X
ಹೋಮ್ ಚಲನಚಿತ್ರಗಳ ಒಳನೋಟ

ಪ್ರೇಮ್ ಅಡ್ಡ to ಗುರುದೇವ್ ಹೊಯ್ಸಳ: ಟೈಟಲ್ ವಿವಾದಕ್ಕೊಳಗಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Tuesday, March 21, 2023, 06:28 PM [IST]

ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಟೈಟಲ್‌ಗಳು ಸಾಕಷ್ಟು ವಿವಾದ ಸೃಷ್ಟಿಸಿರುವ ಉದಾಹರಣೆಗಳು ನಮ್ಮ ಮುಂದಿವೆ. ಒಂದೇ ಟೈಟಲ್‌ನಲ್ಲಿ ಎರಡೆರಡು ಸಿನಿಮಾಗಳು ನಿರ್ಮಾಣವಾಗಿ ನಂತರದಲ್ಲಿ ಶೀರ್ಷಿಕೆಗಾಗಿ ವಿವಾದಗಳು ಒಂಟಾಗಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮದ ಪ್ರಕಾರ ಒಂದೇ ಟೈಟಲ್‌ನಲ್ಲಿ ಎರಡು ಸಿನಿಮಾ ಮಾಡಲು ಅವಕಾಶವಿಲ್ಲ. ಹೀಗಾಗಿ ಬಿಡುಗಡೆಗೆ ಕೆಲವೇ ದಿನಗಳು ಇರುವಾಗ ಬಹಳಷ್ಟು ಸಿನಿಮಾಗಳ ಟೈಟಲ್ ಬದಲಾವಣೆ ಆಗಿರುವ ಎಷ್ಟೋ ಉದಾಹರಣೆಗಳಿವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.


cover image
ಪ್ರೇಮ್ ಅಡ್ಡ
1

ಪ್ರೇಮ್ ಅಡ್ಡ ಮತ್ತು ಅಡ್ಡ ಸಿನಿಮಾ ಟೈಟಲ್ ವಿಚಾರವಾಗಿ ಜೋಗಿ ಪ್ರೇಮ್ ಹಾಗೂ ಬಿ.ಕೆ.ಶ್ರೀನಿವಾಸ್ ನಡುವೆ ಕಿತ್ತಾಟ ಉಂಟಾಗಿತ್ತು. ಮೊದಲು 'ಅಡ್ಡ; ಎಂಬ ಟೈಟಲ್ ಬಿ.ಕೆ.ಶ್ರೀನಿವಾಸ್ ಕೈಯಲ್ಲಿರುವುದರಿಂದ ಅದೇ ಶೀರ್ಷಿಕೆಯನ್ನೇ ಪ್ರೇಮ್ ನಾಯಕತ್ವದ ಸಿನಿಮಾಗೆ ಕೊಡಲಾಗದು ಎಂದು ವಾಣಿಜ್ಯ ಮಂಡಳಿ ಹೇಳಿತ್ತು. ಆಗ ಓಕೆ ಎಂದಿದ್ದ ಪ್ರೇಮ್, ನಂತರ ತಮ್ಮ ಚಿತ್ರಕ್ಕೆ 'ಪ್ರೇಮ್ ಅಡ್ಡ' ಎಂದು ಹೆಸರಿಟ್ಟಿದ್ದರು. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರೇಮ್ ಮತ್ತು ಅಡ್ಡವನ್ನು ಒಂದೇ ಸೈಜಿನಲ್ಲಿ ಮುದ್ರಿಸಬೇಕು ಎಂದು ಆದೇಶಿಸಿತ್ತು.  ಆದರೆ, ಸಿನಿಮಾ ತಂಡ ಆ ಷರತ್ತಿಗೆ ವಿರುದ್ಧವಾಗಿ ಪ್ರೇಮ್ ಎಂಬುದನ್ನು ಚಿಕ್ಕದಾಗಿ ಹಾಗೂ ಅಡ್ಡ ಎಂಬುದನ್ನು ದೊಡ್ಡದಾಗಿ ಮುದ್ರಿಸಿತ್ತು. ಇದಕ್ಕೆ ಕೆಎಫ್ ಸಿಸಿ ಕ್ಯಾತೆ ತೆಗೆದಿತ್ತು. ಈ ಶೀರ್ಷಿಕೆಗೆ ತಡೆಯಾಜ್ಞೆ ಕೋರಿ ನೋಟಿಸ್ ನೀಡುವುದರ ಜೊತೆಗೆ ಜಾಹಿರಾತುಗಳನ್ನು ಪ್ರಕಟಿಸದಂತೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಇತ್ತ ಅಡ್ಡ ಸಿನಿಮಾ ನಿರ್ಮಾಪಕ ಬಿ.ಕೆ ಶ್ರೀನಿವಾಸ್  'ಪ್ರೇಮ್ ಅಡ್ಡ' ಸಿನಿಮಾದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಇದೆ ವಿಚಾರಕ್ಕೆ ಕಿತ್ತಾಟ ನಡೆದಿತ್ತು. ಕೊನೆಗೆ ಮಣಿದ ಚಿತ್ರತಂಡ ಮಂಡಳಿ ಆದೇಶಕ್ಕೆ ತಲೆಬಾಗಿತ್ತು. ಪ್ರೇಮ್ ಅಡ್ಡ ಸಿನಿಮಾ ತಮಿಳಿನ 'ಸುಬ್ರಮಣ್ಯಪುರಂ' ಚಿತ್ರದ ರಿಮೇಕ್ ಆಗಿತ್ತು. 

