X
ಹೋಮ್ ಚಲನಚಿತ್ರಗಳ ಒಳನೋಟ

UI Troll Song: ಯುಐ ಟ್ರೋಲ್ ಸಾಂಗ್‌ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಬಿಚ್ಚಿಟ್ಟ ವಾಸ್ತವ ವಿಚಾರಗಳಿವು!

Author Sowmya Bairappa | Published: Tuesday, March 5, 2024, 04:02 PM [IST]

ನಟ ಉಪೇಂದ್ರಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿದ್ದೇ ಅವರ ರಿಯಾಲಿಸ್ಟಿಕ್ ಸಿನಿಮಾಗಳಿಂದ. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರೋ ಉಪ್ಪಿ, ಡಿಫರೆಂಟ್ ಅಂದರೆ ಏನು ಅಂತ ತೋರಿಸಿಕೊಟ್ಟವರು. ಉಪ್ಪಿ 2 ಚಿತ್ರದ ನಂತರ ಅವರು ಯಾವ ಸಿನಿಮಾಗೂ ಆಕ್ಷನ್ ಕಟ್ ಹೇಳಿರಲಿಲ್ಲ. ಇದೀಗ ಯು & ಐ ಸಿನಿಮಾ ನಿರ್ದೇಶಿಸಿ ನಟಿಸಿದ್ದು, ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಟ್ರೋಲ್ ಸಾಂಗ್ ಬಿಡುಗಡೆಯಾಗಿದ್ದು, ಶೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಾಂಗ್ ನೋಡಿದ ಅಭಿಮಾನಿಗಳು 'ಉಪ್ಪಿ ಕ್ರಿಯೇಟಿವಿಟಿ ಸೂಪರ್' ಸೂಪರ್ ಅಂತ ಜೈಕಾರ ಹಾಕಿದ್ದಾರೆ. ಆದರೆ, ಈ ಹಾಡಿನಲ್ಲಿ ರಿಯಲ್ ಸ್ಟಾರ್ ಹಲವು ನೈಜ ಸಂಗತಿಗಳನ್ನ ತೆರೆದಿಟ್ಟಿದ್ದಾರೆ. ಆ ವಿಷಯಗಳು ಯಾವ ಎಂಬ ಮಾಹಿತಿ ಇಲ್ಲಿದೆ.


cover image
ನೀರಿನ ಸಮಸ್ಯೆ &  ಗುಂಡಿಬಿದ್ದ ರಸ್ತೆ

ಟ್ರೋಲ್ ಸಾಂಗ್ ನೋಡುವಾಗ ಬಹುತೇಕರ ಗಮನ ಹೀರೋಯಿನ್ ಡ್ಯಾನ್ಸ್ ಹಾಗೂ ಸಾಹಿತ್ಯದ ಮೇಲಿದೆ. ಆದರೆ, ಈ ಹಾಡಿನ ಮೂಲಕ ರಿಯಲ್ ಸ್ಟಾರ್ ಹಲವು ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದ್ದಾರೆ. ಸದ್ಯ ಬೆಂಗಳೂರಿನ ಹಲವೆಡೆ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಮಾತ್ರವಲ್ಲದೇ ರಾಜ್ಯದ ಹಲವು ಸ್ಥಳಗಳಲ್ಲಿ ಈ ಸಮಸ್ಯೆಯಿದೆ. ಯುಐ ಸಾಂಗ್‌ನಲ್ಲಿ  ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆ, ಟ್ರಾಫಿಕ್, ಜಗಳ ಇದೆಲ್ಲಾವನ್ನು ಬಿಟ್ಟು ಜನ ಮೊಬೈಲ್‌ನಲ್ಲಿ ಮುಳುಗಿರುವುದನ್ನು ತೋರಿಸಲಾಗಿದೆ. ಯಾರಾದರೂ ಗುಂಡಿಗೆ ಬಿದ್ದರೂ ಜನ ಕಾಪಾಡದೇ, ಅದನ್ನು ವಿಡಿಯೋ ಮಾಡುವುದು ಜನರ ಬೇಜವಾಬ್ದಾರಿಯನ್ನು ಉಪ್ಪಿ ಪರೋಕ್ಷವಾಗಿ ಖಂಡಿಸಿದ್ದಾರೆ. 

ಅತಿಯಾದ ಮೊಬೈಲ್ ಬಳಕೆ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದೇ ಹೋದರೆ ಜೀವನ ನಡೆಯುವುದೇ ಇಲ್ಲ ಅನ್ನುವಂತಾಗಿದೆ. ಒಂದು ಮಟ್ಟಿಗೆ ಇದು ಸತ್ಯ. ಜನರು ಅವಶ್ಯಕತೆಗಿಂತ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರೆ. ಬರೀ ಮಾತನಾಡಲು ಹಾಗೂ ಅಗತ್ಯಗಗಳಿಗೆ ಬೇಕಾಗಿದ್ದ ಮೊಬೈಲ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಮೊಬೈಲ್‌ವೊಂದು ಕೈಲಿದ್ದರೆ ಅಕ್ಕಪಕ್ಕ ಏನಾಗ್ತಿದೆ? ಯಾರಿದ್ದಾರೆ ಅಂತಲೂ ಮರೆತು ಬಿಡ್ತಾರೆ. ಇದನ್ನು ಯುಐ ಸಾಂಗ್‌ನಲ್ಲಿ ತೋರಿಸಲಾಗಿದೆ. 

