X
ಹೋಮ್ ಚಲನಚಿತ್ರಗಳ ಒಳನೋಟ

ಹ್ಯಾಪಿ ಬರ್ತಡೇ ಶಂಕ್ರಣ್ಣ: : ಕನ್ನಡಕ್ಕೆ ಹೊಸದಿಕ್ಕು ನೀಡಿದ ಶಂಕರ್ ನಾಗ್ ನಿರ್ದೇಶನದ ಸಿನಿಮಾಗಳಿವು!

Author Sowmya Bairappa | Updated: Saturday, November 9, 2024, 10:18 AM [IST]

ಶಂಕರ್‌ ನಾಗ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ಅವರು ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ದೇಶಕನಾಗಿ ಕೂಡ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಶಂಕರ್‌ ನಾಗ್ ಅವರು ಅಣ್ಣ ಅನಂತನಾಗ್ ಜೊತೆ ನಟಿಸಿದ `ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಈ ಚಿತ್ರ ಹಲವು ಪ್ರಶಸ್ತಿ ಕೂಡ ಪಡೆಯಿತು. ನಂತರ ಒಂದಕ್ಕಿಂತ ಒಂದು ವಿಭಿನ್ನವಾದ 9 ಚಿತ್ರಗಳನ್ನು ನಿರ್ದೇಶಿಸಿದರು. ಇದರಲ್ಲಿ ಏಳು ಕನ್ನಡ ಚಿತ್ರಗಳಿದ್ದರೆ, ಒಂದು ಹಿಂದಿ ಮತ್ತು ಒಂದು ಇಂಗ್ಲೀಷ್ ಚಿತ್ರಗಳಿದ್ದವು. ಹಿಂದಿಯಲ್ಲಿ ಲಾಲಚ್ ಎಂಬ ಚಿತ್ರವನ್ನು ಹಾಗೂ ಇಂಗ್ಲಿಷ್‌ನಲ್ಲಿ ವಾಚಮನ್ (ಮಾಲ್ಗುಡಿ ಡೇಸ್ ಆಧಾರಿತ) ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಇಂಗ್ಲಿಷ್ ಚಿತ್ರ ಆರು ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಭಾರತದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ ಪಡೆಯಿತು. ಇಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕು ನೀಡಿದ ಶಂಕರ್ ನಾಗ್ ನಿರ್ದೇಶನದ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಮಿಂಚಿನ ಓಟ 1980

ಇದು ಶಂಕರನಾಗ್ ನಿರ್ದೇಶನದ ಮೊದಲ ಚಿತ್ರ ಮಿಂಚಿನ ಓಟ. ಇದರಲ್ಲಿ ಅನಂತ್‌ ನಾಗ್ ಮತ್ತು ಶಂಕರ್‌ ನಾಗ್ ಸಹೋದರರು, ರಮೇಶ್ ಭಟ್, ಲೋಕನಾಥ್ ನಟಿಸಿದ ಈ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲು. ಮಿಂಚಿನ ಓಟ ಚಿತ್ರ ಬರೋಬ್ಬರಿ ಎಂಟು ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಫೇರ್ ಪ್ರಶಸ್ತಿ ಪಡೆದಿದೆ. 

ಜನ್ಮ ಜನ್ಮದ ಅನುಬಂಧ

1980ರಲ್ಲಿ ತೆರೆಕಂಡ ಕನ್ಮ ಜನ್ಮದ ಅನುಬಂಧ ಚಿತ್ರ ಜನ್ಮ- ಜನ್ಮಾಂತರದ ಕಥಾವಸ್ತುವನ್ನು ಹೊಂದಿತ್ತು. ಅನಂತನಾಗ್ ಮತ್ತು ಜಯಂತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾಗೆ ಇಳಯರಾಜ ಸಂಗೀತ ನೀಡಿದ್ದರು. ಚಿತ್ರದ `ತಂಗಾಳಿಯಲ್ಲಿ ನಾನು' ಎವರ್ ಗ್ರೀನ್ ಹಾರರ್ ಥೀಮ್ ಹಾಡಾಗಿ ದಾಖಲಾಗಿದೆ.  

 

ಗೀತಾ

ಶಂಕರನಾಗ್ ನಿರ್ದೇಶಿಸಿ ನಟಿಸಿದ ಗೀತಾ ಸಿನಿಮಾ ಕನ್ನಡದ ಒಂದು ಅಪೂರ್ವ ದುರಂತ ಅಂತ್ಯವುಳ್ಳ ಚಿತ್ರ. ಈ ಮ್ಯುಸಿಕಲ್ ಬ್ಲಾಕ್ ಬ್ಲಸ್ಟರ್ ಚಿತ್ರದ `ಸಂತೋಷಕ್ಕೆ' ಹಾಡು ಈಗಲೂ ಹಲವು ಬ್ಯಾಂಡ್‌ಗಳಲ್ಲಿ ಹಾಡಲಾಗುತ್ತದೆ. ರಾಕ್ ಬ್ಯಾಂಡ್ ಗಾಯಕ ಸಂಜಯ್ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ತಾನು ಪ್ರೀತಿಸುವ ಗೀತಾಳನ್ನು ಮಾರಣಾಂತಿಕ ಕ್ಯಾನ್ಸರ್‌ನಿಂದ ಪಾರು ಮಾಡಲು ಪ್ರಯತ್ನಿಸಿ, ಕೊನೆಯ ಕ್ಷಣದಲ್ಲಿ ವಿಫಲವಾಗುವ  ಸಂಜಯನ ಪರಿಸ್ಥಿತಿ ಪ್ರೇಕ್ಷಕರಲ್ಲಿ ಕಣ್ಣೀರು ತರಿಸುತ್ತದೆ.