 

ವಿಷ್ಣುವರ್ಧನ
2

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಸಿನಿಮಾ ಟೈಟಲ್ ಕೂಡ ವಿವಾದಕ್ಕೊಳಗಾಗಿತ್ತು. ವಿಷ್ಣುವರ್ಧನ ಶೀರ್ಷಿಕೆ ವಿಚಾರವಾಗಿ ಭಾರತಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವೆ ಜಗ್ಗಜಗ್ಗಾಟ ಏರ್ಪಟ್ಟಿತ್ತು. ಯಾವುದೇ ಕಾರಣಕ್ಕೂ ವಿಷ್ಣುವರ್ಧನ ಟೈಟಲ್ ಅನ್ನು ದ್ವಾರಕೀಶ್ ಅವರಿಗೆ ಕೊಡುವುದಿಲ್ಲ ಎಂದು ಭಾರತಿ ಪಟ್ಟು ಹಿಡಿದಿದ್ದರು.  ಈ ಬಗ್ಗೆ ಕೇಂದ್ರ ಮಾಹಿತಿ ಸಚಿವರಿಗೂ ದ್ವಾರಕೀಶ್ ಪತ್ರ ಬರೆದಿದ್ದರು. ಬಳಿಕ ಸಿನಿಮಾಗೆ 'ಓನ್ಲಿ ವಿಷ್ಣುವರ್ಧನ' ಎಂದು ಹೆಸರಿಡಲಾಗಿತ್ತು. 

ವೀರ ಮದಕರಿ
3

ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾದ ಟೈಟಲ್ ಕೂಡ ವಿವಾದಕ್ಕೆ ಕಾರಣವಾಗಿತ್ತು. ಚಿತ್ರದುರ್ಗದ ಪಾಳೇಗಾರ ಮದಕರಿ ಹೆಸರಿನಲ್ಲಿ ಕಮರ್ಷಿಯಲ್ ಚಿತ್ರ ಮಾಡುವುದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಸಿನಿಮಾದ ಹೆಸರನ್ನು ಕೊನೆಗೆ 'ಈ ಶತಮಾನದ ವೀರ ಮದಕರಿ' ಎಂದು ಬದಲಾಯಿಸಲಾಗಿತ್ತು. 

 

ಕನ್ನಡದ ಕಿರಣ್ ಬೇಡಿ
4

ಅಂದಿನ ಕಾಲದಲ್ಲಿ ಆಕ್ಷನ್ ಸಿನಿಮಾಗಳು ಮತ್ತು ಪೊಲೀಸ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಮಾಲಾಶ್ರೀ ಅವರು 'ಕಿರಣ್ ಬೇಡಿ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಓಂ ಪ್ರಕಾಶ್ ನಿರ್ದೇಶಿಸಿದ್ದರು. ಆದರೆ, ಈ ಟೈಟಲ್ ಕಿರಣ್ ಬೇಡಿಯವರಿಗೆ ಇಷ್ಟವಾಗಿರಲಿಲ್ಲ. ತಮ್ಮ ಹೆಸರನ್ನು ಬಳಸಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ನಿರ್ಮಾಪಕರು 'ಕನ್ನಡದ ಕಿರಣ್ ಬೇಡಿ' ಎಂದು ಶೀರ್ಷಿಕೆ ಬದಲಾಯಿಸಿದರು.  