 

ಸೋಶಿಯಲ್ ಮೀಡಿಯಾ ಗೀಳು

ಇನ್ನು ಸೋಶಿಯಲ್ ಮೀಡಿಯಾ ಗೀಳು ಹಿಡಿಸಿಕೊಂಡವರ ಕಥೆಯಂತೂ ಮುಗಿದೇ ಹೋಯಿತು. ದಿನದ ೨೪ ಗಂಟೆಯೂ ಟ್ರೋಲ್ಸ್, ರೀಲ್ಸ್ ನೋಡ್ತಾ ತಮ್ಮದೇ ಲೋಕದಲ್ಲಿ ಕಳೆದುಹೋಗಿರುತ್ತಾರೆ. ಸುಖಾಸುಮ್ಮನೇ ಮೊಬೈಲ್ ನೋಡುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಟ್ರೋಲ್ ಸಾಂಗ್‌ನಲ್ಲಿ ಇದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ಕಸದ ಸಮಸ್ಯೆ ಮತ್ತು ಮಾನವೀಯತೆ

ಗರ್ಭಿಣಿಯೊಬ್ಬರು ಹೆರಿಗೆ ನೋವು ಅನುಭವಿಸುತ್ತಿದ್ದರೆ, ಜೊತೆಗಿರುವ ನರ್ಸ್ ತನಗೆ ಸಂಬಂಧವೇ ಇಲ್ಲದಂತೆ ಮೊಬೈಲ್‌ ಸ್ಕ್ರೋಲ್ ಮಾಡುತ್ತಾ ಕುಳಿತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ರಸ್ತೆ ತುಂಬಾ ಕಸ ಹಾಗೂ ಪ್ಲಾಸ್ಟಿಕ್ ತುಂಬಿಕೊಂಡಿದ್ದರೂ ಜನ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮೊಬೈಲ್ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಹಲವು ವಾಸ್ತವ ಸತ್ಯಗಳನ್ನ ಉಪೇಂದ್ರ ಅವರ ಟ್ರೋಲ್ ಸಾಂಗ್‌ನಲ್ಲಿ ಬಿಚ್ಚಿಟ್ಟಿದ್ದಾರೆ.  ಅಜನೀಶ್ ಲೋಕನಾಥ್ ಸಂಗೀತ, ನರೇಶ್ ಕುಮಾರ್ ಸಾಹಿತ್ಯ ಸಾಂಗ್ ಸಂಚಲನ ಸೃಷ್ಟಿಸಿದೆ.

 

ಜನಪ್ರಿಯ ಟ್ರೋಲ್ಸ್

ವಾಸ್ತವ ವಿಚಾರಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುನ ಟ್ರೋಲ್ ಆಗಿದ್ದ ಪದಗಳನ್ನು ಸೇರಿಸಿ ಈ ಸಾಂಗ್ ಕಟ್ಟಿಕೊಟ್ಟಿದ್ದಾರೆ. ನಾನು ನಂದಿನಿ, ಜೊಡೆತ್ತು, ಬೆಳ್ಳುಳ್ಳಿ ಕಬಾಬ್, ಮರ ಯಾಕೆ, ಹೆಂಗ್ ಪುಂಗ್ಲಿ, ರಾಜ್ಯವೇ ಖುಷಿಪಡುವ ಸುದ್ದಿ, ಆರ್‌. ಚಂದ್ರು ಹೈಪ್, ಬಡವರು ಮಕ್ಕಳು ಬೆಳಿಬೇಕು, ಕರಿಮಣಿ ಮಾಲೀಕ ಹೀಗೆ ಸಾಕಷ್ಟು ಫೇಮಸ್ ಟ್ರೋಲ್ ಮತ್ತು ಮೀಮ್ಸ್ ಪದಗಳು ಈ ಹಾಡಿನಲ್ಲಿವೆ. ಯುಐ ಸಿನಿಮಾ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ತೆರೆಗೆ ಬರ್ತಿದ್ದು, ಆಯಾ ಭಾಷೆಗೆ ತಕ್ಕಂತೆ ಅಲ್ಲಿನ ಪ್ರಾದೇಶಿಕ ವಿಚಾರಗಳು, ಟ್ರೋಲ್ಸ್ ಸೇರಿಸಿ ಸಾಹಿತ್ಯ ಬರೆಯಲಾಗಿದೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+