿ ನರಿಗಳ ಸ್ವಭಾವವನ್ನು ಹೋಲುವ ಕಥೆಯನ್ನು 'ಕರಟಕ ದಮನಕ' ಸಿನಿಮಾದಲ್ಲಿ ಹೆಣೆಯಲಾಗಿದೆ. ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಅವರೇ ಆ ಕುತಂತ್ರಿ ನರಿಗಳು. ಊರು ತುಂಬಾ ಮೋಸ ಮಾಡುತ್ತಾ? ಕಳ್ಳತನ ಮಾಡುತ್ತಾ ಬದುಕು ಸಾಗಿಸುವ ಕುತಂತ್ರಿಗಳು. ಇನ್ನೊಂದು ಕಡೆ ನೀರಿಗಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ಒಂದು ಊರಿನ ಜನರು. ಆ ನೀರಿಗಾಗಿಯೇ ನಡೆಯುವ ರಾಜಕೀಯ. ಒಂದೆಡೆ ನೀರು ಸಿಗದಿದ್ದರಿಂದ ನಗರಗಳಲ್ಲಿ ಬದುಕು ಕಟ್ಟಿಕೊಂಡ ಕೆಲವು ಜನರು. ಮತ್ತೊಂದೆಡೆ ಏನೇ ಕಷ್ಟ ಬಂದರೂ ಅದೇ ನನ್ನೂರು ಅನ್ನೋ ಒಂದಷ್ಟು ಮಂದಿ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿ ನರಿಗಳು ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಚಿತ್ರದ ಕಥೆ. 

ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದ ಖ್ಯಾತಿ ಯೋಗರಾಜ್ ಭಟ್ಟರದು.  ಅವರು ಕಥೆ ಹೇಳುವ ಪರಿ ಸಿನಿಪ್ರಿಯರಿಗೆ ಪರಿಚಯವಿದೆ. ಕಥೆಯ ಜೊತೆಗೆ ಡೈಲಾಗ್‌ಗಳಿಗೂ ಹೆಚ್ಚು ಪ್ರಾಮುಖ್ಯತೆ ನೀಡುವ ಶೈಲಿ ಯೋಗರಾಜ್‌ ಭಟ್ಟರದ್ದು. ಈ ಸಿನಿಮಾದ ಕಥೆ ಮೂರು ಅಂಶಗಳ ಮೇಲೆ ನಿಂತಿದೆ. ನೀರು, ಬೇರು, ತೇರು ಈ ಮೂರನ್ನೂ ಉಳಿಸುವುದು, ಅದನ್ನೇ ಇಟ್ಟುಕೊಂಡು ಪ್ರೇಕ್ಷಕರಿಗೊಂದು ಸಂದೇಶ ನೀಡುವುದು, ಆ ಸಂದೇಶದ ಜೊತೆಗೆ ಮನರಂಜನೆ ಕೊಡುವುದು ಭಟ್ಟರ ಮುಖ್ಯ ಧ್ಯೆಯವಾಗಿತ್ತು ಎಂದಿನಿಸುತ್ತೆ.

 

ಸಿನಿಮಾದಲ್ಲಿ ಶಿವಣ್ಣ ಹಾಗೂ ಪ್ರಭುದೇವ ನಟನಾ ಸಾಮರ್ಥ್ಯದ ಬಗ್ಗೆ ದುಸರಾ ಮಾತಿಲ್ಲ. ಚಿತ್ರದಲ್ಲಿ ಎಂದಿನಂತೆ ಶಿವಣ್ಣ ಎನರ್ಜಿ ಎದ್ದು ಕಾಣುತ್ತೆ. ಆಕ್ಷನ್, ಡೈಲಾಗ್, ಡ್ಯಾನ್ಸ್ ಎಲ್ಲದರಲ್ಲೂ ಹ್ಯಾಟ್ರಿಕ್ ಹೀರೋ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಇತ್ತ ಪ್ರಭುದೇವ್ ಹಾಸ್ಯದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಇನ್ನು ಹಾಡುಗಳಲ್ಲಿ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಇವರಿಬ್ಬರ ಜೋಡಿ ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು. 

 

ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಪ್ರಿಯಾ ಆನಂದ್ ನಾಯಕಿರಾಗಿ ಅಭಿನಯಿಸಿದ್ದಾರೆ. ಇವರಿಬ್ಬರ ಪಾತ್ರವನ್ನು ಭಟ್ಟರು ಅಚ್ಚು ಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಚಂದ್ರು ಕೇವಲ ಎರಡು ಸೀನ್‌ಗಳಿಗೆ ಸೀಮಿತ. ರಂಗಾಯಣ ರಘುಗೆ ಪಾತ್ರವೂ ಕಮ್ಮಿಯಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ರವಿಶಂಕರ್ ಖಳನಾಯಕನಾಗಿ ಮಿಂಚಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ತನಿಕೆಲ್ಲ ಭರಣಿ ಕನ್ನಡಿಗರಿಗೆ ಇಷ್ಟವಾಗುತ್ತಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳ ತಂಡವೇ ಇಲ್ಲಿದೆ. 

 

ಶಿವಣ್ಣ ಹಾಗೂ ಪ್ರಭುದೇವ ಕಾಂಬಿನೇಷನ್ ಸಿನಿಮಾ ಹೈಲೈಟ್‌. ವಿ ಹರಿಕೃಷ್ಣ ಅವರ ಹಾಡುಗಳನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ. ಯೋಗರಾಜ್ ಭಟ್ಟರ ಡೈಲಾಗ್ಸ್ ಕ್ಲಿಕ್ ಆಗಿದ್ದು, ಅದರಲ್ಲೂ ಪ್ರಭುದೇವಗಾಗಿ ಬರೆದ ಡೈಲಾಗ್‌ ಪ್ರೇಕ್ಷಕರನ್ನು ನಗಿಸುತ್ತದೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಚೆನ್ನಾಗಿದೆ. ಮೈನಸ್ ಬಗ್ಗೆ ಹೇಳಬೇಕೆಂದರೆ, ಚಿತ್ರದ ಕಥೆಯ ಎಳೆಯ ಚೆನ್ನಾಗಿದೆ. ಆದರೆ, ಭಟ್ಟರು ಈ ಬಾರಿ ಕೂಡ ಸ್ಕ್ರೀನ್ ಪ್ಲೇನಲ್ಲಿ ಸೋತಿದ್ದಾರೆ ಅನಿಸುತ್ತೆ. ಅಲ್ಲದೆ ಕಥೆಯ ಮೇಲೆ ಇನ್ನಷ್ಟು ವರ್ಕ್‌ಔಟ್ ಮಾಡಬೇಕಿತ್ತು. ಒಂದು ಎಳೆ ಕಥೆಯನ್ನು ಎಳೆದು ಅದಕ್ಕೆ ತಮ್ಮ ಟಿಪಿಕಲ್ ಡೈಲಾಗ್‌ಗಳನ್ನು ತುಂಬಿಸಿ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇದು ಸಿನಿಮಾ ಮೇಜರ್ ಮೈನಸ್ ಪಾಯಿಂಟ್. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+