ಮಸ್ತಿ
5

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾವೊಂದಕ್ಕೆ ಮೊದಲು 'ಮಾಸ್ತಿ' ಎಂದು ಹೆಸರಿಡಲಾಗಿತ್ತು. ರೌಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹೆಸರು ಯಾಕಿಡಬೇಕು ಎಂದು ಪ್ರತಿಭಟನೆ ಶುರುವಾದಾಗ ಆ ಸಿನಿಮಾದ ಹೆಸರನ್ನು 'ಮಸ್ತಿ' ಎಂದು ಬದಲಾಯಿಸಲಾಗಿತ್ತು. ಈ ಚಿತ್ರವನ್ನು ಶಿವಮಣಿ ನಿರ್ದೇಶನ ಮಾಡಿದ್ದರು. 

ನಮ್ಮ ಬಸವ
6

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಮ್ಮ ಬಸವ' ಸಿನಿಮಾ ಕೂಡ ಶೀರ್ಷಿಕೆ ವಿವಾದಕ್ಕೆ ಒಳಗಾಗಿತ್ತು.  ಈ ಸಿನಿಮಾಗೆ ಮೊದಲು ಬಸವ ಎಂದು ಹೆಸರಿಡಲಾಗಿತ್ತು. ನಿರೀಕ್ಷೆಯಂತೆ ಈ ಚಿತ್ರ ವಿವಾದಕ್ಕೊಳಗಾದಾಗ ಅದನ್ನು 'ನಮ್ಮ ಬಸವ' ಎಂದು ಬದಲಾಯಿಸಲಾಯಿತು. ಈ ಸಿನಿಮಾವನ್ನು ವೀರಶಂಕರ್ ನಿರ್ದೇಶನ ಮಾಡಿದ್ದರು. 

ನಮ್ಮ ಬಸವ
7

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಮ್ಮ ಬಸವ' ಸಿನಿಮಾ ಕೂಡ ಶೀರ್ಷಿಕೆ ವಿವಾದಕ್ಕೆ ಒಳಗಾಗಿತ್ತು.  ಈ ಸಿನಿಮಾಗೆ ಮೊದಲು ಬಸವ ಎಂದು ಹೆಸರಿಡಲಾಗಿತ್ತು. ನಿರೀಕ್ಷೆಯಂತೆ ಈ ಚಿತ್ರ ವಿವಾದಕ್ಕೊಳಗಾದಾಗ ಅದನ್ನು 'ನಮ್ಮ ಬಸವ' ಎಂದು ಬದಲಾಯಿಸಲಾಯಿತು. ಈ ಸಿನಿಮಾವನ್ನು ವೀರಶಂಕರ್ ನಿರ್ದೇಶನ ಮಾಡಿದ್ದರು. 

ದಂಡುಪಾಳ್ಯ-2
8

ಪೂಜಾ ಗಾಂಧಿ ಮುಖ್ಯಪಾತ್ರದಲ್ಲಿ ನಟಿಸಿರುವ 'ದಂಡುಪಾಳ್ಯ' ಸಿನಿಮಾ ಕೂಡ ವಿವಾದಕ್ಕೆ ಒಳಗಾಗಿತ್ತು.  ಹೊಸಕೋಟೆ ಬಳಿಯಿರುವ ಒಂದು ಊರಿನ ಹೆಸರು ದಂಡುಪಾಳ್ಯ. ಈ ಸಿನಿಮಾಗೆ ಆ ಹೆಸರಿಡಬಾರದು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅದರ ಇದರ ಬಗ್ಗೆ ತಲೆಗೆಡಿಸಿಕೊಳ್ಳದ ಚಿತ್ರತಂಡ ಟೈಟಲ್ ಬದಲಾಯಿಸಲಿಲ್ಲ.  