 

ಹೊಸತೀರ್ಪು

ತಾವು ನಾಯಕರಾಗಿ ನಟಿಸಿದೇ ಶಂಕರನಾಗ್ ಕೇವಲ ನಿರ್ದೇಶನ ಮಾಡಿದ ಮೊದಲ ಚಿತ್ರ ಹೊಸತೀರ್ಪು. ಚಿತ್ರದಲ್ಲಿ ಅಂಬರೀಶ್,ಅನಂತನಾಗ್, ಜಯಂತಿ ಮತ್ತು ಜಯಮಾಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮಾಸ್ಟರ್ ಮಂಜುನಾಥ್ ಬಾಲನಟನಾಗಿ ನಟಿಸಿದ್ದರು. 

 

ನೋಡಿಸ್ವಾಮಿ ನಾವಿರೋದು ಹೀಗೆ

1983ರಲ್ಲಿ ತೆರೆಕಂಡ `ನೋಡಿಸ್ವಾಮಿ ನಾವಿರೋದು ಹೀಗೆ' ಚಿತ್ರದಲ್ಲಿ ರಮೇಶ್ ಭಟ್, ಅರುಂಧತಿನಾಗ್, ಶಂಕರನಾಗ್, ಮಾಸ್ಟರ್ ಮಂಜುನಾಥ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ರಮೇಶ್ ಭಟ್ ನಿರ್ಮಾಣ ಮಾಡಿದ್ದ ಈ ಚಿತ್ರ ಸತಿ-ಪತಿಗಳಲ್ಲಿ ಉಂಟಾಗುವ ವಿರಸವನ್ನು ಸ್ನೇಹಿತನೊಬ್ಬ ಹೇಗೆ ಬಗೆಹರಿಸುತ್ತಾನೆ ಎಂಬ ಕತೆಯನ್ನು ಹೊಂದಿತ್ತು.

 

ಆ್ಯಕ್ಸಿಡೆಂಟ್ 1985

1985ರಲ್ಲಿ ತೆರೆಕಂಡ ಆಕ್ಸಿಡೆಂಟ್ ಚಿತ್ರ ಸಾಮಾಜಿಕ ಕಳಕಳಿ ಮತ್ತು ಸಂದೇಶಕ್ಕಾಗಿ 32ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಬಹುಶಃ ಹಿಟ್ ಆ್ಯಂಡ್ ರನ್ ಘಟನೆಯನ್ನು ಪರದೆಯ ಮೇಲೆ ತೋರಿಸಿದ ಮೊದಲ ಭಾರತೀಯ ಚಿತ್ರವೆಂದರೂ ತಪ್ಪಾಗಲಾರದು. ಕೇವಲ ಎರಡು ತಿಂಗಳಲ್ಲಿ ಶಂಕರನಾಗ್ ಈ ಚಿತ್ರವನ್ನು ನಿರ್ದೇಶಿಸಿದ್ದರು. 

 

ಒಂದು ಮುತ್ತಿನ ಕಥೆ

ಶಂಕರನಾಗ್ ನಿರ್ದೇಶನದ ಕೊನೆಯ ಚಿತ್ರ ಒಂದು ಮುತ್ತಿನ ಕಥೆ. ಡಾ.ರಾಜ್‌ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ ಕೆಲ ದೃಶ್ಗಳನ್ನು ಸಾಗರಾಳದಲ್ಲಿ ಚಿತ್ರೀಕರಿಸಬೇಕಿತ್ತು. ಆಗ ಭಾರತದಲ್ಲಿ ನೀರಿನಾಳದಲ್ಲಿನ ದೃಶ್ಯ ಸೆರೆಹಿಡಿವ ಕ್ಯಾಮೆರಾ ಇರದಿದ್ದರಿಂದ ಕೆನೆಡಾಗೆ ಹೋಗಿ ಕ್ಯಾಮೆರಾ ತಂದರು. ನಂತರ ಲಂಡನ್‌ಗೆ ಹೋಗಿ ಚಿತ್ರದಲ್ಲಿನ ಆಕ್ಟೋಪಸ್ ಆಕೃತಿಯನ್ನು ತಂದು ಶೂಟಿಂಗ್ ಮಾಡಿದ್ದರು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+