ಭೀಮಾ ತೀರದಲ್ಲಿ
9

ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಸಿನಿಮಾ ಭಾರೀ ವಿವಾದ ಸೃಷ್ಟಿಸಿತ್ತು. ತಮ್ಮ ಕೃತಿ 'ಭೀಮಾ ತೀರದ ಹಂತಕರು' ಕತೆಯನ್ನು ಕದ್ದು ಚಿತ್ರ ತೆರೆಗೆ ತಂದಿದ್ದಾರೆ ಎಂದು ಹಾಯ್ ಬೆಂಗಳೂರು ಪತ್ರಿಕೆ  ಸಂಪಾದಕ ರವಿ ಬೆಳೆಗೆರೆ ನೇರವಾಗಿ ಆರೋಪಿಸಿದ್ದರು. 

ಮಠ
10

ನವರಸನಾಯಕ ಜಗ್ಗೇಶ್ ಅಭಿನಯದ ಮಠ ಸಿನಿಮಾಗೆ ಮಠಾಧೀಶರು ಸೇರಿದಂತೆ ಅನೇಕರಿಂದ ಆಕ್ಷೇಪ ವ್ಯಾಕವಾಗಿತ್ತು. ಮಠ ಎನ್ನುವುದು ಪವಿತ್ರವಾದ ಸ್ಥಳ. ಹಾಗಾಗಿ ಆ ಹೆಸರಿಡಬಾರದೆಂದು ನಿರ್ದೇಶಕ ಗುರುಪ್ರಸಾದ್ ಬಳಿ ಹಲವಾರು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕರ ಸ್ಪಷ್ಟನೆಯ ನಂತರ ಚಿತ್ರ ಅದೇ ಶೀರ್ಷಿಕೆಯಲ್ಲೇ ಬಿಡುಗಡೆಯಗಿತ್ತು. ಇದೊಂದು ಸೂಕ್ಷ್ಮ ಕಥೆಯುಳ್ಳ ಚಿತ್ರವಾಗಿದ್ದು, ಮಠ-ಮಾನ್ಯಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಹಾಸ್ಯದ ಕನ್ನಡಿ ಮೂಲಕ ತೋರಿಸಲಾಗಿತ್ತು. ಚಿತ್ರದಲ್ಲಿ ಮುಖ್ಯ ಕಥೆಯ ಜೊತೆಗೆ ಹಲವು ಉಪಕಥೆಗಳು ಬರುತ್ತವೆ. ಮನುಷ್ಯನಲ್ಲಿರುವ ಅವಗುಣಗಳನ್ನು ದಾಟುವ ಬಗೆಯನ್ನು ಒಂದು ಆಲಸಿ ಯುವಕ ತಂಡದ ಮೂಲಕ ತೋರಿಸಿಕೊಟ್ಟಿತು. 

ಗುರುದೇವ್ ಹೊಯ್ಸಳ
11

ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ 'ಹೊಯ್ಸಳ' ಕೂಡ ವಿವಾದದಕ್ಕೆ ಗುರಿಯಾಗಿತ್ತು. ಹೊಯ್ಸಳ ಹೆಸರಿನಲ್ಲೇ ಮೂರು ಸಿನಿಮಾಗಳು ನಿರ್ಮಾಣವಾಗಿರುವುದು ಸಮಸ್ಯೆಗೆ ಕಾರಣವಾಗಿತ್ತು. ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಮೂರ್ತಿ ಎಂಬುವವರು 'ಹೊಯ್ಸಳ' ಹೆಸರಿನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದರು. ಜೊತೆಗೆ ಈ ಚಿತ್ರದಲ್ಲಿ ತಾವೇ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್ ಕೂಡ ಆಗಿತ್ತು. ಇನ್ನು ಹೊಯ್ಸಳ ಹೆಸರಿನಲ್ಲೇ ಅಭಯ್ ವೀರ್ ಎಂಬುವವರು ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಧನಂಜಯ್ ಸಿನಿಮಾ ಕೂಡ ಹೊಯ್ಸಳ ಹೆಸರಿನಲ್ಲೇ ನಿರ್ಮಾಣವಾಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಒಂದೇ ಟೈಟಲ್‌ನಲ್ಲಿ ಮೂರು ಸಿನಿಮಾ ನಿರ್ಮಾಣವಾಗಿದ್ದರಿಂದ ಧನಂಜಯ್ ಸಿನಿಮಾವನ್ನು 'ಗುರುದೇವ್ ಹೊಯ್ಸಳ' ಎಂದು ಬದಲಿಸಲಾಗಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+